ಒಟ್ಟು 24 ಕಡೆಗಳಲ್ಲಿ , 11 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಕೀಕುವರ ನವಘನಸುಂದರ ಭಾವಜ ಜನಕ ಮಾದೇವ ಕೃಪಾಕರ ಪಾವನ ಸುಕುಮಾರ ಹರೇ ಹರೇ ಪ ನಿರುಪಮ ಚರಿತ ವರಗುಣ ಭರಿತೇ ಮರಕತಮಣಿ ಮಾಲಾಹಾರ ಸಂಶೋಭಿತೇ ಸುರಗಂಗಾಸುತ ರಾಜಿತಮೌನಿಯುತೇ ವೈರಿಕುಲ ಭಂಜನ ಪಾಂಡವ ಮಿತ್ರೇ1 ಶ್ರೀವನಮಾಲಾಧರ ಮುರಳೀಕರ ದೇವಸುಧಾಕರ ಶ್ರೀ ಮಾಂಗಿರಿವರ ಭಾವಕಜನಪರಿವಾರ ಶುಭಂಕರೇ ರೇವತೀರಮಣಾ ನಂದಕರೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಜ ಭಜ ಮಾನಸ ಗರುಡತುರಂಗಂ ಅಜ ಸುರಸೇವಿತ ಪಾಂಡುರಂಗಂ ಪ ಗಜರಾಜಾನತ ಮೋಹನರಂಗಂ ವಿಜಯಧ್ವಜ ಶ್ರೀಪಾವನರಂಗಂ ಅ.ಪ ಗಿರಿಧರ ಮುರಹರ ಭೂವರ ರಂಗಂ ನರಕೇಸರಿ ಮುಖರಾಜಿತ ರಂಗಂ ವರಶುದ್ಧಾಚ್ಚುತ ಸುರುಚಿರ ರಂಗಂ ಪರಶಿವ ದಾನವ ವಿನಮಿತ ರಂಗಂ 1 ಸನಕ ಸನಂದನ ಮುನಿನುತ ರಂಗಂ ಹನುಮ ವಿಭೀಷಣ ಸನ್ನುತ ರಂಗಂ ಘನಮಣಿ ಮೌಕ್ತಿಕ ಶೋಭಿತ ರಂಗಂ ಜನಕ ಧರಾವಿವ ಪೂಜಿತ ರಂಗಂ 2 ಮಂಗಳದಾಯಕ ಶುಭಕರ ರಂಗಂ ಸಂಗರ ಧೀರ ಸುಧಾಕರ ರಂಗಂ ಗಂಗಾಜನಕ ಕೃಪಾಂಬುಧಿ ರಂಗಂ ಅಂಗಜ ಜನಕ ಶ್ರೀ ಮಾಂಗಿರಿ ರಂಗಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
(ಉಡುಪಿಯ ಅನಂತೇಶ್ವರ) ಚಿಂತಾಂಬುಧಿ ನಿ:ಶೇಷ ವಿಶೇಷಾನಂತೇಶ್ವರ ಕರುಣಾಂಬುಧಿಯೇ ಮನದಿರವೆಂತಿಹುದೆನಗೆಂಬುದ ದೊರೆಯೆ ಪ. ಸಂತತ ಸಂಸ್ಕøತಿ ಚಕ್ರದಿ ತಿರುಗುವ ಭ್ರಾಂತ ಜನರಿಗೀ ಜಗದಲ್ಲಿ ಸಂತತಿ ಸಂಪತ್ಪ್ರಮುಖ ಸುಖಾಶಾ ತಂತುಬಂಧ ಬಿಟ್ಟಿಹುದೆಲ್ಲಿ ಅಂತರಂಗ ಭಕ್ತರ ತಾನಾಗಿಯೆ ಸಂತೈಸುವ ಮಹ ಬಿರುದೆಲ್ಲಿ ಮನೋಗತವೆಂತಿಹುದೆಂಬುದ ನೀ ಬಲ್ಲಿ 1 ನಿನ್ನೊಲುಮೆಯಲೀ ಪರಿಪೂರಿಸಿಕೊಂಡಿಹ ಕಥೆಗಳನು ತೋರಿದಂತೆ ಪೇಳಿರುವುದನು ತೋರು ತಡೆಯದಿರು ತತ್ವವನು2 ಸಾಂದ್ರಸುಧಾಕರ ಸೇಚನದಿ ಸಾಂದ್ರ ನಿನ್ನ ಕರುಣಾರಸದಿ ಸಕಲೇಂದ್ರಿಯ ತೃಪ್ತಿಯಬಡಿಸುತಲಿ ಧರೇಶ ನೀ ತ್ವರಿತದಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅಘಹರ ಧರಣೀಂದ್ರನೆ ಪ ಕುಮುದಾಳಿ ಸುಧಾಕರ ಅಘಹರ ಧರಣೀಂದ್ರನೆ 1 ರಾಮನೆ ಅಘಹರ ಧರಣೀಂದ್ರನೆ 2 ಪ್ರಾಣಾವಳಿ ಕಾಲಹವ್ಯವಾಹ ಅಘಹರ ಧರಣೀಂದ್ರನೆ 3 ಚಾಪವಿಲೋಲ ಅಘಹರ ಧರಣೀಂದ್ರನೆ 4 ಧೇನುಪುರಾಧಿಪ ಅಘಹರ ಧರಣೀಂದ್ರನೆ 5
--------------
ಬೇಟೆರಾಯ ದೀಕ್ಷಿತರು
ಕಮಲ ಷಟ್ಚರಣನೆನಿಸೊ ಎನ್ನ ಪ ಪರಮಹಂಸಕುಲ ಸುಧಾಬ್ಧಿ ಸುಧಾಕರ ಸುಧೀಂದ್ರಯತಿಕರಜ ಅ.ಪ ಶ್ರೀವರ ಚರಣ ಸರೋರುಹ ಮಧುಕರ ಪೂತ | ಶುಭಮಚರಿತ ಭಾವಜಾದಿ ಷಡ್ವರ್ಗಸುನಿಗ್ರಹ ಶೀಲ ಕವಿಕುಲಲೋಲ ಕೋವಿದ ಕುಲ ಸಂಭಾವಿತ ಮಹಿಮ ಸ ದಾ ವಿನೋದಿ ಸತ್ಸೇವಕ ಜನ ಸಂ ಜೀವನ ಶುಭಕರ ಪಾವನರೂಪ ಪ ರಾವರೇಶ ಪದಸೇವಕ ಯತಿವರ 1 ಸಕಲ ಶಾಸ್ತ್ರ ಪಾರಂಗತ ಪರಿಣತ ಖ್ಯಾತ | ಗ್ರಂಥಪ್ರಣೀತ ಸಂವರ್ಧಕ ಧೀರ | ಸುಜನೋದ್ಧಾರ ಮುಕುತಿ ಸಾಧನೆಗೆ ಕುಟಿಲ ಮಾರ್ಗವ ನಿಖಿಲ ನಿಜಾಶ್ರಿತ ನಿಕರಕೆ ತೋರುತ ಭಕುತ ಕರೆವ ಕೋರಿಕೆಗಳ ನೀಡುತ ಸುಖವ ಕರೆವ ಸುಂದರ ಯತೀಂದ್ರ 2 ಗುಣಮಣಿ ಖಣಿಯೇ ಸುರವರನುತ ಶ್ರೀ ರಾಮಚಂದ್ರ ಚರಣಾಬ್ಜಾ | ರಾಧಿಕ ಸುಪೂಜ್ಯ ದುರಿತ ಕಳೆದು ಭವಶರಧಿಯ ದಾಟುವ ಸರಿಮಾರ್ಗವ ನಾನರಿಯೇನೋ ಗುರುವರ ಕರಿಗಿರೀಶ ಶ್ರೀ ನರಹರಿ ಚರಣವ ಪರಿ ಕರುಣಿಸು ಯತಿವರ 3
--------------
ವರಾವಾಣಿರಾಮರಾಯದಾಸರು
ಕಾವೇರಿ ಕನ್ಯಾರ್ಚಿತ ಸುಚರಿತ ದಿವಾಕರಾನತ ಸುರೇಶ ವಿನಮಿತ ಪ ಭವಾಬ್ಧಿ ವಿರಹಿತ ಸಮೀರಸುತನುತ ಶಿವಾ ನೃಹರಿ ಮಾಧವಾ ಕೃಪಾಯುತ ಅ.ಪ ರಮೇಶ ಧರಣಿಪ ಕುಮಾರ ಶಿರಧರ ಸುಮಾನ ವಿರಹಿತ ಪರಾತ್ಪರಾ ಶಮಾ ದಮಯು ತಕ್ಷಮಾ ಸುಧಾಕರ ನಮಾಮಿಶಂಕರ ವಿಮಾನಮಂದಿರ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗುರು ವಾದಿರಾಜರ ಸ್ಮರಣೆಯ ಮಾಡಿರೊ ಪ ಗುರು ವಾದಿರಾಜರ ಸ್ಮರಣೆಯ ಮಾಡಲು ದುರಿತ ಕಳೆದು ಮನಕೆ ಪರಮ ಹರುಷವೀವ ಅ.ಪ. ಪೂರ್ಣಭೋಧರ ಮತ ವಾರಿನಿಧಿಗೆ ಸಂ ಪೂರ್ಣ ಸುಧಾಕರ ಸುಗುಣ ಗಂಭೀರ ಕ್ಷೋಣಿ ಸುರೋತ್ತಮ ಕ್ಷೋಣಿಪಾಲಕ ಮಾನ್ಯ ಜ್ಞಾನಿವರೇಣ್ಯ ಹಯಾನನ ಪರಚರಣ 1 ಮಾನಸದೊಳಗಿಹ ಹೀನಮತಿಯ ಕಳೆ ದಾನಂದ ಕೊಡುವಂಥ ಜ್ಞಾನವ ಕರುಣಿಸಿ ಪ್ರಾಣನಾಥ ಶ್ರೀ ಕರಿಗಿರೀಶನ ಪದ ಧ್ಯಾನಿಪ ಸ್ಥಿರಮತಿ ತಾನಿತ್ತು ಪಾಲಿಪ 2
--------------
ವರಾವಾಣಿರಾಮರಾಯದಾಸರು
ತವ ಚರಣಂ ಶರಣಂ ಅಂಡಾಳ್ ಗೋದಾ ಪ ತವಶುಭಚರಣಂ ಭವಭಯತರಣಂ ಭುವನಾಭರಣಂ ಪಾತಕಹರಣಂ ಅ.ಪ ವೇದಾಂತಾಂಬರೆ ಮಾಧವಮಂದಿರೆ ನಾದಸುಧಾಕರೆ ಸಕಲಸುಖಂಕರೆ 1 ಕೃಷ್ಣಕಥಾಮೃತ ಸಾಗರಮಂದಿರೆ ವಿಷ್ಣುಚಿತ್ತಸುತೆ ಕೀರ್ತನಚತುರೇ 2 ಪೂಮಾಲಾಧರೆ ಪಾಮಾಲಾಕರೆ ಶ್ರೀಮಾಂಗಿರಿವರ ಶರಣಸುಖಂಕರೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತುಂಗೆ ಬಂದಳು ದೇವೋತ್ತುಂಗ ವರಹನಾ ಮುಂಗೋರಿಯಲ್ಲಿ ಪುಟ್ಟಿ ಭಕ್ತ ನಿಕರನಾ ಹಿಂಗದೆ ಪೊರೆದು ಸುಖಂಗಳನೀವು ತಾ ಮಂಗಳಾಂಗೆ ಮಾತಂಗೆ ಸುಗಮನೆ ಪ ಕಾಳ ಪನ್ನಗವೇಣಿ ಕೋಕಿಲವಾಣಿ ಫಾಲ ಕಸ್ತುರಿ ಜಾಣೆ ಪಲ್ಲವಪಾಣಿ ವಾಲೆ ಮೂಗುತಿ ಅಣಿ ಮುತ್ತು ಕಠಾಣಿ ತೋಳು ಮಂದಾರಮಣಿ ಅರಿಗುಣಶ್ರೇಣಿ ಮೌಳಿಯಾ ಮೇಲಿನ ಜಾಳಿಗೆ ಸೂಸುಕಾ ವಾಲಲು ಕದಿಪಿನ ನೀಲಗೂದಲು ಭ್ರಮ ರಾಳಿಗಳಂತಿರೆ ಬಾಲ ಸುಧಾಕರ ಪೋಲುವ ವದನೇ1 ಕುಡುತೆಗಂಗಳ ನೀರೆ ಕಂಬುಕಂಧರೆ ಕಡಗ ಕಂಕಣದ್ವಾರೆ ಕೈಯ ಶೃಂಗಾರೇ ಜಡಿವ ಪದಕಹಾರೆ ಕಂಚಕಸೀರೆ ಮುಡಿದ ಪುಷ್ಪಂಗಳು ಮರೆ ಕುಚಗಳು ಅದರೆ ಬಡನಡುವಿನ ಕಡು ಉಡುವಿನ ಕಿಂಕಣಿ ಒಡನುಡಿಸುವ ಗೆಜ್ಜೆ ಕಾಲಂದಿಗೆ ಪೆಂಡೇ ಅ ಡಿಗಡಿಗೊಪ್ಪಲು ಕಡಲನ ಮಡದಿ 2 ತೀಡಿದ ಪರಿಮಳ ಗಂಧದ ಭೋಗಿ ಕೂಡಲಿಪುರದಲಿ ಭದ್ರಿವಂದಾಗಿ ಕೂಡಿ ಸೂಸಿದಳಂದು ಮುಂದಕ್ಕೆ ಸಾಗಿ ಆಡುತ ಪಾಡುತ ಬಲು ಲೇಸಾಗಿ ಬೇಡಿದ ಜನರಿಗೆ ಈಡಿಲ್ಲದ ವರವ ನೀಡುತ ನಿರುತರ ಮಾಡುತ ದಯವನು ನೋಡುತ ತಡವಿಲ್ಲದಲೆ 3 ಶೃಂಗಾರ ಮಾರ್ತಾಂಡೆ ಹರಿಹರ ಮಾತಾ ಅಂಗಾಧಿ ಪರ್ವತ ಪಂಚ ಪ್ರಖ್ಯಾತ ಹಿಂಗದೆ ಬಲಗೊಂಡು ಕೊಡ್ಲೀಗೆ ಬರುತ ಸಂಗೀತ ಗಾಯನದಿಂದ ವಾಲಗಗೊಳುತ ಸಂಗಮೆಯಾಗಿ ತಂಗಿಯ ಬೆರತೀಗ ಮಂಗಳ ಕ್ರೀಡೆಯಲ್ಲಿ ಪ್ರವೇಶಿಸಿ ಗಂಗೆ ಎನಿಸಿಳ್ಯಮನನಾದೇಳಗೆ 4 ಲೋಕದೊಳಗೆ ಪ್ರತಿರಹಿತ ಪೆಸರಾದ ಚೀಕನ ಬರವಿಯ ಅಶ್ವಥಮರದ ನೃಕಂಠೀರವನ ಪಾದದಿ ವ್ಯಾಧಿಷ್ಟರಾದ ಸೋಕಿ ಮೈಮರೆದಂಥ ನಮಿತರು ಕರದಾ ಪಾಕ ಪದಾರ್ಥಕೆ ಒಲಿದೊಲಿದಾಡುತ ಶ್ರೀಕರ ವಿಜಯವಿಠ್ಠಲಗೆರಗುತ ನಾಕಕನ್ನಿಕೆಯಂತೆ ಹೊಳೆದಳುಯಿಂದು5
--------------
ವಿಜಯದಾಸ
ದಶರಥರಾಮಹರೆ ಸೀತಾಪತೆ ದಶರಥರಾಮ ಸುಧಾಕರವದನ ¥ರಶುರಾಮ ಬಾಹುಪರಾಕ್ರಮ ಜಿತಶ್ರೀ ಪ ಸುರಮುನಿ ಸೇವಿತ ಶುಭಕರ ಚರಿತ ಕೌಸ್ತುಭ ಶೋಭಿತ ವರ ವಿಶ್ವಾಮಿತ್ರಾಧ್ವರ ಪರಿಪಾಲನ ಖರ ದೂಷಣ ರಾಕ್ಷಸ ಬಲ ಖಂಡನ 1 ವಾಲಿ ಮರ್ದನ ಭಕ್ತವತ್ಸಲ ಮಾಧವ ವಿನುತ ಪಾದ ಪದ್ಮ ನೀಲ ನೀರದ ಸನ್ನಿಭಗಾತ್ರ ಪರಮ ದಯಾಳು ನಾರಾಯಣ ಲೀಲಾ ಮಾನುಷ ವೇಷ 2 ಸಿಂಧು ಬಂಧನ ಪಂಕ್ತಿ ಕಂಧರಾಂತಕ ಗೋವಿಂದ ಮುಕುಂದಾರ ವಿಂದೋದರ ಇಂದಿರಾಧಿಪ ಶ್ರೀ ಹೆನ್ನೆಪುರ ನಿಲಯಾ ನಂದ ವಿಗ್ರಹ ಜಗದ್ವಂದ್ಯ ಮಂದಹಾಸ 3
--------------
ಹೆನ್ನೆರಂಗದಾಸರು
ದಾಸರಾಗಿರೊ ವೈಷ್ಣವ ದಾಸರಾಗಿರೊ ದಾಸರಾಗಿ ಬಯಲಾಸೆಯ ನೀಗಿ ರ- ಮೇಶನ ಗುಣವಾರಾಶಿಯೊಳಿರಿಸುವ ಪ. ಸುಂದರ ಮಾನಾನಂದತೀರ್ಥಮತ ಸಾಂದ್ರ ಸುಖಾಂಬುಧಿಮಿಂದ ಮಹಾತ್ಮರ 1 ದಿವ್ಯಲೋಕಜನ ಭವ್ಯೋಭಯವಿಧ ಕಾವ್ಯರಚನ ಲಾತವ್ಯಯತೀಂದ್ರರ 2 ಸೀತಾಪತಿ ರಘುನಾಥನ ಮನದೊಳ- ಗಾತು ಭಜಿಪ ಗಣನಾಥ ಜನಕನ 3 ಶ್ರೀ ಮಹೇಶ ವಟು ವಾಮನ ಪದಯುಗ ಸಾಮಜವಾಹನ 4 ಕಾಕರಟನದೊಳ ಭೀಕರ ಮತವ ನಿ- ರಾಕರಿಸಿರುವ ಸುಧಾಕರ ಮೂರ್ತಿಯ 5 ತಂತ್ರ ದೀಪಿಕಾ ಯಂತ್ರವ ರಚಿಸಿದ ಮಂತ್ರಾಲಯವರ ಮಂತ್ರದೇವತೆಯ 6 ಗೋಪಿನಾಥನೆ ಭೂಪನೆಂದು ಸಂ- ತಾಪವ ಬಿಡಿಸುವ ಶ್ರೀಪಾದರ ಪದ 7 ಮಂದಕಲಿಯ ಕಾಲಿಂದಲೊರಿಸಿದ ಪು- ರಂದರದಾಸರ ಹೊಂದಿ ಹರಿಯ ನಿಜ8 ಸುಜನ ಹೃದಂಬುಜ ಸುಖಕರ ದಿನಮಣಿ ವಿಜಯರಾಜ ಪದ ಭಜನೆಯ ಮಾಡುತ 9 ಭಂಗುರ ಭವಭಯ ಭಂಗದ ಸುಗುಣ ತರಂಗನ ಒಲಿಸಿದ ಮಂಗಳ ಮಹಿಮರ 10 ಹರಿಕಥಾಮೃತದ ತೆರೆಗಳೊಳಾಡುವ ಪರತರಸಾರವ ಸುರಿದ ಮಹಾತ್ಮರ 11 ಸಿಡುಕರ ಸಂಸ್ಕøತಿ ಕಡಲೊಳು ಮುಳುಗಲು ಬಿಡದಲೆ ಕೈಪಿಡಿದೊಡೆಯನ ತೋರ್ಪರ 12 ಅರಿಷಡ್ವರ್ಗವ ತರಿದು ಬಿಸುಟು ಶ್ರೀ- ವರನ ಕೃಪಾರಸ ಸುರಿಸಿದ ಧನ್ಯರ 13 ಮೂಕನ ವಾಗ್ಮಿಯ ಮಾಡಿ ಮುರಾರಿಗೆ ಸಾಕ ಕೊಟ್ಟಿ ದೀನಾಕರದಾಸರ 14 ಮಾತಿಗೆ ಕಂಸಾರಾತಿನಲಿಯೆ ಜಗ ನ್ನಾಥರೆಂ¨ ವಿಖ್ಯಾತಿ ಪಡೆದವರ 15 ತಾಪತ್ರಯಗಳ ತಪ್ಪಿಸಿ ವೆಂಕಟ ಭೂಪನ ಸದಯಾರೋಪಗೈದವರು 16
--------------
ತುಪಾಕಿ ವೆಂಕಟರಮಣಾಚಾರ್ಯ
ನಿರುಪಮ ಚರಿತಾ ಮಾಂಗಿರಿನಾಥಾ ಈಪ್ಸಿತ ವರದಾತಾ ಪ ಸರಸಿಜ ಸಂಭವ ನುತ ಗಂಗಾಪಿತ ಪಂಕಜಾಕ್ಷ ಮೋಕ್ಷದಾತ ನಾರದ ಮುನಿ ವಿನುತಾ ಅ.ಪ ಭೀಕರ ರಾಕ್ಷಸ ವಂಶ ಭಯಂಕರ ಕಿಂಕರ ಶಂಕರಗಾನಸು ಧಾಕರ ಲೋಕಪಾಲ ಪರಮ ಚತುರ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀ ಕೃಪೆ ಮಾಡೋ ಹರಿಯೇ ಲೋಕವಿನುತ ಸಿರಿಯೇ ಪ ಶ್ರೀಕರ ಭಾಸ್ವರಾ ಭಕ್ತಸುಧಾಕರ ಶೋಕಹರಣಾ ನೀ ಶೂರಾ ಅ.ಪ ನಡು ನೀರೋಳೆನ್ನ ಕೈಯ ಬಿಡಬೇಡ ಮಾರನಯ್ಯ ಅಡಿಗೆರಗುವೆನಯ್ಯ ಕೊಡು ನಿನ್ನ ನಾಮಾವಳಿಯ ದೃಢದೆ ಭಜಿಪೆನಯ್ಯ ಮೃಡನುತಾನೇ ಗೋವಿಂದಯ್ಯ 1 ಕಳೆದ ದುರಿತಾವೃತ ಉಳಿದುದು ವೋವರಾ ಅಳಿವ ಕಾಲವಿದಿನ್ನು ಬಳಲಿಸೋಲುವೆ[ನಯ್ಯ] ಘಳಿಲನೆ ನಿನ್ನ ನಾಮಾವಳಿಯ ಸ್ಮರಣೆಯ 2 ಅನ್ಯರ ಭಜಿಸೆನು ಅನ್ಯರ ನುತಿಸೆನು ಅನ್ಯರಿಗೆರಗೆನು ಅನ್ಯರ [ಪೂಜಿ]ಸೆನು [ಅ ನನ್ಯ ಶರಣನೆ ಮನ್ನಿಸೊ ಶರಣುಬಂದಿಹೆನು] 3 ಕಾವಧೀರನು ಇನ್ನು ಅವನೇ ಶ್ರೀಹರಿ ಸೇವಕರಿಗೆ ನಾನು ಸೇವಕನೆನ್ನುತಾ ಭಾವಿಸೋ ದೇವದೇವಾ ಮಾವಿನಾಕೆರೆರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪರಮ ಸುಗುಣಸಾಂದ್ರ ಗುರುರಾಘವೇಂದ್ರ ಪ ಕರುಣಾಳೋ ಮುನಿ | ವಂಶಸುಧಾಕರ | ಗುರುರಾಜ ಪ್ರಭೋ | ಶ್ರೀ ರಾಘವೇಂದ್ರ ಅ.ಪ ಮುರುಕುಮಂಟಪದೊಳು | ಹರಕುಚಿಂದಿಯನ್ಹೊದ್ದು | ಉರಿಯ ಬೆಳಕಿನಲ್ಲಿ | ಪರಿಮಳ ರಚಿಸಿದೆ || ಗುರುಗಳಾಕ್ಷಣ ಕಂಡು | ಪರಮಸಂಭ್ರಮದಿಂದ | ಪರಿಮಳಾಚಾರ್ಯನೆಂಬ | ಬಿರುದಿತ್ತು ಕರೆದರೊ 1 ಜಡಮತಿ ಬ್ರಾಹ್ಮಣ | ಮಿಡುಕಿ ನಿರೂಪಿಸೆ | ವಡನೆ ಗಂಧವ ತೇದೆ | ಅನಲನ ಜಪಿಸುತೆ || ಒಡಲ ಬೇಗೆಯಿಂ ಜನರು | ಬಡಬಡಿಸಿದ ಕಂಡು | ಕಡಲರಸನ ದಯದಿ | ಕಡುಶಾಂತಿ ಇತ್ತೆಯೊ2 ಬಾದರಾಯಣಮುನಿ | ಭೇದಮತವ ಬಿತ್ತೆ | ಮೋದತೀರ್ಥರು ತರುವ | ಸಾದರಗೈದರೊ || ಸ್ವಾದಫಲಂಗಳು | ನಿನ್ನಿಂದ ತೋರ್ದವು | ಸಾಧುಜನಾರ್ಚಿತ | ಶ್ರೀಶಕೇಶವಪ್ರಿಯ 3
--------------
ಶ್ರೀಶ ಕೇಶವದಾಸರು
ರಘುಕುಲತಿಲಕಾ ಮಾಂ ಪಾಹಿ ಪ ಅಘಕುಲನಾಶಕ ಮಾಂ ಪಾಹಿ ಅ.ಪ ಆಹವ ಭೀಮ ವೈದೇಹಿ ಮಾನಸ ಗೇಹ ಸುಧಾಕರ ಮಾಂ ಪಾಹಿ ರಾಮಾ 1 ಆದಿಮೂಲ ಹರಿ ಮಾಂ ಪಾಹಿ ರಾಮ 2 ಮಾಂಗಿರಿ ಮಂದಿರ ತುಂಗ ಕೃಪಾಕರ ಗಂಗಾಜನಕ ಹರಿ ಮಾಂ ಪಾಹಿ ರಾಮಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್