ರಾಜರಯ್ಯ ನಾವು ನಮ್ಮ
ರಾಜೀವಾಕ್ಷನ ಕರುಣವ ಪಡೆದರೆ ಪ
ಊಂಛವೃತ್ತಿಯೇ ರಾಜ್ಯಕೋಶ | ನಿಷ್ಟ್ರ-
ಪಂಚ ನಡತೆಯೇ ನಮಗೆ ಕಛೇರಿ
ಪಂಚೇಂದ್ರಿಯ ಜಯಿಸುವುದು ಮ್ಯಾಜಿಸ್ಟ್ರೇಟ್
ಪಂಚವಿಷಯ ಹಂಚಿಕೆಯೇ ಸಿವಿಲ್ಬಾಬು 1
ದೇವಾದಾಯದ ಧನವೇ ರೆವಿನ್ಯೂ
ಕಾವನು ಕೊಲ್ವನು ಹರಿಯೆಂಬವುದು
ಪಾವನ ಜಡ್ಜ್ಮೆಂಟ್ ಕಾಪಿರಿಜಿಸ್ಟರು 2
ದೇವೇಂದ್ರಾದಿಗಳೇ ಕಲೆಕ್ಟರ್
ಸುರರು ತಾಲ್ಲೂಕಾಫೀಸರು
ಧರ್ಮನಿಷ್ಠರೆಲ್ಲ ನೌಕರ ಜನಗಳು 3
ದಾನಧರ್ಮವೇ ಡಬ್ಲಿಯು ಎಸ್ಸು
ಜ್ಞಾನ ಸಾಧನವೇ ವಸೂಲಿ ಲೆಖ್ಖ
ಮಾನವ ವೃತ್ತಿಗಳೆಲ್ಲ ರಿಕಾರ್ಡ್ 4
ಸಪ್ತಾವರ್ಣವೇ ಸಪ್ತಾಂಗದ ಸಭೆ
ಸಪ್ತಧರ್ಮವೇ ಕಾರ್ಯಗೌರವವು
ಗುರೂಪದೇಶವೇ ಜ್ಞಾನಾರ್ಜನೆಯು 5
ವನಜನಯನ ಗುರುರಾಮವಿಠ್ಠಲನೆ
ಸೈನು ಮೊಹರು ಮಹಾ ಚಕ್ರವರ್ತಿಯು 6