ಕರುಣಾಕರಾ ಕಮಲಾರಮಣ
ಕರಿರಾಜ ಬಂಧನ ಹರಣಾ
ಸುರ ಬ್ರಹ್ಮ ಮುಖಾರ್ಚಿತ ಚರಣಾ
ಶರಣಾಗೆಲೋ ದೀನೋದ್ಧರಣಾ ಪ
ಅತಿಸುಂದರ ನಂದ ಕುಮಾರಾ
ಸುತ ನಾಗೈ ತಂದನು ಮಾರಾ
ಅತನೇ ಕುಸುಮದ ಶರೀರಾ
ಸುತ ಸದ್ಗುಣ ಗಣ ಮಂದಾರಾ
ಪ್ರತಿಯುಗದಲಿ ಧರಿಸೈವತಾರಾ
ಕ್ಷಿತಿಯೊಳು ಪಾಲಿಪ ಸುರನಿಕರಾ 1
ಜಲಧಿ ಯೊಳಗೆರಡು ರೂಪಾದೆ
ಸಲೆ ವೇದಾಮೃತವನು ತಂದೆ
ಬಲಿದೀ ಕ್ರೂರಾಂಗವ ವಿಡಿದೆ
ಇಳೆಸಲೆ ಪ್ರಲ್ಹಾದರ ಹೊರೆದೆ
ನೆಲೆ ಪ್ರಥಮಾಶ್ರಮದಲಿ ನಿಂದೇ
ಬಲಿ ಜಮದಗ್ನ್ಯರ ತೋಷಿಸಿದೆ 2
ಎರಡನೆ ವರ್ಣದೊಳಗೆ ಜನಿಸಿ
ಸುರ ಪಾಂಡವರೇಳಿಗೆ ಬಲಿಸಿ
ನೆರೆ ಅಂತ್ಯಯುಗದಿ ಅವತರಿಸಿ
ಪುರಹರ ದ್ವಿಜರಭಿಮತ ಸಲಿಸಿ
ಗುರು ಮಹಿಪತಿ ಪ್ರಭು ಕರುಣಿಸಿ
ಹೊರಿಯೋ ನಿನ್ನೆಚ್ಚರ ನಿಲಿಸಿ 3