ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೀಸಲಾಗಿ ನಿನ್ನದೊಂದು ಚೆಲ್ವರೂಪವನ್ನಿಡೋವಾಸುದೇವ ನಿನ್ನನಂತ ದಿವ್ಯರೂಪಗಳಲಿ ಎನಗೆ ಪ ಮಣಿವ ಭಕುತ ಜನರು ಕರೆದಕ್ಷಣಕೆ ಓಡಿಬಂದು ಮುಂದೆಕುಣಿದು ಕುಣಿದು ಕುಣಿದು ಹೋಗಿ ಬಂದುದಣಿದುಕೊಳುವ ಮೊದಲು ಎನಗೆ 1 ಎಷ್ಟು ನೋಡಿದರು ಎನಗೆತುಷ್ಟಿಯಿಲ್ಲವಯ್ಯ ಕೃಷ್ಣಅಷ್ಟಷ್ಟಕೆ ಹೋಗಿಬರುವಕಷ್ಟವೇಕೆ ದಯದಿ ಎನಗೆ 2 ಮಾಡಿದಘವ ಕುಟ್ಟಿ ಹಣಿವೆನೋಡಿ ನೋಡಿ ಪದಕೆ ಮಣಿವೆಹಾಡಿಹಾಡಿ ನಲಿದು ಕುಣಿವೆನಾಡೆ ಕುಣಿದು ತುಂಬ ತಣಿವೆ 3 ಸಾವಿರಾರು ಭಕ್ತಜನರುದೇವ ನಿನಗೆ ಗೈವೆಯೆಂತುಪಾವನಾತ್ಮ ಗದುಗು ವೀರನಾರಾಯಣ ದಯವ ತೋರಿ 4
--------------
ವೀರನಾರಾಯಣ
ಸಾಲದೆ ನಿನ್ನದೊಂದು ದಿವ್ಯನಾಮ - ಅ-ಕಾಲ ಮೃತ್ಯುವಿನ ಗಂಟಲಗಾಣ ಹರಿಯೆ ಪ ರಣದೊಳಗೆ ಅಂಗಾಂಗ ಖಂಡತುಂಡಾಗಿ ಪ್ರತಿರಣವನುತ್ತರಿಸಿ ಮರಣವ ತಾಳಿರೆಪ್ರಣವ ಗೋಚರ ನೀನು ಗೋಚರಿಸಿ ಬಂದೆನ್ನಹೆಣಕೆ ಪ್ರಾಣವ ಪ್ರಯೋಗಿಸಿದಂತರಾತ್ಮ1 ಕುಂತದಿಂ ತೂಂತುಗೊಂಡೆನ್ನ ಬೆನ್ನಿಂದಿಳಿವಸಂತತ ನೆತ್ತರನೊರಸಿ ಬಿಸುಟೆತಿಂತ್ರಿಣಿಯ ಮರದಡಿಯೆ ಹಾವು ಕಡಿದೊರಗಿರಲುಮಂತ್ರಿಸಿ ಮನೆಗೆ ಕಳುಹಿದೆ ಗರುಡಗಮನ 2 ಗರಳ ತೈಲವ ಸೇವಿಸೆವೇಣುನಾದದಲಿ ಹಣೆಯನೇವರಿಸಿ ಪಂಚಪ್ರಾಣ ಪ್ರತಿಷ್ಠೆಯ ಮಾಡಿದೆ ಮಹಾತ್ಮ 3 ತಮ್ಮ ಹವಣನರಿಯದೆ ಕೊಬ್ಬಿದ ಪಿಶಾಚಿಗಳುಎಮ್ಮ ಮನೆಗೊಂದೆ ಸಮ ಕಲ್ಲಲಿಟ್ಟುಹೆಮ್ಮಕ್ಕಳ ಬಾಧಿಸುವುದನು ಕಂಡುಬೊಮ್ಮಜಟ್ಟಿಗರ ಶಿರವರಿದೆ ನರಹರಿಯೆ 4 ಓದಿ ಹೇಳಿದರೊಂದು ಕಥೆಯಾಗುತಿದೆ ಮಹಾಂಬೋಧಿಶಯನನೆ ವೇದಶಾಸ್ತ್ರ ಮುಖದಿಬಾಧಿಸುವ ದುರಿತಾಗ್ನಿಗಂಬು ಶ್ರೀ ಕಾಗಿನೆಲೆಯಾದಿಕೇಶವನ ನಾಮ ಸಂಕೀರ್ತನ 5
--------------
ಕನಕದಾಸ
ಜೋಗಿ ಪಾರ್ಥ ನೀನಾದೆ ಬಹುಭೋಗಿಕುರುರಾಯರ ಮಾಡಿದ ಹೆಸರೆಲ್ಲನೀಗಿ ಪ.ಚಿತ್ರ ಕುಸುಮೆಯರ ಬೆರದಿಇಂಥ ಉತ್ತಮ ಸತಿಯರ ಅತ್ಯಂತ ಮರೆತಿಸತ್ಯ ವಾಕ್ಯಗಳೆಲ್ಲ ತೊರೆದಿಇದಕೆ ಹತ್ತೂರು ನಗಲು ಕೋಪವೆ ಭರದಿ 1ನೀತಿಯಿಲ್ಲವೊ ನಿನ್ನದೊಂದುದೇವ ಜಾತಿಗೆ ಉತ್ತಮನೆಂದು ಖ್ಯಾತಿಯೊನಿಂದುಕಪೋತನ ತಿಂದವನೆಂದುಒಂದು ಮಾತು ಹೇಳಲು ಅತಿ ಕೋಪವೆ ಬಂದು 2ಅತ್ಯಂತ ನಿಷ್ಕರುಣಿ ನೀನುದೇಹ ಕಿತ್ತು ಕೊಟ್ಟನಾಗ ಶಿಬಿರಾಯ ತಾನುತೃಪ್ತನಾಗÀದಿರೊ ನೀನುಇದಕೆ ಅತ್ಯಂತ ನಕ್ಕ ರಮೇಶ ತಾನು 3
--------------
ಗಲಗಲಿಅವ್ವನವರು
ನಾ ನಿನ್ನ ಧ್ಯಾನದೊಳಿರಲು - ಇಂಥಹೀನ ಮಾನವರಿಂದೇನಾಹೋದು ಹರಿಯೆ ಪ.ಮಚ್ಚರಿಸಿದರೇನ ಮಾಡಲಾಪರೊ ಎನ್ನಅಚ್ಯುತ ನಿನ್ನದೊಂದು ದಯವಿರಲು ||ವಾಚ್ಛಲ್ಯ ಬಿಡದಿರು ನಿನ್ನ ನಂಬಿದ ಮೇಲೆಕಿಚ್ಚಿಗೆ ಗೊರಲೆ ಮುತ್ತುವುದೆ ಕೇಳೆಲೊ ರಂಗ 1ದಾಳಿಯಲಿ ತೇಜಿ ವೈಹಾಳಿಯಲಿ ನಡೆಯಲುಧೂಳು ರವಿಗೆ ತಾನು ಮುಸುಕುವುದೇ ||ತಾಳಿದವರಿಗೆ ವಿರುದ್ಧ ಲೋಕದೊಳುಂಟೆ ?ಗಾಳಿಗೆ ಗಿರಿ ನಡುಗುವುದೆ ಕೇಳೆಲೊ ರಂಗ 2ಕನ್ನಡಿಯೊಳಗಿನ ಗಂಟ ಕಂಡು ಕಳ್ಳಕನ್ನವಿಕ್ಕಲು ವಶವಾಗುವುದೇ ?ನಿನ್ನ ಧ್ಯಾನವ ಮಾಡೆ ಪುರಂದರವಿಠಲನೆಚಿನ್ನಕ್ಕೆ ಪುಟವಿಕ್ಕಿದಂತೆ ಕೇಳೆಲೊ ರಂಗ 3
--------------
ಪುರಂದರದಾಸರು