ಒಟ್ಟು 14 ಕಡೆಗಳಲ್ಲಿ , 8 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗವ ಶಿಂಗರಿಸೊ ಶ್ರೀ ರಾಮಗೆ ಪ. ರಥವೆಂದು ಮಂಗಳ ಮಹಿಮನ ಉಂಗುಟದಿಂದ ಬಂದ ಗಂಗೆಯ ಸ್ನಾನದಿ ಹಿಂಗಿಸು ಭವವೆಂದು ಅ.ಪ. ಗಂಗಾಜನಕನ ಸ್ಮರಿಸುತ ನಿನ್ನ ಅಂಗವನುಜ್ಜಿ ಕಲಿಮಲ ತೊಳೆದು ಭಂಗ ತರದ ಪರಿ ರಂಗುರಂಗುಗಳ್ವಸ್ತ್ರ ರಂಗಗೆ ಪೀತಾಂಬರವೆಂದು 1 ಗೋಪೀ ಚಂದನ ಲೇಪಿಸುತಂಗಕೆ ಶ್ರೀಪ ವಲಿವನೆಂದ್ಹರುಷದೊಳು ಧೂಪಾರತಿ ಅಂಗಾರದಕ್ಷತೆ ಸೊಬಗ ಶ್ರೀಪತಿ ನೋಟಕೆ ಭೂಪನಾಗಿಹೆನೆಂಧು 2 ಮಂಗಳದನ್ನ ವೀಳ್ಯವ ಮೆದ್ದು ತನ್ನ ಅಂಗನೆಯೊಳು ಅನಂಗಜನಕನ ರಂಗನಲೀಲೆಯಂದದಿ ಹರುಷಿಸೀ ಇಂಥಾ 3
--------------
ಸರಸ್ವತಿ ಬಾಯಿ
ಎಂತು ಗತಿ ಎನಗಾಗುವದೊ ಶ್ರೀ | ಕಾಂತ ನಿನ್ನ ಭಕುತಿಯ ಕಾಣೆ ಪ ಸಂಸಾರ ಎಂಬುದು ಸುಖವೆಂದು ನಾನು | ಹಂಸನಂತೆ ನಲಿಯುತ್ತಲಿದ್ದೆ | ಕಂಸಾರಿ ನಿನ್ನ ನಾಮಸ್ಮರಣೆ ಒಳ್ಳೆ | ವಂಶರ ಕೂಡ ನಲಿಯಲಿಲ್ಲಾ 1 ಪಾತ್ರರ ಕಂಡರ ಪರಿಹಾಸ್ಯ ಕು | ಪಾತ್ರರ ನೋಡಲವರ ಶಿಷ್ಯಾ | ಕ್ಲೇಶ ಎನ್ನ | ಗಾತ್ರಗೋಸುಗ ಪೋಗೆ ಬಲು ತೋಷಾ 2 ವಿರಕ್ತಿ ಕೇಳಲು ತಲೆಶೂಲೆ ವಿ | ಹಾರ ಮಾಡುವಲ್ಲಿ ಅನುಕೂಲೆ | ವಾರಿಜಾಕ್ಷ ನಿನ್ನ ಕಥೆ ಬಿಡುವೆ ಬಹು | ಚಾರುವಾಕರ ಕೂಡ ಸುಖಬಡುವೆ 3 ಕಾಸು ಪ್ರಾಪುತವಾಗಿ ಬಚ್ಚಿಡುವೆ ಅದೆ | ಕಾಸು ಬೇಡಿದರೆ ಪ್ರಾಣವ ಕೊಡುವೆ | ಮೋಸ ಬುರುವದು ಕಾಣೆನಲ್ಲಾ ದು | ರಾಶೆಯಿಂದಲಿ ಬಾಳಿದೆನಲ್ಲಾ 4 ವೈಕುಂಠದಾಸರು ಬರೆ ಕುಗ್ಗುವೆನೊ | ಕುಂಟತನಕೆ ಬಹು ನಲಿದಾಟಾ ಗತಿ | ಉಂಟಾದದಕೆ ಉಚ್ಚಾಟ5 ತಂದೆ ತಾಯಿಗಳಲ್ಲಿ ವಂಚನೆ ಹೀನ | ಮಂದಿಕೂಡಾಪ್ತಾಲೋಚನೆ | ಕುಂದು ನುಡಿದೆ ಸಜ್ಜನರಿಗೆ ಆ | ನಂದ ಬಡಿಸುವೆ ದುರ್ಜನರಿಗೆ 6 ಹೆಂಡತಿ ಮುನಿದರೆ ಬೇಡಿಕೊಂಬೆ ಹರಿ | ಕೊಂಡರು ಮುನಿದರೆ ಪೋಗಲೆಂಬೆ | ಕೊಂಡು ಬಾಹ್ಯನೆ ಪರರವಡಿವೆ | ಪರರ ಕಂಡರೆ ಬೇಡವೆಂದು ನುಡಿವೆ 7 ಮಕ್ಕಳು ಹಸ್ತರೆ ಬಳಲುವೆನೊ ಭೂದೇ | ವಕ್ಕಳು ಹಸ್ತರೆ ನಗುವೆನೊ | ಮುಕ್ತಿಗಾಗುವ ನಾನಾ ಶ್ರವಣ ನೀಚ | ಉಕ್ತಿಗೆ ಮಾಡಿದೆ ಅನುದಿನಾ 8 ಜೀವನಕ್ಕೆ ಬೇಕಾದದೆ ಮಾಣಿದು | ಅಭಾವಾ ಮಾಡೆನು ನೀಚರ ಸೊಲ್ಲು9 ಹರಿ ನಿನ್ನ ಶುಚಿಮಾಡೆ ಹೀನ ನರರ ದೊಂಬಲು ತೆಗಿಯದೆ ಬಿಡೆ | ಅಗ್ರೋದಕ ತಾರೆ ನೀರು | ಹೊರುವೆನೊ ಹಣವೆಂದರೆ ಮಾರೆ 10 ಗಂಡಿಕಿಸಿಲಿ ತೊಳೆಯಲಿ ಮಿಡಿಕಿ ನಾನು | ಅಂಡವಲಿವೆ ಅಶನ ಹುಡುಕಿ | ಅಂಡಜವಾಹನ ನಿನ್ನ ಸೇವೆ ಕೈ | ಕೊಂಡು ಮಾಡದೆ ಪೋದೆ ಹೀಗೆವೆ11 ಗಂಧವ ತೆಗೆ ಎಂದರೆ ಅಳುವೆ | ಬಿದ್ದ | ಮಂದಿರಕೆ ಕದಡುತಳುವೆ | ಒಂದು ತುಲಸಿದಳ ತರಲಾರೆನೆಂದು | ಸಂದಿಗೊಂದಿ ಸುತ್ತಿದೆನೊ ದೊರೆ 12 ಧೂಪಾರತಿ ಏಕಾರುತಿ | ಮೂರ್ತಿ | ಪಾಪಾತಿಶಯದಿಂದಾ ನೋಡಲಿಲ್ಲ ಬಹು | ತಾಪತ್ರಯದಿಂದ ನೊಂದೆನಲ್ಲಾ 13 ಸಿರಿ | ದೇವನಿಗೆ ಯಿತ್ತು ಸುಖಬಟ್ಟು | ಆವಾವ ರುಚಿಗಳ ಭುಂಜಿಸದೆ ನಾನು | ಪಾವನಮತಿಯಾಗದೆ ಪೋದೆ 14 ಎಳೆದುಲಸಿ ನಿರ್ಮಾಲ್ಯವಾಸವಾ || ಬಳಿಯಲ್ಲಿಯಿಟ್ಟು ಕೈವಲ್ಯವಾ | ಘಳಿಸಿಕೊಳ್ಳದೆ ಬಲು ದುರ್ಗಂಧ ಬಂದು | ಭವ ಬಂಧಾ 15 ಹರಿಕಥೆಗೆ ಮೊಗ ತಿರುಹುವೆನೊ | ................................................... ಸ್ಮರಣೆ ಮಾಡುವಲ್ಲಿ ಅತಿ ಹೇಯಾ ದುರಾ | ಚರಿತೆಯ ಮಾಡುವಲ್ಲಿ ಬಲು ನ್ಯಾಯಾ 16 ಹರಿದಾಸರನಪ್ಪಿಕೊಳ್ಳದೆ ಪಾ | ಮರ ಸತಿಯೊಳನಪ್ಪ ತಾ ಪೊಳದೆ | ಧರೆಯೊಳು ನಾನು ನಡಿವಂಥ ಇಂಥಾ | ದುರುಳಾಟಕೇನೆಂಬೆ ಗುಣವಂತಾ 17 ನಿನ್ನಂಘ್ರಿಗೆ ಅಡ್ಡಬೀಳದೆ ತುತ್ತು | ಅನ್ನಕೆ ಎರಗುವೆ ಸೋಲದೆ | ಅನ್ಯಾಯ ಮಾಡುವಲ್ಲಿ ಆನಂದಾ ಸತಿಸ | ತ್ಪುಣ್ಯ ಮಾಡುವಲಿ ನಿಭಂಧಾ 18 ಸಾಧುಗಳೊಡನೆ ತಾಳುವೆ ದ್ವೇಷಾನಿತ್ಯ | ಕ್ರೋಧರ ಕಂಡರೆ ಬಲು ಹರುಷಾ | ಓದನಕೆ ವೇದವನೋದಿ ತಂದು | ವಾದಿಸುವೆನು ಸಭೆಯಲಿ ಕಾದಿ 19 ಸತಿಯಳ ಸಂಬಂಧಿಗಳ ಸಾಕುವೆನೊ ಮಾತಾ | ಪಿತರ ಕಡೆಯವರ ನೂಕುವೆನೊ | ಕರ್ಮ ಮಾಡೋರ ನೋಡಿ ಹೀನ | ವಕ್ರದವರು ಕಂಡು ಬಲು ಪಾಡಿ 20 ಪರಿ ಪರಿ ಹೊಸ | ಕೌತುಕ ಪೇಳೂವೆ ನೋಡಿರಿ | ಶ್ರಾತಾದಿಗಳು ಎಲ್ಲಿ ಧಿಕ್ಕರಿಸಿ ಯಿಂಥ | ಭೌತಿಕ ನೆಚ್ಚಿದೆ ಅನುಕರಿಸಿ 21 ಒಡಿವಿ ಮಾಡಿಸಿ ಮಡದಿಗೆ ಇಡದೆ ಅನ್ಯ | ಮಡದಿಯರಿಗೆ ಧನ ಸೂರೆವಿಡಿದೆ | ಬಡವರ ಕಂಡರೆ ಅಣಕಿಸುವ ಭಾಗ್ಯ | ಪಡದವರಿಗೆ ಬಾಗಿ ನಮಿಸುವೆ 22 ಧರ್ಮಕ್ಕೆ ಅಸೂಯಾ ಬಡುವೆ ಅ | ಧರ್ಮಕೆ ಹಿಗ್ಗಿ ಸುಖವ ಬಡುವೆ | ಷ್ಕರ್ಮಿಗಳ ಕೂಡಾಮಾನತನಾ 23 ವಿಧಿ ನಿಷೇದವನೆಣಿಸದಲೆ ನಾನು | ಉದರ ತುಂಬಿದೆ ಭೀತಿ ಗಣಸದಲೆ | ವದಗಿ ಬೀಳುವ ನರಕದ ಬಾಧೆ ಕೇಳಿ | ಹದುಳಕ್ಕೆ ಮನಮಾಡದೆ ಪೋದೆ 24 ಯಜಮಾನ ನಾನೆಂದು ಪೇಳಿಕೊಂಡು ದೋಷ | ವ್ರಜದಲಿ ಚರಿಸದೆ ದು:ಖವುಂಡು | ಇಂದು | ಸಿಂಧು 25
--------------
ವಿಜಯದಾಸ
ಜಯದೇವ ಜಯದೇವ ಜಯ ಚಿದಾನಂದಜಯ ಜಯತು ಜಯ ಜಯತು ಜಯ ನಿತ್ಯಾನಂದ ಪ ದೃಶ್ಯಾ ದೃಶ್ಯವಿದೂರ ದೂರ ಪರತತ್ವಾಮಿಕ್ಕು ಮೀರಿಹ ತೇಜ ತೇಜ ಮಹತ್ವಾಪೊಕ್ಕು ನೋಡಿಯೆ ಕಂಡು ನಿನ್ನ ನಿಜತ್ವನಕ್ಕು ನಿಜದಲಿ ಮಾಳ್ವೆ ಪಂಚೋಪಚಾರತ್ವ 1 ತಾನೆ ತಾನಾದ ಸುವಸ್ತು ನಿರ್ಲೇಪಧ್ಯಾನ ಮೌನ ಸಮಾಧಿಗೆ ತೋರ್ವರೂಪಏನ ಬಣ್ಣಿಸುವೆನು ಈ ಜಗವ್ಯಾಪಾನಾನರ್ಪಿಸುವೆ ನಿನಗೆ ಗಂಧಾನುಲೇಪ 2 ದುರಿತ ಕುಠಾರ ನೀನೆನಿಪೆಭರ್ಗಾ ಶ್ರೀವತ್ಸ ವೀಥಿಗಳ ರಕ್ಷಿಸುವೆಸರ್ಗಾದಿ ಮಹಾಪುಷ್ಪ ನಿನಗೆ ನಾನರ್ಪಿಸುವೆ3 ವಾಸನಕ್ಷಯದ ನಿರ್ವಾಸನ ಸ್ಪೂರ್ತಿಭಾಸಮಾನದಿ ತೋರುತಿದೆ ನಿನ್ನ ವಾರ್ತೆಈಶ ತಾಪಸರುಗಳು ನಿನ್ನ ಮೂರ್ತಿದೇಶಿ ಕೋತ್ತಮ ನಿನಗರ್ಪಿಸುವೆ ಧೂಪಾರತಿ4 ವಿಶ್ವ ವಿಶ್ವ ಸೂತ್ರ ವಿಖ್ಯಾತವಿಶ್ವ ಪೂರಿತ ತಂತ್ರ ವಿಶ್ವಾತೀತವಿಶ್ವ ಜ್ಯೋತಿಯನರ್ಪಿಸುವೆ ಗುರುನಾಥ 5 ನಿತ್ಯ ಸಂತುಷ್ಟ ಶಿರೋಭಾಗಅತ್ಯಂತ ಆನಂದವಹ ಸದಾಭೋಗಪ್ರತ್ಯಗಾತುಮತರ ಪುಷ್ಪಪರಾಗಅರ್ಥಿಯಲಿ ಅರ್ಪಿಸುವೆ ನೈವೇದ್ಯ ನಾನೀಗ6 ಇಂತುಪಚಾರಪಂಚದ ಪೂಜೆಯನೀಗಅಂತರಂಗದಿ ಚಿದಾನಂದನಿಗೆ ಈಗ ಸಂತಸದಿಂದ ನಾ ಮಾಡುತಲಾಗಎಂತು ಎನಲಿ ತಾನೇ ತಾನಾದ ಬೇಗ7
--------------
ಚಿದಾನಂದ ಅವಧೂತರು
ಧೂಪಾರತಿಯ ನೋಡುವ ಬನ್ನಿರಯ್ಯಾ| ಶ್ರೀ ಪರಬ್ರಹ್ಮ ಮೂರುತಿಯಾದ ಹರಿಯಾ ಪ ವಿವೇಕದಾರತಿ ಜ್ಞಾನನಾಳದಲಿ| ತೀವಿದಶಾಂಗದಿ ಪುಷ್ಟಗುಧಿಡುವಾ 1 ತಾಳಕಂಸಾಳ ಝೇಂಗಟೆ ಶಂಖರವಗಳು| ಮೇಲಾದ ಅನುಹಾತ ವಾದ್ಯ ಮಂಜುಳವಾ 2 ಕರುಣತ್ರಿವಾರ್ತಿಯು ವಿಶ್ವಸದಾಜ್ಯದಿ| ಮೆರೆವ ಚಿಜ್ಷ್ಯೋತಿ ಏಕಾರತಿ ಹೊಳೆವಾ 3 ಗುರು ಮಹಿಪತೀಸ್ವಾಮಿ ಚರಣಕಿರಣ ನೋಡಿ| ಹರುಷದಿ ಪಾಡುತ ಸುಖವ ಸೂರ್ಯಾಡಿ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧೂಪಾರತಿಯ ಮಾಡುವ ಬನ್ನಿ ಸರ್ವರೂಪ ರಹಿತ ತನ್ಮಾತ್ರನಿಗೆಕೆಟ್ಟ ವಾಸನೆಗಳು ಎಷ್ಟಿಹವೆಲ್ಲ ಪ ಅಷ್ಟನು ಕುಟ್ಟಿ ಪುಡಿಯನು ಮಾಡಿದಶಿಷ್ಟ ದಶಾಂಗಮ ಘಮ ಘಮ ಬೀರಲುಸುಟ್ಟು ಎತ್ತುವ ಧೂಪಾರತಿಯ 1 ವಾಸನತ್ರಯವೆಂಬ ಗುಗ್ಗುಳ ಸಾಂಬ್ರಾಣಿದ್ವೇಷ ಭ್ರಾಂತಿಗಳ ಪರಿಪರಿಯಾದವಾಸನೆ ಎತ್ತೆತ್ತ ಮಕಮಕ ಎಸೆಯಲುಸೂಸಿ ಎತ್ತುವ ಸುಧೂಪಾರತಿಯ 2 ತುಂಬಿ ತುಂಬಿಗುರು ಚಿದಾನಂದ ತಾನಾದಾತ್ಮಗೆತ್ತುವೆಪರಮಮಂಗಳ ಸುಧೂಪಾರತಿಯ 3
--------------
ಚಿದಾನಂದ ಅವಧೂತರು
ನೋಡಿದೆನು ಉಡುಪೀ ನಿವಾಸನ ನೋಡಿದೆನು ಯಾದವೇಶನ ನೋಡಿದೆನು ಮಾನಿಸ ವೇಷನ ನೋಡಿದೆನೊ ಲಕುಮೇಶನ ಪ ಪರಶುರಾಮನು ಭೂಮಿ ಸುರರಿಗೆ ಸರವು ಧಾರುಣಿ ಧಾರಿಯಾ ಎರದು ಕೇಸರಗಿರಿಯ ಪಡುಮೂಲ ಶರನಿಧಿಯನು ಶರದಲೀ ಭರದಿ ಬಿಡಿಸಿದ ಶೂರ್ಪಕಾರದ ತೆರದಿ ನೆಲ ನೀ ಧರುಣಿಗೆ ಪರಮ ಸಾಹಸ ರಾಮಭೋಜನು ಅರಸನಾದುದು ನೋಡಿದೆ 1 ಯಾಗಗೋಸುಗ ರಾಮ ಭೋಜನು ನೇಗಿಲಿಯ ಕೊನೆಯಿಂದಲಿ ಆಗ ಭೂಮಿಯ ಶೋಧಿಸÀಲು ಬಂದು ನಾಗ ಬಂದಿತು ಮೃತವಾಗಿ ತೂಗಿ ಶಿರವನು ಭೃಗು ಕುಲೇಶಗೆ ಬಾಗಿ ನೆನೆಯಲು ಸಂಕೇತಾ ಸಾಗಿ ಭೂಮಿಪಾಲ ರಿಪು ಚನ್ನಾಗಿ ಒಲಿದದು ನೋಡಿದೆ 2 ತಿಳುಹಿದನು ಪೂರ್ವದಲಿ ಈ ಫಣಿ ಖಳನು ಕಾಣೊ ಇವನಿಂದು ಅಳಿದು ಪೋದದು ಲೇಸು ಭೂಸುರ ಕುಲಕೆ ಸಂತೋಷವಾಯಿತು ಒಲುಮೆಯಲಿ ಸತ್ಕಾರ ವಿಧ ವೆ ಗ್ಗಳವಾಗಿ ಸುಯಾಗವ ಸುಲಭ ಮನದಲಿ ಮಾಡೆನಲು ನಿ ಶ್ಚಲ ಭಕುತಿಲಿ ಸ್ತುತಿಸಲು 3 ಇಂದಿರಾಪತಿ ಕರುಣಿಸೆಂದು ಅಂದಿಗಾ ರಾಮ ಭೋಜನು ಒಂದು ಕ್ರೋಶದ ಅಗಲ ರಜತಾ ಚಂದದಾಸನ ಮಾಡಿಸಿ ತಂದು ದೇವನ ಕುಳ್ಳಿರಿಸಿ ಆ ನಂದದಲಿ ಓಲಾಡುತಾ ಕುಂದದಲೆ ಮೇಧವನು ಮುಗಿಸಿ ಗೋ ವಿಂದನ ಪ್ರೀತಿಪಡಿಸಿದಾ 4 ಭೂತಳದೊಳು ರಜತಪೀಠಾಖ್ಯ ಖ್ಯಾತಿ ಆಯಿತು ಸರ್ವದಾ ಆ ತರುವಾಯದಲ್ಲಿ ಭಾರ್ಗವ ಭೂತನಾಥನ ನಂದದಿ ವಾತ ಭಕ್ಷನ ನಡುವೆ ನಿಂದನು ಮಾತುಯಿದು ಪುಶಿಯಲ್ಲವೊ ಪೂತುರೆ ಮೋಹಕವೆ ತೋರಿದ ಜಾತ ರಹಿತಗೆ ನಮೋ ನಮೋ 5 ಪರಿ ಇರಲು ಗಂಗೆಯ ಕಾಂತ ಮಹಾ ತಪವನೆ ಮಾಡಿ ಸಂತತ ಗೋಪಾಲಕೃಷ್ಣನ ಸಂತೋಷವನು ಬಡಿಸಿದಾ ಚಿಂತೆಯಲಿ ವಿದೂರನಾದನು ಮುಂತೆ ನಡೆದ ಕಥೆ ಕೇಳಿ ಕಂತುಹರನನ ಒಲಿಸಿ ಉಡುಪಾ ಕಾಂತ ವರವನೆ ಐದಿದಾ 6 ಮೂರು ಯುಗದಲಿ ಈ ಪರಿಯಾಗೆ ಮಾರುತ ಮಧ್ಯಗೇಹನ ಚಾರು ಮನೆಯಲಿ ಜನಿಸಿ ವೈಷ್ಣವಾ ಚಾರ್ಯ ಈ ದುಶ್ಯಾಸ್ತ್ರವ ಹಾರಿಸಿದ ಹರುಷದಲಿ ರುಕ್ಮಿಣಿ ದ್ವಾರಕೆಲಿ ಪೂಜೆ ಮಾಡಿದ ಮೂರುತಿಯ ಸ್ಥಾಪಿಸಿದ ಲೀಲೆಯು ಆರು ಬಣ್ಣಿಸಲಾಪರು 7 ಇದೇ ರಜತಪೀಠ ಅಜಕಾನನವಿದೆ ಇದೇ ಉಡುಪಿ ಇದೇ ಶಿವಕುಲ್ಲ್ಯ ಅದರ ಬಳಿಯಲಿಯಿಪ್ಪ ತೀರ್ಥವ ಅದುಭುತವ ವರ್ಣಿಸುವೆನು ಇದೇ ಅನಂತ ಸರೋವರವು ಮ ತ್ತಿದೇ ವಾರುಣ್ಯಚಂದ್ರಮತೀರ್ಥ ಇದಕೆ ಮಧ್ವಸರೋವರ ವೆಂ ಬದು ಕಾಣೊ ಶ್ರುತಿ ಉಕ್ತಿಲಿ 8 ಸಕಲ ದೇಶದ ಜನರು ತ್ರಿವಿಧ ಸುಖವಾರಿಧಿಯೊಳು ಸೂಸುತಾ ಅಖಿಳ ವೈಭವದಿಂದ ಬಪ್ಪ ಅಕಟ ಸಂದಣಿಗೇನೆಂಬೆ ಸೂರ್ಯ ಬಂದ ಕಾ ಲಕೆ ಕೃಷ್ಣನ ನೋಡುವೆನೆಂದು ಚಕ್ಕನೆ ನಿಲ್ಲದೆ ಬಂದು ನೆರದಂದು ಮುಕ್ತಾರ್ಥ ಹರಿಪ್ರೇರಕಾ 9 ಸಜ್ಜನರ ಸಿರಿಚರಣ ರಜದಲಿ ಮಜ್ಜನವ ಗೈವುತ ಹೆಜ್ಜಿಹೆಜ್ಜಿಗೆ ಕೃಷ್ಣ ಕೃಷ್ಣ ಅಬ್ಜನಾಭ ನಾರಾಯಣ ಮೂಜಗತ್ಪತೆ ಎಂದು ಸ್ತೋತ್ರ ನಿ ರ್ಲಜ್ಜನಾಗಿ ಪಠಿಸುತಾ ರಜ್ಜುಪಾಣಿಯ ಬಹಿರದಿಂದ ನಿ ವ್ರ್ಯಾಜ್ಯ ಭಕುತಿಲಿ ನೋಡಿದೆ 10 ಮೊದಲು ನಮಿಸಿದೆ ಚಂದ್ರಶೇಖರ ಪದುಮಗರ್ಭನ ಮಗನೆಂದು ಅದರ ತರುವಾಯದಲ್ಲಿ ಮಾಯಿಯ ಸದಬಡೆದ ಪೂರ್ಣಬೋಧರು ಸದಮಲಾ ಕುಳುತಿಪ್ಪ ಸ್ಥಾನವ ಒದಗಿ ನೋಡಿ ಕೊಂಡಾಡುತಾ ಮದನ ಜನಕಾನಂತ ಸ್ವಾಮಿಯ ಪದಯುಗಳವನು ನೋಡಿದೆ11 ರತುನ ಗರ್ಭದೊಳಧಿಕವಾದ ತೀ ರಥವಿದು ಮಧ್ವಾಖ್ಯದಿ ಸತತ ಬಿಡದಲೆ ಇಲ್ಲಿ ಭಾಗೀ ರಥಿವಾಸ ನದಿಗಳ ಕೂಡಿ ನುತಿಸಿ ಮೆಲ್ಲನೆ ಮುಟ್ಟಿ ಮಿಂದು ಮತ್ತೆ ಕರ್ಮದ ಚರಿಯವ ಹಿತ ಮನಸಿನಲ್ಲಿ ಮಾಡುವಂಥ ಕೃತ ಕಾರ್ಯವನು ನೋಡಿದೆ 12 ಅಲ್ಲಿಂದ ನವರಂಧ್ರಗಳು ಕಂಡು ಪುಲ್ಲಲೋಚನ ಕೃಷ್ಣನ ಸೊಲ್ಲಿನಿಂದಲಿ ಪಾಡಿ ಭಾರತಿ ವಲ್ಲಭನ ಕೊಂಡಾಡುತಾ ಮೆಲ್ಲ ಮೆಲ್ಲನೆ ದ್ವಾರವನೆ ಪೊಕ್ಕು ನಿಲ್ಲದಲೆ ಸಮೀಪಕೆ ಬಲ್ಲವನು ಗುಣಿಸುತ್ತ ಭಕುತ ವ ತ್ಸಲನಂಘ್ರಿ ನೋಡಿದೆ13 ಮೂರು ಬಗೆ ಭೂಷಣವ ಧರಿಸಿದ ಮೂರುತಿ ಇದೇ ಕಾಣಿರೊ ಪಾರುಗಾಣರು ಈತನ ಅವ ತಾರ ಗುಣಕ್ರಿಯೆ ಮಹಿಮೆಯಾ ವಾರಿಜೋದ್ಭವ ಶಿವ ಮುಖಾದ್ಯರು ಸಾರಿ ಹಾಹಾ ಎಂಬರೊ ಧಾರುಣಿಗೆ ಇದೇ ದೈವ ನವನೀತ ಚೋರನ ಕೊಂಡಾಡಿದೆ 14 ತ್ರಾಹಿ ತ್ರಯಾವಸ್ಥೆ ಪ್ರೇರಕ ತ್ರಾಹಿ ತ್ರಯಗುಣ ವಿರಹಿತಾ ತ್ರಾಹಿ ತ್ರಯಧಾಮ ವಾಸ ಸರ್ವೇಶ ತ್ರಾಹಿ ತ್ರಯ ರೂಪಾತ್ಮಕಾ ತ್ರಾಹಿ ತ್ರಯವನು ಗೆದ್ದ ಪ್ರಸಿದ್ಧ ತ್ರಾಹಿ ತ್ರಯವನು ಕೊಡುವನೆ ತ್ರಾಹಿ ತ್ರಯಗಣ್ಣ ವನಪಾಲಕ ತ್ರಾಹಿ ತ್ರಯಲೋಕಾಧಿಪಾ 15 ಪಾಹಿಪರಮಾನಂದ ಗೋವಿಂದ ಪಾಹಿ ಪರತರ ಪರಂಜ್ಯೋತಿ ಪಾಹಿ ಪತಿತ ಪಾವನ್ನ ಮೋಹನ್ನಾ ಪಾಹಿ ಪಾಲಾಂಬುಧಿಶಾಯಿ ಪಾಹಿ ಜಗದತ್ಯಂತ ಭಿನ್ನಾ ಪಾಹಿ ನಿರ್ಭಿನ್ನ ಸ್ವರೂಪ ಪಾಹಿ ನಖಶಿಖ ಜ್ಞಾನ ಪೂರ್ಣನ ಪಾಹಿ ಎನ್ನಯ ಪ್ರೇಮನೆ 16 ನಮೋ ನಮೋ ಚತುರಾತ್ಮ ಗುಣನಿಧಿ ನಮೋ ನಮೋ ಪುನ್ನಾಮಕ ನಮೋ ನಮೋ ವಟಪತ್ರಶಾಯಿ ನಮೋ ನಮೋ ಪುಣ್ಯಶ್ಲೋಕನೆ ನಮೋ ನಮೋ ಸಮಸ್ತ ಸರ್ವಗ ನಮೋ ನಮೋ ಸರ್ವ ಶಬ್ದನೆ ನಮೋ ನಮೋ ಅವ್ಯಕ್ತ ವ್ಯಕ್ತಾ ನಮೋ ನಮೋ ನಾರಾಯಣ 17 ಜಯ ಜಯತು ಕರಿವರದ ವಾಮನ ಜಯತು ನಾರದ ವಂದ್ಯನೆ ಜಯ ಜಯತು ಪ್ರಹ್ಲಾದ ರಕ್ಷಕ ಜಯ ಜಯತು ಪಾರ್ಥನ ಸಾರಥೆ ಜಯ ಜಯತು ಅಂಬರೀಷ ಪರಿಪಾಲಾ ಜಯತು ಪರಾಶರನುತಾ ಜಯ ಜಯತು ಪಾಂಚಾಲಿ ಮಾನ ಕಾಯ್ದನೆ ಜಯ ಜಯತು ಗೋಪಿಕಾ ವಲ್ಲಭಾ18 ಇನಿತು ಬಗೆಯಲಿ ತುತಿಸಿ ದೇವನ ಮನದಣಿಯ ಕೊಂಡಾಡುತಾ ಕ್ಷಣಬಿಡದೆ ತನ್ನ ನೆನೆಸಿದವರಿಗೆ ಹೊಣೆಯಾಗಿ ಪಾಲಿಸುವನು ಜನುಮ ಜನ್ಮದಲಿಂದ ಮಾಡಿದ ಘನದುರಿತ ಪರ್ವತಗಳು ಚಿನಿಗಡೆದು ಸಾಧನವೆಲ್ಲ ವೇಗ ತನಗೆ ತಾ ಮಾಡಿಸುವನು 19 ವ್ಯಾಧ ಭೂಸುರ ವೇಷವು ಭೇದ ಮಾಡಿದ ನಾರಾಯಣಿ ಸುಪ್ರಸಾದ ನಿರ್ಮಲರೂಪವು ಆದಿವಾರವು ವಿಡಿದು ಎರಡು ಐದು ದಿನ ಪರಿಯಂತವು ಶ್ರೀಧರೇಶನು ವೇಷ ಧರಿಸಿದ್ದು ಸಾಧು ಸಂಗಡ ನೋಡಿದೆ20 ಉದಯಕಾಲದ ಪೂಜೆಯಾಗಲು ಮುದ ನಿರ್ಮಾಲ್ಯ ವಿಸರ್ಜನೆ ಇದೆ ಪೂರೈಸಲು ಮತ್ತೆ ಪಂಚ ಸುಧ ಪೂಜೆ ಉದ್ವಾರ್ಥನೆ ಒದಗಿಯಾಗಲು ಮೇಲೆ ಸುಧ ವಿಧುದಂತೆ ಬೆಣ್ಣೆ ಶರ್ಕರ ಇದೆ ಮಹ ಪೂಜೆ ನೋಡಿದೆ 21 ಗಂಧ ಪರಿಮಳ ತುಲಸಿ ಪುಷ್ಪಾ ನಂದ ಭೂಷಣ ಧರಿಸಿಪ್ಪ ಒಂದು ಕೈಯಲಿ ದಾಮ ಕಡಗೋ ಲಂದದಲಿ ತಾಳಿದಾ ಮಂದರಿಗೆ ಇದು ಸಾಧ್ಯವಲ್ಲವು ಮುಂದೆ ಯತಿಗಳು ಮಂತ್ರವ ಮಂದ ನಗಿಯಲಿ ಪೇಳುತಿಪ್ಪ ಚಂದವನು ನಾ ನೋಡಿದೆ 22 ಎತ್ತುವ ಧೂಪಾರತಿಗಳು ಹತ್ತೆಂಟು ಬಗೆ ಮಂಗಳಾ ರುತ್ತಿ ನಾನಾ ನೈವೇದ್ಯ ಷಡುರಸ ಮೊತ್ತಂಗಳು ಪರಿವಿಧಾ ಉತ್ತಮ ಶಾಖಾದಿ ಘೃತದಧಿ ತತ್ತಕ್ರಫಲ ಪಕ್ವವು ಸುತ್ತಲು ತಂದಿಟ್ಟು ಅರ್ಪಿ ಸುತ್ತಲ್ಲಿಪ್ಪುದು ನೋಡಿದೆ 13 ಮಂತ್ರ ಘೋಷಣೆ ಭಾಗವತಜನ ನಿಂತು ಗಾಯನ ಮಾಡಲು ಅಂತವಿಲ್ಲದೆ ವಾದ್ಯಸಂದಣಿ ಚಿಂತಿಸುವ ನಿಜದಾಸರು ವಂತು ವಾಳೆಯಿಲ್ಲದಾ ಜನ ಸಂತೋಷದಲಿ ನಲಿವುತಾ ತಂತ್ರ ಸಾರೋಕ್ತದ ಪೂಜೆ ಅತ್ಯಂತವನು ನಾ ನೋಡಿದೆ 24 ತೀರ್ಥ ಪ್ರಸಾದ ಗಂಧ ಅಕ್ಷತೆ ಅರ್ಥಿಯಲ್ಲಿ ಕೊಡುವರು ವ್ಯರ್ಥವಲ್ಲಿವು ಇಲ್ಲಿ ಒಂದು ಮು ಹೂರ್ತವಾದರು ಎಂದಿಗೂ ಶುಭ ಪ ದಾರ್ಥ ಬಡಿಸಲು ಉಂಡು ಕೃ ತಾರ್ಥನಾದೆನು ಜ್ಞಾನವಧಿಕ ಸಾರ್ಥಕರನ ನೋಡಿದೆ25 ತರಣಿ ಮಕರಕೆ ಬರಲು ಗೋಪಾಲ ಮೆರೆವ ವೈಭವವೆಂಬೆನೇ ಗಜ ತುರಗ ಹರಿ ಗರುಡ ಶ್ರೀ ಹನುಮಂತನಾ ವರ ರೂಢನಾಗಿ ಮೆರೆದು ಆಮೇಲೆ ಮಿರುಗುವ ರಥವನೇ ಏರಿ ಪರಮ ವೇಗದಿ ಚತುರ್ವೀಧಿಯ ತಿರುಗಿ ಬಪ್ಪದು ನೋಡಿದೆ 26 ಓಕಳಿಯ ಸಂಭ್ರಮವೆ ಪೇಳಲು ಗೋಕುಲಕೆ ಸಮನೆನಿಸಿತು ವಾಕು ಕೇಳ್ ಸುರ ಮುನಿಗಳೊಡನೆ ಲೋಕಕ್ಕಾಶ್ಚರ್ಯ ತೋರುತಾ ಸೋಕಿ ಸೋಕದ ಹಾಸೆ ಓಕುಳೀ ಹಾಕಿ ಆಡುವ ಲೀಲೆಯ ಈ ಕಲಿಯುಗದಲ್ಲಿ ಸೋಜಿಗ ಈ ಕಥೆಯಾದುದು ನೋಡಿದೆ 27 ವಾಲಗ ಎಡಬಲದಲಿ ಪಂಜು ಕಟ್ಟಿಕೆಕಾರರು ರಂಜಿಸುವ ಪಲ್ಲಕ್ಕಿ ಸೇವಿಪ ರಂಜಳವಾಗಿ ಒಪ್ಪಲು ಕುಂಜರಾರಿಯ ಪೀಠದಮೇಲೆ ಕಂಜಲೋಚನ ಕುಳ್ಳಿರೆ ನಿ ರಂಜನದಲಿ ಪೂಜಿಸುವ ಮತಿ ಪುಂಜ ಯತಿಗಳ ನೋಡಿದೆ 28 ಶ್ರುತಿ ಪುರಾಣಗಳುಪನಿಕ್ಷತ್ ವೊ ಸತು ಶಾಸ್ತ್ರ ಪ್ರಬಂಧವು ಭಾಗವತ ಸುಸಂ ಗೀತಿಯಲಿ ರಾಗ ಭೇದವು ಶ್ರುತಿ ಕಥಾಭಾಗ ಪದ್ಯ ಅಷ್ಟಕ ಮಿತಿಯಿಲ್ಲದಲಿಪ್ಪ ಪ್ರಸಂಗ ತತುವ ಮಾರ್ಗದಿ ನುಡಿವ ಬಲು ಉ ನ್ನತ ಮಹಿಮರ ನೋಡಿದೆ 29
--------------
ವಿಜಯದಾಸ
ನೋಡಿದೆನು ವಿಠ್ಠಲನ ದಣಿಯ ಪ. ನೋಡಿದೆನು ವಿಠ್ಠಲನ ರೂಪವ ಪಾಡಿದೆನು ಮನದಣಿಯ ಹರುಷವು ಮೂಡಿತಂಗದಿ ಮುಗಿದು ಕೈ ನಾ ಮಾಡಿ ಸಾಷ್ಟಾಂಗ ಬೇಡಿ ಮನಸಿನಭೀಷ್ಟ ಸಂತತ ನೀಡು ನಿನ್ನಯ ಚರಣ ಸ್ಮರಣಿಯ ಪಾಡಿಪೊಗಳುವ ಭಾಗ್ಯಬೇಕೆಂದು ಕಾಡಿದೆನು ಹರಿಯಾ 1 ಪಂಚ ಪಂಚ ಉಷಃ ಕಾಲದೀ ಪಂಚ ಬಾಣನ ಪಿತಗೆ ಆರುತಿ ಮುಂಚಿನೊಸನಗಳೆಲ್ಲ ತೆಗೆಯುತ ತೈಲವೆರೆಯುವರೂ ಪಂಚರೂಪಗೆ ಚಂದ್ರಭಾಗೆಯ ಪಂಚ ಗಂಗೋದಕಗಳೆರೆಯುತ ಅಮೃತ ಸ್ನಾನಗೈಸುವ ಸೊಬಗ ನೋಡಿದೆನು 2 ಬೆಣÉ್ಣ ಬಿಸಿನೀರೆರೆದು ಕೃಷ್ಣಗೆ ಸಣ್ಣ ವಸ್ತ್ರದಿ ವರಸಿ ಮೈಯ್ಯನು ಘನ್ನ ಪೀತಾಂಬರವನುಡಿಸುತ ಜರಿಯ ಶಾಲ್ಹೊದಿಸಿ ಬಣ್ಣದೊಸ್ತ್ರದ ಪಾಗು ಸುತ್ತುತ ಬೆಣ್ಣೆ ಕಳ್ಳಗೆ ಅಂಗಿ ತೊಡಿಸುತ ಸಣ್ಣ್ಣ ಮಲ್ಲಿಗೆ ಹಾರ ಉಪವೀತ ಸಡಗರವ ಕಂಡೆ 3. ಗಂಧ ಅಕ್ಷತೆ ಪುನುಗು ಜವ್ಜಾಜಿ ಛಂದದಾ ಕಸ್ತೂರಿ ತಿಲಕವು ಸುಂದರಾಂಗದ ಮುಖಕೆ ಕನ್ನಡಿ ತೋರಿಸುವರಿಂತೂ ಅಂದದಾ ಪಕ್ವಾನ್ನ ತರುತಲಿ ಇಂದಿರೇಶಗೆ ಅರ್ಪಿಸುತ್ತಲಿ ಒಂದು ಧೂಪಾರತಿಯ ಬೆಳಗಿ ಒಂದು ಏಕಾರ್ತಿ 4 ಮಾಡಿ ಪಂಚಾರ್ತಿಗಳ ವಿಠಲಗೆ ಪಾಡುವರು ಮನದಣಿಯ ಭಕ್ತರು ನೀಡುವರು ಪಂಚಾಮೃತಂಗಳ ಬೇಡುವರು ಹರಿಯ ರೂಢಿಯೊಳು ಪಂಡರಿಯ ಕ್ಷೇತ್ರವ ಬೇಡಿದವರನು ಪೊರೆವ ಗೋಪಾಲಕೃಷ್ಣವಿಠ್ಠಲನು 5
--------------
ಅಂಬಾಬಾಯಿ
ನೋಡುವ ಬನ್ನಿ ಪೂಜೆ ಮಾಡುವ ಬನ್ನಿ | ಪಾಡಿ ನಲಿದಾಡುತಲಿ ಎನ್ನೊಡೆಯಾ ಲಿಂಗಗ ಪ ದೇಹ ದೇವಾಲಯದಲ್ಲಿ ಹೃದಯ ಜಲ ಹರಿಯಲಿ | ಊಹಿಸಿ ನೆಲೆಯಾಗಿ ಹೊಳೆವ ಆತ್ಮಲಿಂಗಗ 1 ಜ್ಞಾನದಭಿಷೇಕ ಸಮ್ಯಕ್ ಜ್ಞಾನದಾ ವಸ್ತ್ರ ನೀಡಿ | ಧ್ಯಾನದೀಪಾ ಸಂಚಿತದ ಧೂಪಾರತಿಯಾ ಲಿಂಗಗ 2 ಭಾವಭಕ್ತಿ ಗಂಧಾಕ್ಷತೆ ಸುಮನ ಪುಪ್ಪದಲಿಂದು ಅವಗು ಸುವಾಸನೆಯು ಪರಿಮಳ ಲಿಂಗಗ 3 ಘನ ಗುರು ಮಹಿಪತಿ ಸುತ ಪ್ರಭುಲಿಂಗಗ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪೂಜಿ ಮಾಡುವ ಬನ್ನಿರೊ ಗುರುಪಾದ ಪೂಜಿ ಮಾಡುವ ಬನ್ನಿರೊ ಧ್ರುವ ತಿಳುಹು ತಿಳಿಯ ನೀರಿಲೆ ತನುವಿಲೆ ಅಭಿಷೇಕವ ಮಾಡುವ ಮಾಡುವ ಬನ್ನಿರೊ 1 ಶುದ್ಧ ಸುವಾಸನೆಯ ಗಂಧದಾರತಿ ಅಕ್ಷತಿಡುವ ಮಾಡುವ ಬನ್ನಿರೊ 2 ಅರವ್ಹೆಂಬ ದೀಪದಲಿ ಗುರುಸ್ವರೂಪವ ನೋಡುವ ಬನ್ನಿರೊ ನಲಿದಾಡುವ ಬನ್ನಿರೊ 3 ಭಕ್ತವತ್ಸಲ ಮೂರ್ತಿಗೆ ಸುಖದು:ಖ ಧೂಪಾರತಿ ಮಾಡುವ ಮಾಡುವ ಬನ್ನಿರೊ 4 ನೆನವು ನೈವೇದ್ಯದಲಿ ಮನ ಬುದ್ಧಿ ತಾಂಬೂಲವ ನೀಡುವ ಮಾಡುವ ಬನ್ನಿರೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಂಗನಂಗದ ಸಂಗ ಸುಖ ನೋಡ ಅಂಗನೆಲಕುಮಿಯ ಸಂಗದುರ್ಲಭವೆಈಅಂಗನೆಯರು ಮಾಡಿದ ಸುಕೃತವಂತೆ ಪ. ಗುಂಗುರಗೂದಲ ಮ್ಯಾಲೆ ಭೃಂಗದ ಮರಿಗಳು ರಂಗನ ಮುಖದ ರಸವನೆರಂಗನ ಮುಖದ ರಸವನೆ ಸÀವಿದುತಮ್ಮಂಗವ ಮರೆತು ಕುಳಿತಾರೆ ಬ್ರಹ್ಮಾದಿ ವಂದ್ಯ1 ಪಂಕಜನಾಭಗೆ ವಂಕಿ ಬಾಪುರಿ ಇಟ್ಟುಕಂಕಣ ಕಡಗ ಮೊದಲಾಗಿಕಂಕಣ ಕಡಗ ಮೊದಲಾಗಿ ರಂಗಗೆಅಲಂಕಾರ ಮಾಡಿ ಕೆಲದೆಯರು2 ಪಂಚಬೆರಳಿಗೆ ತಕ್ಕ ಮಿಂಚು ಮುದ್ರೆಗಳಿಟ್ಟುಪಂಚರತ್ನದಲಿ ರಚಿಸಿದಪಂಚರತ್ನದಲಿ ರಚಿಸಿದ ವಡ್ಯಾಣಕೆಂಚೆಯರು ಇಟ್ಟು ನಡುವಿಗೆ 3 ಶ್ರೀದೇವಿ ಅರಸಗೆ ಕ್ಯಾದಿಗೆ ಮುಡಿಸುತಊದಿನ ಕಡ್ಡಿಪರಿಮಳಊದಿನ ಕಡ್ಡಿಪರಿಮಳ ಮೂಸುತಮೋದ ಬಡುವವರು ಕಡೆಯಿಲ್ಲ4 ನೀಲವರ್ಣನ ಮುಂದೆ ಸಾಲು ದೀವಿಗೆಯಿಟ್ಟುಮ್ಯಾಲೆ ಚಾಮರವ ಸುಳಿಸುತಮ್ಯಾಲೆ ಚಾಮರವ ಸುಳಿಸುತಶಿರಮ್ಯಾಲೆ ಪೂಮಳೆಯ ಗರೆದಾರು 5 ಚಲ್ವ ರಂಗನ ಮುಂದೆ ಜಲಪಾತ್ರೆಯನ್ನಿಟ್ಟುಎಲೆಅಡಕಿ ತಬಕ ಫಲಗಳು ಎಲೆಅಡಕಿ ತಬಕ ಫಲಗಳ ತಂದಿಟ್ಟುಕೆಲದೆಯರು ಕೈಯ ಮುಗಿದಾರು 6 ಅಪಾರ ಮಹಿಮಗೆ ಧೂಪಾರತಿಯನೆತ್ತಿಭೂಪರಾಮೇಶ ಸಲುಹೆಂದುಭೂಪರಾಮೇಶ ಸಲುಹೆಂದುಗೋಪಾಲಕೃಷ್ಣಯ್ಯನ ಎದುರಲಿ ನಿಂತಾರು 7
--------------
ಗಲಗಲಿಅವ್ವನವರು
ಧೂಪಾರತಿಯ ನೋಡುವ ಬನ್ನಿ ನಮ್ಮಗೋಪಾಲಕೃಷ್ಣನ ಪೂಜೆಯ ಸಮಯದಿ ಪ.ಅಗುರುಚಂದನ ಧೂಪ ಗುಗ್ಗುಳ ಸಾಮ್ರಾಣಿಮಘಮಘಿಸುವ ಧೂಪದಾರತಿಯು ||ಮಿಗಿಲಾದ ಏಕಾಂತ ಭಕ್ತಿಯಲಿ ನಮ್ಮಜಗನ್ನಾಥ ಕೃಷ್ಣನ ದೇವರ ಪೂಜೆಯ 1ಮದ್ದಳೆ ಜಾಂಗಟಿ ತಾಳ ತಮ್ಮಟೆಭೇರಿತದ್ಧಿಮಿ ಧಿಮಿಕೆಂಬ ನಾದಗಳು ||ಹೊದ್ದಿದಧವಳ ಶಂಖದ ಘೋಷಣಂಗಳಪದ್ಮನಾಭನ ದಿವ್ಯ ದೇವರ ಪೂಜೆಯ 2ಢಣ ಢಣ ಢಣರೆಂಬ ತಾಳ ದಂಡಿಗೆವೇಣುಢಣಕು ಧಿಮಿಕು ಎಂಬ ಮದ್ದಳೆಯು ||ಝಣಿಝಣಿಸುವ ವೀಣೆ ಕಿನ್ನರಿ ಸ್ವರಗಳಘನರಾಗದಿಂದಲಿ ಹಾಡುತ ಪಾಡುತ 3ಮುತ್ತು ಛತ್ರ ಚಾಮರ ಪತಾಕ ಧ್ವಜರತ್ನ ಕೆಚ್ಚಿದ ಪದಕ ಹಾರಗಳು ||ಮತ್ತೆ ಕೋಟಿಸೂರ್ಯ ಪ್ರಭೆಯ ಧಿಕ್ಕರಿಸುವಸತ್ಯಭಾಮೆ ರುಕ್ಮಿಣಿಯರರಸನ 4ಹರ ಬ್ರಹ್ಮಸುರಪತಿ ದೇವತೆ ಮೊದಲಾದಪರಮ ಪಾವನಮೂರ್ತಿ ಪುರುಷೋತ್ತಮನ ||ಪರದೈವತವೆಂದು ಬಿರುದು ಪೊಗಳಿಸಿಕೊಂಬಪುರಂದರವಿಠಲನ ಪೂಜೆಯ ಕಾಲದ 5
--------------
ಪುರಂದರದಾಸರು