ಕಂತುಜನಕನ ನೆನೆಯಲೆ ಬರಿದೆ ಮನ
ಚಿಂತಿಸಿ ಫಲವಿಲ್ಲಲೇ ಪ
ಕುಂತಿಸುತರಪಾಲ ಸಂತಜನರ ಪ್ರೀಯ
ಚಿಂತೆಯಳಿದು ನಿಶ್ಚಿಂತೆ ಪಾಲಿಸುವಂಥ ಅ.ಪ
ಕೀಳುಯೋಚನೆ ಅಳಿಯೆಲೆ ವೈಕುಂಠನ
ಶೀಲತನದಿ ಭಜಿಸೆಲೆ
ಮೂಲಮಂತ್ರವ ಕೇಳೋ ನೀಲವರ್ಣನ ಜಪ
ಕಾಲನ ಬಾಧೆಯ ಗೆಲಿಸಿ ಪಾಲಿಸುವಂಥ 1
ಕರಿಧ್ರುವರೆಂಬುವರೊ ಹರಿಹರಿಯೆಂದು
ಸ್ಥಿರಮುಕ್ತಿ ಪಡೆದಿಹ್ಯರೊ
ಹರಿಯೆಂದು ಪ್ರಹ್ಲಾದ ಪರಮಕಂಟಕ ಗೆದ್ದ
ಹರಿಯೆಂದು ವಿಭೀಷಣ ಸ್ಥಿರಪಟ್ಟ ಪಡೆದನು 2
ವಾಸನಾದೇಹವಿದು ಶಾಶ್ವತವಲ್ಲ
ನಾಶನಹೊಂದುವುದು
ಬೇಸರಿಲ್ಲದೆ ಪಠಿಸೀಶ ಶ್ರೀರಾಮನ
ಧ್ಯಾಸÀವ ಮರೆಯದಿರು ಹೇಸಿಭವವ ಗೆಲಿಪ 3