ಒಟ್ಟು 7653 ಕಡೆಗಳಲ್ಲಿ , 131 ದಾಸರು , 4746 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಭಜಕರಿಗೆ ದುರಿತ ಕರ್ಮ ಉಂಟೆ || ಆಗಮದಿ ನಡೆವವಗೆ ಅನ್ಯ ಮಾರ್ಗವುಂಟೆ | ರೋಗವಿಲ್ಲದವನಿಗೆ ಪಥ್ಯ ಉಂಟೆ 1 ವೇದಾಂತ ತಿಳಿದವಗೆ ಭೇದಬುದ್ಧಿಗಳುಂಟೆ | ಸಾಧು ಸಂಗದಲಿ ದುರ್ವಾದವುಂಟೆ | ಬೋಧ ನೆಲೆಗೊಂಡವಗೆ ಕ್ರೋಧ ಜನಿಸುವದುಂಟೆ | ನಾದ ಬಿಂದು ಕಳಾತೀತಗೆಣೆಯುಂಟೆ 2 ತಂದೆ ಭವತಾರಕನ ಹೊಂದಿರಲು ಭಯವುಂಟೆ | ಇಂದುಧರನಲ್ಲಿ ಸಂದೇಹವುಂಟೆ | ಕುಂದು ಹೆಚ್ಚೆಂಬೋದು ಅಲ್ಲಿ ಜನಿಸುವದುಂಟೆ | ಒಂದೆ ಬ್ರಹ್ಮವ ಕಂಡ ಮಹಿಮಗೆರಡುಂಟೆ ? 3
--------------
ಭಾವತರಕರು
ಬಂದುದ ಕೊಂದರೆ ಹೋಗಲಿ ಮತ್ತೇ | ಹೋದುದೆಲ್ಲಾ ಹೋಗಲಿ ಶಿವನೆ ಪ ಮನದ ಆಶೆಗಳು ಕಡಿಯಲಿ ಶಿವನೆ | ಉನ್ಮನಾನಂದಕೆ ನಡೆಯಲಿ ಶಿವನೆ || ಘನವಾದ ಘನವನು ಹಿಡಿಯಲಿ ಮುಂದೆ ಜನನದ ಬಾಧೆಯು ನೀಗಲಿ ಶಿವನೆ 1 ಬಂದು ಹೋಗುದೆಲ್ಲ ನೀಗಲಿ ಶಿವನೆ |ಎಂದೆಂದು ನಿಜವೆಂಬುದಾಗಲಿ ಶಿವನೆ ||ಮಂದ ಮತಿತ್ವ ಹೋಗಲಿ ಜಗವು | ಇಂದುಧರನ ಸಮತೂಗಲಿ ಶಿವನೆ 2 ಪರಿ ಪರಿ ಕಲ್ಪನೆ ಜರೆಯಲಿ ನಾ | ಪರಮಾತ್ಮನೊಳಗಿನ್ನು ಬೆರೆಯಲಿ ಶಿವನೆ || ಗುರುಭವತಾರಕ ದೊರೆಯಲಿ ನಾ | ಪರಪುರುಷನೆಂದು ಅರಿಯಲಿ ಶಿವನೆ 3
--------------
ಭಾವತರಕರು
ಇಂದು ನೋಡಿದೆ ನಂದತೀರ್ಥ ಮು - ನೀಂದ್ರವಂದಿತ ಚರಣನಾ ಪ ವಂದಿಸುವ ಭಕುತರಿಗೆ ನಿತ್ಯಾ - ನಂದಫಲದ ಮುಕುಂದನಾಅ.ಪ ತಮನವೈರಿಯ ಮಂದರಧರ ಕಮಠರೂಪವ ಪೊತ್ತನಾ ಕಮಲಸಂಭವಭವನಕಶಿಪು ದಮನ, ವಾಮನಮೂರ್ತಿಯಾ 1 ಭೂಮಿಪರ ಸಂಹಾರಿ, ದಶರಥ ರಾಮನಾಮದಿ ಮೆರೆದನಾ ಸೋಮಪಾಧಿಪಸುತಗೆ ಒಲಿದು ಸಂ - ಗ್ರಾಮದಲಿ ರಕ್ಷಿಸಿದನಾ 2 ಬುದ್ಧರೂಪದಿ ತ್ರಿಪುರಸತಿಯರ ಬುಧ್ಧಿ ಭೇದವ ಮಾಳ್ದನಾ ಬುದ್ಧರಲಿ ಕಲಿಮುಖ್ಯಯವನರ ಗೆದ್ದ ಗಾನವಿಲೋಲನಾ 3 ದೇವಕೀವಸುದೇವತನಯನ ದೇವಗಣ ಸಂಸೇವ್ಯನಾ ಈ ವಸುಂಧರೆಯೊಳಗೆ ಮಧ್ವಸ - ರೋವರದಲಾವಾಸನಾ 4 ಪೋತವೇಷನ ವೀತಶೋಕನ ಪೂತನಾದಿವಿಘಾತನಾ ಮಾತರಿಶ್ವಪ್ರಿಯಾ ಗುರುಜಗ ನ್ನಾಥವಿಠಲರಾಯನಾ 5
--------------
ಗುರುಜಗನ್ನಾಥದಾಸರು
ನನ್ನದೇನಿದೆಯೊ ದೇವ ನಿನ್ನದೆ ಎಲ್ಲವೂ ಪ ಪನ್ನಗಾಸನ ಧೊರೆಯೆ ಸನ್ನುತಾಂಘ್ರಿಯ ಹರಿಯೆ ಅ.ಪ. ಅವನಿಯೊಳು ಪುಟ್ಟಿಸುವ ಭವದೊಳಗೆ ನೂಕುವವಕಿವಿ ಮೂಗು ಕಣ್ಣಿವದನವ ತ್ವಚೇಂದ್ರಿಯದಿ ಅವಿತು ವ್ಯಾಪ್ತತನಾಗಿ ವ್ಯವಹರಿಸುವವ ನೀನೇಅವಸರದಿ ಕಾಯುವ ದೇವ ನೀನೆಯೊ 1 ತಿಳಿಯುವವ ನೀನೆಯೊ ತಿಳಿಸುವವ ನೀನೆಯೊಗಳಿಸುವವ ನೀನೆಯೊ ಬಳಸುವವ ನೀನೆಯೊಬೆಳಿಸುವವ ನೀನೆಯೊ ಕಳೆಯುವವ ನೀನೆಯೊಕೊಳುವವನು ನೀನೆಯೊ ಕಸಿಯುವವ ನೀನೆಯೊ 2 ಅಂತರಂಗದಿ ಅಡಗಿನಿಂತು ಪ್ರೇರಿಸುವನಂತದ್ವಂದ್ವದ ನಟನೆ ಸ್ವಂತತನವೆನಗೆಲ್ಲಿಸಂತರನು ಉದ್ಧರಿಸಲಿಂತು ಭೂಮಿಗೆ ಬಂದುನಿಂತ ಗದುಗಿನ ವೀರನಾರಾಯಣನು ನೀನೆ 3
--------------
ವೀರನಾರಾಯಣ
(1) ದಶಾವತಾರ ಶ್ರೀಹರ ನಿನ್ನ ಲೀಲೆ ಏನು ಹೇಳಲಯ್ಯ ನಾನು ಪ ಮೋಹಗೊಳಿಸಿ ಲೋಕವನ್ನು ಪಾಲಿಸುತ್ತಿಹೆ ಅ.ಪ ಮತ್ಸ್ಯನಾಗಿ ವೇದ ತಂದೆ ಆಮೆಯಾಗಿ ಅಮೃತ ವಿತ್ತೆ ವರಹನಾಗಿ ನೀನು ಧರಣಿ ಹೊತ್ತೆಯೈ 1 ನರಹರಿ ತರಳರಕ್ಷ ಬ್ರಹ್ಮಚಾರಿ ಇಂದ್ರಪಾಲ ದಾ ಶರಥಿಯೆ ನೀನು ಧರ್ಮ ತೋರ್ದೆಯೈ 2 ಬಾಲಕೃಷ್ಣ ಲಾಲಿಲೀಲೆ ಪರುಶುಧಾರಿ ಪಿತೃಭಕ್ತ ಬಲ್ಲರಾಮನಾಗಿ ನೀನು ಬುದ್ಧಿ ಪೇಳ್ದೆಯೈ 3 ಕಲ್ಕಿಯಾಗಿ ಕೆಸರ ತೊಳೆವೆ ವಿಷ್ಣು ಜಾಜಿಶ್ಯಾಮವನ್ನು ಶುಲ್ಕವಿಲ್ಲದಂತೆ ನಿನ್ನಲ್ಲಿಗೊಯ್ವುದೈ 4
--------------
ಶಾಮಶರ್ಮರು
(ಶೇಣಿ ಗೋಪಾಲಕೃಷ್ಣ) ಗೋಪಾಲಕೃಷ್ಣ ನಿನ್ನಡಿಗಳ ಸೇರಿದೆ ಪ. ಕಾಳಕೂಟಧರ ಕಾಳಿಯ ಸರ್ಪನ ಧಾಳಿಗೊಂಡಿಹ ಗೋಪಾಲರನ್ನು ಪಾಲಿಪೆನೆಂದು ಕೃಪಾಲಯ ತಾಂಡವ ಲೀಲೆಯಿಂದ್ಯಮುನಾಜಲಾಲಯ ಬಿಡಿಸಿದ 1 ವಿಷವೃಕ್ಷ ದಾವಾಗ್ನಿ ವೃಷಭಕೇಶಿ ಬಕ ಅಸಮಸಾಹಸಧೇನುಕಾದಿಗಳಾ ನುಸಿಯಂತೆ ಬಡಿದು ತನ್ನೊಶಗರ ಸಲಹಿದ ಪಶುಪತಿ ವಂದ್ಯ ನೀ ದೆಸೆಯೆಂದು ನಂಬಿದೆ 2 ಸರ್ವದೋಷಹರ ಸಕಲಲೋಕ ವಂದ್ಯ ಗೀರ್ವಾಣಗಣಪೂಜ್ಯ ಪಾದಪದ್ಮ ನಿರ್ವಹಿಸುತ ನೀನೆ ನಿರುತ ನಾಗರಾಜ ಪರ್ವತನಾಥ ಸುಪರ್ಣಾಂಗ ಗಮನಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅಬ್ಜಭವಪಿತ | ಮದ್ಗುರ್ವಂತರ್ಯಾಮಿ | ಸಲಹಯ್ಯ ಕುಬ್ಜ ಮೂರುತಿ | ಯಾದ ಗುರು | ಗೋವಿಂದ ವಿಠಲಯ್ಯ ||ಪ| ಈಶ ತಂದೆ ವೆಂಕ | ಟೇಶ ವಿಠಲನ | ದಾಸ ಸಹವಾಸ |ದೋಷ ರಾಶಿಯ | ನಾಶ ಗೈಸಿತು | ಶ್ರೀಶ ಕೇಶವನೇ 1 ಮರಣ ಸಮಯದಿ | ಚರಣ ಪುಷ್ಕರ | ಭಜಿಸಿದ ಜಮಿಳನ |ಕರುಣದಿಂದಲಿ | ಮರೆದ ವೋಲ್ | ಎನ್ನ ಮನಕೆ ಬಾ ನಾರಾಯಣ 2 ಭೇದ ಮತವೆಂ | ಬಬ್ಧಿಯಲಿ | ಉದಿಸಿವೆನು ಕಾಣಯ್ಯ |ಮಧ್ವಪತಿ | ಮದ್ಭಾರ ನಿನ್ನದು | ಸಲಹೊ ಮಾಧವನೆ 3 ಗೋವಿದಾಂಪತಿ | ಗೋಪ ಪಾಲಕ | ಶ್ರೀಶ ಗೋವಿಂದಮಾವ ಕಂಸನ | ಕೊಂದಸಿರಿ | ಗೋವಿಂದ ಸಲಹಯ್ಯ 4 ಸಿರಿ | ಕೃಷ್ಣ ಬೇಡುವೆ | ಕಷ್ಟ ಬಿಡಿಸಯ್ಯ |ವೃಷ್ಟಿಕುಲ ಸಂ | ಪನ್ನ ಪಾವನ | ವಿಷ್ಣು ಮೂರುತಿಯೆ 5 ವೇದಗಮ್ಯ | ದಯಾಪಯೋನಿಧಿ | ಸಾಧು ವಂದಿತನೆ |ಮೋದದಿಂ | ತವಪಾದ ಪೂಜಿಪೆ | ಪಾಲಿಸೈ ಮಧುಸೂಧನ 6 ಕಾಯ ಮಮತೆಲಿ | ಕಟ್ಟೆ ಧರ್ಮಾತ್ಮ |ಭವದ ಭವಣೆಯ | ಬಿಡಿಸುವುದು | ಬಲಿವರದ ತ್ರಿವಿಕ್ರಮ 7 ವಿಮಲ ಸತ್ಕಲ್ಯಾಣ | ಗುಣ ನಿಸ್ಸೀಮ | ಸುಜ್ಞಾನಾಅಮರಾರಿಯ ಧ್ವರ | ಕೆಡಿಸಿ ಉಳಿಸಿದೆ | ಶೀಲ ವಾಮನ 8 ಹೃದಯ ಶೋಭಿತ | ಮೋದಮಯ | ಮಧ್ವಾಂತರಾತ್ಮಕನೇ |ಆದಿಮೂರುತಿ | ಸಾಧು ವಂದಿತ ಕಾಯೋ ಶ್ರೀಧರನೇ 9 ಭಂಜನ ಬಿಸಜ ಭವ ಪಿತ | ಈಶ ಸರ್ವೇಶಾ |ಒಸೆದು ಬೇಡುವೆ | ಕಸರು ಕರ್ಮವ | ಹರಿಸೋ ಹೃಷಿಕೇಶ 10 ಬದ್ಧ ಜೀವನ | ಅಬದ್ಧ ಮಾಡಲು | ತಿದ್ದಿ ಸೃಜಿಸಿದೆಯೋ |ಸದ್ಗುರುವೆ ಮತ್ | ಪೊದ್ದಿಕೆಯ ಕಳೆ | ಪದ್ಮನಾಭನೆ 11 ಸಿರಿ ಮನೋಹರ |ಧಾಮತ್ರಯ ಸು | ತ್ರಾಮ ವಂದಿತ | ಪಾಲಿಸೈ ದಾಮೋದರ 12 ಪಂಕ ಕಳೆಯಯ್ಯ |ವೆಂಕಟಾ ಬಿರು | ದಾಂಕ ಜಯ ಜಯ | ಸಂಕರುಷಣ 13 ವಿಶ್ವ ವ್ಯಾಪಕನೇಶ್ರೀಶ ಸದ್ಮನೆ | ವಾಸುದೇವನೆ | ಪೋಷಿಸೈ ಪರಮಾತ್ಮನೇ 14 ನಿರವದ್ಯ ಆಪನ್ನ ಪಾಲನೆ | ಪೊರೆಯೊ ಪ್ರದ್ಯುಮ್ನ 15 ಅನಿರುದ್ಧ 16 ಕರಿವರನು ತವ | ಚರಣ ಸರಸಿಜ | ನಂಬಿ ಮೊರೆಯಿಡಲು |ಕರದ ಚಕ್ರದಿ | ತರಿದು ನಕ್ರನ | ಬಿಸುಟ ದೊರೆ ಪುರುಷೋತ್ತಮ 17 ದರ ಚಕ್ರಧರ | ಅಧೋಕ್ಷಜ18 ತರಳ ಕರೆಯಲು | ಭರದಿ ಕಂಬದಿ | ಬಂದ ತ್ರಿಪದಾಹ್ವದುರುಳ ಹಿರಣ್ಯನ | ತರಿದು ಭಕ್ತನ | ಸಲಹಿದ್ಯೋ ನರಸಿಂಹನೆ 19 ಕಚ್ಛಪ ಅಚ್ಯುತ | ಸಲಹೊ ಚ್ಯುತಿ ದೂರ | 20 ಸಾನುಕೂಲವು | ಸಕಲ ಸಾಧನ | ನಿನ್ನ ಭಜಿಸುವಗೇ ಜ್ಞಾನಗಮ್ಯ | ಅನಾದಿ ರೋಗವ | ನೀಗೋ ನೀ ಜನಾರ್ಧನ 21 ಸ್ಮರ ಕೋಟಿ ಸುಂದರ | ಪಾಹಿ ಉಪೇಂದ್ರ 22 ಮರದಿ ಎಂಜಲ | ಸವಿದು ಶಬರಿಯ | ಕಾಯ್ದೆ ಮುರವೈರಿ ತ್ವರದಿ ತ್ವತ್ಪದ | ವನಜ ಕಾಂಬುವ | ಹದನರುಹು ಶ್ರೀಹರಿ 23 ಜಿಷ್ಣು ಸಖ | ಶಿಷ್ಟೇಷ್ಟಪರಿ | ಹರಿಸಯ್ಯ ಮುತೃಷ್ಣಾ |ಕೃಷ್ಣೆ ಗಕ್ಷಯ | ವಸನ ದಾತನೆ | ಕಾಯೊ ಶ್ರೀ ಕೃಷ್ಣ 24 ನಿರುತ ನಿನ್ನಯ | ಚರಣ ಪುಷ್ಕರ | ಮಧುಪನೆನಿಸಯ್ಯಸ್ಮರಿಪರಘ | ಪರಿಹರಿಪ ಗುರು | ಗೋವಿಂದ ವಿಠಲಯ್ಯಾ | 25
--------------
ಗುರುಗೋವಿಂದವಿಠಲರು
ಆವ ಭಯ ಎನಗಿಲ್ಲ | ದೇವ ನಿನ್ನಯ ಪಾದ ಸೇವೆ ಮಂತ್ರವು ಎನ್ನ | ಭಾವದೊಳಿರಲು ಪ ಸಾವಿಗಂಜುವನಲ್ಲ | ನೋವಿಗಂಜುವನಲ್ಲ ಜೀವಕೋಟಿಯನೆಲ್ಲ | ಕಾವನೀನಿರಲಾಗಿ ಅ.ಪ ವರದಾತ ನೀನಿರಲು | ನರಕ ಭಯ ಎನಗುಂಟೆ ಪರಮ ಪುರುಷಾರ್ಥಗಳ | ಕರವೆತ್ತಿ ಕೊಡುವ ಧರಣೀಶ ಮಾಂಗಿರಿಯ | ಸಿರಿರಂಗಪತಿ ನಿನ್ನ ಸ್ಮರಣೆ ವಂದನೆ ಎನ್ನ ಮನದೊಳಿರಲು1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇನ್ನಾದರೂ ಮನದ ಚಂಚಲವ ನಿಲ್ಲಿಸೋ ನೆನ್ನೆ ಕಳೆಯಿತು ನಾಳೆ ಇನ್ನೇನು ಗತಿಯೋ ಪ ಗುರುಹಿರಿಯರನು ಕಂಡು ಶಿರಬಾಗಿ ವಂದಿಸಲು ಚಿರಬಾಳು ನೂರ್ವರ್ಷ ಎಂದೆಂಬರು ಧರೆಯಿಂದ ಜವನವರು ಕರೆಯ ಬರುವಾದಿನವೆ ಬರಿದಾಗುವುದು ನೂರು ವರ್ಷವದರಿಂದ 1 ಧನಕನಕ ಮನೆ ಮಾಟ ಎನಗೆ ಚಿರವೆಂದೆನುತ ಮನವಿಂದ್ರಿಯಂಗಳನು ನಡಸಿತೆಲ್ಲೆಡೆಗೆ ತನಗಾಗಿಯೇ ಸಕಲ ಜನರು ಜನಿಸಿದರೆಂದು ನೆನೆದು ಹಿಂಸಿಸಿತವರ ಓ ಮಾಂಗಿರೀಶ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇಷ್ಟ ಲಿಂಗವ ಪೂಜಿಸೆಂದು ಗುರುವು ಕೈಯಲಿ ಕೊಟ್ಟಇಷ್ಟಲಿಂಗ ನೀನೆ ಎಂದು ಕಿವಿಯಲಿ ಹೇಳಿಬಿಟ್ಟ ಪ ಉದಯದಲಿ ಲಿಂಗವನ್ನು ಬಯಲ ಕಡೆಗೆ ಒಯ್ಯುವೆಅದರ ತರುವಾಯದಲಿ ಲಿಂಗಮುಖವನೀಗ ತೊಳೆವೆಹದ ಮಾಡಿಯೆ ಬಿಸಿನೀರನು ಲಿಂಗಕ್ಕೆ ಎರೆವೆವಿಧವಿಧದ ವಸ್ತ್ರಗಳನ್ನು ಲಿಂಗಕ್ಕೆ ಉಡಿಸುವೆ 1 ಬಸಿತವನು ಹಣೆಯ ತುಂಬ ಲಿಂಗಕ್ಕೆ ಧರಿಸುವೆಕುಸುಮವೇನು ದೊರಕಿದರು ಲಿಂಗಕ್ಕೆ ಮುಡಿಸುವೆಬಿಸಿಯಾರಿದ ಎಡೆಯ ನಾನು ಲಿಂಗಕ್ಕೆ ಉಣಿಸುವೆಪಶುಪತಿಯೆ ಉದಕವೆಂದು ಲಿಂಗಕ್ಕೆ ಕುಡಿಸುವೆ2 ಲಿಂಗ ಕೊಳ್ಳೆಂದು ತಾಂಬೂಲ ನೀಡುವೆಭಂಗಭವನ ಸ್ತೋತ್ರ ಮಾಡಿ ಲಿಂಗವನ್ನು ಮಲಗಿಸುವೆಲಿಂಗವನ್ನು ನಡೆಸ್ಯಾಡಿ ಲಿಂಗವನ್ನು ಮಲಗಿಸುವೆಲಿಂಗ ಚಿದಾನಂದ ಬ್ರಹ್ಮಲಿಂಗವಾಗಿ ಇರುತಿಹೆ 3
--------------
ಚಿದಾನಂದ ಅವಧೂತರು
ಉಗ್ರ ನರಸಿಂಹ ಜ್ವಾಲಾ ಉಗ್ರನರಸಿಂಹಶೀಘ್ರದಿ ಬಂದು ಪ್ರಹ್ಲಾದನ ಮೊರೆಯನುಕೇಳ್ವ ಅಸುರನ ಸೀಳ್ವಾ ಪ ಫಳ ಫಳಯೆನುತಾರ್ಭಟಿಸುತ ಕುಂಭದ ಲೊಡೆದು ಕೋಪವ ಝಡಿದು ಛಿಳಿ ಛಿಳಿಛಿಳಿರನೆ ಕಣ್ಣಲಿ ಕೆಂಗಿಡಿಯುಗುಳೇ ದಿವಿಜರು ಪೊಗಳೇಭಳಿ ಭಳಿ ಭಳಿರೆಂದಬ್ಬರಿಸುತ ದುಂದುಭಿ-ಯೊದರೇ ಅಸುರರು ಬೆದರೇಝಳಪಿಸಿ ಖಡುಗದಿ ರಕ್ಕಸ ಬಲವನು ತರಿದಾ ಶಿಶುವನು ಪೊರೆದಾ 1 ಭುಗು ಭುಗಲೆನೆ ನಾಸಿಕದಿ ಉಸುರ್ಹೊಗೆ ಹೊರಟು ಖಳನುದ್ದುರುಟುಜಿಗಿ ಜಿಗಿದವನನು ಕೆಡಹಿ ತೊಡೆಯೊಳಗಿಟ್ಟು ರೋಷವ ತೊಟ್ಟುಬಗೆದುದರವ ರಕ್ತವ ನೊಕ್ಕುಡಿತೆಯಲಿ ಸುರಿದು ತಾ ಚಪ್ಪರಿದುಸೊಗಸು ಉರಕೆ ಕರುಳ ಮಾಲೆಯ ಹಾಕಿದ ದೇವ ಭಕ್ತರಕಾಯ್ವ2 ಹಿರಣ್ಯಕಶಿಪನ ಹತ ಮಾಡಿದ ಭಕ್ತ ಪ್ರಹ್ಲಾದನಿಗೆ ಆಹ್ಲಾದದವರವನು ಪಾಲಿಸಿ ಸುರರನು ಪೊರೆದುಕರುಣದಿ ಸುರಿದು ಧರಣಿಯೊಳಗೆ ಪೆ-ಸರಾಗಿಹ ಅಹೋಬಲ ಸ್ಥಳದಿ ನೀನಾ ನೆಲದಿಗುರು ಚಿದಾನಂದ ಅವಧೂತರೆನಿಪ ದಾತಾ ಸಜ್ಜನ ಪ್ರೀತಾ 3
--------------
ಚಿದಾನಂದ ಅವಧೂತರು
ಎಂಥ ಮಹಿಮ ಬಲವಂತ ನಮ್ಮ ್ಹನುಮಂತ ನಿಂತು ನೀ ಸಲಹೋ ನಿರಂತರದಲ್ಲೆನ್ನ ಪ ರಾಮನುಂಗುರ ಸೀತೆಗಿಟ್ಟ ಮರವ ಕಿತ್ತಿಸೂ- ರೆ ಮಾಡ್ಯಕ್ಷಕುಮಾರನ್ನ ಮುರಿದು ರಾವಣೇಶನ ಲಂಕಾದ್ವೀಪಕೆ ದೀಪಗಳ್ಹಚ್ಚಿ ಹಾರಿದ್ವಾರಿಧಿ ವಾರ್ತೆ ಹರಿಗೆ ಬಂದರುಹಿದ 1 ಭೀಮಸೇನವತಾರ ಮಾಡಿ ತಾ ಪಾಂಚಾಲಿ ಕೂಡಿ ಕೊಂಡ್ವನವಾಸ ಚರಿಸಿ ಬಂದು ಕ್ರೂರ ಕುರುಪತಿ ಕುಲಕಂತಕನೆಂದರಸನ ಪಟ್ಟ- ರಾಜ್ಞಿ ದ್ರೌಪದಿಧರ್ಮರಾಜಗ್ವಂದಿಸಿದನು 2 ಮಾಯಾವಾದಿಯ ಮುರಿದೊತ್ತಿದ ತಾ ಮಧ್ವ- ರಾಯರಾಗಿ ರಜತಪೀಠಪುರದಲ್ಲೆ ಭೀಮೇಶ ಕೃಷ್ಣನ್ನ ನಿಲಿಸಿ ಬಂದೀ ಬೊಮ್ಮ ಗ್ರಾಮದಿ ನಿಂತನೆ ಸೀತಾರಾಮರ ಸಹಿತವಾಗಿ3
--------------
ಹರಪನಹಳ್ಳಿಭೀಮವ್ವ
ಎನ್ನ ಬಿನ್ನಪ ಕೇಳೊ ಘನ್ನ ಮಹಿಮನೆ ಭವ ಬನ್ನ ಬಡಿಸುತಲಿಹುದೋ ಸ್ವಾಮಿ ಪ ಇನ್ನು ನೀ ಪೊರೆಯೊ ಅಪನ್ನಜನರಾಪಾಲ ಮನ್ನಿಸಿ ಕಾಯೊ ಸ್ವಾಮೀ ಪ್ರೇಮೀ ಅ.ಪ ಆಗಾಮಿಸಂಚಿತಭೋಗಂಗಳು ಎನ್ನ ಯೋಗ ಮಾರ್ಗಕೆ ಪೋಗದಂತೆ ಹೇಗೆ ಮಾಡಿ ಙÁ್ಞನನೀಗೆ ನಿನ್ನಲಿ ಮನಸು ಯೋಗವನು ಮಾಡಗೊಡದೇ ಜಾಗುಮಾಡುತ ಪರಮಭಾಗವತರಲಿಸದಾ ಆಗಮಗಳ ತಿಳಿಯದೇ ಹೀಗಾಗಿ ನಾನು ಅಯೋಗ್ಯನೆನಿಸೀ ಜಗದಿ ಕಾಗಿಯಾಗಿ ತಿರುಗಿದೇ ಸ್ವಾಮಿ 1 ಹೆತ್ತ ಈ ಮೊದಲು ಮತ್ತಾರು ಜನರಿಲ್ಲ ಹೊತ್ತಿಗೇ ಕರೆದನ್ನವೀವರಿಲ್ಲಾ ಗೊತ್ತು ಸ್ಥಳಗಳು ಇಲ್ಲ ವೃತ್ತಿ ಸ್ವಾಸ್ಥ್ಯಗಳಿಲ್ಲ ಚಿÉತ್ತ ಶುದ್ಧಿಯು ಮೊದಲೆ ಇಲ್ಲಾ ಎತ್ತ ಪೋದರೆನ್ನ ಇತ್ತ ಬಾಯೆಂತೆಂದು ಹತ್ತಿರ ಕರೆವೊರಿಲ್ಲ ಎತ್ತ ಪೋದರೆನ್ನ ಮತ್ತೆ ಪಾಲಿಪರ್ಯಾರೊ ಉತ್ತಮನೆ ನೀನೆ ಕಾಯೋ ಸ್ವಾಮೀ 2 ಗರ್ಭವಾಸದಕಿಂತ ದುರ್ಭರಾಭವತಾಪ ನಿರ್ಭರಾವಾಗಿಹುದೋ ಅರ್ಭಕಾಮತಿಯಿಂದ ಅಭರ್Àಟಾ ಕಾರ್ಯವನು ನಿರ್ಭಯದಿ ಮಾಡಿದೆನೊ ಗರ್ಭ ನಾ ದೂತ ನೀ ನಿರ್ಭಯವ ಕೊಡದಿರಲು ಲಭ್ಯವೇ ಸರ್ವಕಾರ್ಯಾ ಲಭ್ಯ ಶ್ರೀಪತಿ ನೀನು ಲಭ್ಯನಾಗದಿರೆ ವೈ ದÀರ್ಭಿರಮಣಾ ಕಷ್ಟವೋ ಸ್ವಾಮಿ 3 ಉಡುವ ವಸ್ತ್ರಗಳಿಲ್ಲ ಒಡಲಿಗಶನವು ಇಲ್ಲ ಕೊಡುವ ಧನ ಮೊದಲೆ ಇಲ್ಲ ಪೊಡವಿಯೊಳು ನಾನತೀ ಬಡವನಲ್ಲದೆ ಮಹಾ ಕಡು ಪಾಪಿಯಾದೆನಲ್ಲೋ ತುಡುಗುತನದಲಿ ಪರರ ಮಡದಿಯರ ನಾ ಬಲು ದೃಢಮನಸಿನಿಂದ ಬಯಸಿ ಧೃಢ ಭಕುತಿಯಿಂದ ಅಡಿಗೆರಗದಲೆ ನಾನು ಪೊಡವಿಭಾರಾದೆನಲ್ಲೋ ಸ್ವಾಮೀ 4 ಓದಿ ಬರೆಯಾಲಿಲ್ಲ ವೇದ ಪಠಿಸಾಲಿಲ್ಲ ಮೋದತೀರ್ಥರ ಶಾಸ್ತ್ರ ತಿಳಿಯಲಿಲ್ಲಾ ವಾದಶಾಸ್ತ್ರಗಳಿಲ್ಲ ಭೇದಪಂಚಕವಿಲ್ಲ ಸಾಧನದ ಮಾರ್ಗವಿಲ್ಲ ಖೇದಗೊಳಿಸುವ ಭವದ ಹಾದಿ ತಿಳಿಯದೆ ನಾನು ಮೋದಕÀರವೆಂದು ಅಲ್ಲೀ ಸಾದರದಿ ಬಿದ್ದು ಆಮೋದಬಡುತಲಿ ದ್ವಿ ಪಾದಪಶು ನಾನಾದೆನಲ್ಲೋ ಸ್ವಾಮೀ 5 ಸತಿಸುತ ಮೊದಲಾದ ಅತಿಹಿತ ಜನರೆನ್ನ ಸತತ ಸಂತ್ಯಜಿಸಿಹರೋ ವಿತತವಾಗಿಹ ಮಹಾಪತಿತದಾರಿದ್ರ್ಯನ್ನ ಅತಿಬಾಧೆ ಬಡಿಸುತಿಹದೋ ಇತರ ಜನರೂ ಎನ್ನ ಅತಿದÀೂರದಲಿ ನೋಡಿ ಅತಿಹಾಸ್ಯ ಮಾಡುತಿಹರೋ ವ್ರತತಿಜಾಂಬಕÀ ನಿನ್ನ ನತಿಸಿ ಬೇಡಿಕೊಂಬೆ ಸತತ ನೀ ಪಾಲಿಸೆಂದೂ ಸ್ವಾಮೀ 6 ತಂದೆ ತಾಯಿಯೂ ನೀನೆ ಬಂಧು ಬಳಗವು ನೀನೆ ಇಂದು ಸಿಂಧು ಒಳಗೆ ಬಿದ್ದೆ ಮುಂದಕ್ಕೆ ಕರೆದು ಕಾಯೋ ಸುಂದರಾಂಗನೆ ಕೃಪಾಸಿಂಧು ನೀ ಬಿಡೆ ಎನ್ನ ನೊಂದದಲೆ ಸಲಹೊರ್ಯಾರೋ ಸ್ವಾಮಿ 7 ಹೊಟ್ಟೆಗಿಲ್ಲದೆ ನಾನು ಬಟ್ಟೆ ಹಾಸೀ ನರರಿ ಗ್ವಟ್ಟರಿಸಿ ಒದರುತಿಹೆನೋ ಪುಟ್ಟದಿರಲೂ ಅನ್ನ ಸಿಟ್ಟಿನಿಂದಾ ನಾಯಿ ಬೆಟ್ಟಕ್ಕೆ ಒದರಿ ತಾನೂ ಹೊಟ್ಟೆಯುಬ್ಬೀ ಕೊನೆಗೆ ಹೊರಳಿ ಹೊರಳಿ ತಾನು ಸುಟ್ಟ ಬೂದಿಲಿ ಬೀಳ್ವ ತೆರದೀ ಒಟ್ಟು ಮಾತಿದು ಕೃಪಾವಿಟ್ಟು ನೀ ಎನ್ನನು ಥsÀಟ್ಟನೇ ಕರಪಿಡಿದು ಕಾಯೋ ಸ್ವಾಮೀ 8 ನಿನ್ನ ದಾಸನು ಆಗಿ ಅನ್ಯರನ ಬೇಡಿದರೆ ಘನ್ನತೆಯು ನಿನಗುಂಟೇ ಘನ್ನ ಜನಪನ ತನುಜ ಇನ್ನು ದೈನ್ಯದಿ ತಾನೆ ಅನ್ಯರನು ಬೇಡುವುದು ಉಂಟೇ ಚೆನ್ನ ಸುಮನಸ ಧೇನು ಮುನ್ನ ಮನೆಯೊಳಿರೆ ಗೋ ವನ್ನು ಬಯಸುವರುಂಟೇ ಇನ್ನು ಪೇಳುವದೇನು ಎನ್ನಭವಣೇ ತಿಳಿದು ಇನ್ನು ಕಾಯಲಿ ಬೇಕೋ ಸ್ವಾಮೀ ಶುದ್ಧಮಾರ್ಗವ ಬಿಟ್ಟು ಬದ್ಧ ಭವಸಾಗರವೆ ಉದ್ಧಾರ ಮಾಳ್ಪದೆಂದೂ ಶಿದ್ಧಜನರಾ ಸೇವೆಗೆ ಬದ್ಧನಾಗದೆ ದುರಾ ರಾಧ್ಯ ಜನರನ್ನು ಭಜಿಸೀ ಉದ್ಧರಿಸುವೊ ಶ್ರೀ ಮಧ್ವಸಿದ್ಧಾಂತದ ಸೂ ಪದ್ಧತಿಯನ್ನೆ ಬಿಟ್ಟೂ ಸಿದ್ಧಮೂರುತಿ ಎನ್ನ ¥ದ್ಧಗಳ ಎಣಿಸದಲೆ ಉದ್ಧಾರಮಾಡೊ ಸ್ವಾಮೀ ಪ್ರೇಮೀ 10 ದಾತ ನೀನೇ ಎನ್ನ ಮಾತುಲಾಲಿಸಿ ಭವದ ರತಿಯನ್ನೇ ಬಿಡಿಸಿ ಕಾಯೋ ಪೊತನಲ್ಲವೆ ನಿನಗೆ ಆತುರದಿ ನಾನೀ ರೀತಿಯಿಂದಲಿ ಪೇಳಿದೆ ಯಾತರಾ ಮಾತೆಂದು ನೀ ಪ್ರೀತಮನಕೇ ತರದೆ ತಾತನೂಕೀ ಬಿಟ್ಟರೆನ್ನಾ ಸೋತುಬಂದಾ ನಿನಗೆ ಆತುರಾವ್ಯಾಕೆಂದು ನೀತವಾಗೀ ಕಾಯ್ವರಾರೋ ಸ್ವಾಮೀ 11 ಮಾತೆ ಮಕ್ಕಳಿಗೆ ವಿಷದಾತೆಯಾಗೇ ತಂದೆ ಪೋತರ ಮಾರಿದಾರೆ ದಾತನಾದಾ ರಾಜ ಆತುರಾದಿಂದಲಿ ನಿಜ ದೂತರರ್ಥಪಹಾರಮಾಡೆ ನೀತಸತಿಯು ತನ್ನ ನಾಥನಾಯು ತಾನೆ ಘಾತವನೆ ಮಾಡಿದಾರೆ ನೀತವೇ ನಿನಗಿದಕೆ ಯಾತರಾ ಚಿಂತೆ ಈ ಮಾತಿನಂತೆ ನಿನಗೆ ಪ್ರೀತೇ ಸ್ವಾಮೀ ಎಷ್ಟು ಪೇಳಲಿ ಎನ್ನ ಕಷ್ಟರಾಶಿಗಳೆಲ್ಲ ಶ್ರೇಷ್ಟವಾಗಿರುತಿಹವೊ ಸ್ವಾಮೀ ದುಷ್ಟನಾದರು vನ್ನ ಭ್ರಷ್ಟಮಗನನು ತಾಯಿ ಅಟ್ಟೀಸೂವಳೆ ಅಡವಿಗೆ ಎಷ್ಟು ಕೆಟ್ಟವ ನಾನಾರಿಷ್ಟನಾದರು ಕೃಪಾ ದೃಷ್ಟಿಯಿಂದಲಿ ನೋಳ್ಪಳೋ ನಷ್ಟದೈವ ನಾನರಿಷ್ಟ ಅಙÁ್ಞನಿ ಕರುಣಾ 13 ದೃಷ್ಟಿ ಯಿಂದಲಿ ನೋಡಿ ಸಲಹೋ ಸ್ವಾಮೀ ಕುಟಿಲ ಖಳಮತಿಯು ನಟಿನೆಮಾಡುತ ಭವಲಂ ಪಟದೊಳಗೆ ಬಿದ್ದಿಹೆನೂ ಸ್ವಾಮೀ ಶಠÀತರನು ನಾನತಿಕಠಿಣಮನಸೀನಿಂದ ಧಿಟಜ್ನಾನಿದ್ರೋಹಗೈದೆ ದಿಟರಿಲ್ಲ ಎನಗೆಂದು ನಟಿಸುತ್ತ ಸರ್ವದ ಅಟನೆಮಾಡಿದೆ ಸರ್ವರಲ್ಲಿ ಪಟುತರನು ನಾನೆಂದು ಧಿಟಗುರುಜಗನ್ನಾಥ ವಿಠಲ ದೇವಾ ನಿನ್ನ ಮರೆದೆ ಸ್ವಾಮೀ 14
--------------
ಗುರುಜಗನ್ನಾಥದಾಸರು
ಏನ ಮಾಡಿ ತೀರುವೆ ಸದ್ಗುರುನಾಥಗೆ ಏನಮಾಡಿ ತೀರುವೆನೀನೆಯು ಬ್ರಹ್ಮವೆಂದು ಯನ್ನಕೈಯಲಿ ಹಿಡಿದು ಕೊಟ್ಟ ಪ ವೇದಕ್ಕೆ ನಿಲುಕದಿಹ ಷಣ್ಮತಗಳ ವಾದಕ್ಕೆ ತೋರದಿಹನಾದಕ್ಕೆ ಬೇರಿಹ ನಾಮರೂಪವಳಿದಿಹಆದಿಯು ನೀನೆಯೆಂದು ಯನ್ನಕೈಯಲಿ ಪಿಡಿದು ಕೊಟ್ಟ 1 ಬುದ್ಧಿ ಮನಕೆ ಹೊರತಾ ತತ್ವಂಗಳಲಿದ್ದ ಗುಣಕೆ ಅತೀತಶುದ್ಧ ಬ್ರಹ್ಮವು ನೀನು ಸಿದ್ಧಾ ಸಿದ್ಧಾಂತೆಂದುಮುದ್ದಿಸಿ ನಿನ್ನನು ಎನ್ನ ಕೈಯಲಿ ಹಿಡಿಕೊಟ್ಟ2 ಕಾರ್ಯ ತನುವ ಧರಿಸಿ ಜನ್ಮ ಜನ್ಮಾದಿ ತೋರುವ ಜೀವವೆನಿಸಿಕಾರ್ಯ ಕಾರಣಾತೀತನಾದ ಚಿದಾನಂದನು ಬೇರಿಲ್ಲನೀನೇ ಎಂದು ಎನ್ನ ಕೈಯಲಿ ಹಿಡಿದು ಕೊಟ್ಟ 3
--------------
ಚಿದಾನಂದ ಅವಧೂತರು
ಕಂಡೆ ಕಂಡೆ ಮುಚುಕುಂದವರದ ಮು- ಕುಂದ ಮೂಡಲಗಿರಿ ಗೋವಿಂದನ ಪ ಶರಧಿ ಬಿಟ್ಟು ಈ ಗಿರಿಯಲ್ಯಾಕೊ ನೀ ತೆರೆದ ಕಣ್ಣು ನಾರುವಮೈಗೆ ಬಿಳಿಯ ಕರ್ಪುರ ಪರಿಮಳದ ಸುವಾಸನೆಗೆ ಜರಿದು ಬಂದೆ ನಿನ್ನ ಪರಿಯ ನಾ ಬಲ್ಲೆ 1 ಛಲನ ಮೇಲೆ ನಿನ್ನ ಛಲವು ಯಾಕೊ ನೀ ಸುರರಸುರರ ಕೈಯಲಿ ಸಿಕ್ಕು ಭಾರ ತಿರುಗನುಪಕಾರ ಗಿರಿರಾಜನು ನಿನ್ನ ಸರಿಯೆಂದೆನಿಸುವ 2 ಬಲ್ಲೆ ಬಲ್ಲೆ ಕೋರ್ಹಲ್ಲುಗಳಿಂದ ಮೆಲ್ಲುತ ಬೇರನವಲ್ಯವನು ಎಲ್ಲ ನೀಗಿ ದಧ್ಯಾನ್ಯ ನೈವೇದ್ಯ ಚೆಲ್ವ ಧರಣಿಪತಿ ಬಲ್ಲಿದ ವರಾಹನ 3 ಕಂಬ ಒಡೆದು ಕರುಳ್ಹಾರವಲ್ಲದೆ ಕಂಡು ಅಜನ ಕಂಠಾಭರಣ ನೊಂದ ಮೈಗೆ ಪುನುಕಾಪು ಮಜ್ಜನ ತಾಂಬೂಲ ಮಂಚ ಸುಪ್ಪತ್ತಿಗೆಶಯನ 4 ದಾನ ಬೇಡಿದ ನೆಲ ಭೂಮಿಯ ಬಿಟ್ಟುರ- ಗಾದ್ರಿಯಲಿರುವುದು ಉಚಿತವಲ್ಲ ಸಾಧಿಸಿ ಬಲಿಯ ಪಾತಾಳಕೆ ಮೆಟ್ಟಿದ ಪಾದ ತೋರದಲಾಚ್ಛಾದನ ಮಾಡಿದಿ 5 ಪೊಡವಿದಾನ ನೆಲಬಿಡದೆ ಕೊಟ್ಟು ಅಡವಿ ಗುಡ್ಡದಲ್ಲಾವಾಸ ಕೊಡಲಿಪಿಡಿದು ತನ್ನ ಹಡೆದ ಮಾತೆಶಿರ ಕಡಿದ ಕೈ ಕೆಳಗೆ ಮಾಡ್ಹಿಡಿದಸುರನ 6 ಹೆತ್ತಜನಕ ಮನೆಬಿಟ್ಟು ಹೊರಡಿಸೆ ಉಟ್ಟ ನಾರ್ವಸÀ್ತ್ರ ಸಹಿತಾಗಿ ಲಕ್ಷ್ಮಿ ಲಕ್ಷಿಟ್ಟು ಬಂದ್ವಕ್ಷ ಸ್ಥಳದಲ್ಲಿರೆ ಅಷ್ಟಪದವಿಗಧಿಕಾರಿ ಎನಿಸಿದಿ 7 ಗೊಲ್ಲರೇಶ ಎಲ್ಲರಿಗುತ್ತಮನೆಂದು ಬಲ್ಲಿದಮುನಿ ಪಾದದ್ವೊದೆಯೆ ಕೊಲ್ಲಾಪುರ ಮನೆಮಾಡೆ ಮಹಾಲಕ್ಷುಮಿ ನಿಲ್ಲದೆ ಬಂದ್ವಾಲ್ಮೀಕವ ಸೇರಿದೆ 8 ಸಾರಿ ಹೇಳಿ ನೀ ನಿಗಮವ ನಿಂದ್ಯಮಾಡಿ ನಾರಿಯರ ವ್ರತವಳಿದು ಮಾರಜನಕ ಅಭಿಮಾನ ಬಿಟ್ಟರೆ ಅ- ಪಾರಮಹಿಮ ನಿನ್ನ ನೋಡಿ ನಗುವರೊ 9 ದೊರೆ ನಿನ್ನ ದರುಶನಕೆ ತ್ವರಿತದಿ ಜನರು ಮೂವತ್ತು ಗಾವುದ ಮೂರ್ಹೆಜ್ಜೆಯ ಮಾಡಿ ತುರಗನೇರ್ಹಾರಿಸಿ ಗಿರಿಯ ಬಿಟ್ಟೂ ್ಹೀದರೆ ವರದ ವೆಂಕಟನ್ಹಿಂದೆ ತಿರುಗುವರ್ಯಾರೊ 10 ನಿನ್ನ ನಾಮವ ತಂದೆನ್ನ ಜಿಹ್ವಕೆ ಚೆನ್ನವಾಗಿ ಬಂಧನ ಮಾಡೆ ಘನ್ನ ಮಹಿಮ ಭೀಮೇಶಕೃಷ್ಣ ಬಂದು ಕಣ್ಣಿಗೆ ಸುಳಿವ ಪ್ರಸನ್ನವೆಂಕಟನ 11
--------------
ಹರಪನಹಳ್ಳಿಭೀಮವ್ವ