ಅಂಗಜಪಿತ ಗೋವಿಂದನಿಗೆ ಪ
ಗಂಗಾ ಜನಕಗೆ ರಂಗನಾಥನಿಗೆ ಶೃಂಗಾರಮೂರ್ತಿ ಕೇಶವಗೆ ಅ.ಪ
ಭೂಮಿಯನುದ್ಧರಿಸಿದವಂಗೆ
ಆ ಮಗು ಪ್ರಹ್ಲಾದನ ಕಾಯ್ದಂಥ ಸ
ವಾಮನಮೂರ್ತಿ ಉಪೇಂದ್ರಗೆ 1
ಪರಶುರಾಮನಿಗೆ ಸೀತಾರಾಮಗೆ ವರವೇಣುಗಾನಲೋಲನಿಗೆ
ಧರಣೀಭಾರ ನಿಳುಹುವಗೆ2
ಪಾಪನಿವಾರಿಸಿಶಿವನಂಕಾಯ್ದಾ ಶ್ರೀಪತಿಪಾವನಮೂರುತಿಗೆ
ತಾಪತ್ರಯಹರ ತುಲಸೀಮಾಲಿಗೆ ತಾಪಸನುತ ಜಾಜೀಶನಿಗೆ3