ಒಟ್ಟು 9 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದ್ವಂದ್ವಾತೀತನ ಮಾಡೋ ನಿದ್ರ್ವಂದ್ವನೆ ಪ ಸರ್ವಕಾಲದಿ ನೀನೆ ಸರ್ವಸ್ವವೆನ್ನುತ ಉರ್ವಿಯೊಳಾನಿರ್ಪ ಪರಿತೋರು ದೇವಾ 1 ಸರ್ವೇಶ ಕರ್ಮಗಳೆಲ್ಲವ ನಿನಗಿತ್ತು ಗರ್ವವರ್ಜಿತನಾಗಿಹುದನ್ನು ನೀಡೈ 2 ಈಶ ನೀನೆನ್ನೊಳು ವಾಸಿಸುವವನಾಗಿ ಭಾಸಿಪುದನು ತೋರು ಜಾಜೀಶಾಶಾ 3
--------------
ಶಾಮಶರ್ಮರು
ನಿನ್ನವನಲ್ಲವೇನೋ ಶ್ರೀಹರಿಯೆ ನೀನೆನ್ನೊಳಗಿಲ್ಲವೇನೊ ಪ ನಿನ್ನವನಲ್ಲವೆ ನೀ ನೆನ್ನೊಳಗಿಲ್ಲವೆನಿನ್ನ ಭಕುತುನೆಂದು ಮನ್ನಿಸಲೊಲ್ಲೇನೊ ಅ.ಪ. ಹೃದಯದೊಳೆಂಟುದಳ ಪದುಮವುಮುದದಿ ನೀನಿರುವ ಸ್ಥಳಹದನವನರಿತು ನಾ ಸದಾವಕಾಲದಿಸದಮಲ ಭಕುತಿಯನ್ನೊದವಿಸಿ ಸೇವಿಸೆ 1 ಎಂಭತ್ತುನಾಲ್ಕು ಲಕ್ಷ ಜೀವನರಾಶೀ-ಗಿಂಬಿತ್ತು ಕಾಯ್ವದ ಗೊಂಬೆಯ ಮಾಡುವಬಿಂಬ ಮೂರುತಿ ನಿನ್ನ ನಂಬಿದ ನನ್ನನ್ನುತುಂಬ ಮರೆತೆಯೇನೋ 2 ಗದುಗಿನನೊಳ್ಮೆರೆವ ವೀರನಾರಾಯಣಪದವ ನಂಬಿರುವೆ ಪೂರಾವಿಧವಿಧ ಪರಿಕಿಸು ಬದುಕಿಸು ಮುಳುಗಿಸುಬೆದರಿಸು ಕರುಣಿಸು ಕದಲಲೊಲ್ಲೆನು ದೇವಾ 3
--------------
ವೀರನಾರಾಯಣ
ನೀನಾರು ನಾನಾರು ನೀನೆನ್ನೊಳಿರಲು ನಾನಾರು ನೀನಾರು ನಾನಿನ್ನೊಳಿರಲು ಪ ನೀನೇನ ಮಾಡಿಸುವೆ ನಾನದನು ಮಾಡುವೆ ನೀನೇನ ಮಾಡಿದರೂ ನಾನದನು ಮಾಡುವೆ ಅ.ಪ ಎನ್ನದೆಂಬುವುದೆಲ್ಲ ನಿನ್ನದಾಗಿರುವಾಗ ನನ್ನದೇನುಂಟಯ್ಯ ಪನ್ನಗಾಧೀಶಾ ನಿನ್ನವನು ನಾನಯ್ಯ ನನ್ನವನು ನೀನಾದೊ ಡಿನ್ನೇನು ನಾನೀನು ಎನ್ನುವಂತಿಲ್ಲ 1 ಇಂದಿರಾನಂದ ಗೋವಿಂದ ತವಪಾದಾರ ವಿಂದಸೇವೆಯ ಮಾಳ್ಪೆನೆಂದು ಕಾದಿಹೆನೋ ಮುಂದೆನಗೆ ಜನ್ಮಂಗಳೊಂದಾದರೂ ಬೇಡ ತಂದೆ ಮಾಂಗಿರಿರಂಗ ಬಂದುಕಾಯೋ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀನೆನ್ನೊಳಡಗಿದೆಯೊ ರಂಗಯ್ಯ ನಾನಿನ್ನೊಳಡಗಿಹೆನೆ ಪ ನೀನೆನ್ನೊಳಡಗಿಹುದೇನೂ ಅಚ್ಚರಿಯಿಲ್ಲ ನಾನಿನ್ನೊಳಡಗಿಹುದೆನೆ ಸಂದೇಹವಯ್ಯ ಅ.ಪ ಆತ್ಮಾರಾಮನು ನೀನು ರಂಗ | ನಿಜಾತ್ಮಪ್ರಕೃತಿ ನಾನು [ಆತ್ಮೋದ್ಧಾರಕ ನಿನ್ನಬಿಟ್ಟರಾನಿಲ್ಲವೋ ರಂಗ] 1 ಒಬ್ಬಳೆಂಜಲ ತಿಂದೆ ರಂಗ ನೀನೊಬ್ಬಳಿಗಕ್ಷಯವಿತ್ತೆ ಒಬ್ಬರೊಳು ಜನಿಸಿ ಮತ್ತೊಬ್ಬರೊಳು ಬೆಳೆದೆ ಇನ್ನೊಬ್ಬನಾನೊಬ್ಬ ಇನ್ನೊಬ್ಬರಿಲ್ಲವೋ ರಂಗ 2 ಕೊಡುವೆನೆನ್ನೊಳಗಿಹುದರಂಗಯ್ಯ ಹಿಡಿಯೆನ್ನ ಕರವ ಪಡೆವೆನದನೆ ಅಯ್ಯ ಕೊಡಬೇಡ ಜನುಮವ ತಡವೇಕೆ ಮಾಂಗಿರಿಯಯ್ಯ ನೀನೊಲಿದೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಲೋಕೈಕ ಬಂಧು ಹೇ ದಯಾಸಿಂಧು ಜೋಕೆಮಾಡಭವ ನೀನೆನ್ನೊಳು ನಿಂದು ಪ ಹೇಯಪ್ರಪಂಚದ ಮಾಯಾಮೋಹದಿ ಎನ್ನ ಕಾವದೇವರು ನೀನೆ ಕೈಯ ಪಿಡಿದು ಸಲಹೊ 1 ದಿವನಿಶಿ ಬಿಡದೊಂದೇಸಮನೆ ಬೆನ್ನ್ಹತ್ತಿ ಮಾಯ ಕವಿದು ವಿಧವಿಧದೆನ್ನ ಸುವಿಚಾರ ಮರೆಸಿ ಭವಭವದೊಳಗೆಳಸಿ ಭವಿಯೆಂದೆನಿಸಿ ಕೆಟ್ಟ ಜವನಿಗೀಡೆನಿಸುವ ಭವಮಾಲೆ ಗೆಲಿಸು 2 ಘನದು:ಖಮಯವಾದ ಜನನಮರಣಬಾಧೆ ರಿಣಭಾದೆ ತನುಭಾದೆಯನು ಪರಿಹರಿಸಿ ತನುತ್ರಯದಲಿ ನಿನ್ನ ನೆನೆವೆನಗೆ ಪಾಲಿಸು ಕನಿಕರದಿಂ ಕಾಯೊ ಜನಕ ಶ್ರೀರಾಮ ಪ್ರಭು 3
--------------
ರಾಮದಾಸರು
ಶಿವ ಕರುಣಿಸಯ್ಯ ಚಂದ್ರಶೇಖರ ನೀನೆನ್ನೊಳೊಲಿದು ಪ ತಾಪ ಹರಣ ಮಾಡು ನಿನ್ನ ದಿವ್ಯಚರಣಗಳಿಗೆ ನಮಿಪೆನುರಗಾಭರಣ ಶರಣು ಶರಣು ಶರಣು ಅ.ಪ. ಕಾಳಭೈರವ ಶಂಭು ಶಂಕರ ಗಿರಿಜೆಯಾಣ್ಮಕೇಳು ಕೇಳು ನಿನ್ನ ಕಿಂಕರಹೂಳಿ ಷಡ್ರಿಪುಗಳನು ಮನದಲಿಊಳಿ ನಿಜಜ್ಞಾನವನು ಸಜ್ಜನರೋಳಿಯಲಿ ನಿಲಿಸುತ್ತ ನಿತ್ಯದಿಬಾಳಿ ತಾಳಿ ಎನುವಂತೆ 1 ನಂಟನಯ್ಯ ಭಕ್ತ ಜನಕೆ ಇನ್ನು ಮಿತಿಯುಂಟೆ ನಿನ್ನಯ ಕರುಣಲಹರಿಂಗೆಎಂಟು ದಿಕ್ಕನು ಸುಡುವ ವಿಷವನುಕಂಠದಲಿ ಧರಿಸಿ ಜಗತ್ತಿನಕಂಟಕವನು ಪರಿಹರಿಸಿದಂಥಬಂಟ ನೀನೈ ಮಹಾದೇವಾ 2 ಮೂರು ಊರುಗಳನು ಸಂಹಾರಾಮಾಡಿ ಉಳಿಸಿದಿಘೋರ ಸಂಕಟದಿಂದ ಜಗಪೂರಸೂರಿ ಬೊಮ್ಮನ ಮತ್ತೆ ಗದುಗಿನವೀರನಾರಾಯಣನ ಕೂಡಿನಾರಿ ಸತಿಯನಸೂಯಳನ್ನುದ್ಧಾರ ಮಾಡಿದ ರೀತಿಯಲ್ಲಿ 3
--------------
ವೀರನಾರಾಯಣ
ಶ್ರೀರಮಾರಮಣ ಶರಣಾರ್ತಿನಿವಾರಣಾ ಪ ಸಾರಸಾಕ್ಷ ಕರುಣಾರಸಪೂರ್ಣ ಭೂರಿ ಸುವೈಭವ ಭುವನರಕ್ಷಣಅ.ಪ ನಾನು ನಿನ್ನೊಳು ಮೊರೆಯಿಡುತಿರುವೆನೊ ನೀನೆನ್ನೊಳು ದಯೆದೋರು ಹರಿಯೆ ದೀನಪಾಲನಾಪರ ನೀನೆನ್ನುತ ಲಾನು ಬಂದೆನೊ ಶ್ರೀನಿಕೇತನ 1 ಹಿಂದೆಯನೇಕರ ಕಾಪಾಡಿರುವೆ ಮುಂದೆಯು ಭಕ್ತರ ಬೆಂಬಿಡದಿರುವೈ ತಂದೆ ಬಂದು ಗಜರಾಜನ ಸಲಹಿದೆ ಯೆಂದು ನಂಬಿದೇ ಮಂದರಾದ್ರಿಧರ 2 ಸುಧಾಮ ಅಜಮಿಳ ಅಂಬರೀಷ ದ್ರೌ ಪದಿಯರ ಸಮಯದಿ ಕಾಯ್ದವನೇ ವಿಧಿಪಿತ ನೀನದುಭುತಮಹಿಮನಯ್ಯ ಸುಧಾ[ಮ] ನ ಬಂಧುವೆ ಜಾಜೀಶಾ 3
--------------
ಶಾಮಶರ್ಮರು
ಶಿವನೇ ನೀನೆನ್ನೊ ಮನುಜಶಿವನೇ ನೀನೆನ್ನು ಶಿವನೇ ನೀನೆನ್ನುಶಿವನೇ ನೀ ನಿಜ ನಿಜ ಶಿವನಹುದಲ್ಲೋ-ಎಂಬ ಸಂಶಯ ಬೇಡೋಪಜನನ ರಹಿತನೆನ್ನೋ ವಿಶ್ವಾತ್ಮಕನೆನ್ನೋವಿಶ್ವರೂಪನೆನ್ನೋ ವಿಶ್ವಾತೀತ-ವಿಶ್ವಸಾಕ್ಷಿಯೆ ತಾನೆನ್ನೋ1ನಿರ್ವಿಕಲ್ಪನೆನ್ನೋ ನಿರ್ಗುಣನೇ ಎನ್ನೋನಿರ್ವಿಕಾರ ಚಿದಾನಂದನೆ ತಾನೆನ್ನೋ2
--------------
ಚಿದಾನಂದ ಅವಧೂತರು