ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನವ ನಾನಲ್ಲೇನೊ ರಂಗ ನಿರ್ಜರೋತ್ತುಂಗ ಪ.ಹುಚ್ಚ ಮಗನ ತಾಯಿತಂದೆ ಹಚ್ಚ ಬಲ್ಲರೆ ಸಾಕದೆನಿಚ್ಚನಿನ್ನ ನಾಮ ಕಾಯೋ ನಿಶ್ಚಯಬುದ್ಧಿ ನೀಡೀಗೆ1ಹಣವಳ್ಹೇವಲ್ಲದಿರೆ ಹೀನೈಸಿ ಚೆಲ್ಲುವರೆಜನಿತದುರ್ಗುಣರಾಶಿ ಜನಕ ನೀ ನಿವಾರಿಸೊ 2ಶರಣು ಹೊಕ್ಕವರವಸರಕೊದಗುವ ದೇವಸೇರಿದೆ ಶ್ರೀ ಪಾದಾಬ್ಜವಸಿರಿಪ್ರಸನ್ವೆಂಕಟದೇವ3
--------------
ಪ್ರಸನ್ನವೆಂಕಟದಾಸರು
ಹುಚ್ಚು ಹಿಡಿಸಿದೆಯಾಮಾಧವ|ನಿಚ್ಚನಿನ್ನ ಪಾದಾಂಬುಜವ ಭಜಿಪರಿಗೆ ಪಮತ್ತಗಜವೆಂಟು ಸೊಕ್ಕಿಲಿ ಕೊಲ್ವವು |ಕುತ್ತಿಗೆ ಮುರಿವರಾರು ಮಂದಿಯೂ ||ಎತ್ತ ಹೋಯಿತೋ ಬುದ್ಧಿ ಕುಳಿತುಕೊಂಡರೆ ಮೇಲೆ |ಹುತ್ತ ಬೆಳದರೆಚ್ಚರಿಕೆಯಿಲ್ಲದಂಥ 1ದಾರಾಸುತರೆನ್ನದಾರೆಂದು ನೋ |ಡರಾಗಾರ ನಮ್ಮದೆಂದು ಪೋಷಿಸರು ||ಆರಣ್ಯದಲಿ ಮುಸುಕಿಕ್ಕಿ ಧ್ಯಾನಿಸುವರು |ಶಾರೀರದ ಪರವಿಯನ್ನು ಬಿಟ್ಟಹರು 2ಬಿದ್ದು ಯದ್ದ ಕಾಳು ಆದುಕೊಂಡುಂಬರು |ಇದ್ದ ಬದುಕು ಜೋಕೆ ಮಾಡೊಲ್ಲರು ||ಪ್ರದ್ಯುಮ್ನ ಪ್ರಾಣೇಶ ವಿಠಲನೇ ಇಂಥ |ಬುದ್ಧಿಯ ಪ್ರೇರಿಸಿ ನೋಡಿ ಹಿಗ್ಗುವೆನೀ 3
--------------
ಪ್ರಾಣೇಶದಾಸರು