ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿ ಕಲಿತೆಯೋ ಇಂಥಾ ಜಾಲೆಗಳನು ಆಲಲ್ಲೆಗಾರತಿಯ ಕೂಡಾಡಿ ಬಂತದಕೇನು ಪ ಅವಳ ಕುರುಳಿವಳ ಮುಗುಳ್ನಗೆಯನೆ ಬಯಸುವುದುಇವಳ ನಯನಗಳವಳ ಮುದ್ದು ಮೊಗವಾಅವಳಕ್ಷಿ ಇವಳ ತೋಳ್ಗಳನೆಂದು ನಿನ್ನ ಸಖಿವಿವರಿಸಿ ಬರೆದುದ ನೀನೋಡಿದುದ ಸಖಿ ಪೇಳ್ದ 1 ತರುಣಿ ಹಾರವನು ಮತ್ತೋರ್ವಳುಂಗುರವನುಸರ್ವಾಭರಣವ ಧರಿಸಿದಳೋರ್ವಳುಭರದಿ ಮೂವರೊಳಗಾರನು ಕಳುಹಲೆಂದು ಸಖಿಬರೆಯಲದ ನೀ ನೋಡಿಕೊಂಡುದನೆ ಸಖಿ ಪೇಳ್ದ2 ಇನ್ನಾದರೆಯು ಪರಸತಿಯರ ಬೇಟವ ಬಿಟ್ಟುನಿನ್ನ ನಂಬಿದಳೆಂದು ಮನಕೆ ತಂದುಎನ್ನ ಕರದೊಳಗೆ ಕರವಿಟ್ಟು ಮನ್ನಿಸೋ ಕೆಳದಿಪನ್ನಗಾಭರಣ ಶ್ರೀ ರಾಮೇಶಲಿಂಗ 3
--------------
ಕೆಳದಿ ವೆಂಕಣ್ಣ ಕವಿ
ಗಿರಿಯೆಡೆಗೆ ಬರಲಾರೆನೇ [ಮಾಂಗಿರಿ ರಂಗನ] ಪ ಗಿರಿಯೆಡೆಗೆ ಬರಲಾರೆ ಬರುವದೃಢವಿಡಲಾರೆ ಬರಲಾರೆನೆನಲಾರೆ ಹೊರಡಲಾರೆನೊ ರಂಗ ಅ.ಪ ನೂರುಯೋಜನ ಪೋಪೆನೇ ಅಲ್ಲಿಂದಿತ್ತ ಮೂರು ಹೊನ್ನನು ಹಿಡಿದಾ ಮೂರು ಹರಿದಾರಿಯ1 ಪರಿಕಿಸುತಿಹೆ ನೀನೆನ್ನಾ ಮಾಮನದ ರನ್ನ ಬರುವೆ ನಿನ್ನನು ನೋಡಿ ಶಿರಬಾಗಿ ಬಹೆನೆಂಬ ಭರವಸೆ ಬಿಡಲಿಲ್ಲ ಹೊರಡಲಿಲ್ಲವೋ ರಂಗ2 ನೀನರಿಯದುದಾವುದೋ ಸೂನು ಧೃವರಾಯನೆಡೆಗೆ ನೀನೋಡಿ ಬರಲಿಲ್ಲವೇ ನಾನು ಮೊರೆಯಿಡೆ ನಿನ್ನ ಮಾನಸ ಕರಗದಲ್ಲ 3 ತಾಮರಸಾಕ್ಷಾ ನಿನ್ನ ನಾಮದ ಭಜನೆ ರಾಮದಾಸಾರ್ಚಿತ ಕೋಮಲಾಂಗ ರಂಗ4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತುಂಗೆ ಮಂಗಳ ತರಂಗೆ | ಕರುಣಾಂತರಂಗೆ ರಂಗನಾಥನ ಪದಭೃಂಗೆ ಪ. ಅಂಗಜಪಿತನ ಅಂಗದಿ ಉದ್ಭವೆ ಭವ ಭಂಗ ಹರಿಸೆ ಅಂಗನೆ ಎನ್ನಂತರಂಗದಿ ಹರಿಪಾ- ದಂಗಳ ತೋರಿಸೆ ಶೃಂಗೆ ಶುಭಾಂಗೆ ಅ.ಪ. ಆದಿ ದೈತ್ಯನು ಖತಿಯಲಿ | ಮೇದಿನಿಯ ಸುತ್ತಿ ಒಯ್ದು ಪಾತಳ ಪುರದಲಿ ಮಾಧವ ಕರುಣದಿ ಆದಿವರಾಹನೆಂದೀ ಧರೆಯೊಳು ಬಂದು ಮೇದಿನಿ ಪೊರೆಯಲು ಶ್ರೀದನ ದಾಡೆಯಿಂ ನೀನುದುಭವಿಸಿದೆ 1 ಸ್ನಾನಪಾನದಿ ನರರನು | ಪಾವನಗೈವ ಮಾನಿನಿ ನಿನ್ನ ಕಂಡೆನು ನಾನಾ ದುಷ್ಕøತಗಳ ನೀನೋಡಿಸಿ ಮತ್ತೆ ನಾನು ಎಂಬುವ ನುಡಿ ನಾಲಗೆಗೀಯದೆ ಮಾನವ ಕಾಯೆ ಶ್ರೀನಾಥನ ಪದಧ್ಯಾನವನೀಯೆ 2 ಹರನ ಪೆಸರಿನ ಪುರದಲಿ | ಹರಿದು ಬಂದು ವರ ಶ್ರೀ ಕೂಡಲಿ ಸ್ಥಳದಲಿ ಭರದಿ ಭದ್ರೆಯ ಕೂಡಿ ಪರಿದಲ್ಲಿಂದಲಿ ಹರಿಹರ ಕ್ಷೇತ್ರವ ಬಳಸಿ ಮಂತ್ರಾಲಯ ಪುರಮಾರ್ಗದಿ ಸಾಗರವನೆ ಸೇರಿ ವರ ಗೋಪಾಲಕೃಷ್ಣವಿಠ್ಠಲನೆ ಧ್ಯಾನಿಪೆ 3
--------------
ಅಂಬಾಬಾಯಿ