ಯಾಕೋ ಕೋಪ ಕೃಷ್ಣಾ ನಿನಗೆ ಎನ್ನ ಮೇಲೆ
ಎಲ್ಲ ಸಾಕಬೇಕು ಎಂಬ ನಿಜವಾ ಪ
ಲೋಕನಾಯಕನಾದ ಲಕ್ಷ್ಮೀಲೋಲಗೋವಿಂದ
ಅನೇಕ ಅವತಾರಗಳೆತ್ತಿದ ಹರಿಯೆ ಮುಕುಂದಾ
-------ಜನರೊಳಗಿನ್ನು ಹೀನನ ಮಾಡಿ ಬಿಡಿಸಿ
------------------------------ 1
ತಂದೆತಾಯಿ ಬಂಧು ಬಳಗ ದೈವ ನೀನೆಂದು
ಇನ್ನು ಎಂದೆಂದು ಭಕ್ತರ ಸಲಹೊ
ಇಂದು ನಿನ್ನ ದ್ವಂದ್ವ ಚರಣಾನಂದದಿಂದ
ಹೊಂದಿದವನು ಕಂದನೆಂದು---------
ಅಂದದಿಂದ ಪೊರೆಯದಿರುವದು ಹೇಗೊ 2
ಅಷ್ಟು ಜಗಕಾಧ್ಯಕ್ಷನಾದ ಆದಿಮೂರುತಿ
ನಿಷ್ಟ ನೀನು ಶಿಷ್ಟ ಜನರ ಹೃದಯದಿರುತಿ
ಇಷ್ಟು ಕಷ್ಟ ಬಡುತ ನಾನು
ಇಷ್ಟದಿಂದ ಮೊರೆಯ ಹೊಕ್ಕರೆಸೃಷ್ಟಿಗೊಡೆಯನಾದ 'ಹೊನ್ನವಿಠ್ಠಲ’ ನಿನ್ನ ಇಷ್ಟ ಇಲ್ಲದೆಲ್ಲಾ 3