ಒಟ್ಟು 8 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಾಥ ನನ್ನಿಂದ ಆಗುವುದು ಏನು ನೀನೆ ದಯಾಮಾಡಿ ಎನ್ನ ನೋಡಿದರೆ ಸರಿಯಲ್ಲದೆ ಪ ಸ್ನಾನ ಸಂಧ್ಯಾವನ ವೆಂಬ ಸತ್ಕರ್ಮ ವಿಧಿಹೋಗೆ ಧ್ಯಾನಮೌನ ಜಪತಪ ನಿಧಾನ ಹೋಗೆ ಕಾನನದೊಳಗಿನ ಕೊಂಡೆತ್ತಿ ನಂದದಿ ಏನು ಅರಿಯದ ವ್ಯರ್ಥ ಹೀನನಾಗಿರುವಂಥ 1 ಮಾಧವಾ ನಿಮ್ಮ ಸ್ಮರಣೆ ಮಹಾಮಹಿಮ ಸೇವೆ ಹೋಗೆ ವೇದ ಶಾಸ್ತ್ರಗಳಲ್ಲಿ ಇರುವ ಮರ್ಮ ಹೋಗೆ ಭೋಧ ಗುರುಕರ್ಣ ಪೂರ್ಣವು ಎಂಬದದು ಹೋಗೆ ----------- ಂದರಿಯದೆ ಹೆಡ್ಡನಾದಂಥಾ 2 ಹರಿ ನಿಮ್ಮ ಭಕ್ತರ ಅನುಗ್ರಹಕ್ಕೆ ಪಾತ್ರಹೆಂಗೊ ಹರಿ ನಿನ್ನ ಚರಿತಗಳು ಅರುವದ್ಹೇಗೊ ಕರುಣಿಸು ಕೈ ಹಿಡಿದು ಕಾಯ್ದರೆ ಸರಿ ಅಲ್ಲದೆ ವರ 'ಹೊನ್ನ ವಿಠ್ಠಲ’ ನೀನೆಂದು ನಾನರಿಯದಾ 3
--------------
ಹೆನ್ನೆರಂಗದಾಸರು
ಗುರುವೇ ನಿತ್ಯನು ಗುರುವೇ ನಿತ್ಯನುಗುರುವೇ ನಿತ್ಯನು ಸತ್ಯ ಪ ಬೋಧ ಬೋಧ 1 ಬುದ್ಧಿ ಬುದ್ಧಿ ತಾನ್ಯಾತರ ಬುದ್ಧಿಯುಬುದ್ಧಿಯು ನಿಶ್ಚಯ ಬುದ್ಧಿಸಿದ್ಧಿ ಸಿದ್ಧಿ ತಾನ್ಯಾತರ ಸಿದ್ಧಿಯುಸಿದ್ಧಿಯು ಜ್ಞಾನದ ಸಿದ್ಧಿ 2 ಶಾಂತ ಶಾಂತ ತಾನ್ಯಾತರಶಾಂತವು ಎಲ್ಲಕೆ ನಿಂತುದೆ ಶಾಂತಭ್ರಾಂತುಭ್ರಾಂತು ತಾನ್ಯಾತರಭ್ರಾಂತದು ಗುರುವಿನಲ್ಲಿದ್ದುದೆ ಭ್ರಾಂತು3 ಧ್ಯಾನ ಧ್ಯಾನ ತಾನ್ಯಾತರ ಧ್ಯಾನವುಧ್ಯಾನವು ತನ್ನದೆ ಧ್ಯಾನಮೌನ ಮೌನ ಅದು ಯಾತರ ಮೌನವುಮೌನವು ತುರ್ಯದೆ ಮೌನ 4 ಭಕ್ತಿ ಭಕ್ತಿ ತಾನ್ಯಾತರ ಭಕ್ತಿಯುಮುಕ್ತಿಯು ನಿಜವಹ ಭಕ್ತಿಮುಕ್ತಿ ಮುಕ್ತಿ ತಾನ್ಯಾತರ ಮುಕ್ತಿಯುಮುಕ್ತಿ ಚಿದಾನಂದ ಮುಕ್ತಿ5
--------------
ಚಿದಾನಂದ ಅವಧೂತರು
ಬಾರಯ್ಯ ಗುರು ಸ್ವಾಮಿ ಶ್ರೀಸದ್ಗುರು ಎನ್ನ ಮನೋಮಂದಿರಕೆ ಕರುಣಾನಂದದ ಸುಖ ಬೀರುತ ಬಾರೈ ಆತ್ಮಾನುಭವಕೆ ಧ್ರುವ ಕಣ್ಣು ಹಾರುತಿದೆÀ ಬಲದೆನ್ನ ಖೂನದೋರವ್ಹಾಂಗಿಂದು ಚೆನ್ನಾಗ್ಹೊಳಿಯುತಿ ಸುಚಿಹ್ನ ನೀನೊಲಿಯವ್ಹಾಂಗೆ ಬಂದು ಎನ್ನೋಳೀವ್ಹಾಂಗ ಸನಾತನ ಪಾಲಿಸಿದೆನಗೊಂದು ಧನ್ಯಗೈಸುವ ದಯಾಳು ನೀನಹುದೊ ಕೃಪಾಸಿಂಧು 1 ಏನೊಂದರಿಯೆ ಒಂದು ಸಾಧನ ಧ್ಯಾನಮೌನ ಹ್ಯಾಗೆಂದು ಖೂನಬಲ್ಲೆನೊ ನಿಮ್ಮ ಬಿರುದಿನ ದೀನನಾಥ ನೀ ಎಂದು ನ್ಯೂನಾರಿಸದೆನ್ನೊಳಗಿನ ನೀನೆ ಅನಾಥಬಂಧು ಎನಗುಳ್ಳ ಸ್ವಾಮಿ ಸದೋದಿತ ನೀನಹುದೊ ಎಂದೆಂದು 2 ತಾಯಿ ಶಿಶುಸ್ತನಪಾನಕೆ ಬಾಯಿಯೊಳಗಿಡುವ್ಹಾಂಗ ಸಾಯಾಸವಿಲ್ಲದೀಪರಿ ದಯಮಾಡುವದೆನಗೆ ಶ್ರೇಯಸುಖದಾಯಕೊಬ್ಬನು ನೀನೆ ಭಾನುಕೋಟಿ ಎನಗೆ ಅನುದಿನ ದೀನಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೇಡವೀಗ ಬಾಲೆ ಸಂಗ ಕೆಟ್ಟುಹೋಗುವೆ ಇದುಪಾಡಲ್ಲ ಭಂಗವನು ಅನುಭವಿಸುತಕಾಡ ಹಿಡಿಯುವೇ ಹುಟ್ಟುಗೆಡುವೆಯಲ್ಲೊ ಪ ಸತ್ಯವದು ನಾರಿದೋಷ ಮೃತ್ಯುವಲ್ಲೋ ಯಮನಿತ್ಯದಲಿ ಎತ್ತಿರುವ ಕತ್ತಿಯಲ್ಲೋ ಆತ್ಮ-ಹತ್ಯವಲ್ಲೋ ಅಪಥ್ಯವಲ್ಲೋ 1 ಸರಕು ಎಲ್ಲೋ 2 ಶಿಷ್ಟಾಶಿಷ್ಟರೆಂಬವರು ಕೆಟ್ಟರಲ್ಲೋ ಬಲುಗಟ್ಟಿ ತವಸಿಗಳು ಮತಿಗೆಟ್ಟರಲ್ಲೊ ಕಂ-ಗೆಟ್ಟರಲ್ಲೋ ಘಾಸಿಪಟ್ಟರಲ್ಲೋ 3 ಧಾರಣೆಯು ಧ್ಯಾನಮೌನ ಹಾರಿತೆಲ್ಲೋ ಕಾಮಕೂರ್ಗಣೆಗಳು ಮೊನೆದೋರಿತಲ್ಲೋ ಮನೆಹಾರಿತಲ್ಲೋ ಧೈರ್ಯತೂರಿತೆಲ್ಲೋ 4 ನಾರಿಯವಳು ನಿನ್ನ ಗತಿಗೆ ಮಾರಿಯಲ್ಲೋ ಗುರುವೀರ ಚಿದಾನಂದನನ್ನು ಸೇರು ಎಲ್ಲೋಪರಿಹಾರವೆಲ್ಲೊಲ್ಲೋ ಮುಕ್ತಿ ಸಾರೆ ಎಲ್ಲೋ 5
--------------
ಚಿದಾನಂದ ಅವಧೂತರು
ರಾಮದುರ್ಗದ ಪರಮ ಪೂಜ್ಯ ಆಚಾರ್ಯರನುನೇಮದಿಂದ ಸ್ಮರಿಸೊ ಮನುಜಾಕಾ'ುತಾರ್ಥವ ಕೊಟ್ಟು ಪ್ರೇಮದಿಂದ ಕ್ಕೆಪಿಡಿದುಸನ್ಮಾರ್ಗ ತೋಗಿಸುವರರು ಅವರು ಪಮಧ್ವಮತದೊಳು ಜನಿಸಿ ಸಚ್ಛಾಸ್ತ್ರಗಳನೋದಿ ಪ್ರಸಿದ್ಧಪಂಡಿತರಾಗಿ ಶುದ್ಧ ಆಚರಣೆ ಸದ್ದೈರಾಗ್ಯಸದ್ಭಕ್ತಿ ಸುಜ್ಞಾನ ಪೂರ್ಣರಾಗಿದುಡ್ಡಪ್ಪ ದೊಡ್ಡಪ್ಪ ಧಡ್ಡಪ್ಪರೆನ್ನದೆ ಸರ್ವಸಮದ್ಟೃ ಇಟ್ಟು'ದ್ಯಾರ್ಥಿಗಳಿಗೆಲ್ಲ ಅನ್ನವಸ್ತ್ರವ ಕೊಟ್ಟು ಗುರುಕುಲನಡಿಸಿದ ಋಗಳವರು 1ಸ್ನಾನಸಂಧ್ಯಾನ ಜಪಿತಪ ಅನುಷ್ಠಾನ ಅಗ್ನಿಹೋತ್ರವನಡಿಸುತ ಧ್ಯಾನಮೌನವು ಸದಾ ರಾಮನಾಮ ಸ್ಮರಣೆಪಾಠಪ್ರವಚಿನ ಪುರಾಣ ದಾನಧರ್ಮವು ದಿವ್ಯ ಸಂತಾನಸಂಪತ್ತು ರಾಜಮನ್ನಣೆ ಪಡೆದರು ಕ್ಷಣ ವ್ಯರ್ಥಕಳೆಯದೆ ವ್ಯರ್ಥಮಾತಾಡದೆ ದಿನಚರಿ ನಡಿಸಿದರು ಕಡೆತನರ 2ಘನವೈಯ್ಯಾಕರಣಿ ಗರ್ವವು ಎಳ್ಳೆಷ್ಟು ಇಲ್ಲಾ'ನಯ ಪೂರ್ಣಸ್ವಭಾವ ಹಣಹೆಣ್ಣು ಮಣ್ಣಿನಾಶೆಯುಪೂರ್ಣಬಿಟ್ಟವರು ಜನ'ತದಿ ಸತತ ನಿಂತರುಧನ ಮಾನ ಮರ್ಯಾದೆಗಳಿಗಾಗಿ ಎಂದೆಂದೂ ಧಡಪಡ-ಮಾಡಲಿಲ್ಲಾ ಗುಣನಿಧಿ ಭೂಪತಿ 'ಠ್ಠಲನ ಭಜನೆಯಾಕುಣಿಕುಣಿದು ಮಾಡುವ ಪರಮ ಭಾಗವತರು 3ಗಲಗಲಿ ನರಸಿಂಹಾಚಾರ್ಯರು
--------------
ಭೂಪತಿ ವಿಠಲರು
ಉಪ್ಪವಡಿಸೆಲೆಲೆ ತಂದೆಸರ್ಪಗಿರಿವಾಸ ಶ್ರೀನಿವಾಸ ದಯದಿ ಪ.ಕಮಲಸಖಸೂರ್ಯಮೂಡದ ಮುನ್ನೆ ಮುನಿಜನರುತಮ ತಮಗೆ ನೀನೊಲಿದ ನಿನ್ನ ಪ್ರತಿಮೆಯ ಪದಕೆನಮಿಸುತೈದಾರೆ ಧ್ಯಾನಮೌನ ಜ್ಞಾನದೊಳವರುರಮೆಯರಸ ಯೋಗನಿದ್ರನೆ 1ಸುಳಿಗಾಳಿ ಸೌರಭಿಯ ಬಳಿವಿಡಿದು ಮಧುಪಕುಲಸುಲಲಿತ ಸ್ವನದಿ ಪಾಡುತಿರೆಸಾರಸಮಯೂರಗಿಳಿಕೋಕಿಲ ಮರಾಳ ಚಕ್ರವಾಕ ಶಕುಂತಬಳಗ ಬಲು ತುತಿಸುತಿವೆ ಕೋ 2ಪವಿತ್ರೆಯೆನಿಸುವ ದೇವನದಿ ಯಮುನೆ ಗೋದಾವರಿ ಸರಸ್ವತಿ ಶ್ರೀಕೃಷ್ಣ ಕಾಳಿಂದಿಕಾವೇರಿ ತುಂಗಭದ್ರೆ ಭೀಮಾದ್ಯರೈತರಲುಪಾವನಿಸುತೀರ್ಥಪದನೆ3ಹನುಮಸುರಋಷಿದೇವ ಗಂಧರ್ವ ಕಿಂಪುರಷರನುನಯದಿ ದಂಡಿಗೆ ಸುವೀಣೆಯಂ ಮುಟ್ಟಿ ನಿಜತನುವ ಮರೆದು ಉಗ್ಗಡಿಸುತಿರೆ ಸರಸಪ್ರಿಯಸನಕಾದಿ ವಂದ್ಯ ಕೃಷ್ಣ 4ತಮಜಾರಿ ಕೇಳುಮಂದರಪೊರೆಯಲೇಳೈ ವಸುಮತಿಲ್ಭಕ್ತ ಇಂದ್ರಾದಿಗಳ ಮೊರೆ ಕೇಳುಕುಮತಿಜನರಿಪುಭವಾಬ್ಧಿತ್ರಾತ ಸುಖಿಯೋಗಿಅಮಲಪ್ರಸನ್ನ ವೆಂಕಟೇಶ 5
--------------
ಪ್ರಸನ್ನವೆಂಕಟದಾಸರು
ಪಾಲಯಾಲ್ಮೇಲಮಂಗಪ್ರಿಯ ಪರಮಗೇಹಖಳಜಾಲಕೋಲಾಹಲಗೋಕುಲ ಗೋಪಾಲಬಾಲಲೀಲಾಲೋಲಲೋಲಚೆನ್ನಪ.ಆದಿಪೋತ್ರಾವತಾರ ಅಮಿತ ಸುಗುಣೋದಾರಭೂಧರಭೂಪವೈರಿ ಭ್ರಾತಶೌರಿಕುದಶಾಸ್ಯವಿದಾರ ದಯೋದಧಿ ಶ್ರೀಪಾದಾರಾಧಕಾಧಾರಮರ ಪಾದಪಾಧಿಪಾಧಿಪ 1ಆನತಘ ವಿದಾರ ಅಂಬುಧರಸುಂದರಏಣಾಂಕರವಿಕಾಶ ಯದುಕುಲೇಶವನಜನಯನಮಾಮನೋಹರಮುನಿಧ್ಯಾನಮೌನಗಾನ ಲೀನ ಮಾನುಷಮೃಗ ನಮೋ 2ಪನ್ನಗರಾರಾತಿಗಮ್ಮಪಾರಾವಾರಮಹಿಮಘನ್ನಜೀವಾತಿದೂರ ಗೋಸಂಗೋಚರಮನ್ಮಥ ಗಣ್ಯಲಾವಣ್ಯ ಕಾರುಣ್ಯಧಿ ಸ್ವರ್ಣವರ್ಣಚಿನ್ಮಯ ಪ್ರಸನ್ನವೆಂಕಟೇಶ ಮಾಂ 3
--------------
ಪ್ರಸನ್ನವೆಂಕಟದಾಸರು
ಯೋಗಿಗದ್ಯಾತಕೆತಳ್ಳಿಸಂಸಾರಬಳ್ಳಿಯೋಗಿಗದ್ಯಾತಕೆತಳ್ಳಿಯೋಗಿಸುನಿಶ್ಚಲಯೋಗಿ ಸುನಿರ್ಮಲಯೋಗಿಸುಖೋನ್ನತಯೋಗಿ ಚಿದಾನಂದಪನಿದ್ರೆಯಿಂದಲಿ ಮೈಯ ಮರೆತುನಿರ್ಗುಣದೊಳು ಬೆರೆತುಶುದ್ಧಮಂಡಲದಂತೆ ಪೊಳೆದುಸುಖದುಃಖಗಳನುಳಿದುಶುದ್ಧವಿಶುದ್ಧ ಚಿನ್ಮಾತ್ರವೇ ಎಂಬಬದ್ಧಹರನಾಗಿ ಭಾಗ್ಯೋದಯನಾದ1ಆನಂದ ಮೂರ್ಛಿತನಾಗಿಅಹುದಹುದಹುದಾಗಿಧ್ಯಾನಮೌನಗಳವು ಪೋಗಿಧಾರಣೆಯನುನೀಗಿಜ್ಞಾನಂಜೆÕೀಯಂ ಜ್ಞಾತೃವು ತೊರದೆಸ್ವಾನಂದಾಮೃತ ಶರಧಿಯೊಳ್ ಮುಳುಗಿದ2ಏನೇನರಿಯನು ತುರಿಯಎರಡೆಂಬುದ ನರಿಯಮೌನಮೂರುತಿ ಅದನು ಅರಿಯತಾನೆ ತಾನೆ ತಾನಾಗಿರುತಲಿತಾನೆ ಚಿದಾನಂದಗುರುತಾನೆ ಆದ3
--------------
ಚಿದಾನಂದ ಅವಧೂತರು