ನಾನಿನ್ನ ತೆಗಳಿದೆನೇ ರಂಗಯ್ಯ
ನಾನಿನ್ನ ಮಹಿಮೆಯ ಹೊಗಳಿದೆನಲ್ಲವೆ ಪ
ನೀನೇತಕೆನ್ನೊಳು ದಯತೋರದಿರುವೆ
ನಾನಿನ್ನ ಚರಣವ ದೃಢದಿ ನಂಬಿರುವೆ ಅ.ಪ
ಮೀನಾಗಿ ನಾಲ್ಕುಮಕ್ಕಳ ಹೊತ್ತು ತಂದೆ
ನೀನೇ ಕಮಠನಾಗಿ ನಗವೆತ್ತಿ ನಿಂದೆ
ದಾನವ ಸಂಹಾರಕಾಗಿ ಸೂಕರನಾದೆ
ನೀನೇ ನರಹರಿಯೆಂದು ನುತಿಸಿದೆನಲ್ಲದೆ 1
ಭೂಮಿಯನಳೆದವನೆಂದೆ ನೀನೇ
ಭೂಮಿಪರನು ಕೊಂದೆ ಎಂದೆ
ಭೂಮಿಜೆಯರಸ ರಾವಣವೈರಿಯೆಂದೆ
ಕಾಮಪಾಲನು ಹಲಧರನೆಂದೆನಲ್ಲದೆ 2
ತರುಣಿದ್ರೌಪದಿಗಾಗಿ ಕುರುಕುಲವಿರಿದೆ
ತುರಗವನೇರಿ ದುಷ್ಟರನೆಲ್ಲ ತರಿದೆ
ಶರಣ ಜನರಿಗಾಗಿ ಹರಿಹರ ನೀನಾದೆ
ವರದ ಮಾಂಗಿರಿರಂಗ ನೀನೆಂದೆನಲ್ಲದೆ 3