ಕಾವವನೆ ಕರ್ಮಜಯ ಬಳಿಕಂ
ಸಾವವನೆ ಉಣ್ಣುವರು ಜನರು
ಭಾವವನೆ ಅರಿದಿರಿಸು ಜೀವರ ನಿನ್ನಂಘ್ರಿಯಲಿ ಪ
ದಾಸವೃಂದವು ತೋಷದಿಂದಲೆ
ಪೂಶರಯ್ಯನ ವಿಡಿದು ಘನ ಸಂ-
ಸುಕೃತ ಫಲವಿಹುದೋ
ಶ್ರೀಶನಲಿ ನಿಜದಾಸ ಭಕುತಿಯ
ಮೀಸಲಿರಿಸೀ ಮನವ ಮೋಹದೆ
ಆಶೆ ಗಳಿಸದೆ ಶ್ರೀಹರಿಯ ನಿಜವಾಸ ಕೈಯ್ಯುವರು 1
ಮೃಗಜಲಕೆ ನೀರೆಂದು ಭಾವಿಸಿ
ಪೊಗಲೆಳಿಸುವೆರಳೆಗಳ ಪರಿಯಲಿ
ಮೃಗನಯನೇರತಿ ಚೆಲ್ವಿಕೆಗೆ ಜಗವೆಳಸಿ ಬಳಲುವದು
ಮಿಗಿಲಾಗಿದ ವಿಷಯಲನಲದಿ
ಧಗಧಗಿಸಿ ಜನಗಳು ಪೋಪರಲ್ಲದೆ
ಖಗಪತೀ ವಾಹನನ ನೆನೆಯರು ಜಗವ ಪಾವನನು 2
ನೀರಜಾಸನ ಪಿತನೆ ಅಕ್ಷಯ
ಶ್ರೀ ರಮಾವಲ್ಲಭನೆ ತವ ಪರಿ
ವಾರವಲ್ಲದೆ ಸತಿಸುತರು ಮೇಣ್ ದೇಹ ಬಾಂಧವರು
ಸಾರಸುಮತಿಯನಿತ್ತೆಮಗೆ ಹರೆ
ಸೇರಿಸೆಮ್ಮನು ನಿನ್ನ ಅಡಿಯಲಿ
ಧೀರ ಶ್ರೀ ನರಸಿಂಹವಿಠ್ಠಲ ಪಾರಗಾಣಿಪುದು 3