ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತರ ಸುರಧೇನು ಶಕ್ತರ ಬಂಧು ನೀ ಪ ಭಕ್ತರ ಮೊರೆ ಕೇಳೋ ಲಕ್ಷ್ಮೀಪ್ರಿಯ ರಮಣ ಅ.ಪ ಪ್ರಾಚೀನ ಹಿರಿಯರ ಯೋಚಿಸಿ ನೋಡಲು ಕಂಟಕ ವಿಮೋಚಿಸಿ ಕಾಯ್ದಯ್ಯ1 ಕರಿರಾಜ ಧ್ರುವಮುನಿ ವರ ವಿಭೀಷಣರನ್ನು ಪರಮಪದವನಿತ್ತು ಕರುಣದಿ ಪೊರೆದಯ್ಯಾ 2 ದೀನನೋಳ್ದಯವಾಗಿ ಹೀನಸ್ಥಿತಿ ಪರಿಹರಿಸೊ ಧ್ಯಾನಿಸುವರಿಗತಿ ಸುಲಭನೆ ಶ್ರೀರಾಮ 3
--------------
ರಾಮದಾಸರು