ಸಿರಿ ಪ
ನಲ್ಲನವರ ಸಂಗದಿ ಕೂಡು ಅ.ಪ
ಉಪದೇಶ ಮಾಳ್ಪುದಕೆ ಹೋಗಬೇಡ ನೀ
ಚಪಲಚಿತ್ತನು ತಿಳಿದಿರು ಮೂಢ-
ತೋರ್ಪದಿರು ಕೋಣ 1
ಹಿಂದೆ ಹೋದರು ಬಹಳ ಮಂದಿ | ಸ್ಥಿರ-
ವೆಂದು ತಿಳಿದು ನೀದುಃಖ ಹೊಂದಿ
ಮುಂದಾಗುವುದುಕ್ಕೆಲ್ಲಾ
ಕಂದರ್ಪ ಕಾರಣನಲ್ಲಾ 2
ಎಲ್ಲಾ ಜನರನು ಸುಲಿವರು ಮುನ್ನು
ಕ್ಷುಲ್ಲಕರಿಗೆ ತತ್ವವ ಪೇಳೆ
ಸುಳ್ಳೆಂದು ನಿಂದಿಸುವರು 3
ಪ್ರಶ್ನೆಗೆ ತಕ್ಕ ಉತ್ತರವಾಡು | ಸೂರ್ಯ-
ರಶ್ಮಿಯೊಳಗಿರುವ ಲವಣಿಯ ನೋಡು ನಿ_
ನ್ನಸ್ವರೂಪವದರಂತೆ | ಯಾತಕೆ
ಇನ್ನು ಅಗಾಧ ಭ್ರಾಂತಿ 4
ಅನಂತ ಪ್ರಾಣಿಗಳೊಳಗೆ ನಿವಾಸ | ನಮ್ಮ
ವನಜಾಕ್ಷ ಗುರುರಾಮವಿಠಲೇಶ
ಅನಿಮಿತ್ತ ಬಂಧುವನು ಬಿಡಿಬಿಡಿರೋ ದುರಾಶಾ5