ದಾವನಿಹನೈಯ್ಯಾ ಕೃಷ್ಣಾ ಎನ್ನ ಕಾವವನು ನೀನಲ್ಲದೆ ಪ
ನಾರಿ ದ್ರೌಪದಿ ನೆನೆಯಲು ಸಭೆಯಲ್ಲಿ
ಶೀರಿ ದಾನವ ಮಾಡಿದೀ ಕೃಷ್ಣಾ
ಘೋರ ದೂರ್ವಾಸ ಮುನಿಯು ನಡುವಿರುಳೆ
ಹಾರೈಸಿ ಬರೆಯನ್ನವಾ ದೇವಾ
ನಾರಿ ದ್ರೌಪದಿಯ ಮೊರೆಯ ದೊರೆಯು ಆಲಿಸೇ
ಆ ರಾತ್ರಿ ಕಾಯ್ದ್ಯೋಬಲೆಯಾ 1
ಪರಿವಾರದಿಂದ ಕೂಡಿ ಕರಿರಾಜನಂಗ ನಾಟಕಂದೈದಲು
ಭರದಿನೆಗಳಿಯು ಪಿಡಿಯಲು ಕಾಲನು
ಇರದೆ ನಿನ್ನನು ಸ್ಮರಿಸಲು ದೇವಾ
ಗರುಡವಾಹನನಾಗಿ ನೀನೈತಂದು
ಕರುಣಿಸಿದ್ಯೋ ಕೊನೆಯ ಗತಿಯ 2
ದುರುಳ ಹಿರಣ್ಯಕನ ಶೀಳಿ ನರಹರಿಯೆ
ತರಳ ಪ್ರಲ್ಹಾದನ ಪೊರೆದ್ಯೋ ದೇವಾ
ಮರೆಯದಜಮಿಳ ನೆನೆಯಲು ಕೇಳ್ದು ನೀ
ಪರಿಹರಿಸಿದೆ ಯಮಬಾಧೆಯ ದೇವಾ
ನರಸಿಂಹವಿಠಲ ಸ್ವಾಮಿ ಧ್ರುವನನ್ನು
ಪೊರೆದಂತೆ ರಕ್ಷಿಸೆನ್ನಾ 3