ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಸನಿತ್ತಿರಿ ಭರದಲಿ ಹಾಗದ ಕಾಸನಿತ್ತಿರಿ ಭರದಲಿ ಪ. ವಾಸುದೇವನ ದಯೆಯೆ ಸಾಕು ಕಾಸುಬೇಡಿದವರಲ್ಲ ನಾವ್ ಕೃಪಣರ ಕಾಸಮುಟ್ಟುವರಲ್ಲ ನಾವ್ ಅ.ಪ ಘನತೆಯೊಂದಿಹ ಧನಿಕರೆಂದು ಗಣಿಸಿಸಾರಿದೆವಿಲ್ಲಿಗೆ ಘನತೆಗೊಪ್ಪುವ ಬಗೆಯ ತೋರದೆ ಧನದ ಮೋಹದಿ ಮೆರೆದಿರೆ ನೀವ್ ಅಣುಗಿಯರೋಳ್ ಮುಳಿದಿರೇ 1 ಮಂದಿಯಿದಿರೋಳ್ ಮೌನದಿಂ ನೀ ವಿಂದು ಲೋಭದ ಮಂತ್ರದಿಂ ತಂದೆ ನಿಮ್ಮೀ ಒಂದು ಹಣವನು ಕೈಗೊಂಡು ನೀವೇ ನಲಿಯಿರಿ ಬಂಧು ಮಿತ್ರರನೊಲಿಸಿರಿ 2 ಭಳಿರೆ ನೀವೌದಾರ್ಯಗುಣದೊಳು ಬಲಿದರೆನ್ನಿಸಿ ಮೆರೆದಿರೆ ಜಲಜಲೋಚನ ಶೇಷಶೈಲನಿವಾಸನೊಲವಿಂ ಸಂತತಂ ನಲಿದು ಸುಖಿಸಿರಿ ಸಂತತಂ 3
--------------
ನಂಜನಗೂಡು ತಿರುಮಲಾಂಬಾ