ಎಂದಿಗೆ ಶ್ರೀಹರಿಯಾ
ಮಾತಿಲಿ ಕಾಲವು ಕಳೆದಲ್ಲಿ ಘನವೇನಿಲ್ಲಯ್ಯ ಪ
ಸ್ಥಳಕುಲ ಮೋದಿಸಿ ತಾಂಡವಮೂರ್ತಿಯ
ಕುಲನೆನಿಸಿ ಮಾರ್ಗದಲಿ
ಕುಲನೆಲೆ ತಿಳಿದು ಕಾಣುತಹೋಗುವ
ನೆನೆಗಳ್ಳರ ಕೂಡೆ
ಚಲೊ ಚಲೊ ಬೋಧಿಗೆ ಒಳಗಾಗಿ ಮಧುರಸ
ಚಂಚಲ ನತಿ------ದು
ಭಲ ಭಲ ಎನಿಸಿಕೊ ಬೇಗನೆ ಪರಮ
ಭಕ್ತರ ಒಳಗೆಂದೂ 1
ಸರಸರ ಮಾರ್ಗದ ಸರಳಿಯ ತಿಳಿದಾ
ಶರಣರ ನೆಲೆಗಾಣೊ
ನೆರೆಹೊರೆಲಿರುವರ ಕರಕರಿಗಳುಯೆಂಬ
ಕಲ್ಮಿಷ-----ಕಾಣೊ
ಹರಿಗುರು ಕರುಣಾದಿ ಅಂತರಂಗದಿ
ಅರಿತಿರುವರ ಕೂಡೋ
ಪರಿ ಪರಿಯಲಿ ಆ ಭಂಡಾರದ ಗುರುಭಾರವು
ನೀನೋಡೊ 2
ಮನಘನ ಕಾಂತಿಯ ಮಹಿಮೆಯ ತಿಳಿದಾ
ಮರ್ಮಜ್ಞರ ಬೆರಿಯೊ
ದಿನ ದಿನ ಸಂಭ್ರಮವನು ಅಘಸರಿಸಿ
ದೃಢಭವವು ಪಿಡಿಯೊ
ತನುವನು------ದ್ರಿಸಿ ತಾರಕ ಜಪಿಸಿ
ಧನ್ಯನಾಗೊ ಇನ್ನೂ ದೀನಜನ ರಕ್ಷಕ
ಧೀರ 'ಹೆನ್ನೆ ವಿಠ್ಠಲನ’ ಧಿಟ್ಟದಿ ಸ್ಮರಿಸಿನ್ನು 3