ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನಾಸ್ತುತಿಗಳು ಸನ್ನುತ ವನಜಭವಾನುತ ಪ ಮುನಿಜನವಂದಿತ ಅನಘ ವಿರಾಜಿತ ಅ.ಪ ಭಕುತಿಯಲ್ಲವೆ ಜೀಯ ಮುಕುತಿಗೊಂಡಿಹನಯ್ಯ ವಿಕಳನಾ ಮುನಿಗೇಯ ಸುಕವಿಪೂಜಿತಕಾಯ 1 ಮರೆಯಬೇಡವೋ ಯನ್ನ ಗರುಡಗಮನ ನಿನ್ನ ಚರಣ ಸೇವಕರನ್ನ ನಿರುತನೆನೆವೆ ಮುನ್ನ 2 ನಡುಗಡಲಿನೊಳಿಹೆ ತಡಬಡಿಸುತಲಿಹೆ ಪಿಡಿಯಲು ತೃಣವಿಲ್ಲ ನುಡಿವರು ಗತಿಯಿಲ್ಲ 3 ತಾಮಸನಯ್ಯ ಬೇಡ ನೀ ಮನಸೋಲಬೇಡ ಪಾಮರ ವರದನೆ | ರಾಮದಾಸಾರ್ಚಿತನೆ4 ಮಾಂಗಿರಿವರವಾಸ ರಂಗನಾಥನೆ ಶ್ರೀಶಾ ಹಿಂಗದೆ ಯನ್ನಂತರಂಗದೆ ನಿಲೊ ಈಶಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೃಷ್ಣನ ಮೂರ್ತಿಯ ಮನದಿ ನೆನೆವುದುತೃಷ್ಣೆಯ ಬಿಡಿಸುವುದು ಎನ್ನ ಘನ್ನ ತೃಷ್ಣೆಯ ಪ. ಕುಂಡಲ ತತಿಯ ಈ ಚೆಲ್ವಿನಸದ್ರತ್ನತಿಲಕದ ಸೊಬಗನ ಕಂಡೆರಗದವನಾವ ಸುಖಿ ಗೋಕುಲದೊಳಗಿದ್ದ ಮಾನವನೆ ಸುಖಿ ಅಮ್ಮ ನಮ್ಮ 1 ಬೊಮ್ಮ ನೋಡು ನೋಡು2 ವರ್ತುಳೋರು ಜಾನು ಜಂಘಗಳ ಸಂ-ಪತ್ತ ನೋಡು ಕರಿಕರದರತ್ನದರ್ಪಣದ ಕಾಮನ ಬೆನ್ನಿಲೊಪ್ಪುವಬತ್ತಳಿಕೆಯ ಚೆಲುವ ಪೋಲುವ ಬೆರ-ಳರ್ಥಿಯಿಂದಲಿ ಪೊಳೆವ ಚಿತ್ರ ಚಾರಿತ್ರಚಿತ್ತಜನಯ್ಯನ ಚರಣಕಮಲವೆನ್ನಚಿತ್ತದಿ ನೆಲೆಸಿಪ್ಪುದು ಅದರಿಂದ ಸ-ರ್ವತ್ರ ಸುಖವು ತಪ್ಪದು ಹಯವದನ್ನ3
--------------
ವಾದಿರಾಜ