ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏತಕೆ ನೀ ಚಿಂತಿಸುವೆ ಹೇಡಿ ಜೀವವೇ ಪ ವೀತಮೋಹರಾಗನಾಗಿ ವಿಧಿಪಿತ ದಾತತಾನೆಂದು ತಿಳಿಯಲು ಹೃತ್ತಾಪನಾಶನಾ ಅ.ಪ ಹೊನ್ನು ಹೆಣ್ಣು ಮಣ್ಣು ಮೂರು ನಂಬಬ್ಯಾಡಲೊ ನಿನ್ನೊಳಿರುವ ಮೂರ್ತಿಯನ್ನು ಅರಿತು ಬಾಳೆಲೊ 1 ವಂದಿಸುತ ಸಜ್ಜನರ ಕಂಡರಾನಂದ ಪೊಂದುತ ಸಂದೇಹಗಳೆಲ್ಲ ತೊರೆದು ಸತತ ನಲಿಯುತ 2 ಆತ್ಮವತ್ ಸರ್ವಭೂತನೆಂಬೊ ವಚನವು ಆತ್ಮನಲ್ಲಿ ಸಮರ್ಪಿಸಿದರೆ ಪಡೆವೆ ಸೌಖ್ಯವು 3 ಸಾಮಜೇಂದ್ರ ವರದ ಶ್ರೀ ಗುರುರಾಮವಿಠಲನ ಪ್ರೇಮದಿಂ ನಿಷ್ಕಾಮನಾಗಿ ಸೇವಿಸುನುದಿನ 4
--------------
ಗುರುರಾಮವಿಠಲ
ಸಾರಿ ಭಜಿಸಿರೋ ಟೀಕಾಚಾರ್ಯರಂಘ್ರಿಯಾ ಪ ಘೋರ ಪಾತಕಾಂಬುಧಿಯ ದೂರ ಮಾಳ್ಪರ ಅ.ಪ ಮೋದತೀರ್ಥರ ಮತವ ಸಾಧಿಸುವರ | ಪಾದ ಸೇವ್ಯರ ದುರ್ಬೋಧ ಕಳೆವರ 1 ಭಾಷ್ಯತತ್ವ ಸುವಿಶೇಷ ಮಾಳ್ಪರ | ದೋಷ ದೂರರ ವಾಸವಾದಿ ರೂಪರ2 ಶ್ಯಾಮಸುಂದರ ಹರಿಗೆ ಪ್ರೇಮಪೂರ್ಣರÀ | ನೇಮನಿತ್ಯದ ನಿಷ್ಕಾಮನಾ ವರ 3 ಮೋಕ್ಷದಾತರ ಅಕ್ಷೋಭ್ಯತೀರ್ಥರ ಅ- | ಶಿಕ್ಷಿತಾದರ ಅಪೇಕ್ಷ ರಹಿತರ 4 ಅಂಘ್ರಿ ಭಜನೆ ಮಾಳ್ಪರ | ಕುಜನ ಭಂಜರ ದಿಗ್ವಿಜಯ ರಾಯರ5
--------------
ವಿಜಯದಾಸ