ಎಲ್ಯಾಡಿ ನೀ ಬಂದ್ಯೋ ಹರಿ
ಫುಲ್ಲಲೋಚನ ಕೃಷ್ಣ ಧ್ರುವ
ಬಲಿ ಮಹಿಮರನೆಲ್ಲ ಸಂರಕ್ಷಿಸಿ ಮಲ್ಲದೈತ್ಯರ
ಹಲ್ಲು ಮುರಿದು ನೀ ಬಂದ್ಯೊ 1
ಸುಗಮ ಸುಪಥದೋರಿ ನಿನ್ನ
ಉಗಮ ಸಾರಿ ನೀ ಬಂದ್ಯೊ
ನಗ ನೆಗಹಿ ನಿಂದು
ಜಗದೋದ್ಧಾರವ ಮಾಡಿ ನೀ ಬಂದ್ಯೋ 2
ಶರಣ ರಕ್ಷಕನಾಗಿ ನಿನ್ನ
ಕರುಣ ನೀ ಬೀರಿ ಬಂದ್ಯೋ
ತರಳಗೊಲಿದು ಧÀರಿ ಮೂರಡಿಯೆನೆ ಮಾಡಿ
ಪರಶುಧರನಾಗಿ ಆಡಿ ನೀ ಬಂದ್ಯೊ 3
ಮೊರೆಯ ಹೊಕ್ಕವರಿಗೆ ಪದ
ಸ್ಥಿತವನಿತ್ತುನೀ ಬಂದ್ಯೊ
ಸುರರ ಸ್ಥಾಪನೆ ಮಾಡಿ ತುರುಗಳ ಕಾಯಿದು
ಪರ ನಾರೇರ ವ್ರತವಳಿದು ನೀ ಬಂದ್ಯೋ 4
ನೀನೆ ರಾವುತನಾಗಿ ನಿನ್ನ
ಖೂನ ನೀ ದೋರಿ ಬಂದ್ಯೊ
ದೀನ ಮಹಿಪತಿ ಸ್ವಾಮಿ ಭಾನುಕೋಟಿ ತೇಜ ನೀನೆ
ನೀನಾಗೆನ್ನ ಹೊರಿಯಲು ಬಂದ್ಯೊ 5