ಒಟ್ಟು 34 ಕಡೆಗಳಲ್ಲಿ , 23 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡಿಕೊಂಬೆನೆ ವರವ ನಾ ನಿನ್ನ ಮಾಲಕ್ಷ್ಮಿತಾಯಿ ಮಾಡಿ ದಯವನು ನೋಡೆ ನೀ ಎನ್ನ ಪಾಡಿ ಕೊಂಡಾಡುವೆನು ಪಂಚಗಂಗಾ ತೀರದಲಿ ಕರವೀರ ವಾಸಿಯೆ ಪ ಒದೆಯುತಿರಲು ಆ ಪಾದದಿ ಬಂದು ಪದುಮಾಕ್ಷ ಮುನಿಯ ಮುದದಿ ಮನ್ನಿಸಿ ಕಳುಹುತಿರೆ ಕಂಡು ಒದಗಿ ಬಂದ ಕೋಪದಿಂದ ಯದುನಾಥನ ಎದೆಯಿಳಿದು ಬೇಗನೆ ಕದನ ಮಾಡುತ ಕೊಲ್ಲಾಪುರವನು ಸದನ ಮಾಡಿದೆ ಸುಂದರಾಂಗಿಯೆ 1 ಬಿಟ್ಟು ನಿನ್ನ ವೈಕುಂಠದಿ ಹರಿಯು ಇಳಿದು ಅಂಜನಾ ಬೆಟ್ಟದಲಿ ನಿಂತಿದ್ದನೆ ಬಂದು ಪಟ್ಟದರಸಿಯು ನೀನು ಜನಕನ ಪುತ್ರಿಯಾದ ಕಾಲದಲಿ ಕೊಟ್ಟ ವಚನವ ನಡೆಸಿ ಪತಿಗೆ ನೀ ಪತ್ನಿಮಾಡಿದೆ ಪದ್ಮಾವತಿಯ 2 ರಮ್ಯವಾದ ರಜತ ಹೇಮಗಳು ಗುಡಿಗೋಪುರಗಳು ನಿನ್ನಶಿರ ಶೃಂಗಾರಾಭರಣಗಳು ಅಮ್ಮ ತ್ರಿಜಗದಂಬಾ ನಿನ್ನ ಮುಖ ಒಮ್ಮೆ ನೋಡಲು ಧನ್ಯರಾಗೋರು ಬ್ರಹ್ಮನಪಿತನರಸಿ ಎನಗೆ ನೀ ರಮ್ಮೆಪತಿಪಾದಾಂಘ್ರಿ ತೋರಿಸೆ 3 ಪಕ್ಷಿವಾಹನನ್ವಕ್ಷಸ್ಥಳದಲ್ಲಿ ಆವಾಸವಾಗಿ ಲಕ್ಷ್ಮಿ ನೀ ಅಧ್ಯಕ್ಷಳಾಗಿದ್ದು ಇಕ್ಷುಚಾಪನ ಜನನಿ ಕರವೀರ ಕ್ಷೇತ್ರದಲಿ ಪ್ರತ್ಯಕ್ಷಳಾಗಿ ಮೋಕ್ಷಾಪೇಕ್ಷಿಗಳಾದ ಜನರಿಗೆ ರಕ್ಷಿಸಿ ವರಗಳ ಕೊಡುವ ಮಾತೆಯೆ4 ನೇಮದಿಂದಲಿ ನಮಿಸುವೆನು ನಿನಗೆ ಮಾಲಕ್ಷ್ಮಿತಾಯಿ ಪ್ರೇಮದಿಂದಲಿ ಪಾಲಿಸಿ ನೀನು ಶ್ಯಾಮವರ್ಣನ ದಿವ್ಯ ಸಾಸಿರ ನಾಮ ನಾಲಿಗೆಲಿರಲು ನಿಲಿಸಿ ಭೂಮಿಗೊಡೆಯ ಭೀಮೇಶಕೃಷ್ಣನ ಧಾಮದ ದಾರಿಗಳ ತೋರಿಸೆ 5
--------------
ಹರಪನಹಳ್ಳಿಭೀಮವ್ವ
(ಅ) ಶ್ರೀಹರಿಸ್ತುತಿಗಳು ಬೋಧರೂಪನೆ ವೇದವೇದ್ಯನೆ ಬೇಗ ಮೋಕ್ಷವನೀವನೇ ವೇದತಸ್ಕರನಂ ವಿಭಂಜಿಸಿ ವೇದಮಂತ್ರವ ತಂದನೇ ಪ ಮೋದದಿಂದಗವನ್ನು ಬೆನ್ನಲಿ ಮಂತ್ರಪೊತ್ತ ದೇವನೆ ಪೋಷಿಸೈ ಸಾದರಂಮಿಗೆ ರಂಗನಾಥನೆಸಂತತಂ ನುತಿಗೈದಪೆಂ ಅ.ಪ ವಿಹಂಗ ರಾಜತುರಂಗ ಸನ್ಮುನಿ ಸಂಗಮಾ ಹಿರಣ್ಯ ಲೋಚನದರ್ಪಶಿಕ್ಷಲ ಸತ್ಕøಪಾ ಪಾಂಗ ದೈತ್ಯತನೂಭವೇಷ್ಟದ ತುಂಗ ಶೌರ್ಯ ವಿಶಿಷ್ಟ ಶ್ರೀ ರಂಗನಾಥನೆ ರಕ್ಷಿಸೈ ಭವದಂಘ್ರಿಸೇವೆಯೊಳಾವಗಂ1 ಸುಂದರಾಂಗನೆ ಸೂರಿವಂದ್ಯನೆ ಕುಂದಕುಟ್ಮಲದಂತನೇ ಮಂದಹಾಸದೊಳೊಂದಿ ಬಾಲಕನಂದದಿಂದಲಿ ಬಂದು ಸಾ ನಂದದಿಂಬಲಿಯಿಂದಭೂಮಿಯನಂದುದಾನವಕೊಂಡಗೋ ವಿಂದಪೋಷಿಸುರಂಗನಾಥಮುಕುಂದನೀಂ ಪರಿತೋಷದಿಂ2 ರಾಮ ತಾಮರಸೋದ್ಭವಸ್ತುತನಾಮ ಸದ್ಗುಣಧಾಮ ಶ್ರೀ ರಾಮಕೃಷ್ಣ ದಿನೇಶಮಂಡಲಧಾಮದೀನಶರಣ್ಯ ನಿ ಷ್ಕಾಮ ಸಂಗರಭೀಮ ದೈತ್ಯವಿರಾಮ ಸುಂದರಕಾಮ ಸು ತ್ರಾಮವಂದ್ಯನೆ ರಂಗನಾಥನೆ ರಕ್ಷಿಸೆನ್ನನು ಮೋದದಿಂ3 ಧೀರಬುದ್ಧನೆ ಕಲ್ಕಿರೂಪನೆ ಧೀರಸಂಕುಲದಿವ್ಯಮಂ ದಾರ ನಿನ್ನನೆ ಬೇಡಿಕೊಂಬೆನು ಘೋರಸಂಸ್ಕøತಿಬಂಧದಿಂ ಗಾರುಮಾಡಿಸದಿನ್ನು ಮಾತೆಯಗರ್ಭಕೆಂದಿಗುತಾರದೆ ಪಾರಗಾಣಿಸಿ ರಂಗನಾಥನೆ ಪಾಲಿಸೈ ಬಿಡದಳ್ಕರಿಂ 4
--------------
ರಂಗದಾಸರು
ಶ್ರೀವೇಂಕಟೇಶ ಸುಪ್ರಭಾತ ಶ್ರೀವೆಂಕಟೇಶಂಗೆ ಜಯ ಸುಪ್ರಭಾತ ದೇವಾದಿದೇವಂಗೆ ನವಸುಪ್ರಭಾತ ಪ ಪಾವನ ಶರೀರಂಗೆ ಜಯ ಸುಪ್ರಭಾತ ದೇವಪರಮಾತ್ಮಂಗೆ ನವಸುಪ್ರಭಾತ ಅ.ಪ ಅಂದು ಕೌಸಲ್ಯೆಯಣುಗ ರಾಮಾ ಏಳು ಎಂದಿನಂತೆ ಆಹ್ನಿಕವ ಮಾಡೆಂದು ನುಡಿಯಾ ಮುಂದೆ ವಿಶ್ವಾಮಿತ್ರ ಮುನಿ ರಾಮಭದ್ರಂಗೆ ಮಂದಹಾಸದಿ ಪೇಳ್ದ ಸರಯೂಬಳಿಯಲ್ಲಿ 1 ಎದ್ದೇಳು ಗೊವಿಂದ ಗರುಡಧ್ವಜಸ್ವಾಮಿ ಉದ್ಧರಿಸ ಬೇಕಯ್ಯ ಕರುಣಾಂತರಂಗ ಎದ್ದೇಳು ಚೈತನ್ಯ ಪುಣ್ಯದಾತ [ಎದ್ದೇಳು ಕಮಲಾಕಾಂತರಂಗ] 2 ಮಧುಕೈಟಭಾರಿಯಾ ವಕ್ಷಸ್ಥಲದಲಿ ನಿಂದ ಹದಿನಾಲ್ಕು ಲೋಕಗಳ ಮಾತೆಯೆನಿಸಿ ಪದುಮಾಕ್ಷಿ ಲಕ್ಷ್ಮೀಗೆ ಜಯಸುಪ್ರಭಾತ 3 ಸರ್ವಭುವನೇಶ್ವರಿ ಸರ್ವ ಭಕ್ತಂಕರಿ ಸರ್ವಲೋಕ ವಿಖ್ಯಾತೆ ಜಾತೆ ವಿನೀತೇ ಸರ್ವಲೋಕೇಶನ ರಾಣಿ ಕಲ್ಯಾಣಿ ಸರ್ವಸನ್ನುತೆ ನಿನಗೆ ಸುಪ್ರಭಾತ 4 ಸಪ್ತರ್ಷಿ ಮಂಡಲವು ಔಪಾಸನೆಯಾಗೆ ತೃಪ್ತರಾಗಿರುತಿಹರು ನಭದ ನದಿಯೊಳು ವ್ಯಾಪ್ತವಾದಖಿಳ ಕರಪುಷ್ಪಗಳ ಅರ್ಪಿಸಿ ಒಪ್ಪಿರ್ಪರೇಳೇಳು ವೆಂಕಟೇಶ 5 ಅಜ ನಿರಂಜನ ಸ್ಮರಿಸಿ ತ್ರೈವಿಕ್ರಮನ ಚರಿತೆಗೇಳು ಶಿರಬಾಗಿ ವಂದಿಪರು ಗುರು ಶುಭವ ಪೇಳುವನು ವರದರಾಜ ಏಳು ವೇಂಕಟೇಶ 6 ಈಗ ವಿಕಸಿತವಾದ ಕಮಲಸೌರಭದೊಡನೆ ರಾಗ ರಸ ತಂಪಿಂಪು ಮಿಳಿತಮಾಗಿ ಸಾಗುತಿದೆ ತಂಗಾಳಿ ಉಲ್ಲಾಸಮಂ ಬೀರಿ ತ್ಯಾಗಿ ನೀನೇಳಯ್ಯ ವೇಂಕಟೇಶ 7 ಕದಳಿ ಖರ್ಜೂರಗಳ ರಸಯುಕ್ತ ಪಾಯಸ ಮುದದಿ ಸಂಸೇವಿಸುತ ಉತ್ಸಾಹದೀ ಮಧುರ ಗಾನವ ಪಾಡಿ ಶುಕಪಿಕಗಳುಲಿಯುತಿವೆ ಪದುಮನಾಭ ಏಳು ವೇಂಕಟೇಶ 8 ದೇವರ್ಷಿನಾರದನು ಮಹತಿ ವೀಣೆಯ ನುಡಿಸಿ ದೇವದೇವನೆ ನಿನ್ನ ನುತಿಸುತಿಹನು ಭಾವರಸಯುತವಾದ ಗಾನಕೇಳುತಿಹುದು ಪಾವನಾತ್ಮನೇ ಏಳು ವೇಂಕಟೇಶ 9 ಸುರಿವ ಮಕರಂದವನು ಹೀರಿ ಹೀರಿ ಅರುಣನುದಯವ ತಿಳಿದು ಅರಳುತಿಹ ಕಮಲದಿಂ ಸರಸರನೆ ಝೇಂಕರಿಸಿ ಬರುತಿರ್ಪುವೈ ಸಿರಿಯ ದುಂಬಿಗಳೇಳು ವೆಂಕಟೇಶ 10 ಮಡದಿಯರು ಕೆನೆಮೊಸರನಾಂತ ಭಾಂಡಗಳಲ್ಲಿ ಕಡೆಗೋಲಿನಿಂ ಮಥಿಸಿ ಹಾಡುತಿಹರು ಅಡಿಗಡಿಗೆ ಜಯ ಘೋಷ ಕೇಳುತಿದೆಯಯ್ಯ ಪೊಡವೀಶ ನೀನೇಳು ವೇಂಕಟೇಶ 11 ಕಮಲದಿಂದೈತಂದ ದುಂಬಿಗಳು ಸುತ್ತಲಿನ ಕುಮುದಗಳ ಮೈಗಪ್ಪಿ ಝರಿಝರಿ ಗರ್ವದಿ ಅಮರ ದುಂದುಭಿಯಂತೆ ಝೇಂಕರಿಸುತಿವೆಯಿದೋ ವಿಮಲಾಂಗ ನೀನೇಳು ವೇಂಕಟೇಶ 12 ಶ್ರೀರಮೆಯ ನಿತ್ಯಯೋಗಸ್ಥಾನ ಹೇಸ್ವಾಮಿ ಭೂರಿಭಕ್ತರ ಕಾಯ್ವ ಕರುಣಾನಿಧೇ ಸ್ವಾಮಿ ಮೂರು ಲೋಕವನಳೆದು ಪಾಲಿಸುವ ಸ್ವಾಮಿ ಮಾರಮಣ ನೀನೇಳು ವೇಂಕಟೇಶ 13 ಅಜ ರುದ್ರ ಸನಕಾದಿ ಪರಮ ಭಕ್ತರ ಬಂಧು ಭಜಿಸಿ ತವ ದರ್ಶನವ ಕಾಯುತಿಹರು ವಿಜಯ ಜಯರೀರ್ವರು ತಡೆಯುತ್ತಲಿಹರಯ್ಯ ಗಜವಿನುತ ನೀನೇಳು ವೇಂಕಟೇಶ 14 ಶೌರಿ ನಿನ್ನಾವಾಸ ತಾಣ ವೈಕುಂಠದಿಂದ ನಾರಾಯಣಾದ್ರಿ ಗರುಡಾದ್ರಿ ಎಂತೆಂಬ ಆರೇಳು ನಾಮಗಳ ಪೇಳ್ವರಿದು ಶೇಷಾದ್ರಿ ಸಾರತರ ನಾಮವೈ ವೇಂಕಟೇಶ 15 ಭುವಿಯ ಗೋಪಾಲಕರು ಅನುಮತಿಯ ಬೇಡುವರು ರವಿಯಗ್ನಿಯುಕ್ತ ನವಗ್ರಹಗಳು ಕಾದಿಹರು ಭವದೂರನೇ ನಿನಗೆ ಸುಪ್ರಭಾತ 16 ದಿವಿಮೋಕ್ಷ ಬೇಡ ತವದರ್ಶನವು ಸಾಕೆಂದು ನವಭಕ್ತಿಯಿಂ ತಳೆದು ಭಜನೆ ಮಾಡುತಿಹರು ಪವಮಾನನುತ ನಿನಗೆ ಸುಪ್ರಭಾತ 17 ನಿನ್ನ ಧಾಮದ ಶಿಖರ ವೀಕ್ಷಣೆಯೊಳಾನಂದ ವನ್ನು ಪಡುತಿಹರೆಲ್ಲ ಶರಣ ಜನರು ನಿನ್ನ ದರ್ಶನವೊಂದೆ ಪರಮ ಪದವದನು ಸನ್ನುತಾಂಗನೆ [ತೋರೇಳು]ಸುಪ್ರಭಾತ 18 ಭೂಮಿಪತಿ ಕರುಣಾಂಬುಸಾಗರನೆ| ಧೀರ ಶೂರಾನಂತ ಗರುಡ ವಿಷ್ವಕ್ಸೇನ ರಾರಾಜಿಸುತ್ತಿಹರು ನಿನ್ನ ದರ್ಶನಕಾಗಿ ನಾರಾಯಣಾ ನಿನಗೆ ಸುಪ್ರಭಾತ|| 19 ಕಮಲನಾಭ ದೇವ ಪುರುಷೋತ್ತಮಾ ಸ್ವಾಮಿ ಅಮಲಸದ್ಗುಣಧಾಮ ಕೃಷ್ಣ ವೈಕುಂಠ ಸುಮಬಾಣಕೋಟಿ ಸೌಂದರ್ಯನುತ ಮಾರಮಣ ಕಮಲನಯನಾ ನಿನಗೆ ಸುಪ್ರಭಾತ|| 20 ದೀನರಕ್ಷಣೆಗಾಗಿ ಹತ್ತುಜನ್ಮದಿ ಬಂದೆ ಮಾನವ ಶ್ರೇಷ್ಠರೂ ಆಕಾಶಗಂಗೆಯಲಿ ನಾನಾ ಸುಗಂಧಗಳ ಬೆರೆಸಿ ಕಾಯುತ್ತಿಹರು ಭಾನುತೇಜನೆ ನಿನಗೆ ಸುಪ್ರಭಾತ 21 ದಿನಪನುದಯಿಸುತ್ತಿಹನು ಕಮಲವರಳುತ್ತಿಹುದು ಬನದ ಪಕ್ಷಿಗಳೆಲ್ಲ ಹಾಡುತ್ತಲಿಹವು ಘನವೈಷ್ಣವರು ಮಂಗಳಂಗಳಂ ಪಾಡುವರು ಮನುಜಪುಂಗವ ನಿನಗೆ ಸುಪ್ರಭಾತ 22 ಕಮಲಜಾದ್ಯಮರರೂ ಸಪ್ತರ್ಷಿಯೋಗಿಗಳು ವಿಮಲ ಮಾನಸರಾಗಿ ನಿನಗಾಗಿ ಕಾದಿಹರು ತಿಮಿರಸಾಗರವನ್ನು ದಾಟಿಸುವ ಪರಮಾತ್ಮ ಕಮನೀಯಗುಣ ನಿನಗೆ ಸುಪ್ರಭಾತ|| 23 ಭಾವನೆಯೊಳೀಯದ್ರಿ ವೈಕುಂಠವಾಗಿಹುದು ಮಾವನಿತೆಯುಪಚಾರದಭ್ಯರ್ಥಿಯಾಗಿಹಳು ಶ್ರೀವೈಷ್ಣವ ಕೇಳು ಕೈಮುಗಿದು ಕಾದಿಹರು ಕಾವಕಾರುಣ್ಯನಿಧಿ [ನಿನಗೆ ಸುಪ್ರಭಾತ] 24 ಅರುಣೋದಯದೊಳೆದ್ದು ಈ ಸುಪ್ರಭಾತವನು ಪರಮ ಭಕ್ತಿಯೊಳೊಮ್ಮೆ ಪಾಡುವರಿಗೆ ಪರಮಪುರುಷನು ದಿವ್ಯತಾಣವನು ನೀಡುವನು ಹಿರಿಯರಾ ವಚನವಿದು ಪರಮ ಚರಿತಾರ್ಥ25 ಶರಣಾಗತಿ ಒಂದೆರಡು ಮೂರು ನಾಲ್ಕೈದಾರು ಮೊಗದವರು ಬಂದು ವಂದಿಸುತಿಹರು ಪುರುಷೋತ್ತಮ ಬಂಧುರ ಶರೀರನೀ ಪಾಲಿಸೆಮ್ಮ ವೆಂಕಟೇಶ 26 ನಾನಾಪರಾಧಗಳ ಮಾಡಿರುವೆನಯ್ಯ ನೀನೆಲ್ಲವನು ಕ್ಷಮಿಸಿ ಪರಿಪಾಲಿಸಯ್ಯ ನೀನೇ ಸರ್ವಾಧಾರ ಕರುಣಾಂತರಂಗನು ದಾನಶೀಲಾ ಸ್ವಾಮಿ ಶ್ರೀವೇಂಕಟೇಶ 27 ಗೋಪಿಕಾ ಪರಿವೃತನೆ ಪರವಾಸುದೇವನೆ ಗೋಪಿಕಾ ಗೀತಗುಣ ಸಂಪೂಜ್ಯ ದೇವನೆ ಗೋಪಿಕಾ ಮನ್ಮಥನೆ ದೈತ್ಯಾರಿ ಶ್ರೀಕೃಷ್ಣ ನೀ ಪೊರತು ಬೇರೆ ದೇವರ ಕಾಣೆ ವೆಂಕಟೇಶ28 ದಶರಥನ ಸುತನಾಗಿ ಜಾನಕಿಯ ಕರವಿಡಿದು ದಶಮುಖಾದ್ಯಸುರರನು ಸಂಹರಿಸಿದಾತ ಶಶಿಮೌಳಿ ವಂದ್ಯನೆ ಲೋಕಮೋಹನ ಸ್ವಾಮಿ ಕ್ಲೇಶಗಳ ಸಹಿಸಿ ಶಾಶ್ವತ ಸುಖವ ನೀಡಯ್ಯ ವೆಂಕಟೇಶ 29 ಕಂಜಾಯತಾಕ್ಷಿಯೆ ಸರ್ವಲೋಕ ಶರಣೇ ಕಂಜವದನೆಯೆ ಸರ್ವವಾತ್ಸಲ್ಯ ಪೂರ್ಣೇ ಕಂಜನಾಭನ ದಿವ್ಯ ವಕ್ಷಸ್ಥಲಾವಾಸಿ ಕಂಜಸರ್ವಾಂಗಿ ಪೊರೆ ಪುಣ್ಯಚರಿತೆ ಶ್ರೀಯೆ 30 ಸರ್ವಲೋಕ ಶರಣ್ಯ ಸರ್ವಗುಣ ಸಂಪೂರ್ಣ ಸರ್ವದೇವರದೇವ ವೇದವಂದಿತ ಸರ್ವಕಾರುಣ್ಯನಿಧಿ ಸರ್ವಾತ್ಮ ಸಂಚಾರಿ ಸರ್ವಪೂಜಿತ ನಿನಗೆ ಶರಣು ವೆಂಕಟೇಶ 31 ರಕ್ಷಿಸು ಜಗನ್ಮಯ ರಕ್ಷಿಸು ದಯಾಮಯ ರಕ್ಷಿಸು ಮನೋಮಯಾ ಮಾಯ ನಿರ್ಮಾಯ ರಕ್ಷಿಸೈ ಸರ್ವಜ್ಞ ಸರ್ವಲೋಕಾಧ್ಯಕ್ಷ ರಕ್ಷಸೈ ಹರಿ ನಿನ್ನ ಚರಣ ವೆಂಕಟೇಶ 32 ಆವನಾದಿಯನಂತನೆಂದೆನಿಪನೊ ವರವ ಈವ ಕರುಣಾಳುವೋ ಜೀವರಾಶಿಯನೆಲ್ಲ ಕಾವನೋ ಸಹಸ್ರಾಕ್ಷನೆಂದೆನಿಪ ದೇವನಾ ಶ್ರೀವನಜ ಪದವೆನಗೆ ಶರಣು ವೆಂಕಟೇಶ 33 ವೇದಗಳ ತಂದು ಮಂದರವೆತ್ತಿ ಹರಿಯ ಮೇದಿನಿಯ ನಳೆದ ಭಾರ್ಗವನಾದ ರಾಮನೀ ನಾದೆ ಕಂಸನಕೊಂದೆ ಗೋಪಾಲಕೃಷ್ಣ ನಾದ ಕಲ್ಕೀ ನಿನ್ನ ಚರಣ ವೆಂಕಟೇಶ34 ಮೂರು ವೇಣಿಗಳುಳ್ಳ ಗಂಗೆ ಪುಟ್ಟಿದ ಪಾದ ಮೂರು ಲೋಕವನಳೆದ ಸುಪ್ರಸಿದ್ಧದ ಪಾದ ಮೂರು ಕಣ್ಣಾಂತವನು ಜಪಿಸುತಿರುವ ಪಾದ ಚಾರುತರ ಪದವೆನಗೆ ಶರಣು ವೆಂಕಟೇಶ 35 ಕಾಳಿಂಗನಾ ಹೆಡೆಯ ತುಳಿದು ಕುಣಿದಾ ಪಾದ ಖೂಳ ಶಕಟನನೊದ್ದು ಕೊಂದ ಪಾದ ಚೋಳರಾಯನು ತೊಳೆದು ವಂದಿಸಿದ ಪಾದ ನಾಳೀಕ ಪದವೆನಗೆ ಶರಣು ವೆಂಕಟೇಶ36 ಕ್ಷೀರವಾರಿಧಿತನುಜೆಯೊಪ್ಪಿ ವೊತ್ತುವ ಪಾದ ನಾರದಾದಿಗಳೆಲ್ಲ ಪಿಡಿದು ನಲಿವಾ ಪಾದ ಶ್ರೀರಮಣಿ ಮುದದಿಂದ ಕಣ್ಗೊತ್ತುವ ಪಾದ ಮಾರಮೋಹಕ ನಿನ್ನ ಚರಣ ವೆಂಕಟೇಶ37 ಮಂಗಳ ಕಲ್ಯಾಣ ರೂಪಂಗೆ ಅದ್ಭುತಾಕಾರಂಗೆ ಮಾಲ್ಯಪೀತಾಂಬರಾಂಗದ ಶೋಭಿತಂಗೆ ಶಾಲ್ಯನ್ನ ಸಂಪ್ರೀತ ಶ್ರೀ ವೇಂಕಟೇಶಂಗೆ ಬಾಲ್ಯಕುಂದದವಂಗೆ ಜಯಮಂಗಳ 38 ಭಕ್ತಪರಿಪಾಲಂಗೆ ಜಗದಾದಿ ಮೂಲಂಗೆ ಭಕ್ತಿದಾತಾರಂಗೆ ರಮೆಯರಸಂಗೆ ಮುಕ್ತಿ ಸೌಖ್ಯವನೀವ ಶ್ರೀವೇಂಕಟೇಶಂಗೆ ಶಕ್ತಿ ಸ್ವರೂಪಂಗೆ ಶುಭಮಂಗಳ 39 ಶೇಷಾದ್ರಿ ವಾಸಂಗೆ ದಿನಕರ್ತ ಭಾಸಂಗೆ ಕ್ಲೇಷದಾರಿದ್ರ್ಯಾದಿ ಪರಿಹಾರ ಕರ್ತಂಗೆ ಶೇಷ ಪಂiÀರ್iಂಕಂಗೆ ಶ್ರೀ ಶ್ರೀನಿವಾಸಂಗೆ ದೋಷಾಪಹಾರಂಗೆ ಜಯಮಂಗಳ 40 ಅರವಿಂದ ವದನಂಗೆ ಅರವಿಂದ ಲೋಚನಗೆ ಅರವಿಂದನಾಭನಿಗೆ ಅರವಿಂದ ಗಾತ್ರಗೆ ಅರವಿಂದ ಪಾದನಿಗೆ ಅರವಿಂದ ಭೂಷನಿಗೆ ಅರವಿಂದ ಹಸ್ತಂಗೆ ಶುಭಮಂಗಳಂ 41 ಹಿಂದಿನಾಚಾರ್ಯರಿಗೆ ಮುನಿಮುಖ್ಯಭಕ್ತರಿಗೆ ಇಂದಿನಾ ಭೂದೇವಿ ನೀಳಾದಿ ವಧುಗಳಿಗೆ ಮಂದಾಕಿನೀಧರಗೆ ಇಂದ್ರ ದಿಕ್ಪಾಲರಿಗೆ ವಂದಿಪೆನು ಮಂಗಳಾಚರಣೆ ಮಾಡಿ 42 ಫಲಶ್ರುತಿ ಹನ್ನೆರಡು ಮಾಸವು ತಪ್ಪದೆ ಹಾಡಿದರೆ ಮುನ್ನಮಾಡಿದ ಪಾಪವೆಲ್ಲ ಕಳೆಯುವುದು ಪನ್ನಗಾರಿಧ್ವಜನ ಕರುಣೆಯೊದಗುವುದು ಬನ್ನಗುಡುವನರಕಬಾಧೆ ತಪ್ಪುವುದು 43 ಶ್ರಾವಣಾಶ್ವೀಜದಲಿ ಮಾರ್ಗಶಿರ ಮಾಸದಲಿ ಭಾವಭಕ್ತಿಯಲಿಂತು ಹಾಡುವರಿಗೆ ನೋವು ಕಾಲನಭಟರ ಕಾಟನಶಿಪುದು ಹರಿಯ ಭಾವುಕರು ಸತ್ಕರಿಸಿ ಕರೆದೊಯ್ವರು 44 ಅಪ್ಪ ಮಾಂಗಿರಿರಂಗನಪ್ಪಣೆ ಪಡೆದಿದನು ಒಪ್ಪಿಸುವೆನೈ ನಿನಗೆ ವೇಂಕಟೇಶ| ತಪ್ಪು ನೆಪ್ಪುಗಳನ್ನು ಮನ್ನಿಸೈ ಜಗದೀಶ ಒಪ್ಪದಿಂ ಸಕಲರನು ಪೊರೆ ವೇಂಕಟೇಶ|| 45
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಈ ಮಾತುರ ನೀಯದಿದ್ದರೆ ನಿನ್ನ | ಧಾಮದಲ್ಲಿಗೆ ಪೋಗಿ ಸೇರಿ ಸುಖಿಪದೆಂತೋ ಪ ಹುಟ್ಟಿದಾರಭ್ಯದಿ ಹೊಟ್ಟಿ ಬಟ್ಟಿಯಲಿಂದ | ಕಷ್ಟ ಬಟ್ಟೆನೆಂದು ಹೇಳಲಿಲ್ಲಾ | ಸೃಷ್ಟೇಶ ಕಾಡುವ ಅಷ್ಟ್ಟ ಮಹಾಮದಗಳ ನಷ್ಟಗೊಳಿಸಿ ನಿನ್ನ | ನಿಷ್ಟಿಲಿಡೆಂದೆಲ್ಲದೆ 1 ಸತಿ ಸುತರಿಗೆ ಯೇನೋ | ಗತಿ ಗೋತ್ರವಿಲ್ಲೆಂದು | ಸತತ ನಿನ್ನ ಕೇಳಿ ದಣಿಸಿಲಿಲ್ಲಾ | ಪತಿತ ಪಾವನ ಎನಗೆ ಗತಿಯಾಗುವುದಕೆ | ಸುಪಥವನೆ ತೋರುವ | ಮತಿಕೊಡೆಂದೆನಲ್ಲದೆ2 ಕರುಣಿ ಬೇಡಿಕೊಂಬೆ | ಉರು ಕಾಲದಲಿ ನಿನ್ನ | ಶರಣರ ಸಂಗತಿಲೆನ್ನ ಇಟ್ಟು | ಪರಮ ಶುದ್ಧನ ಮಾಡಿ ವಿಜಯವಿಠ್ಠಲ ನಿನ್ನ | ಚರಣಸೇವೆ ನಿರಂತರ ಕೊಡೆಂದೆನಲ್ಲದೆ3
--------------
ವಿಜಯದಾಸ
ಓಂ ನಮೋ ನಾರಾಯಣಾಯ ತೇ ನಮೋ ನಮೋ ನಮೋ ಪ ಓಂ ನಮೋ ಓಂಕಾರಾದಿ ನೀ ಘನ್ನ ಮಹಿಮ ಅಷ್ಟಾಕ್ಷರಾತ್ಮಕನೆ ಅ.ಪ ಪ್ರಣವ ಪ್ರತಿಪಾದ್ಯ ನೀ ಅಷ್ಟಾಕ್ಷರದೊಳು ವಿಶ್ವತÉೈಜಸ ಪ್ರಾಜ್ಞ ತುರ್ಯಾತ್ಮ ಅಂತರಾತ್ಮ ಪರಮಾತ್ಮ ಜ್ಞಾನಾತ್ಮ ವರ್ಣಾತ್ಮಕ ನೀ ಓಂಕಾರದೊಳು ಅಉ ಮನಾದಬಿಂದು ಘೋಷ ಶಾಂತ ಅತಿಶಾಂತದೊಳು ಪ್ರತಿಪಾದ್ಯಮೂರುತಿ ಹರೆ1 ಪ್ರಣವದೊಳು ಆದಿವರ್ಣದಿಂದಭಿವ್ಮಕ್ತಿ ಕಾಲಗಳ್‍ವ್ಯಕ್ತವೊ ಪ್ರಾಣ ಲಕುಮಿಯಭಿಮಾನಿಗಳನಂತ ವೇದಗಳಿಂ ವಿಶ್ವಮೂರುತೀ ಹರೆ2 ವಯ್ಯ ಕವರ್ಗ ವರ್ಗವೈದು ಪಂಚಭೂತಗಳಂ ವರ್ಣದೊಳಭಿಮಾನಿಗಳ್ ಭೂತಕ ಗಣಪ ಪ್ರಹವವಾಯು ತೈಜಸ ಮೂರುತೇ3 ಪ್ರತಿಪಾದ್ಯನೆ ಮಕಾರ ವಾಚ್ಯ ಶ್ರೀ ಪ್ರಾಜ್ಞ ನಿನ್ನಿಂದಭಿ- ವ್ಯಕ್ತಿ ಚವರ್ಗ ಪಂಚಕ ಜ್ಞಾನೇಂದ್ರಿಯ ವೈದು ಸೂರ್ಯ ಪ್ರಾಣ ದಿಗ್ದೇ- ವತೆಗಳಿಹರು ಪ್ರತಿಗಾಣಿನೊ ಶ್ರೀ ಪ್ರಾಜ್ಞಮೂರುತಿ ಹರೆ4 ನಾದವಾಚ್ಯಪ್ರತಿಪಾದ್ಯ ತುರ್ಯನೆ ಅಭಿವ್ಯಕ್ತ ಪಂಚವರ್ಣ ಟವರ್ಗ ಕರ್ಮೇಂದ್ರಿಯಗಳ್ ಶ್ರೀ ತುರ್ಯ ಮೂರುತೆ 5 ಬಿಂದುವಾಚ್ಯ ಪ್ರತಿಪಾದ್ಯ ನೀನಾತ್ಮ ಬಿಂದುವಿಂದ ತವರ್ಗ ಪೊಂದಿಕೊಂಡಿಹುದು ತನ್ಮಾತ್ರಪಂಚಕ ಪಂಚವಾಯುಗಳಿಹರಯ್ಯ ಬಂಧ ಮೋಚಕ ನೀ ಕಾರಣ ಹರೆ 6 ಘೋಷದಿಂದಲಭಿವ್ಯಕ್ತಿ ಪಂಚಮನೋ ವೃತ್ತಿಗಳದರಭಿಮಾನಿ ಓಷಧೀಧರ ಖಗಪ ಶೇಷೇಂದ್ರ ಕಾಮರು ಪಕಾರ ಪಂಚವರ್ಣ ದೋಷರಹಿತ ಮನೋಧಾಮದಿ ನೀ ದೊರೆ 7 ಕಾರಾದಿ ಸಪ್ತವರ್ಣ ಸಪ್ತಧಾತುಗಳಲ್ಲಿ ಪರಿ ಅರಿಯೆನೊ ಹರಿಯೆ 8 ಅತಿ ಶಾಂತದೊಳು ಪ್ರತಿಪಾದ್ಯನಾಗಿಹೆ ಜ್ಞಾನಾತ್ಮ ಹಕಾರಾದಿ ತ್ರೈವರ್ಣ ಅದರಿಂದ ಗುಣಕ್ರಿಯವೊ ತತುಕ್ರಿಯ ಜಾಗೃತ ಸ್ವಪ್ನ ಸುಷುಪ್ತಿ ವಿಶ್ವಾದಿರೂಪದಿಂದ ಉರಗಾದ್ರಿವಾಸವಿಠಲ ಮೂರುತೇ 9
--------------
ಉರಗಾದ್ರಿವಾಸವಿಠಲದಾಸರು
ಕರಿಯನೆರಿರೇ ಮುರಾರಿಗೆ ಪ ಹಂಸವಾಹನ ಶಿವರಂಶಗಳನು ಕೂಡಿಕಂಸ ಶಾಸ್ತ್ರವ ತ್ರಿವಂಶ ಬೆಳೆಸಿದಾ 1 ಗೋಪಿ ಪುತ್ರನ ಪಾಡಿ2 ಕರಿಪುದಸರಾಧ್ವರ ಧನುರ್ದನು ತನ್ನಕರದಿ ಮುಟ್ಟುತ ಮೃತ ತರುಳನ ಕಾದಾ 3 ರಾಮನಾಮದಿ ಭೂಪ ಧಾಮದೊಳಗೆ ಪುಟ್ಟಿಕಾಮಿನಿ ಸಹ ಕೂತ ಪ್ರೇಮ ಪುರುಷಗೆ 4 ಕರ ಕರದೊಳು ಸುರಭಿ ಕುಸುಮವೆತ್ತಿಪರಮ ಪುರುಷ ವಿಪತ್ ಪರಿಹರಿಸಿದನು 5 ಕರ ಕತ್ತರಿಸುವೆನೆಂಬೋ-ನ್ಮತ್ತನಾಸ್ತ್ರವ ಕರೆ ಕಿತ್ತು ರಕ್ಷಿಸಿದಾ 6 ಪೇಸಿಯಿಂದಲಿ ಪುಂಸ್ತ್ರೀ ಕೂಸುಗಳನೆ ಮಾಡಿತೋಷಿಸಿದನು ಬದರೀಶ ಮೌನಿಜನು 7 ಇಂಥ ಮಹಿಮೆಗಳಾನಂತ ಮಾಡಿದ ಲಕ್ಷ್ಮೀ-ಕಾಂತಗಬ್ದಾಪತ್ತಿ ಶಾಂತಿ ಮಾಡುವುದೇ 8 ಸುಂದರ ಭೂಷಣಗಳಿಂದ ಶೋಭಿಪ ಬಾಲಇಂದಿರೇಶನ ಕೃಪಾ ಪೊಂದಿ ಸುಖಿಸುತಿರೆಕುಂದಣದಾರತಿ ನಿಂದು ಬೆಳಗಿರೆ 9
--------------
ಇಂದಿರೇಶರು
ಕರುಣವ ಮಾಡೊ ಶರಣರ ಪ್ರೇಮಿಕರುಣವ ಮಾಡೊ ಅರುಣನಿಭನೆ ಗುರು | ಕರುಣವ ಮಾಡೊ ಪ ಸುರ ತರುವಿನ ಅನುಸರಿಸಿದ ಮನುಜಗೆ ಮೃಷ್ಟಾನ್ನದ ಬರವೆಸುರನದಿ ಅನುಸರಿಸಿದ ಮನುಜಗೆ ಘನ ತೃಷಿಯ ಬಾಧೆ 1 ಕಾಮಧೇನು ತನ್ನ ಧಾಮದೊಳಗೆಯಿರೆ ಸೀಮೆ ಆಳುವರಾಸೆರಾಮನ ಪದಯುಗ ತಾಮರಸವನಂಬೆ ಪಾಮರರಂಜಿಕೆಯೆ 2 ವ್ರಜತಾಧಿಪ ವೇಣುಗೋಪಾಲ ವಿಠಲನ್ನ ನಿಜವಾಗಿ ಸ್ಮರಿಸುವರಕುಜನ ದಲ್ಲಣ ಗುರು ವಿಜಯದಾಸರೆ ಸ್ಮರಿಸುವರೆಯಿವರ3
--------------
ವೇಣುಗೋಪಾಲದಾಸರು
ಕಾಮಕೋಟಿ ಸುಂದರಾ | ತಿರುಪತಿಯಸ್ವಾಮಿ ತೀರ್ಥಮಂದಿರಾ ಪ ಕಾಮಜನಕ ಭಕ್ತಪ್ರೇಮಿ ಭವಾಟವಿಧೂಮಕೇತು ಹೃತ್ | ಧಾಮದಿ ನೆಲಿಸೋ ಅ.ಪ. ವೃಷಭಾಚಲಾ | ಸನ್ನಿಲಯನೆವೃಷಭಾ - ಬಲಾ ||ಒಸೆದು ಪರಿಕಿಸುತ || ಅಸುರನ ಸವರುತಅಸಮಗಿರಿಗೆ ನೀ | ಅಸುರನ ಪೆಸರಿತ್ತೆ 1 ಭಂಜನ ಶರದಿಜೆಕಂಜಜಾಕ್ಷಿ ಪ್ರಿಯ | ಅಂಜನಿವರದಾ 2 ಶೇಷಾ _ ಭೂಧರಾ | ಮನಸಿನ ಬಹುಕ್ಲೇಶಾ _ ಅಪಹರ ||ಶೇಷದೇವ ಮದ | ಲೇಸು ಹರಿಸಿ ಅವನಾಶೆ ಸಲಿಸಿ ಹರಿ | ಶೇಷಾಚಲನಾದೇ 3 ವೆಂಕಟಾಚಲಾ | ಮಾಧವನಾಸಂಕಟಾಗಳಾ ||ಅಂಕುರಿಸದೆ ನಿ | ಷ್ಪಂಕನೆಂದೆನಿಸಿಕಿಂಕರ ತನಯಳ | ಕಂಕಣ ಕಟ್ಟಿದೆ 4 ಶ್ರೀವರ - ಭೂವರಾ | ಪೊರೆಯುವೆ ನೀಜೀವರಾ - ಅಂತರಾ ||ಜೀವನಾಮಕನಾಗಿ | ಜೀವ ಭಿನ್ನ ಹರಿಕೈವಲ್ಯದ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಕಾಯೆ ಕರುಣಾಂಬುಧಿಯೆ ತೋಯಜನಯನೆ ಪ ಕಾಯೆ ಕರುಣಿ ಗಿರಿರಾಯನ ಪಟ್ಟದ ಜಾಯೆ ಭವದಲಿ ನೋಯಗೊಡದಲೆನ್ನ ಅ.ಪ ಅಂಬುಜಾಂಬಕೆ ಅಂಭ್ರಣಿ ಸುಗುಣ ಸನ್ಮಣಿ ಕಂಬುಚಕ್ರಾಂಕಿತಪಾಣಿ ಅಂಬೆ ನಿನ್ನಯ ಪಾದಾಂಬುಜ ನಂಬಿದೆ ಬಿಂಬನ ಎನ ಹೃದಯಾಂಬರದಲಿ ತೋರೆ 1 ಕಾಮಿತಾರ್ಥ ಪ್ರದಾತೆ ಜಗದೊಳಗೆ ಖ್ಯಾತೆ ಕಾಮಿತ ಸಲಿಸೆನ್ನ ಮಾತೆ ಪ್ರೇಮದಿ ನಿನ್ನನು ನೇಮದಿ ಭಜಿಪೆನ್ನ ಧಾಮದೊಳಗೆ ನೀ ಕ್ಷೇಮದಿ ನಿಲಿಸೀ 2 ದೂತಜನಕತಿ ಪ್ರೀತೆ ಈ ಜಗಕೆ ಮಾತೆ ಸೀತೆ ಪಾಲ್ಗಡಲಾ ಸಂಭೂತೆ ದಾತ ಗುರುಜಗನ್ನಾಥ ವಿಠಲಗೆ ಪ್ರೀತ ಸತಿಯೆ ಸುಖವ್ರಾತವ ಸಲಿಸಿ ನೀ 3
--------------
ಗುರುಜಗನ್ನಾಥದಾಸರು
ಕಾಯೆ ದುರ್ಗಾಂಭ್ರಣಿಯೆ | ಕಾಯೆ ಶ್ರೀ ರುಕ್ಮಿಣಿಯೆ ಶುಭ ಕಾಯೆ ದಯದಿ ಹರಿ ವಿಧಿ ಕಾಯಜ ತಾಯೆ ಪ ಮಾಕುಮತಿ ಶ್ರೀಕರಳೆ | ಪೋತನ ನುಡಿ ಕೇಳೆ ಭೀಕರಳೆನಿಸುತ | ವ್ಯಾಕುಲಗೊಳಿಸದೆ ನೀಕರುಣಿಸು ರತ್ನಾಕರನ ಮಗಳೆ 1 ಸೀತೆ ಸಾರಸನಯನೆ | ಶೀತಾಂಶುವಿನ ಭಗಿನಿ ಮಾತೆ ನಮಿಪೆ ತವ | ಘಾತಕ ವ್ರಾತದ ಭೀತೆಯ ತೋರದೆ | ಪ್ರೀತಿಯಿಂದೊಲಿದು 2 ಲಕ್ಷ್ಮಿಕೃತಿ ಶಾಂತಿ ಅಕ್ಷರಳೆ ಜಯವಂತಿ ಈಕ್ಷಣ ಕರುಣಕವಾಕ್ಷದಿಂದೀಕ್ಷಿಸು ಪೇಕ್ಷವ ಮಾಡದೆ ಮೋಕ್ಷದಾಯಕಳೆ3 ವಟದೆಲೆಯೊಳು ಮಲಗಿರುವ | ವಟುರೂಪಿ ಪತಿಪದವ ಪಠಿಸುತಬ್ಜಸೀಕರ | ಪುಟದಿ ನಮಿಸುವಂಥ ಕುಟಿಲರಹಿತೆ ಶತ | ತಟಿತ ಸನ್ನಿಭಳೆ4 ಭಾಮೆ ಶ್ರೀ ಭೂಸುತೆಯೆ | ಶಾಮಸುಂದರ ಸತಿಯೆ ನಾ ಮೊರೆ ಹೊಕ್ಕೆನು | ಪ್ರೇಮದಿಂದಲಿ |ಸು ಕ್ಷೇಮಗರೆದು ಮಮಧಾಮದಿ ನೆಲಸೆ 5
--------------
ಶಾಮಸುಂದರ ವಿಠಲ
ಖಾದಿ ಧರಿಸುವ ಜನಕೆ ಕ್ರೋಧವುಂಟೇ ಪ ಕ್ರೋಧ ಜೈಸಿದ ನರಗೆ ಕಲಹಗಳುಂಟೇ ಪಥ್ಯದಿಂದಿರುವವಗೆ ವ್ಯಾಧಿ ಭಯವೇ ನಿತ್ಯ ಉಪವಾಸಿಗೆ ಭತ್ತದಾ ವ್ಯಥೆಯುಂಟೇ ಚಿತ್ತ ಶುದ್ಧಿದ್ದವಗೆ ಮೈಲಿಗೆಯ ಪರವೇ 1 ಆಶೆ ಬಿಟ್ಟವನಿಗೆ ಅರಸರಾಭಯವುಂಟೆ ದಾಸನಾದವನಿಗೆ ದೋಷವುಂಟೆ | ದೇಶ ಉದ್ಧಾರಕಗೆ ಸೆರೆಮನೆಯ ಭಯವುಂಡೆ ಪೂಶರನ ಗೆದ್ದವಗೆ ಕಾಮಿನಿಯ ಭಯವೇ 2 ಗೀತಾರ್ಥ ತಿಳಿದವಗೆ ಪಾತಕದ ಭಯವುಂಟೆ ಶೀತೋಷ್ಣ ಸಹಿಸುವವಗೆ ಛಳಿ ಬಿಸಿಲು ಭಯವೆ | ನೀತಿ ಕೋವಿದರಿಗೆ ಜಾತಿ ಪಕ್ಷಗಳುಂಟೆÉ ದಾತನಿಗೆ ದುರ್ಭಿಕ್ಷು ಭೀತಿ ತಾವುಂಟೆ 3 ವಿದ್ಯಾಭಿಲಾಶೆಗೆ ತೇರ್ಗಡೆಯ ಭಯವುಂಡೆ ಉದ್ಯೋಗವಿದ್ದವಗೆ ಉದರ ಭಯವೇ ಯುದ್ಧ ಶೂರರಿಗೆಲ್ಲ ಮದ್ದುಗುಂಡಿನ ಭಯವೇ ಬುದ್ಧಿವಂತರಿಗೆಂದಿಗಪಮಾನ ಭಯವೇ 4 ನೇಮದಿಂದಲಿ ನಡೆವವಗೆ ಸೋಮಾರಿತನವುಂಟೆ ಭೂಮಾತೆ ಮಕ್ಕಳಿಗೆ ಕ್ಷಾಮವುಂಟೆ ಸಾಮಗಾನವಿಲೋಲ ಶಾಮಸುಂದರವಿಠಲ ನಾಮ ನೆನವವಗೆ ಯಮಧಾಮದಂಜಿಕೆಯೇ 5
--------------
ಶಾಮಸುಂದರ ವಿಠಲ
ಜೋಗಿ ಬಂದ ಕಾಣೇ ಈತ ಮಹಾಯೋಗಿ ಬಂದ ಕಾಣೇ ಗಗನ ಮಣಿಯ ಮೀರುವ ತೇಜದ ದತ್ತ ದಿಗಂಬರ ನೆನಿಪೆ ನೋಡಮ್ಮಾ ಪ ತವೆ ಸಂಜೆ ಧಾರೆಗಳು ಹೊಳೆವ ಲೊ ಪ್ಪುವ ಕೆಂಜೆಡಿಯಗಳು ಕುವಲಯ ಶಾಮನು ಕಿರೀಟ ಕುಂಡಲದಿಂದ ಠವಠವಿಸುವ ಮೊಗದಾ ನೋಡಮ್ಮಾ 1 ಕೇಶರ ಗಂಧವನು ನುಂಪಿಟ್ಟು ತ್ರಿಸರೋಜ ಮಾಲೆಯನು ಭೂಷಿತ ದಿವ್ಯಾಂಬರ ಕಾಂಚಿ ಧಾಮದಿ ಘೋಷಿಪ ಘಂಟೆಗಳು ನೋಡಮ್ಮಾ 2 ಮೆಟ್ಟಿದ ಪಾದುಕೆಯಾ ರತನದ ಬೊಟ್ಟಿಲಿ ಜಪ ಮಾಲೆಯಾ ನೆಟ್ಟನೆ ನೆನೆವ ರುದ್ಧರಿಸಲು ತಾರಕ ಸೃಷ್ಟಿಗೆ ಗುರುವಾಗಿಹ ನೋಡಮ್ಮಾ 3 ಆದಿ ಯೋಗವನು ಪ್ರಕಟಿಸಿ ಹಾದಿಯ ತೋರುವನು ದ್ವಾದಶ ನಾದದ ಭೇದ ತೋರುವ ಶಂಖ ನೂಡುತ ನಲಿಯುತಲಿಹ ನೋಡಮ್ಮಾ 4 ಮೂರ್ತಿ ಚಿ-ಹ್ನವನು ದೋರುವಾ ಶ್ರೀ ಮನೋರಮ ದೇವನು ನೇಮದ ಮಹಿಪತಿ ನಂದನ ಪ್ರಭು ಭಕ್ತ ಕಾಮಿತಾರ್ಥವ ನೀಡುವ ನೋಡಮ್ಮಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಶಾವತಾರ ನೀರೊಳಗೆ ನಿಂತು ನಡುಗಿ ನಾರುವಂಗೆ ಗಂಬೂರಿಕಸ್ತೂರಿ ಲೇಪನದ ಮದುವೆಭಾರ ನಿನ್ನಲಿ ಪೊಳಲು ಕಲ್ಲು ಕೈ ಮುಸುಡಿದಂಗೆಧೀರ ಶೇಷನ ಶಯನದ ಮದವೋಮೋರೆಯಲ್ಲಿ ಯಲ್ಲಾ ಕೆದರಿ ಬೇರು ಮೆಲುವನಿಗೆಸಾರಷಡ್ರಸನ್ನ ಭೋಜನದ ಮದವೋಕರುಳ ವನಮಾಲೆ ಹಾಕಿದವಂಗೆ ಹಾರಪದಕ ಹಾಕಿದ ಮದವೋಮೂರಡಿಯ ಭೂದಾನ ಬೇಡಿದವನಿಗೆ ಸಾರಿದವಂಗಭೀಷ್ಟಗಳ ಪೂರೈಪ ಮದವೋಧರಣಿ ವಿಪ್ರರಿಗಿತ್ತು ಕುಳಿಪುದಕೆ ಸ್ಥಳವಿಲ್ಲವಗೆ ಭುವನಕೀಳುವ ಮದವೋಊರ ಬಿಟ್ಟು ವನ ಚರಿಸುವಂಗೆ ಮೂರು ಧಾಮದಮನೆಯ ಭೋಗದ ಮದವೋಪುರನಾರಿಯ ಬಯಸಿ ಕೊಂಬುವಂಗೆ ವಾರಿಜಭವ ಸುರರವಂದ್ಯಾನೆ ಮದವೋಘೋರ ತುರಗವನೇರಿ ಹಾರಿಸ್ಯಾಡುವಂಗೆ ವೀರಸಿಂಹಾಸನದಲ್ಲಿಕುಳಿತ ಮದವೋಮೂರು ದಿನ ಅರಸುತನ ಸ್ಥಿರವೆಂದು ನೆಚ್ಚಿ ಸಾರಿದವನ್ನಮರೆವದುಚಿತವೆಬಾರದೆ ತಪ್ಪದು ಹಿಂದಿನ ಭವಣೆ ನಿನಗೆ ದೂರ ವಿಚಾರಿಸಿನೋಡೊ ಕರುಣಾ ನಿಧಿಶ್ರೀರಂಗ ರಾಜಗೋಪಾಲ ವಿಠಲ ನಿನ್ನ ಪಾರಿದವರ ಪೊರೆದು ಕೀರ್ತಿಪಡಿಯೊ
--------------
ರಾಜಗೋಪಾಲದಾಸರು
ದಾಸರ ನರಸಿಂಹ | ಶ್ರೀಹರಿ ದಾಸರ ನರಸಿಂಹ ಪ. ಯೊಗಾ ನರಸಿಂಹ | ಕರಿಗಿರಿ ಭೋಗಾ ನರಸಿಂಹ ಆಗಲೆ ಸುರಿಯುವ ಮಳೆಯನು ನಿಲ್ಲಿಸಿ ಬೇಗನೆ ಕೈಕೊಂಡ ಉತ್ಸವ ನರಸಿಂಹ 1 ಶಾಂತಾ ನರಸಿಂಹ | ಪ್ರಹ್ಲಾ- ದಾಂತರ ನರಸಿಂಹ ನಿಂತು ಹೆಜ್ಜೆ ಹೆಜ್ಜೆಗೆ ಆರತಿ ಕೊಂಡು ಸಂತಸಪಡಿಸಿದ ಗುರುಗಳ ನರಸಿಂಹ 2 ಕಾಮಿತ ನರಸಿಂಹ | ಪರಮ ಪ್ರೇಮದ ನರಸಿಂಹ ಸ್ವಾಮಿ ತಂದೆ ಮುದ್ದು ಮೋಹನದಾಸರ ಧಾಮದಿ ನೆಲಸಿಹ ಸ್ವಾಮಿ ಶ್ರೀ ನರಸಿಂಹ 3 ಭಕ್ತರ ನರಸಿಂಹ | ಭವಭಯ ಒತ್ತುವ ನರಸಿಂಹ ಭಕ್ತಿ ಭಾವದಿಂದ ಭಜನೆಯ ಮಾಳ್ಪರÀ ಮುಕ್ತಿ ಮಾರ್ಗ ತೋರಿ ಸಲಹುವ ನರಸಿಂಹ 4 ಸುಲಭ ನರಸಿಂಹ | ನೀ ಬಹು ದುರ್ಲಭ ನರಸಿಂಹ ಒಲಿಯುವ ಗೋಪಾಲಕೃಷ್ಣವಿಠ್ಠಲ ಹರಿ ನೆಲಸಿ ಹೃದಯ ಮಂದಿರದಲಿ ನರಸಿಂಹ 5
--------------
ಅಂಬಾಬಾಯಿ
ನಾಗವೇಣಿ ಶುಕವಾಣಿ ಸಖಿ ಪ ಭೋಗ ಭಾಗ್ಯ ಬಯಸುವ | ಕು ಯೋಗ ಕುತ್ಸಿತಳಲಿ ಅ.ಪ. ಅಗಣಿತ ಗುಣಾರ್ಣವಗೆ ಸುಗುಣನೆಂದರಿತು ನಾ ಮಣಿಯಲರಿಯೆ ಬಗೆ ಬಗೆ ಕುಸುಮಂಗಳನು ಸೊಗಸಿನಿಂದಲಂಕರಿಸಿ ನಗಧರನ ಸ್ತುತಿಸಲರಿಯದವಳಲ್ಲಿ 1 ರಮಾಭಿಮಾನ್ಯನಂತಾಸನ ಸದನಗೆ ಕಮಲಾಸನವಿತ್ತು ಪ್ರೇಮ ಮಾಡಲರಿಯೆ ಸೋಮ ಸೂರ್ಯನಂತರುಧಾಮದಿ ಬೆಳಗುತ್ತಿರೆ ನೇಮದಿಂದ ದೀಪದಾರತಿಯ ಮಾಡುವಳಲ್ಲಿ 2 ಸಿರಿಭವಾದ್ಯರೆ ಆಭರಣ ಉಳ್ಳವಗೆ ಕರಗುವ ಕನಕ ತೊಡಿಸಲರಿಯೆ ಕರಿವರದ ವಿಜಯ ರಾಮಚಂದ್ರವಿಠಲನ್ನ ಅರಿತು ಒಲಿಸಲರಿಯದವಳಲ್ಲಿ 3
--------------
ವಿಜಯ ರಾಮಚಂದ್ರವಿಠಲ