ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಬು ಕಂಧರ ಸತತ ಬಿಡದೆ ರಕ್ಷಿ ಸಂಬೋಜೋಧ್ಭವನ ತಾತ ಪ ಜಂಭಾರಿ ವೈರಿಕುಲಾಂಬುಧಿ ಕುಂಭಜ ಕುಂಭಿಣಿಸುರ ನಿಕÀರುಂಬ ಪೋಷಕದೇವ ಅ.ಪ ನಳಿನಾಕ್ಷ ನರಕೇಸರಿ ನಂಬಿದೆ ನಿನ್ನ | ಶೌರಿ || ಸಿರಿ | ನಿಲಯ ನಿತ್ಯಾನಂದ ಎಲರುಣಿ ವರಶಾಯಿ ಕಲುಷಸಂಹಾರಕ ಜಲದರಿಪುವಿನ ತನಯಾನನುಜನ ಕಲಹದೊಳು ಜೈನಿದನ ತಾತನ ಕುಲವಿರೋಧಿಯ ಧ್ವಜನ ಜನಕಗೆ ಒಲಿದು ಬೆಂಬಲನಾದ ಕೇಶವ 1 ನಿಗಮ ರಕ್ಷಕ ಕೂರ್ಮಕೀಟ ಮಾನವ ಮೃಗವಟು ಪರಶುರಾಮ ಅಗಜೇಶ ಶರಕಾಲ | ನಗಪತಿ ವರದನೆ ಅ(ಗ)ಗಜರಾಜನ ಮಗಳಿಗೋಸುಗ ನಗುತ ಮಡದಿಯನಗಲಿ ಬಂದು ಜಗದಿ ಪೊತ್ತನ ನಗದಿ ನೆಲಸಿದ ತ್ರಿಗುಣ ವರ್ಜಿತ ಖಗವರೂಧನೆ 2 ಮಂದರೋದ್ಧರ ವಿಶಾಲಮಹಿಮನಾದ ಸಿಂಧೂರ ಪರಿಪಾಲ | ಕಂದರ್ಪಪಿತ ಶಾಮಸುಂರವಿಠಲನೆ ವಂದಿಸುವೆನು ಎನ್ನ | ಬಂಧನ ಬಿಡಿಸಯ್ಯ ಫಣಿ ಪತಿ ಪತಿ ವಿರೋಧಿ | ಪು ರಂದರಾರ್ಯರ ವೃಂದ ವಂದಿತ ನಂದ ಸುತ ಗೋವಿಂದ ಗೋಪತಿ 3
--------------
ಶಾಮಸುಂದರ ವಿಠಲ
ನಾರೇರೆಲ್ಲ ಮುತ್ತಿನಾರತಿ ಬೆಳಗಿರೆ ಶ್ರೀ ಕೃಷ್ಣಮೂರುತಿಗೆ ಪ ನಾರೀಮಣಿ ಶ್ರೀ ರುಕ್ಮಿಣೀದೇವಿಗೆ ಮತ್ತು ಭೂಮಾಮಣಿಗೆ ಅ.ಪ ಪನ್ನಗಪತಿ ಫಣಿಯನ್ನು ತುಳಿಯುತಲಿ ಚನ್ನಾಗಿ ಕುಣಿದವಗೆ ಸನ್ನುತ ನಿಜ ಜನರನ್ನು ಸಲಹುವ ಮನ್ಮಥ ಜನಕನಿಗೆ 1 ಪಾರ್ಥಗೆ ಸಖನಾಗಿ ಧಾರ್ತರಾಷ್ಟ್ರನ ಹಠ ವ್ಯರ್ಥ ಮಾಡಿದವಗೆ ಆರತಿ ಎತ್ತಿರೆ ಶುಭಕೀರ್ತನೆ ಮಾಡುತ ಪಾರ್ಥಸಖನ ಸತಿಗೆ 2 ಚಂಡಮುನಿಯು ಬೇಡಿಕೊಂಡ ವರವನಿತ್ತ ಪಾಂಡವರ ಕಾಯ್ದವಗೆ ಪುಂಡರೀಕದಳಲೋಚನಗೆ ಜಗದಂಡಪತಿಯ ಸತಿಗೆ3 ವಾಮಲೋಚನರೆಲ್ಲಾ ನಾಮಗಿರೀಶ ಶ್ರೀ ನರಸಿಂಹ ಮೂರುತಿಗೆ ಪ್ರೇಮ ಮಾಡುವನೆಂದು ಕಾಮಿನಿಯರೇ ಸತ್ಯ ಭಾಮಾಸಹಿತನಿಗೆ 4
--------------
ವಿದ್ಯಾರತ್ನಾಕರತೀರ್ಥರು
ಪಾಲಿಸೋ ಫಂಡರಿಪುರಾಯಾ ಪಾವನ ಕಾಯಾ ಪ ಶ್ಲೋಕÀ : ತರುಣ ತುಲಸಿಮಾಲಾ ತಪ್ತಗಾಂಗೇಯ ಚೇಲಾ ಶರಧಿ ತನಯಲೋಲಾ ಶಕ್ವರೀಕಾರಿ ಫಾಲ ಶಿರಿ ಅಜಭವ ಮೂಲಾ ಶುದ್ಧ ಕಾರುಣ್ಯ ಲೀಲಾ ವೈಜಯಂತಿ ಮಾಲಾ ಕುಂಡಲ ಕೇಯೂರ ಕೌಸ್ತ್ತುಭ ಲೋಕದಿ ವ್ಯಾಪ್ತಾ ದೋಷ ಸಿರ್ಲಿಪ್ತ ದೇವರ ದೇವಾ ಧರುಮಾದ್ಯರ ಭಾವಾ 1 ಅಮಿತ ಸುಗುಣಧಾಮಾ ಆತ್ಮಭೂಪೂರ್ಣ ರಾಮಾ ಅಮರಕುಲಲಲಾಮ ಅಬ್ಜಧಾಮಾಭಿರಾಮಾ ಯಮಿಕುಲೋದಧಿ ಸೋಮ ಯಜ್ಞ ಭೃದ್ಯಜ್ಞ ನಾಮಾ ಕರ್ಮ ಸಂರಕ್ಷಿತ ಸರ್ವ ಲೋಕಾ ವಿತತ ಮಹಿಮ ವಿಶ್ವನಾಟಕ ವತ್ಪ್ರ ಘೋಟಕಾ ಶೋ ನಳಿನ ಜಾಂಡೋದರಾ ಸರ್ವರಾಧಾರಾ ಸಂತತ ನಿರ್ವಿಕಾರಾ ಮತಿ ಮಂದನಾಗಿ ನಿನ್ನನು ಬಿಟ್ಟೆ ಮ ಬಟ್ಟೆ 2 ಶ್ಲೋಕ : ಜನನ ಮರಣ ದೂರ ಜಂಗಮಾಚಾg ವಿಹಾರಾ ದನುಜವನ ಕುಠಾರಾ ದೀನಮಂದಾರ ಧೀರಾ ಪ್ರಣತ ಭಯ ವಿಹಾರಾ ಪ್ರಾಕೃತಾತೀತ ಸಾರಾ ದಿನಪನಿಭ ಶರೀರಾ ದುಃಖವಾರಿಹ ಸಮೀರಾ 3 ವನಧಿ ಜಿತಾಸುರಯೂಥ ನಿರ್ಮಲ ಶ್ರುತಿಗಾಥಾ ಎನ್ನ ಸಂತತ ಸಂಪ್ರಸನ್ನಾ ಜೀಯ ಕರಣಾದಿ ಪಿಡಿಕಯ್ಯಾ ಗೋಪಕುಮಾರಾ 3 ಕಮಠ ಕೋಲಾ ಶತ್ರುಕಾಶ್ಯಪಿಬಾಲಾ ನೃಪಕುಲ ಈರವಾಳಾ ನೀಲಕಂಠಾಸ್ತ್ರಕಾಲಾ ದ್ರುಪದತನಯ ಪಾಲಾ ದುರವರ್ಜಿತದುಕುಲಾ ನಿರ್ಮಲ ಓಂಕಾರಾ ಪರಮ ಪ್ರೀಯ ಜಾಮಿ ಕಳೆದ್ಯೊ ತಾಪವಾ 4 ಶ್ಲೋಕ : ನಗಧರ ನಳಿನಾಕ್ಷ ನಾಕನಾಥಾದ್ಯ ಪಕ್ಷ ನೃಗ ನಗಪತಿ ಶಾಪಾ ನಿರ್ವಹಕಾರ ಶ್ರೀಪಾ ಭೃಗು ಮುನಿಗೇಯಾ ಭೂತನಾಥ ಸಹಾಯ ಅಗಣಿತ ಅಹಿತರನಳುಹಿದಾ ತೋರಿದೆ ಸತ್ಪುತ್ರರಾ ವಒತ್ತಿ ಕುಂತಿನಂದನಾ ಖಂಡ್ರಿಸಿದ್ಯೊ ಕೃಪಾಳು 5 ಶ್ಲೋಕ :ಶುಭತಮ ಸುಖತೀರ್ಥಾರಾಧ್ಯ ಸದ್ದಾನಪಾತ್ರಾ ಇಭವರರಿಪು ಹತಾನ ವಿಶ್ವಜನ್ಮಾವಿಕರ್ತಾ ಯುಗ್ಮ ಪ್ರಸಾದಾ ತರುಜನ್ಮ ವಿದೂರಾ ನಿರ್ಗುಣ ನಿರಂಜನಾ ಗೋಪರೊಡಗೂಡಿ ಮೆದ್ದೆ ತೋರಿದೆ ದಯಸಿಂಧೂ 6 ಶ್ಲೋಕ :ಅತಿವಮಲಸುಗಾತ್ರ ಅಖಿಳಲೋಕೈಕ ಪಾತ್ರಾ ಷತತಿಜದಳನೇತ್ರಾ ವೃತ್ತಹಾದ್ಯ ಮರಮಿತ್ರಾ ಶ್ರುತಿಕಮಂಜ ಸೂತ್ರಾ ಸ್ತುತ್ಯ ಪಾವನ ಪವಿತ್ರಾ ಕಳತ್ರ ನಿನ್ನಯ ದಿವ್ಯ ಖ್ಯಾತಿ ಈ ನಿತ್ಯ ಸುಖಿಸೋರು ಆನಂದಾಬ್ಧಿ ಸದ್ಗತರೋ ಮಾನವ ಜನಕ್ಲೇಶ ಭಂಜನಾ ಭಾಷಾ ಎನ್ನಯ ಅಭಿಲಾಷಾ 7 ಶ್ಲೋಕ :ವನರುಹಭವತಾತಾ ವೀತ ತನ್ಮಾತ್ರಭುತ ದ್ಯುನದಿ ಜಲವಿಧೂತ ದಿವ್ಯ ಪಾದಾಂಬುಜಾತಾ ಅನಿಲತನಯ ಪ್ರೀತಾ ಅತ್ರಿಸದ್ವಂಶಜಾತಾ ಅನಿಮಿಷಜಯಸೂತಾ ಆನತೇಷ್ಟಪ್ರದಾತಾ ಮಂಗಳಶ್ರೇಣಿ ಲೋಕೈಕಸತ್ರಾಣಿ ಶರಣು ಹೊಕ್ಕರ ಕಾಯುವ ಛಲದಂಕಾ ಕಾಳಿಂಗನ ಬಿಂಕಾ ಬಿಡಿಸಿದ್ಯೊ ನಿಷ್ಕಳಂಕಾ ಮುರ ದಂತವಕ್ತ್ರಾದ್ಯರ ಹಿಂಸಾ ಬಿಡಿಸಿದೆಯೋ ಓಜಿಷ್ಠಾ 8 ಶ್ಲೋಕ :ಹನುಮನತ ಪಾದಾಬ್ಜಹಂಸ ಸಂವಕ್ತ್ರುಕುಬ್ಜಾ ತನುವಿಕೃತ ವಿನಾಶಂ ಕಾಳಿ ಜಿಹ್ವಾಶುದೇಶಂ ದನುಜವಿಕರಾಳ ಮತ್ತೆ ಪೌಂಡ್ರೇ ಶೃಗಾಲಂ ಮೋದ ಸುಪದ ಮೂರುತಿಯನ್ನು ತೋರು ಮಾತಾ ಲಾಲಿಸು ಜಗನ್ನಾಥ ನಿನ್ನವರಿಗೀಯೋ ಶ್ರೀಶಾ 9
--------------
ಜಗನ್ನಾಥದಾಸರು
ಪಾಲಿಸೋ ಮಗುವ ನೀ | ಪಾಲಿಸೋ ಪ ಪತಿ ಸಖ | ಕಾಲಿಗೆ ಬೀಳುವೆ ಅ.ಪ. ಬನ್ನ ಬಡಿಸ ಬೇಡ 1 ನಿನ್ನ ಪ್ರಾರ್ಥನೆ ಬಿಟ್ಟು | ಅನ್ಯ ಗತಿಯ ಕಾಣೆಪನ್ನಗ ನಗಪತಿ ಆ | ಪನ್ನ ಪರಿಪಾಲ 2 ಭಯ ಕೃದ್ಭಯ ನಾಶ | ದಯೆ ಪರಿಪೂರ್ಣ ನಿಭಯವ ನೀನಿತ್ತೀಗ ಅ | ಭಯವ ಪಾಲಿಸೋ 3 ಪಾದ್ಯ 4 ಮೊರೆಯನಿಡುವ ತಾಯ | ಮೊರೆಯ ಕೇಳಿಸದೇನೊತ್ವರಿತದಿ ಕಾಯೊ ಶ್ರೀ | ಕರಿರಾಜ ವರದಾ 5 ವತ್ಸನ ಕರೆ ತಂದು ಉತ್ಸಾಹ ಕೊಡು ಭೃತ್ಯವತ್ಸಲನುಬಂಧ | ಬಿರಿದುಳ್ಳ ದೇವನೇ 6 ಭಾರ ನಿನ್ನದೊ ಹರಿನಾರಸಿಂಹನೆ ಗುರು | ಗೋವಿಂದ ವಿಠ್ಠಲ 7
--------------
ಗುರುಗೋವಿಂದವಿಠಲರು
ಇಂಥಾತನು ಗುರುವಾದದ್ದು ನಮಗೆ ಇ-ನ್ನೆಂಥಾ ಪುಣ್ಯದ ಫಲವೊ. ಪಚಿಂತೆಯಿಲ್ಲದೆ ಅತಿ ಸುಲಭದಿಂದಲಿ ಶ್ರೀಕಾಂತನ ಕಾಣಲಿಕ್ಕಾಯಿತುಪಾಯ ಅ.ಪತಾನು ಇಲ್ಲದೆ ಈ ಜಗದೊಳು ಹರಿಯಿಪ್ಪಸ್ಥಾನವಿಲ್ಲವೆಂದು ಸಾರಿದಹೀನ ದೈವಗಳ ನಂಬಿದ ಜನರಿಗೆ ತನ್ನಙ್ಞÕನದಿಂದಲಿ ಹರಿಯ ತೋರಿದ ||ನಾನಾ ಜೀವಿಗಳ ಒಳಗೆ ಹೊರಗೆ ಇದ್ದುತಾನೇ ಮುಖ್ಯನಾಗಿ ಮೀರಿದ |ಶ್ರೀನಾರಾಯಣನೆಂದು ಪೇಳುವರಿಗೆ ತನ್ನಧ್ಯಾನದಿಂದಲಿ ಮುಕ್ತಿಮಾರ್ಗವ ತೋರಿದ 1ಪನ್ನಗಪತಿ-ಗರುಡ-ರುದ್ರ-ಇಂದ್ರಾದ್ಯರಿಗೆಉನ್ನತ ಗುರುವಾಗಿ ಮೀರಿದ |ಘನ್ನವಾದ ಶ್ರುತಿತತಿಗಳಿಂದಲಿ ಜೀವಭಿನ್ನನು ಎಂತೆಂದು ತೋರಿದ ||ಹೊನ್ನು ಹೆಣ್ಣು ಮಣ್ಣಿನಾಶೆಯಿಲ್ಲದೆ ಅವಿ-ಚ್ಛಿನ್ನ ಭಕುತಿಯಿಂದ ಮೆರೆದ |ಚೆನ್ನಾಗಿ ಭಕುತಿ ವೈರಾಗ್ಯಗಳಿಂದಲಿ |ತನ್ನ ನಂಬಿದ ಭಕುತರ ಪೊರೆದ 2ಈರೇಳು ಲೋಕಂಗಳಿಗೆ ತಾನೇ ಮುಖ್ಯ ಆ-ಧಾರವೆಂಬುದ ಕಲಿಸಿದ |ಭಾರಣೆಯಿಂದಲೊಪ್ಪುತ ಬಲು ಹರುಷದಿಭಾರತಿಯನು ಒಲಿಸಿದಮೂರೇಳು ದುರ್ಭಾಷ್ಯಗಳ ಕಾನನವ ಕು-ಕಾರದಂತೆ ಕಡಿದಿಳಿಸಿದಸೇರಿ ಶ್ರೀಪುರಂದರ ವಿಠಲನಂಘ್ರಿಗಳಧೀರ ಪೂರ್ಣಪ್ರಙ್ಞÕಚಾರ್ಯರೆಂದೆನಿಸಿದ 3
--------------
ಪುರಂದರದಾಸರು
ಬಂದೆಯಾ ಬಾರೊ ಗೋಪಾಲ ಕೃಷ್ಣಬಂದೆಯಾ ಬಾರೊ ಪ.ಇಲ್ಲಿಯ ಗೊಲ್ಲತೇರೆಲ್ಲರುಬಲ್ಲಿದಕಾಮುಕ ನಲ್ಲೇರುಫುಲ್ಲಲೋಚನ ನಿನ್ನ ಮುದ್ದಿನ ಮೊಗವಮೆಲ್ಲನೆ ಚುಂಬಿಸಿ ಬಿಡರೊ ಮಗುವೆ 1ಚಿಕ್ಕವನೆಂದಾಡಿಸಿ ನಿನ್ನಚಕ್ಕಂದಿಲಿ ಬಾಡಿಸಿ ಚಿನ್ನಸಕ್ಕರೆ ಮಾತಲಿ ಬಿಗಿದಪ್ಪುವರೊಕಕ್ಕಸಕುಚದಂಗನೆ ಗೋಪಿಯರೊ 2ಇರುಳ್ಹಗಲೆನ್ನ ಕಂದನ್ನಮರುಳಿಕ್ಕುವರೆಂದಂಜುವೆ ನಾತರಳನ ಕಾಲಿಂಗೆರಗುವೆ ನೋಡೋತರಳೇರೊಡಗೂಡಾಡಲಿ ಬೇಡೊ 3ನಿಲ್ಲದೆ ನಿನ್ನ ಬರಮಾಡುವರೊಚೆಲ್ವಹ ಹಣ್ಣುಗಳ ನೀಡುವರೊಒಳ್ಳೆ ನಾರೇರನುದಿನ ನಿನ್ನಬುಲ್ಲಿ ಬೆಲ್ಲಕೆ ಮನಸೋತಿಹರಣ್ಣ 4ವಿಗಡೇರ ದೃಷ್ಟ್ಯಾಗಲೆತಗಲಿದವೈ ನಿನ್ನ ಮೈಯಲಿಅಗಲದಿರೆನ್ನ ಪ್ರಸನ್ನವೆಂಕಟನಗಪತಿ ಬಡವರ ಧನವೆ ಕೃಷ್ಣ 5
--------------
ಪ್ರಸನ್ನವೆಂಕಟದಾಸರು
ವ್ಯರ್ಥ ಆಯು ಕಳೆಯಬ್ಯಾಡಿರೊ ಶ್ರೀಹರಿಯ ಸಂಕೀರ್ತನೆಯ ಮರೆಯಬ್ಯಾಡಿರೊಮೃತ್ಯು ಬಾರದಿರದು ಮುನ್ನೆ ಮನೋನೂರುವರ್ಷಕೆ ಪ.ಹಿಂಡುಹೀನ ಯೋನಿಮುಖದಲಿ ತಾಬಂದು ಬಂದು ಕುಕರ್ಮ ಸವೆಯದಾಯಿತುಕಂಡ ಕುಹಕರ ಕೂಡ ಕೊಂಡಮಾತನಾಡಿ ಯಮದಂಡ ತೆರಬ್ಯಾಡಿ ಕೋದಂಡಕರನ ಹೊಗಳಿರೊ 1ಬಾಲತ್ವವು ಆಟಕಾಯಿತು ಈ ಯೌವನವುಬಾಲೆಯರ ಬ್ಯಾಟಕಾಯಿತುಮ್ಯಾಲೆವಾರ್ಧಕ್ಯಕಂಗಬೀಳೆ ಸೊಪ್ಪಾಗಿ ಹೊಲಸಲದೀಗ ಎಚ್ಚರಿಕೆಯಲ್ಲಿ ಹರಿಯ ನೆನೆಯಿರೊ 2ಹಗಲು ಹಸಿವೆ ತೃಷೆಗೆ ಪೋಯಿತು ಯಾಮಿನಿಯುಮಿಗಲು ಮೀರಿ ಮಧು ಮುಸುಕಿತುಸುಗುಣನಾಗಿ ಭವದ ನಂಬಿಕೆಯನೀಗಿಪ್ರಸನ್ವೆಂಕಟನಗಪತಿಯ ಪಾದಪದ್ಮಯುಗಳವನೆÀ ಕೊಂಡಾಡಿರೊ 3
--------------
ಪ್ರಸನ್ನವೆಂಕಟದಾಸರು