ಒಟ್ಟು 10 ಕಡೆಗಳಲ್ಲಿ , 6 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಅಂಬುಜೇಕ್ಷÀಣ ನಂಬಿದೇ ನಿನ್ನ ಪ. ಅಂಬುಜೇಕ್ಷಣ ನಿನ್ನ ನಂಬಿದ ಭಕ್ತರಘ ದ್ಹಂಬನು ಕಡಿದು ನಿನ್ನಿಂಬನು ತೋರುವೆ ಅ.ಪ. ಅನುಪಮ ಚರಿತ ಅಪ್ರಮೇಯನೆ ಕೃಷ್ಣ ತನುಮನಧನಗಳಾ ನಿನಗರ್ಪಿಸುವೆ ಎನ್ನ ಚಿನುಮಯ ರೂಪನೆ ಮನುಮಥ ಪಿತನೆ ನಿನ್ನ ಸರಿಯಾರೋ ಹನುಮದೀಶ ಕೃಷ್ಣ 1 ಉತ್ತಮರುಗಳನು ನಿತ್ಯದಿ ಸೇವಿಪ ಚಿತ್ತವೆನಗೆ ಕೊಡೋ ಉತ್ತಮೋತ್ತಮನೆ ತೆತ್ತೀಸ ಕೋಟಿ ದೇವರ್ಕಳು ನಿನ್ನನು ಸುತ್ತಿ ಸ್ತುತಿಪರೋ ನರ್ತನ ಗೈಯ್ಯುತ 2 ಪದುಮ ಸಂಭವ ಪಿತ ಪದುಮಿಣಿಯರಸನೆ ಒದಗುತ ಭಕ್ತರಾಪ್ತನು ನೀನಲ್ಲೆ ಸದನದಿ ಕಾಯುತ ಮುದವನು ಬೀರುತ ನೀ ಚದುರ ಶ್ರೀ ಶ್ರೀನಿವಾಸ ಕದನವಿನ್ಯಾತಕೋ ರಾಮ 3
--------------
ಸರಸ್ವತಿ ಬಾಯಿ
ಕಂಡೆ ಕಂಡೆ ಪಂಡರೀಶನ | ಕಂಡೆ ಕಂಡೆ ಪ. ಕಂಡೆ ಪಂಡರಿಪುರದಿ ಮೆರೆವನ ಕಂಡೆ ಭಕ್ತರ ಕಾವ ಬಿರುದನ ಕಂಡೆ ಮಂಡೆಯ ಚರಣದಲ್ಲಿಡೆ ಹಿಂಡು ಅಘಗಳ ತರಿವ ವಿಠಲನ ಅ.ಪ. ಕಟಿಯಲೀ ಕರವಿಟ್ಟು ಮೆರೆವನ ಹಟದಿ ವಗದಿಟ್ಟಿಗೆಲಿ ನಿಂತನ ಕಟಕ ಮಕುಟನ ವಟದೆಲೆ ಮೇಲೊರಗಿದಂಥನ ಕುಟಿಲ ಕುಂತಳ ಫಣಿಯ ತಿಲುಕನ ತೃಟಿಯು ತೆರವಿಲ್ಲದಲೆ ನಮಿತನ ವಟುವೆನಿಸಿ ಬಲಿರಾಯಗೊಲಿದನ ನಟನೆಗೈಯ್ಯವ ದಿವ್ಯರೂಪನ 1 ಚಂದ್ರಭಾಗಾ ತೀರದಲ್ಲಿಹನ ಚಂದ್ರ ಕೋಟಿಸ್ಮರನ ರೂಪನ ಇಂದಿರೆಯ ಸಹಿತದಲಿ ನೆಲಸುತ ಚಂದ್ರದ್ಹಾರಗಳಿಂದಲೆಸವನ ಬಂದ ಭಕ್ತರ ಭೇದ ನೋಡದೆ ಸಂದರುಶನಾನಂದವೀವನ ಚಂದ್ರಮಂಡಲ ಮಧ್ಯವರ್ತಿಯ ಚಂದ್ರಕುಲಕೆ ತಾ ಚಂದ್ರನೆನಿಪನ 2 ವಿಠ್ಠಲನ ಪುರದಲ್ಲಿ ಹರಿಯುವ ಶ್ರೇಷ್ಠ ಇಂದುಭಾಗೆಯಲಿ ಮಿಂದು ಮುಟ್ಟಿ ವಿಠಲನ ಚರಣಕಮಲವ ಬಿಟ್ಟು ಮನದ್ಹಂಬಲಗಳೆಲ್ಲವ ವಿಠ್ಠಲಾ ನೀನೆ ಗತಿ ಕೈ ಗೊಟ್ಟು ಕಾಯೆಂದೆನುತ ಸ್ತುತಿಸಿ ಕಷ್ಟಹರ ಗೋಪಾಲಕೃಷ್ಣ ವಿಠ್ಠಲನ ಚರಣಾಂಬುಜಗಳನು 3
--------------
ಅಂಬಾಬಾಯಿ
ನಂಬಿದೆ ತವ ಚರಣ ಸಲಹೋ | ಅಂಬುಧಿಸುತೆ ರಮಣ ವಿನುತ ಮನ | ದ್ಹಂಬಲವನು ಸಲಿಸೆಂದು ನಿರುತ ನೆರೆ ಪ ತಾವರೆದಳನಯನಾ ಭವಹರಣ ತವಕದಿ ಸುಜ್ಞಾನವಗರೆಯೋ 1 ತಂದೆ ನಾ ಜನಿಸುತ ಭೂಸುರ ಜನ್ಮದಿ ಹಿಂದಿನ ಸುಕೃತದಲಿ ಬಂದೆನೊ ಭುವಿಯೊಳ್ ನೊಂದೆನೋ ಕರುಣಿಸು 2 ಹೇಸಿ ಸಂಸಾರದ ಪಾಶÀವ ಬಿಡಿಸುತ ಶ್ರೀಶಾಮಸುಂದರವಿಠಲನೆ ದೋಷವ ನೋಡದೆ | ಪೋಷಿಸು ಮರೆಯದಲೆ ವಾಸುಕಿಶಯನನೆ 3
--------------
ಶಾಮಸುಂದರ ವಿಠಲ
ಪಾದ ಲಂಬೋದರಅಂಬರಾಧಿಪ ಮನದ್ಹಂಬಲವ ನೀಡೆಂದು ಪ ನಾಕನಾಥನುತ ಪಿನಾಕಿಸುತ | ಕಾಕುಮತಿಯ ಕಳೆದು ಕಾಯೊಖುವಾಹನೇಕದಂತ 1 ಭದ್ರಮೂರುತಿಯೆ ಕರುಣಾಬ್ಧಿತ್ವರಿತದ್ಧರಿಸು ಎಂದು ನಮಿಪೆ ಅದ್ರಿಜೆ ಕುಮಾರ ನಿರುತ 2 ಸಿಂಧೂರ ವದನನೆ ಸುರವೃಂದ ವಂದಿತವಂದಿಸಿ ಬೇಡುವೆ ಶಾಮಸುಂದರನ ಪ್ರೀತಿ ಪಾತ್ರ 3
--------------
ಶಾಮಸುಂದರ ವಿಠಲ
ಪೋಷಿಸು ಎನ್ನಯ ದೋಷಗಳೆಣಿಸದೆ ದಾಸರಾಯ ಶೇಷನಾಮಕನೆ ವಿಶೇಷ ಜ್ಞಾನವ ನೀಡೋ ದಾಸರಾಯ ಪ ಸಂತತ ಕರಪಿಡಿ ಸಂತರೊಡೆಯ ಗುರು ದಾಸರಾಯ ಸಂತೋಷ ತೀರ್ಥರಂತಃ ಕರಣ ಪಾತ್ರ ದಾಸರಾಯ 1 ಚಿಂತಿಪ ಜನರಿಗೆ ಚಿಂತಾಮಣಿತಯ ನೀನೆ ದಾಸರಾಯ ಚಿಂತಿರಹಿತವರ ಚಿಂತಾಮಣಿಯು ನೀನೆ ದಾಸರಾಯ 2 ಚಿಂತ ರಹಿತವರ ಚಿಂತರವೇಲಿವಾಸ ದಾಸರಾಯ ಕದಂಬ ವಿನುತ ದಾಸರಾಯ 3 ಬೆಂಬಿಡದಲೆ ಮನದ್ಹಂಬಲ ಪೂರೈಸು ದಾಸರಾಯ ನಂಬಿದ ದ್ವಿಜರಿಗೆ | ಶಂಭುಗಿರಿಯಲ್ಲಿ ದಾಸರಾಯ 4 ಬಾಂಬೊಳೆ ತೋರಿಸಿ ಸಂಭ್ರಮಗೊಳಿಸಿದ ದಾಸರಾಯ ಹರಿಕೇತು ಹರಿಸುತ ಹರಿಣಾಂಕ ಕುಲಜಾತ ದಾಸರಾಯ 5 ಹರಿಕೇತು ಹರಿಸುತಾದ್ಯರನ ಸಂಹರಿಸಿದ ದಾಸರಾಯ ಹರಿದಾಡುತಿಹ ಮನ | ಹರಿಯಲ್ಲಿ ನಿಲಿಸಯ್ಯದಾಸರಾಯ 6 ಹರಿವೈರಿ ಮತಕರಿ | ಪರಿಪರಿ ಹರಿಸಘು ದಾಸರಾಯ ಪೂರ್ತಿಸುವ ನಿನ್ನ ವಾರ್ತೆಕೇಳಿ ಬಂದೆ ದಾಸರಾಯ 7 ಪಾರ್ಥಸಾರಥಿ ಭವ್ಯದಾಸರಾಯ ಮೂರ್ತಿಯ ಸ್ಥಾಪಿಸಿ ಕೀರ್ತಿಯ ಪಡೆದ ದಾಸರಾಯ 8 ನೇಮನಿಷ್ಟೆಯ ಬಿಟ್ಟು ಪಾಮರನಾದೆನಗೆ ದಾಸರಾಯ ಶ್ರೀಮಧ್ವನಿಗಮಾರ್ಥ | ಪ್ರೇಮದಿ ತಿಳಿಸಯ್ಯ ದಾಸರಾಯ 9 ಕಾಮಾದಿ ಷಡ್ವೈರಿ | ಸ್ತೋಮಾದಿ ಕುಲಿಶನೆ ದಾಸರಾಯ ಕಾಮಿತ ಫಲದಾಯಕ ಶಾಮಸುಂದರ ದೂತ ದಾಸರಾಯ 10
--------------
ಶಾಮಸುಂದರ ವಿಠಲ
ಬಿಟ್ಟು ಬನ್ನಿರೊ ಸಂಸಾರದ್ಹಂಬಲ ಪ. ಸೃಷ್ಟಿಪತಿಯ ಸೇರಿ ನೀವು ಸುಖಿಸಬನ್ನಿರೊ ಅ.ಪ. ಹೆಂಡಿರುಮಕ್ಕಳು ಎಂಬೋ ಹಂಬಲ ಬೇಡಿರೊಕೊಂಡವರಲ್ಲ ಕೊಡುವರಲ್ಲ ಮುಂದಿನ ಗತಿಯನು 1 ಎಷ್ಟು ಮಾಡಿ ಗಳಿಸಿ ತಂದರು ಸಾಲದೆಂಬರೊನಷ್ಟಮಾಡಿ ಇವನ ಬದುಕು ಎಲ್ಲ ತಿಂಬರು 2 ನಡುಬೀದಿಯಲಿ ಇವನ ಎಳೆದು ಸೆಳೆವರೊಕಡೆಗಣ್ಣು ಕುಡಿಹುಬ್ಬು ನೋಟದಿಂದಲಿ 3 ಉಂಡು ಉಟ್ಟು ಗುಂಡಿನಂತೆ ಮನೆಯಲಿರುವರೊಚಂಡ ಯಮನದೂತರು ಬಂದು ಎಳೆದು ಒಯ್ವರೊ4 ಮುಟ್ಟಿ ಭಜಿಸಿರೊ ಹಯವದನನಂಘ್ರಿಯನೆಟ್ಟನೆ ಮುಕ್ತಿಮಾರ್ಗ ತೋರಿಕೊಡುವೆನೊ 5
--------------
ವಾದಿರಾಜ
ಮಾರನಯ್ಯನ ಚದುರನ ತಂದುತೋರು ವೆಂಕಟರಮಣನ ಪ. ನಲ್ಲ ನುಡಿದರೆ ನುಡಿದರಗಿಣಿಯನು ನಾಚಿಸುವಚೆಲ್ವಮೊಗದಿ ಶಶಿಯನುಗೆಲ್ವ ಭಾರಿಯ ಸೊಬಗ ತೋರಿಫುಲ್ಲಬಾಣನ ಜರೆವನೊ 1 ಕಂಬನಿಯ ತೊಡೆದು ತನ್ನ ಮೊಗವಚುಂಬಿಸಲು ತರುಣಿ ತನ್ನ ಬಾಯತಾಂಬೂಲವನಿತ್ತು ಎನ್ನಮನ ದ್ಹಂಬಲ ಸಲಿಸಲು ಪೂರ್ಣ 2 ಇಂದೆನ್ನನಗಲಿದರೆ ಮನದಕುಂದು ಬಿಡಿಸುವನದಾರೆಇಂದುಮುಖಿ ಕರೆದು ತಾರೆ ಹಯವದನನಬಂದು ಬೇಗದಲಿ ಸಾರೆ 3
--------------
ವಾದಿರಾಜ
ರುದ್ರದೇವರು ಗಂಗಾಧರ ಮಹಾದೇವ ಶಂಭೊಶಂಕರ ಪ. ಗಂಗಾಧರಾ ನಿನ್ನ ನಂಬಿದ ಭಕ್ತರಘ ದ್ಹಂಬ ಕಡಿದು ಹರಿ ಇಂಬ ತೋರೆ ಜಗ ಕಂಬಾರಮಣ ನಿನ್ನ ಸಂಭ್ರಮದಿ ಸ್ತುತಿಪೆ ಅ.ಪ. ಚಾರು ಚರ್ಮಾಂಬರ ಧೀರ ಧರಿಶಿ ಮೆರೆವ ಚಾರು ಭೂತಗಣ ಸಂಚಾರ ಭಸ್ಮಧರಾ ಹಾರ ಕೇಯೂರ ಮಧ್ಯ ಥೋರ ಸರ್ಪ ಭೂಷ ನಿನ್ನ ಚಾರು ರೂಪ ವರ್ಣಿಸಲಳವೆ ಸಾರಸಾಕ್ಷ ಪಾರ್ವತಿಪ್ರಿಯ ಕರುಣಾಕರಸ ದೊರಕದೆ ಶ್ರೀರಮಣನು ಸಿಗ ಕೋರೆ ಹರಿಯ ನಿನ್ನ ಪಾದಪಂಕಜ ಹಾರೈಸುವೆ ಸಂಸಾರ ಶರಧಿಂ 1 ಪರಮಪುರುಷ ಶ್ರೀ ರಾಮನ ತಾರಕ ವರಮಂತ್ರ ಜಪಿಸುವ ವರ ಪಾರ್ವತಿಗರುಹಿ ಧರೆಯೊಳು ಮನುಜರ ವರಮನ ಪರಿಪರಿ ಬೇಡುವೆ ಹರಿಸ್ಮರಣೇಯ ಎನಗೀಯೋ ಕರುಣದಿ ಮಾರ್ಕಂಡೇಯಗೆ ವರವಿತ್ತು ಚಿರಂಜೀವತ್ವವ ಪರಿಪಾಲಿಸಿದಂತೆ ಪರಿಪರಿ ಭಕ್ತರ ಪೊರೆದಂತೆ ಪೊರೆಯೆನ್ನ ಪರಿ ಇತ್ತು 2 ಪಾಶಾಂಕುರಧರ ಪರಮಪವಿತ್ರನೆ ಈಶ ಭಕ್ತರ ಭವಪಾಶದಿಂದುದ್ಧರಿಪೆ ಶ್ರೀಶ ಶ್ರೀ ಶ್ರೀನಿವಾಸನಾಸಕ್ತಿಯಲಿ ಭಜಿಪ ದೋಷರಹಿತ ಮನ ಭಾಸಿ ಪಂಥದಿ ಈವೆ ಕಾಶೀಶ್ವರ ನಿನ್ನ ಲೇಸು ಭಕ್ತಿಲಿ ಸ್ತುತಿಪಾ ದಾಸ ಸಂಗದೊಳಿರಲು ಲೇಸು ಮನವ ಕೊಡು ವಾಸುಕಿಶಯನ ಸುತನ ಸುತನೆ ನಿನ್ನ ಏಸು ದಿನದಿ ಸ್ತುತಿಸುತ ಹಾರೈಸುವೆ 3
--------------
ಸರಸ್ವತಿ ಬಾಯಿ
ವೈಕುಂಠ ವಿಠ್ಠಲನೆ ನೀನಿವನ ಸಾಕಬೇಕಯ್ಯ ಶ್ರೀ ಹರಿಯೆ ಪ ನಾಕಪತಿಯೆ ನಿನ್ನ ತೋಕನೆಂದೆನಿಸಿ ಕೃಪಾಕರುಣೆ ಕಾಪಾಡ ಬೇಕೊ ಹರಿಯೆ ಅ.ಪ. ಪುಂಡಲೀಕ ವರದ ಪಾಂಡುರಂಗನೆ ನಿನ್ನತೊಂಡನಾಗಿಹನ ಕೈಗೊಂಡು ಕಾಪಾಡೊ ಹರಿಯೆ |ಅಂಡಜಸುವಾಹನನೆ ಮಾರ್ತಾಂಡ ಶತತೇಜಭಾಂಡ ಕಾರಕ ಭೀಮ ಗೊಲಿದಂತೆ ಒಲಿಯಬೇಕು 1 ಇಹಪರಗಳೆರಡಕ್ಕೂ ಅಹಿಶಯ್ಯ ನಿನ ಪಾದವಹಿಸೆ ಸೇವಿಪನಯ್ಯ ಸಹಜ ಭಕ್ತಿಯಲಿವಿಹಗೇಂದ್ರ ವಾಹನನೆ ಐಹಿಕದ ಭಯಹರಿಸಿವಿಹಿತ (ಕರುಣ)ದಿಂದಿವನ ಕಾಪಾಡು ಬೇಕು ಹರಿಯೇ 2 ವಿಘ್ನಹರ ನಿನ್ನಲ್ಲಿ | ಲಗ್ನ ಗೈಸಿಹಮನವ ನಿ-ರ್ವಿಘ್ನತೆಯ ನೀಡಯ್ಯ ಸರ್ವಕಾಲದಲಿಯಜ್ಞೇಶ ಯಜ್ಞ ಭುಗ್ ಯಜ್ಞಸಾಧನ ಯಜ್ಞಯಜ್ಞಾನು ಸಂಧಾನ ಸರ್ವಕಾರ್ಯದಲೀಯೊ 3 ವೃಂದಾರ ಕೇಂದ್ರ ರಿಂ | ವಂದ್ಯ ಹಯಮುಖ ಪಾದಭೃಂಗರೆಂದೆನಿಸುವ ಭಾವಿ ಮರುತರ ಚರಣದೀಸಂಧಿಸುತ ಧೃಡಭಕ್ತಿ ವೃಂದಾವನಾಖ್ಯಾನಸಂದೋಹ ಸುಜ್ಞಾನ ನೀನಿತ್ತು ಸಲಹೊ ಹರಿಯೇ 4 ಪತಿ ನಿನ್ನ ಹಂಬಲಿಸಿ ಬೇಡುವೆನುಇಂಬಿಟ್ಟು ತವ ಪಾದದ್ಹಂಬಲವ ನೀಯೋಉಂಬುಡುವ ಕ್ರಿಯೆಗಳಲಿ ಬಿಂಬ ಕ್ರಿಯೆಗಳ ತಿಳಿಸಿಬಿಂಬ ತವರೂಪ ಹೃದಯಾಂಬರದಿ ತೋರಿ ಸಲಹೋ 5 ಪಂಚಪಂಚಸುತತ್ವ | ಪಂಚ ಭೇದದಜ್ಞಾನಸಂಚಿಂತೆಯ ನೀಯೋ ವಾಂಛಿತಾರ್ಥದನೇಪಂಚ ಅವಿದ್ಯೆಯ ಕಳೆದು ಪಂಚಸು ಪರ್ವದಲಿಪಂಚಾಸ್ಯನಲಿ ನಿನ್ನ ಪಂಚರೂಪವ ತೋರಿಸೋ 6 ದಿವಿಜ ವಂದ್ಯಮಧ್ವಾಂತರಾತ್ಮ ಗುರು ಗೋವಿಂದ ವಿಠಲ ತವದಿವ್ಯ ರೂಪವ ತೋರಿ ಕಾಪಾಡೊ ಹರಿಯೆ 7
--------------
ಗುರುಗೋವಿಂದವಿಠಲರು
ಶ್ರೀ ವಧುರಮಣನ ಚರಿತಾಮೃತವನು ಸೇವಿಸಬಾರದೆ ಜಿವ್ಹೆ| ಆವಾಗು ವಿಷಯಾಸಕ್ತಿಲಿ ಬಾಳುವ ದಾವರಸಜ್ಞದ ಗುಣವೇ ಪ ಆರತಿಯಿಂದಲಿ ಷಡರಸದನ್ನದ ಸಾರಾಯಕ ಮರುಳಾದೆ ನೀ| ನರೆರಧರಕ್ಕೊಲಿದೇ ಸುಧಾರಸವೆಂದು ಬಗೆದೇ| ಧಾರಣಿ ಕಳ್ಳಿಯ ಹಾಲೆಂದೆನಿಸಲು ಗೋರಸದ್ಹಂಬಲ ಮರೆದೆ 1 ಜ್ಞಾನವ ಸಾಧಿಸಿ ಬಹು ಸಾಯಾಸದಿ ನಾನು ಶಾಸ್ತ್ರವ ನೋಡಿ| ಮಾನದ ಕಾಂಕ್ಷಿಯ ಕೂಡಿ| ಪರಿ ಕುಣಿದಾಡುವ ಹೀನ ಮನುಜರಾ ಪಾಡಿ2 ಸ್ಮರಿಸಲು ಶ್ರೀಹರಿಯಾ ಲೋಹ| ಪರಸವ ಮುಟ್ಟಿದ ಪರಿಯಾ ಧನ್ಯರು ತಮನೆನಿಸುವನರಿಯಾ| ಗುರುವ್ಕ ಮಹಿತಪಿ ನಂದನು ಸಾರಿದ ಮೊರೆ ಹೋಗು| ಮೂಜಗ ಧೊರಿಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು