ಕರೆತಾರಬಾರದೇನೇ ರಂಗಯ್ಯನ
ಬರಲಾರೆನೆಂದರೂ ಕರವಮುಗಿದಾದರೂ ಪ
ಸರಸಿಜನಾಭನ ಅರವಿಂದಚರಣಕೆ
ಎರಗಿ ಎರಗಿ ಮತ್ತೆ ಕರುಣಿಸೆಂದಾದರೂ ಅ.ಪ
ನೆನೆದು ಪೂಜಿಸುವರ ಮನೆಗೆ ಬರುವೆಯೆಂದು
ಮುನಿಜನ ಪೇಳ್ದುದು ಸಟೆಯಹುದೇನೋ
ಜನನಿಯು ಜನಕನ ಅನುಜನಗ್ರಜನ
ಘನತರ ಬಂಧುವು ನೀನೆಂದುಸುರಿ 1
ನಂದನಕಂದ ಗೋವಿಂದನ ಪಾದಾರ
ವಿಂದವ ಕಾಣದೆ ಜೀವಿಸಲರಿಯೆ
ಎಂದು ಪೇಳುತ ಮುಚುಕುಂದಗೆ ವಂದಿಸು
ಮಂದಹಾಸದಿ ಬರುವ ಮಾಂಗಿರಿರಂಗ 2