ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಮ್ಮುನಾಡಲಿಬೇಡಹಮ್ಮು ಈಡೇರದು<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಹಮ್ಮಿನಿಂದಲಿ ನೀವು ಕೆಡಬೇಡಿರಯ್ಯ ಪ.ಮುನ್ನೊಮ್ಮೆ ರಾವಣನು ಜನಕನಾ ಸಭೆಯಲ್ಲಿತನ್ನಳವನರಿಯದಲೆ ಧನುವೆತ್ತಲುಉನ್ನತದ ಆ ಧನು ಎದೆಯ ಮೇಲೆ ಬೀಳಲುಬನ್ನಬಟ್ಟುದ ನೀವು ಕೇಳಿಬಲ್ಲಿರಯ್ಯ1ಕುರುಪತಿಯ ಸಭೆಯಲ್ಲಿ ಕೃಷ್ಣ ತಾ ಬರಲಾಗಿಕರೆದು ಮನ್ನಣೆಯನ್ನು ಮಾಡಿದಿರಲುಧರೆಗೆ ಶ್ರೀ ಕೃಷ್ಣನಂಗುಟವನಂದೊತ್ತಲುಅರಸುಆಸನ ಬಿಟ್ಟು ಉರುಳಾಡಿದ2ಅತಿ ವೇಗದಲಿ ಕೃಷ್ಣ ಸತ್ಯಭಾಮೆಯ ಕರೆದುಸೀತೆ ನೀನಾಗೆಂದು ನೇಮಿಸಿದನುಮತಿವಂತೆ ಬಗೆಬಗೆಯ ಶೃಂಗಾರವಾದರೂಸೀತಾ ಸ್ವರೂಪ ತಾನಾಗಲಿಲ್ಲ 3ಹನುಮನನು ಕರೆಯೆಂದು ಖಗಪತಿಯನಟ್ಟಲುಮನದಲಿ ಕಡುಕೋಪದಿಂದ ನೊಂದುವಾನರನೆ ಬಾಯೆಂದು ಗರುಡ ತಾ ಕರೆಯಲುಹನುಮ ಗರುಡನ ತಿರುಹಿ ಬೀಸಾಡಿದ 4ಇಂತಿಂತು ದೊಡ್ಡವರು ಈ ಪಾಡು ಪಟ್ಟಿರಲುಪಂಥಗಾರಿಕೆ ತರವೆ ನರಮನುಜಗೆ ?ಚಿಂತಾಯತನು ಚೆಲ್ವ ಪುರಂದರವಿಠಲನಸಂತತವು ನೆನೆ ನೆನೆದು ಸುಖಿಯಾಗೊ ಮನುಜ 5
--------------
ಪುರಂದರದಾಸರು