ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸಯ್ಯ ಎನ್ನ ಪಾದಪದ್ಮದೋರಿ ನೀ| ಬಾಲಲೀಲೆ ದೋರ್ವೆ ಗೋಪಾಲ ಬಾಲರನ್ನನೇ ಪ ನಂದ ನಂದ ನಂದು ಓಡಿ ನಂದನೆಯಾ ಭಾವಕಾಗಿ| ಬಂದ ಬಂದು ದುರಿತವನು ಬಂದು ಬಂದು ಹರಿಸಿ| ಛಂದ ಛಂದದಿಂದ ಭಕ್ತರೈವರನು ಕಾಯ್ವೆ ಮು ಸಿಂಧು ವಾಸನೆ 1 ನಾಗನಾಗ ಶಯನ ಯನ್ನ ರಕ್ಷಿಸೆಂದು ಕರೆಯ ಕೇಳಿ| ನಾಗ ನಾಗದವನ ಬಿಟ್ಟು ಓರ್ವನೇ ಮಾರುತಿಯಾ| ವೇಗ ವೇಗದಿಂದ ಬಂದು ಪ್ರಾಣನುಳಹಿದೇ ನಿಗ| ಮಾಗ-ಮಾಗೋಚರ ಭೋಗ ಭೋಗಗನ ವ್ಯಾಪ್ತನೇ2 ಸುಂದ್ರ ಇಂದ್ರ ಚಾಪದಂತೆ ಪೊಳೆವ ಭ್ರೂಲತೆಯು|| ಪೇಂದ್ರ ಚಂದ್ರ ಧರನುತ ಮಂದ್ರಗಿರಿಧರ ಗುಣ| ಸಾಂದ್ರ ಚಂದ್ರಕುಲ ಸಿರೋಮಣೀ ವಾರಜಾಕ್ಷಯಾದ| ವೇಂದ್ರ ಇಂದ್ರನುತ ಮಹಿಪತಿ ನಂದ ನೋಡೆಯನೇ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಶರಣ್ಯರ ಸುರತರುವೆ ನಿನ್ನಚರಣಶರಣರಿಗೆ ಭಯವಿಲ್ಲ ಪ.ದ್ರುಪದಾತ್ಮಜೆಯನಸುರ ಪಿಡಿದೆಳೆ ತಂದಪಮಾನಕಾಗಿ ಉಡುಗೆ ಸೆಳೆಯೆಅಪುಶಯನ ಮುಕುಂದ ಅಪಹಾಸವಾಯಿತೆಲಪರಮಪೀತಾಂಬರ ಒದಗಿತಂದು ದೇವಾ 1ಮದದೊಳಂತ್ಯಜ ತರುಣಿಗೆ ಸೋತುಪರಮಾಧಮಜಾಮಿಳ ತನ್ನಂತ್ಯಕಾಲದಿಮುದದಿ ಕಡೆಯ ಸುತನ ನಾರಗ ಬಾರೆಂದೊದರಲು ಪೊರೆದೆ ದಾಸನ ಮರಳಿ 2ವಿಗಡಮುನಿಶಾಪಕೆಇಂದ್ರದ್ಯುಮ್ನಮದನಾಗನಾಗಿ ನೆಗಳ ಬಾಯಿಗೆ ಸಿಲುಕೆಅಘಹರ ಸಲಹೆಂದರೆ ವಾಮಕರದಿಂದನೆಗಹಿದೆ ಪ್ರಸನ್ನ ವೆಂಕಟರನ್ನ 3
--------------
ಪ್ರಸನ್ನವೆಂಕಟದಾಸರು