ನೀನೆ ಸಜ್ಜನರ ಬಂಧು ಪ
ಕರಿಮರಿಬಳಗ ಬಂದೊದಗಿದರೇನು
ಪರಿಪರಿ ಕ್ಲೇಶವ ಬಿಡಿಸಲಿಲ್ಲ
ಹರಿ ನೀನೆ ಗತಿಯೆಂದರೆ ಆ ಕ್ಷಣದಲ್ಲಿ
ಕರಿಬಂಧನ ಪರಿಹರಿಸಿದೆ ಕೃಷ್ಣ 1
ಪಿತರು ಮಾತೆಯರಿದ್ದರೇನು
ಸುತರಾಪತ್ತಿಗೊದಗಲಿಲ್ಲ
ಗತಿ ನೀನೆಂದರೆ ಧ್ರುವ ಪ್ರಹ್ಲಾದರಿ-
ಗ್ಹಿತ ಮಾಡಿದೆ ಶ್ರೀಪತಿ ಪರಮಾತ್ಮ 2
ವಲ್ಲಭರೈವರಿದ್ದರೇನು ವಸನ
ದ್ರೌಪದಿಗುಡಿಸಲಿಲ್ಲ
ಫುಲ್ಲಾಕ್ಷನೆ ಗತಿಯೆಂದರೆ ನೀ ತಡ-
ವಿಲ್ಲದಲಕ್ಷಯ ನೀಡಿದೆ ದೊರೆಯೆ 3
ಮನೆಧನ ಧಾನ್ಯಗಳಿದ್ದರು ಧನಂಜಯ-
ನ್ವನವಾಸಗಳನು ಬಿಡಿಸಲಿಲ್ಲ
ವನಜಾಕ್ಷನೆ ವಾರಣಾವತಿ ದೊರೆತನ
ವಿನಯದಿ ಕೊಟ್ಟಿದ್ದಿಂದಿರಾಪತಿಯೆ 4
ಭವ ಘೋರ
ದುರಿತ ಯಮಬಾಧೆಗಳ ತಪ್ಪಿಸುವೋರಿಲ್ಲ
ಶ್ರೀರಮಣನೆ ಭೀಮೇಶಕೃಷ್ಣನೆಂದು
ಸಾರುವರಿಗೆ ಕರುಣಾವಾರಿಧಿ ಹರಿಯೆ 5