ಕರೆತಾರೆಲೆ ರಂಗನ ಪ
ಕರೆದು ತಾರೆಲೆ ಕರುಣನಿಧಿಯನು
ಕರೆದು ತಾ ಕಾಲಲ್ಲಿ ಗಂಗೆಯ
ಸುರಿದ ಬಾಲ ಬ್ರಹ್ಮಚಾರಿಯ ಅ.ಪ
ಮತ್ಸ್ಯಾವತಾರನನು
ಮುದದಿ ಮಂದರಗಿರಿಯನೆತ್ತಿದ
ಸುರರಿಗಮೃತವನಿತ್ತ ಕೂರ್ಮನ
ಧರೆಯನುದ್ಧರಿಸಿದ ವರಾಹನ
ತರುಣಿ ನೀನೀಗ ತಂದು ತೋರೆಲೆ 1
ಭಕ್ತ ನಿಧಿಯಾದ ನರಸಿಂಹನ
ಧರೆಯ ನೀರಡಿ ಅಳೆದ ವಾಮನ
ದೊರೆಯ ನಾನಿನ್ನೆಂದು ಕಾಂಬೆನೆ
ಭರದಿ ಭಾರ್ಗವನಾದ ರಾಮನ
ತರುಣಿ ತ್ವರಿತದಿ ತಂದು ತೋರೆಲೆ2
ದಧಿಘೃತ ಮೆದ್ದವನ
ದುರುಳ ತ್ರಿಪುರರ ಗೆಲಿದ ಬೌದ್ಧನ
ಸುದತಿ ನೀನೀಗ ತಂದು ತೋರೆಲೆ 3