ರಘುನಾಥ ದೀನಾನಾಥ ಸದ್ಗತಿದಾತ ನೋಡಿರ್ಯೋ
ಜಾನಕಿ ಧವಗರ್ಪಿತವೆನೆ
ಅವನಿಯೊಳಗೆ ಶಬರಿ ಘವಘವಿಸುತಿಹ
ಅವಿರಳ ಪದದನುಭವ ನೀಡಿದಾ1
ದಾವನು ಶೃತಿಗಳು ಭಾವಿಸೆ ನುಡಿಯದು
ದೇವನು ಹಿತಗುಜ ಕೇವಲ ವನಚರ
ಜೀವರೊಳಾಡುತ ಸೇವೆಗೆ ನಲಿಯುತ
ಕೈವಿಡಿ ಬಿತ್ತನು ಕೈವಲ್ಯಾದಾ 2
ಕುಂದದೆ ಬಾಂಧವ ನಿಂದಿಸಿ ನೂಕಲು
ನೊಂದು ವಿಭೀಷಣ ಬಂದರ ಶರಣವ
ತಂದೆ ಮಹಿಪತಿ ನಂದನ ಪ್ರಭು ಆ
ನಂದದ ಸ್ಥಿರಪದ ಹೊಂದಿಸಿದಾ 3