ಭಾರ ನಿನ್ನದೊ ಪ
ಭಾರ ನಿನ್ನದಯ್ಯ ಹರಿಯೆ ಘೋರ ಈ ಸಂ
ಸಾರದೊಳಗೆ ಪಾರುಮಾಡಿ ಪೊರೆವುದೆನ್ನ ಅ.ಪ
ಕರುಣಾ ನಿಲಯನೆಂದು ನಿನ್ನ
ಮೊರೆಯ ಹೊಕ್ಕು ಬೇಡಿಕೊಂಬೆ
ನರನ ಭವದಗುಣಗÀಳಳಿದು ಹರಿಯೆ ನಿಮ್ಮ
ಚರಣಸ್ಮರಣೆ ಕರುಣದಿಂದ ನೀಡಿ
ಪೊರೆಯೊ ಶರಣಜನರ ಅಸಹಾಯಕರ 1
ಶ್ರೀಶ ಶ್ರೀನಿವಾಸ ನೀನೆ
ದಾಸನ ಮನದಾಸೆಯ ಪೂರೈಸುವ
ದಾತನೆಂದು ನಿನ್ನ ದಾಸತ್ವ ಬೇಡ್ವೆ ದೋಷದೂರ
ಘಾಸಿಮಾಡದೆ ಹೇಸಿ ಭವದಿ
ಪೋಷಿಸಯ್ಯ ಬೇಗ ಈಶ 2
ಚಿಂತೆ ಭ್ರಾಂತಿ ದೂರಮಾಡಿ
ಸಂತಸ ಸುಖವನ್ನು ನೀಡಿ
ಕಂತುಜನಕ ನಿಮ್ಮ ಭಕ್ತಿ ಅಂತ್ಯದಲ್ಲಿ ನಿಲ್ಲಿಸಿ ಎ
ನ್ನಂತರಂಗದೊಳಗೆ ತೋರೊ
ಸಂತರೊಡೆಯ ಸೀತಾರಾಮ 3