ದಾಸರಾಗಿರೊ ವೈಷ್ಣವ ದಾಸರಾಗಿರೊ
ದಾಸರಾಗಿ ಬಯಲಾಸೆಯ ನೀಗಿ ರ-
ಮೇಶನ ಗುಣವಾರಾಶಿಯೊಳಿರಿಸುವ ಪ.
ಸುಂದರ ಮಾನಾನಂದತೀರ್ಥಮತ
ಸಾಂದ್ರ ಸುಖಾಂಬುಧಿಮಿಂದ ಮಹಾತ್ಮರ 1
ದಿವ್ಯಲೋಕಜನ ಭವ್ಯೋಭಯವಿಧ
ಕಾವ್ಯರಚನ ಲಾತವ್ಯಯತೀಂದ್ರರ 2
ಸೀತಾಪತಿ ರಘುನಾಥನ ಮನದೊಳ-
ಗಾತು ಭಜಿಪ ಗಣನಾಥ ಜನಕನ 3
ಶ್ರೀ ಮಹೇಶ ವಟು ವಾಮನ ಪದಯುಗ
ಸಾಮಜವಾಹನ 4
ಕಾಕರಟನದೊಳ ಭೀಕರ ಮತವ ನಿ-
ರಾಕರಿಸಿರುವ ಸುಧಾಕರ ಮೂರ್ತಿಯ 5
ತಂತ್ರ ದೀಪಿಕಾ ಯಂತ್ರವ ರಚಿಸಿದ
ಮಂತ್ರಾಲಯವರ ಮಂತ್ರದೇವತೆಯ 6
ಗೋಪಿನಾಥನೆ ಭೂಪನೆಂದು ಸಂ-
ತಾಪವ ಬಿಡಿಸುವ ಶ್ರೀಪಾದರ ಪದ 7
ಮಂದಕಲಿಯ ಕಾಲಿಂದಲೊರಿಸಿದ ಪು-
ರಂದರದಾಸರ ಹೊಂದಿ ಹರಿಯ ನಿಜ8
ಸುಜನ ಹೃದಂಬುಜ ಸುಖಕರ ದಿನಮಣಿ
ವಿಜಯರಾಜ ಪದ ಭಜನೆಯ ಮಾಡುತ 9
ಭಂಗುರ ಭವಭಯ ಭಂಗದ ಸುಗುಣ
ತರಂಗನ ಒಲಿಸಿದ ಮಂಗಳ ಮಹಿಮರ 10
ಹರಿಕಥಾಮೃತದ ತೆರೆಗಳೊಳಾಡುವ
ಪರತರಸಾರವ ಸುರಿದ ಮಹಾತ್ಮರ 11
ಸಿಡುಕರ ಸಂಸ್ಕøತಿ ಕಡಲೊಳು ಮುಳುಗಲು
ಬಿಡದಲೆ ಕೈಪಿಡಿದೊಡೆಯನ ತೋರ್ಪರ 12
ಅರಿಷಡ್ವರ್ಗವ ತರಿದು ಬಿಸುಟು ಶ್ರೀ-
ವರನ ಕೃಪಾರಸ ಸುರಿಸಿದ ಧನ್ಯರ 13
ಮೂಕನ ವಾಗ್ಮಿಯ ಮಾಡಿ ಮುರಾರಿಗೆ
ಸಾಕ ಕೊಟ್ಟಿ ದೀನಾಕರದಾಸರ 14
ಮಾತಿಗೆ ಕಂಸಾರಾತಿನಲಿಯೆ ಜಗ
ನ್ನಾಥರೆಂ¨ ವಿಖ್ಯಾತಿ ಪಡೆದವರ 15
ತಾಪತ್ರಯಗಳ ತಪ್ಪಿಸಿ ವೆಂಕಟ
ಭೂಪನ ಸದಯಾರೋಪಗೈದವರು 16