ಇಂದಿನ ದಿನ ಸುದಿನವಿದು ನೋಡಿ
ತಂದೆ ಸದ್ಗುರು ಕೀರ್ತಿಯ ಕೊಂಡಾಡಿ ಧ್ರುವ
ಸಾರ್ಥಕವಾಯಿತು ಜನ್ಮಕ ಬಂದು
ಕರ್ತು ಸದ್ಗುರು ಕರುಣವ ಪಡೆದಿಂದು
ಮಾಯಾ ನೋಹದಸಂದು
ಆರ್ಥಿ ಆಯಿತು ಮನದೊಳು ನಮಗಿಂದು 1
ಕೇಳಿದೆವು ಹರಿನಾಮದ ಘೋಷ
ಹೊಳೆಯಿತು ಮನದೊಳು ಅತಿ ಉಲ್ಹಾಸ
ಕಳೆದೆವು ಕತ್ತಲೆ ಜ್ಞಾನದ ದೋಷ
ಬೆಳಗಾಯಿತು ಗುರುಜ್ಞಾನ ಪ್ರಕಾಶ 2
ಸೇವಿಸಿ ಸದ್ಗುರು ನಾಮಸುರಸ
ಆಯಿತು ಮನ ಚಿದ್ಭನ ಸಮರಸ
ಹೋಯಿತು ಭವಭಯದ ತಾ ಕ್ಲೇಶ
ಮಹಿಪತಿಗಾಯಿತು ಅತಿ ಸಂತೋಷ 3