ಮುತ್ತಿನಾರತೀ ತಂದೆತ್ತಿಪಾಡುವೆ
ಚಿತ್ತಜಾತ ಜನಕ ರಂಗನಾಥದೇವಗೆ ಪ.
ಭೂಮಿಪಾಲಗೆ ಶ್ರೀ ಭಾಮೆಯರಸಗೆ
ದಾತ ಮನೋ ಮೋಹನಾಂಗಗೆ 1
ಕಾಳೀಮಡುವನು ಕಲಕಿ ಬಂದಗೆ
ಬಾಲನಾಗಿ ಗೋವುಗಳನು ಕಾಯ್ದ ಗೊಲ್ಲಗೆ 2
ಮುರವಿರೋಧಿಗೆ ಕರುಣವಾರ್ಧಿಗೆ
ತರಳ ಧ್ರುವನಿಗೊಲಿದು ಬಂದ ವರದರಾಜಗೆ 3
ಶರಣರಕ್ಷಣೆ ಸರಸಿಜಾಕ್ಷಗೆ ಪರಮ
ಪಾವನ ಶೇಷಶೈಲ ಶಿಖರ ಧಾಮಗೆ 4