ವರ್ಷ ವರ್ಧಂತಿಗಳು
(ಆಚಾರ್ಯರ 21ನೇ ವರ್ಷದ ವರ್ಧಂತಿ ಸಮಯ)
ನಿನ್ನ ನಂಬಿದೆ ಶರದಿಂದುವದನ
ಎನ್ನ ಪಾಲಿಸು ವರಕುಂದರದನ
ಮುನ್ನ ಪಾತಕಿಯಾದಜಾಮಿಳನು
ತನ್ನ ಚಿಣ್ಣನ ಕರೆದರೆ ಮನ್ನಿಸಿದವನೆಂದು ಪ.
ನರ ಧ್ರುವಾಂಬರೀಷ ಪ್ರಹ್ಲಾದ ಮುಖ್ಯರನ-
ವರತ ನಿನ್ನನಾಧರಿಸಿದರವರ
ಪೊರೆದನೆಂಬೀ ಮದಗರುವ ಭಾರದಲತಿ-
ಕಿರಿದಾಗಿಹ ಎನ್ನ ಮರೆವುದುಚಿತವೆ 1
ಹತ್ಯ ಪ್ರಮುಖ ದುಷ್ಕøತ್ಯಗಳಿರಲಿ
ನಿತ್ಯ ಪರಧನಾಸಕ್ತನಾಗಿರಲಿ
ಭಕ್ತವತ್ಸಲ ನಿನ್ನ ಸ್ಮರಣೆ ಮಾತ್ರದಿ ಪಾಪ
ಮುಕ್ತಿದೋರಲು ಪೂರ್ಣಶಕ್ತಿಯಾಗಿಹೆ ಎಂದು 2
ತುರುಗಳೆಣಿಸಿದಂತೆ ಕರುಗಳ ಗುಣವ
ಮರೆದಂತೆ ಜನನಿ ತನ್ನಯ ಬಾಲನನುವ
ಕರುಣಾಳು ನೀ ಮುನಿಸಿಂದ ಕರುಣಿಸದಿರೆ ಎನ್ನ
ಪೊರೆವರಿನ್ಯಾರಿಹರುರಗಾದ್ರಿಯರಸ ಕೇಳ್ 3