ಒಟ್ಟು 9 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಚ್ಯುತನ ಧ್ಯಾನದೊಳಿರಿ ಅನುದಿನದಿ ಪ ಗುಚ್ಚರಿಸುವೆ ಕಲಿಯ ತುಚ್ಛ ದುರ್ಗುಣಗಳ ಅ.ಪ ನಿತ್ಯ ಕರ್ಮಕೆ ಕ್ಷುಧೆಯು ತಾ ಬಾಧಿಸುತಿಹುದು 1 ವೊಲಿದಂತೆ ನಡೆದು ನಿಜ ಸುಖದಾಸೆಯಿಲ್ಲ 2 ಸಾರ ವರಿತ ಮಹಾತ್ಮರ ಸಂಸರ್ಗವಿಲ್ಲ 3 ನೀತಿ ಪೇಳ್ವರಿಗೆ ಘಾತಕವೆಣಿಸುವುದು 4 ಪರ ಗತಿಯ ಸಾಧನೆಗಳೀ ಕಾಲದೊಳಿಲ್ಲ 5 ಸಾರ ನರಿಯದವನೆ ಪಿತೃಗಳಿಗೆ ವಿರೋಧ 6 ದ್ಗುರುವನ್ನು ಸೇರಿದಡವನೆ ನಿರ್ದೋಷ 7 ಕೃತ್ಯದಿ ನಡೆಯಲವಗಹುದು ಇಷ್ಟಾರ್ಥ 8 ಶ್ರೀ ಗುರುದೇವ ಸದಾನಂದಮಯನು 9
--------------
ಸದಾನಂದರು
ಆಶೆಯ ಬಿಡಿಸಿದ್ಯೋ ಎನ್ನಾ ಮುಂದೆ ವಾಸವಾಗದಂತೆ ಕಾಯೋ ಮೋಹನ್ನಾ ವಾಸುದೇವನೆ ನಿನ್ನ ಸ್ಮರಣೆಯೊಳಗೆ ಮನ ಸೂಸದಂತೆ ಸ್ಥಿರ ನಿಜದಲ್ಲಿ ನಿಲಿಸಯ್ಯಾ ಪ ಬೆಂಬಿಡದೆಲೆ ನಿಜದರಿವನ್ನು ಕೊಡುವಾ ಕುಂಭಿಣಿಯೊಳಗೆಲ್ಲಾ ನೀನಲ್ಲದೆ ಎನ್ನಾ ನಂಬಿಗೆ ಕೊಡುವವರ್ಯಾರೋ ನಾರಾಯಣಾ 1 ಬೆಂದೆನು ನಾ ಭವದೊಳಗೆ ಎನ್ನಾ ತಂದೆ ನೀ ಕಾಯೋ ನಿಜಪದದೊಳಗೆ ಹಿಂದಿನ ಪ್ರಾರಬ್ಧ ಬವಣೆಯ ತೀರಿಸಿ ಮುಂದೆ ನೀ ಸಲಹೊ ಪರಮಪುರುಷನೆ ಹರಿ 2 ವಾಸನೆ ಬಂಧವೇ ಜೀವಾ ನಿ ರ್ವಾಸನೆಯನು ಕೊಟ್ಟು ಸಲಹೊ ಮಾಧವಾ ಶೇಷಶಯನನೆ ನಿಜ ಧ್ಯಾನದೊಳಿರಿಸೆನ್ನಾ ಆಶೆಯನು ಸಲಿಸಯ್ಯಾ ಮುರಾರಿ 3 ಅನಂತ ಮಹಿಮಾ ಮೇಘಶ್ಯಾಮಾ ನಿಶ್ಚಿಂತ ನಿಜ ಶಾಂತಿ ಸ್ವಸುಖವೀವಾ ನಂತಪರಾಧವ ಕ್ಷಮಿಸೆನ್ನಾ ಗುರುವೇ 4
--------------
ಶಾಂತಿಬಾಯಿ
ಊ. ದೇವತಾಸ್ತುತಿ ಬ್ರಹ್ಮದೇವರು ಕರುಣಿಸೊ ಕೋಮಲಾಂಗನೆನಾರಾಯಣಸುತನೆ ಕರುಣಿಸೊ ಪ ಕರುಣಿಸು ಎನ್ನನು ಸುರಸೇವಿತ ಪಾದಪರಮೇಷ್ಠಿಯ ನಿನ್ನ ಶರಣು ಬಂದಿಹೆನು ಅ.ಪ. ವಾಣಿರಮಣ ನಿನ್ನ ಗಾನ ಮಾಡುವೆ ಸಿರಿಮಾನಿನಿ ಅರಸನ ಧ್ಯಾನದೊಳಿರಿಸೊ 1 ಶಿವಜನಕನೆ ನಿನ್ನ ಕವನ ಮಾಡುವ ಹೃದ್-ಭವನದೊಳಗೆ ಮಾಧವನ ತೋರಿಸೊ2 ಇಂದಿರೇಶನ ಮನವಿಂದು ಬೋಧಿಸಿ ಭವಬಂಧನ ಬಿಡಿಸಿ ಶರ ವೃಂದಾಸನ ಗುರು 3
--------------
ಇಂದಿರೇಶರು
ದಯಮಾಡೊ ಕಾಶಿ ಬಿಂದುಮಾಧವಮಾಡದಿರೆನಗೆ ತಂದೆ ಭೇಧವ ಪ. ಪಾಪನಾಶನ ಪಾಲಿಸೊ ಎನ್ನಸರ್ಪಭೂಷಣನತಾತನೆಂದೆನಿಸುವ ತವ ನಾಮಸ್ಮರಣೆಪಾರ್ವತಿಪತಿಯ ಧ್ಯಾನದೊಳಿರಿಸೊ 1 ಮೋಕ್ಷÀದಾಯಕ ಪಾಲಿಸೊ ಎನ್ನಲಕ್ಷ್ಮೀನಾಯಕಕುಕ್ಷಿಯೊಳೀರೇಳುಭುವನ ತಾಳಿದವನೆಭಿಕ್ಷಾಪಾತ್ರ ಶಿವನಧ್ಯಾನದೊಳಿರಿಸೊ 2 ಆದಿಮೂರುತಿ ವಿಶ್ವೇಶ್ವರಗೆ ವಿಷ್ಣುಪಾದವೆ ಗತಿಮೇದಿನಿಯೊಳು ಸೋದೆಪುರದಿ ನೆಲೆಸಿವಾದಿರಾಜವರದನೆ ಬಂದೆ ಹಯವದನನೆ 3
--------------
ವಾದಿರಾಜ
ಬಿಂದುಮಾಧವ ಮಾಡÀದಿರೆನಗೆ ತಂದೆ ಭೇದವಕಂದುಗೊರಳಾಧೀಶ ಕಾಶಿಯ ಪುರವಾಸಕಂದನ್ನ ತಡೆಯದೆ ಕಾಯನುದ್ಧರಿಸೊ ಪ. ಮೋಕ್ಷದಾಯಕ ರಕ್ಷಿಸೊ ಎನ್ನ ಲಕ್ಷ್ಮೀನಾಯಕಕುಕ್ಷಿಯೀರೇಳು ಭುವನವ ತಾಳ್ವನಭಿಕ್ಷಾಪಾತ್ರ ಶಿವನ ಧ್ಯಾನದೊಳಿರಿಸೊ 1 ಪಾಪನಾಶನ ಪಾಲಿಸೊ ಎನ್ನಸಪರ್Àಭೂಷಣ ತಾತನೆಂದೆನಿಸಿ ತವ-ನಾಮಸ್ಮರಣೆಯ ಪಾರ್ವತೀಪತಿ ಯತಿ ಧ್ಯಾನದೊಳಿರಿಸೊ 2 ಆದಿಮೂರುತಿ ವಿಶ್ವೇಶ ವಿಷ್ಣು-ಪಾದವೆ ಗತಿ ವೀರನೆಂದೆನಿಸುವಸೋದೆಯ ಪುರವಾಸ ವಾದಿರಾಜವರದವಂದೇ ಹಯವದನ 3
--------------
ವಾದಿರಾಜ
ಮೆರೆದೆ ಮಹಿಮೆ ಉದಾರ ನಮ್ಮಗುರು ಭೀಮಸೇನ ಸುಧೀರ ಪ. ಮಂಗಳ ಮಹಿಮ ವಿಹಾರ ಮಾಯವಾದಿಗಳಿಗತಿ ಕ್ರೂರ ಅ.ಪ. ಹರಿಯ[ನಿರೂಪ] ವ ಧರಿಸಿ ಮರುತ ಕುಂತಿಯೊಳವತರಿಸಿಹರನೊಳು ವಾದಿಸಿ ಜೈಸಿ ಹರಿಸರ್ವೋತ್ತಮನೆಂದೆನಿಸಿ 1 ಬಕ ಹಿಡಿಂಬಕ ಕೀಚಕ ಜರಾಸುತರ ಮಣಿಮಂತ ಕೀಚಕ ದುರ್ಜನರಸಕಲ ಕೌರವ ಅತಿರಥರ ಕೊಂದು ಸುಖಪಡಿಸಿದೆ ಸಹೋದರರ 2 ಜ್ಞಾನಭಕುತಿಸಂಪನ್ನ ಅಜ್ಞಾನಾರಣ್ಯಛೇದನ ಮುದ್ದುಜ್ಞಾನೇಂದ್ರ ಹಯವದನನ್ನ ಧ್ಯಾನದೊಳಿರಿಸು ಪ್ರಸನ್ನ 3
--------------
ವಾದಿರಾಜ
ಮೈಸೂರು ವೈಕುಂಠದಾಸರಿಂದಧರಣಿಕಧಿಕವಾದ ಗುರುರಂಗಸ್ವಾ'ುಯೆಚರಣಕಮಲಕೆ ನಮೊ ನಮೊಭರತಪುರೀಯೊಳೂ ತುಲಸೀರಾಮರಸ್ಥಿರಪಡಿಸಿದ ಗುರು ನಮೊ ನಮೊವೇದಾಂತಗಳ ಭೇದವ ತಿಳಿದೂ ಆದಿಯ ತೋರಿಸಿದೆ ನಮೊ ನಮೊಸಾಧೂಜನಗಳ ಸೇವೆಯೊಳಿರಿಸಿಸ್ವಾಧೀನ ಮಾಡಿಕೊಂಡೆ ನಮೊ ನಮೊಬೋಧಾಮೃತವೆಂವ ನಾದವತುಂಬಿಶೋಧನೆ ಮಾಡಿಕೊಂಡೆ ನಮೊ ನಮೊರಾಧಾರುಕ್ಮಿಣಿರಮಣನ ಸೇವೆಯಹೃದಯದೊಳಿರಿಸಿದೆ ನಮೊ ನಮೊಪೂರ್ವಜನ್ಮದ ಸುಕೃತಫಲದಿ ನಿಂಮ್ಮ[ವರ]ದಾಸನಾದೆನೊ ನಮೊ ನಮೊಪರ್ವತಾಕಾರದಿ ಪಾ¥ವ ಮಾಡಿದೆನೂಪರಿಹರಿಸೆನ್ನನು ನಮೊ ನಮೊರಾಮಕೃಷ್ಣೋತ್ಸವ ನಾಮಧ್ಯಾನವ ನೇಮದಿಪಾಡುವೆ ನಮೊ ನಮೊಸೋಮಸುಂದರಾ ಜಗದಭಿರಾಮನೇಪ್ರೇಮದಿಸಲಹೈ ನಮೊ ನಮೊದೀನದಯಾಪರದಾಸಜನೊತ್ತಮಧ್ಯಾನದೊಳಿರಿಸೆನ್ನ ನಮೊ ನಮೊಸ್ವಾನುಭಾವದೀ ದಾನವ ಬೇಡುವೆದೀನನ ಸಲಹೈ ನಮೊ ನಮೊವರಗುರುಪಾದಕೆ ವಂದಿಪೆ ನಿರತವೂವೈದಿಕೋತ್ತಮನೆ ನಮೊ ನಮೊಪರಮಪುರುಷನೆ ಪತಿತೋದ್ಧಾರನೇವರರಾಮದಾಸಪಾಲ ನಮೊನಮೊ
--------------
ಮಳಿಗೆ ರಂಗಸ್ವಾಮಿದಾಸರು