ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ರುದ್ರದೇವರಿಗೆ ಮೊರೆ) ನೀಗಿದೆನು ಸಂಸಾರ ಧನ್ಯಾಳಾದೆ ಮೂಗಣ್ಣ ತಾನೆ ಎನ್ನ ಕೈಯ ಪಿಡಿದಾ ಪ ರೋಗ ಪರಿದಿತು ಎನಗೆ ಈಗ್ಯಾಕೆ ಔಷಧವು ಜಾಗು ಮಾಡದೆ ಕಾವೋ ದೇವನಿರಲು ಭವ ಸಾಗರವ ದಾಟಿಸಿ ಈಗಲಿಯ ಭೂಮಿಗೆನ್ನಾಮ ಹಮನ [?] ತಪ್ಪಿಸಲಿ 1 ಬಳಲಿದೆನು ಸಂಸಾರದಳವು ಕಾಣದೆ ನಾನು ಭವ ದುಃಖ ಶರಧಿಯೊಳಗೆ ಉಳುಹುವರ ದಾರಿಗಣದೆ ಹರನ ಮೊರೆಯಾಗಲು ನೆಲಸಿದನು ಕರುಣಾಳು ಎನ್ನಯ ಮನದೀ 2 ನೀಲಕಂಠಗೆ ಜಯ ಫಾಲನೇತ್ರನೆ ಜಯ ಮಾಲತೀಧವ ಜಯ ವಂದಿಸುವೆ ಶಿರವಾ ಮೇಲು ನರಸಿಂಹವಿಠಲನಾಣೆ ಬೇಡುವೆ ವ್ಯಾಲ ಭೂಷಣ ಮನ್ಮನಾಲಯದಿ ನಿ ನೆಲಸು 3
--------------
ನರಸಿಂಹವಿಠಲರು
ಸಮಿಪ ಸದ್ಗುರುರಾಯಾ ಆ ನಿನ್ನ ದಯದಿ ಪುನೀತವಾದುದು ಕಾಯಾ ಅರಿವಾಯ್ತು ಎನ್ನ ಸ್ವರೂಪದನುಭವ ಜೀಯಾ ಮಾಯಾ ಘೋರಕರ್ಮವ ನೀಗಿದೆನು ನಾ ಪಾರಮಾರ್ಥಿಕ ಸತ್ಯವರಿಯುತ ಮೀರಿದಾನಂದದಲಿ ಮುಳುಗತ ಸೇರಿ ಒಂದಗಿಹೆನು ನಿನ್ನೊಳು ಸರಸ ನಿನ್ನಯ ಬೋಧಾ ಈ ಮರುಳು ಮಾನವರೇನು ಬಲ್ಲರು ಮೋದ ಮಾತೆನಲುಬೇಗನೇ ಸಚ್ಚಿದಾತ್ಮನ ಶೋಧಾ ಮರುಳುಮತಿಗಳು ಅರಿದರೆಂತೋ ಪರಮತತ್ವವ ಪರವಿಚಾರದಿ ದುರುಳರಾ ಮಾತೇಕೆ ನಿನ್ನಯಕರುಣೆಯಿಂದಲಿ ಪಾರುಗಂಡÉನು
--------------
ಶಂಕರಭಟ್ಟ ಅಗ್ನಿಹೋತ್ರಿ