ಜಯಜಯಾ ಶ್ರೀನಿವಾಸಾ
ಜಗದೀಶಾ ವೆಂಕಟೇಶಾ
ದಯದಿಂದಲಿ ಪಾಲಿಸೆನ್ನಾ
ದೋರಿನಿಜ ಪ್ರಕಾಶಾ ಪ
ಉರಗಾದ್ರಿಯಲ್ಲಿ ಬಂದು
ಭೂವೈಕುಂಠಿದೇಯಂದು
ಕರದಿಂದ ಮಹಿಮೆದೋರಿ
ತಾರಿಸುವ ಜನದಿಂದು 1
ಧರ್ಮಾರ್ಥ ಕಾಮ್ಯ
ಚತುರ್ವಿಧಮುಕ್ತಿಗಳು
ಧರ್ಮವರಿತೆಸಾಧುರಿಗೆ
ನೀಡುತಿಹೆ ದಯಾಳು 2
ಕುಲಧರ್ಮದಿಂದಲೆನೆಗೆ
ಮಾನ್ಯತಾನಬಂದ್ಹಾಂಗೆ
ವಲಮೆಯಿಂದ ಪರಗತಿಗೆ
ಕುಡುಮಾನ್ಯತೆನವೀಗ 3
ಮಂದರೊಳು ಮಂದನಾನು
ಜ್ಞಾನಭಕ್ತಿಯರಿಯೆನು
ತಂದೆ ಮಹಿಪತಿಸ್ವಾಮಿ
ಇಂದು ಉದ್ಧರಿಸುನೀನು 4