ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇವೆ ನರ ಪಶು ಕಾಣಿರ್ಯೋ | ಇದೇ ಮನದ ಸ್ಥಿತಿ ನೋಡಿರ್ಯೋ ಪ ಉದಯದಲೇಳುತ ಉದರದಿ ಧಾವತಿ | ಉದರ ತುಂಬಲು ನಿದ್ರಿಯ ಭರವು | ಮದದಲಿ ಭಯ ಕೊಟ್ಟಿಗೆಯಲಿ ಮಾಯದ | ಸದಮಲ ಪಾರದ ಬಂಧನವು 1 ಸಂಚಿತ ನೊಗ ಹೆಗಲಲಿ ಪೊತ್ತು | ಘನ್ನದುರಿತ ಘಸಣೆಯ ತಳೆದು | ತನ್ನ ಹಿತಾ ಹಿತ ಲೇಶವ ನರಿಯದೆ | ಕಣ್ಣೆವೆಯಿಕ್ಕದೆ ಡೋಕುವನು 2 ಗುರುವರ ಮಹಿಪತಿ ನಂದನ ಸ್ವಾಮಿಯು | ಹೊರೆವ ವಡಿಯನೆಂಬ ಗುರುತರಿದೇ | ಅನುದಿನ ಕಾವವ | ಸಿರಿಯ ಮದಾಂಧನ ನಂಬಿಹುದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎದ್ದೆವು ನಾವಿನ್ನು ಸದ್ಗುರು ಕೃಪೆಯಿಂದ ಧ್ರುವ ಭವ ನಿದ್ರಿಯಗಳೆದು 1 ಕಾಯ ಮಂದಿರದೊಳು | ಮಾಯ ಮುಸುಕು ತೆಗೆದು 2 ಚೆನ್ನಾಗಿ ಮಲಗಿದ್ದ | ಜನ್ಮ ಹಾಸಿಗೆ ಬಿಟ್ಟು 3 ತನ್ನ ತಾ ತಿಳಿವ್ಹಾಂಗೆ ಕಣ್ದೆರೆದಿನ್ನು 4 ಎದ್ದಿದ್ದರೆ ನೀವಿನ್ನು ಶುದ್ಧ ಬದ್ಧರಾಗಿ 5 ಮನದಲ್ಲಿ ಇನಕೋಟಿ ತೇಜನ ಕಾಣುಹಾಂಗೆ 6 ದೀನ ಮಹಿಪತಿ ಸ್ವಾಮಿ ಮನೋಹರ ಮಾಡೊಹಾಂಗೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು