ಬನ್ನವನಾ ನೀಗಿದೆ ಜವದಿ
ಧನ್ಯನಾದೆ ಶ್ರೀ ಗುರುವೆ ಧನ್ಯನಾದೆ
ಸದ್ಗುರುವೇ ಧನ್ಯನಾದೆ ಪ
ಭವಸಾಗರವಾ ದಾಟಿದೆ
ಜವನ ಬಾಧೆಯ ನೀಗಿದೆ
ಜೀವಭಾವವು ಸಟಿಯೆಂದೆನಿಸಿ
ದೇವನಾದೆ ಪಾವನನೆ ಧನ್ಯನಾದೆ 1
ಅರಿತೆನೆನ್ನಯ ನಿಜರೂಪವನಾ
ದುರಿತವ ನೀಗಿದೆ ಅರಿವಿನ ಬಲದಿ
ದೊರಕಿತು ಮುಕುತಿ ಧನ್ಯನಹುದು ನಾ
ನೀನೆ ನಾನೈ ಶಂಕರನೇ ಧನ್ಯನಾದೆ 2