ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ನಿಂದಾನಂದೋಬ್ರಹ್ಮನ ಮಂಡಲೇಶನ ಧ್ರುವ ಪಿಂಡ ಬ್ರಹ್ಮಾಂಡ ತಂಡಕ ಜಡದ ಖಂಡಿತವಾಗ ಸುಪಂಡಿತರಾತ್ಮನ 1 ಸನ್ಮಾರ್ಗ ಸದ್ಗತಿ ಸಾಧನ ಸದ್ಗುರು ನಿಧಾನ ಸದ್ಬ್ರಹ್ಮಾಕರ ಸದ್ವಾಸನೆ ಪೂರಿಸಿ ಸದ್ಗೈಸುವ ಸದ್ಭಾವ ಬೋಕ್ತನ 2 ನಿಜಸುಖ ಭಾಸುವ ಮಹಿಪತಿಗೋಸುಗ ಭಾಸ್ಕರ ಕೋಟಿ ಪ್ರಕಾಶನ ಕಂಡೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಷ್ಟ ತನುವಿನಲಿ ಹುಟ್ಟಿ ತೊಳಲುವಂಥಎಷ್ಟೆಂದು ತಾಳುವೆನೊ ಶ್ರೀರಂಗ ಪ ಅಷ್ಟರೊಳೆಂದೆನ್ನ ಅವಗುಣವೆಣಿಸದೆ ಕಷ್ಟ ಪಡಿಸುವುದೇನು ಶ್ರೀರಂಗ ಅ ನರಜನ್ಮವನು ಎತ್ತಿ ನರಕದೊಳಗೆ ಸುತ್ತಿಗುರಿ ಗೊತ್ತು ಕಾಣೆನಯ್ಯ ಶ್ರೀರಂಗಪರಮಪಾತಕನಾಗಿ ಹರಿ ನಿಮ್ಮ ಸ್ಮರಣೆಯನುಮರೆದು ಪಾಮರನಾದೆ ಶ್ರೀರಂಗ1 ಮಂದ ದು-ರ್ಮತಿಗೆ ಮರುಳಾದೆನೊ ಶ್ರೀರಂಗಅತುಳ ಪ್ರಪಂಚಕ್ಕೆ ಹಿತನಾಗಿ ದುಷ್ಟ ಸಂ-ಗತಿಯ ನಾನರಿದಿದ್ದೆನೊ ಶ್ರೀರಂಗ 2 ಮಿತಿಮೀರಿ ಮನ ಹರಿ ಪದವ ನೆನೆಯದೆ ಪರಸತಿಯರಿಗಳುಪಿದೆನೊ ಶ್ರೀರಂಗಕೃತಬುದ್ಧಿಯೊಳು ಉನ್ನತನಾಗಿ ತಾನೆರೆದುಸ್ತುತಿ ಮಾಡಿಕೊಂಡಿದ್ದೆನೈ ಶ್ರೀರಂಗ 3 ಆಶಾಪಾಶಗಳೆಂಬ ದೇಹಕ್ಕೆ ಸಿಲ್ಕಿ ಸ-ದ್ವಾಸನೆಯನು ಬಿಟ್ಟೆನು ಶ್ರೀರಂಗಮೋಸದಿಂದಾತ್ಮಘಾತುಕನಾಗಿ ಅಪರಾಧವೇಸೊಂದು ಮಾಡಿದೆನಯ್ಯ ಶ್ರೀರಂಗ 4 ಈಸಲಾರದೆ ಹೊಳೆಯಲಿ ಕಾಸಲಾರದೆ ಒಲೆಯಲಿಸೋಸುತ್ತ ಕುಳಿತಿಹೆನು ಶ್ರೀರಂಗವಾಸುಕಿ ಶಯನ ನೆಲೆಯಾದಿಕೇಶವ ನಿಮ್ಮಾಶ್ರಿತದಾಸರ ದಾಸನಯ್ಯ ಶ್ರೀರಂಗ 5
--------------
ಕನಕದಾಸ
ಗಿI. ಲೋಕ ನೀತಿ ಅಮೃತ ಸುರಿದಂತೆ ಸಜ್ಜನರ ಸಂಗ ಅಮೃತ ಸುರಿದಂತೆ ಪ ಅಮೃತುಂಡಿತಿಹ್ಯ ಸಾಮ್ರಾಜ್ಯದಲಿ ಬಂದು ನಮ್ರತೆಯಿಂದಪಮೃತ್ಯು ಗೆಲಿಸುವಂಥ ಅ.ಪ ಮಾಯ ಮುಸುಕು ತೆಗೆಸಿ ನಿರುತ ಕಾಯಕರ್ಮ ಕೆಡಿಸಿ ಭಾವಶುದ್ಧಮಾಡಿ ಸಾವಧಾನವಿತ್ತು ಸಾವು ಹುಟ್ಟಳುಕಿಸಿ ಪಾವನವೆನಿಸುವ ದಿವ್ಯ 1 ಆಶಪಾಶಕಡಿದು ವಿಷಯ ದ್ವಾಸನೆಯನು ತೊಡೆದು ದೋಷರಾಶಿಗಳ ನಾಶಮಾಡಿ ಭವ ಘಾಸಿ ತಪ್ಪಿಸಿ ಮಹ ಶಾಶ್ವತಪದವೀವ2 ಅಡರಿಕೊಂಡು ಬರುವ ಸಂಸಾರ ತೊಡರು ಕಡಿವ ಪೊಡವಿತ್ರಯಂಗಳ ಒಡೆಯ ಶ್ರೀರಾಮನ ಅಡಿದೃಢವಿತ್ತು ಮುಕ್ತಿಗೊಡೆಯನೆನಿಸುವಂಥ 3
--------------
ರಾಮದಾಸರು
ದೀನನಾಥ ನೀನೆ ಪ್ರಭು ಧ್ಯಾನಮಾಳ್ಪೆ ಕಾಯೊ ಕರುಣಿ ಪ ಜಾಹ್ನವೀಜನಕ ಜನಾರ್ದನ ಜಾನಕೀಪ್ರಿಯ ಜಗದೊಡೆಯ ವೇಣುಗೋಪಾಲ ನಿನ್ನ ಧ್ಯಾನಾನಂದ ಪಾಲಿಸಭವ 1 ಕವಿದುಕೊಂಡು ದಹಿಸುತಿರುವ ತಾಪ ಭಯವ ತರಿದು ಸುವಿಚಾರ ಸುಜನಸಂಗ ಜವದಿ ನೀಡಿ ದಯದಿ ಪೊರೆ 2 ವಿಷಯದ್ವಾಸನೆ ಪರಿಹರಿಸಿ ಅಸಮಜ್ಞಾನ ಸೌಖ್ಯವಿತ್ತು ಒಸೆದು ನಿಮ್ಮ ವಿಮಲಚರಣ ಕುಸುಮದಾಸನೆನಿಸು ಶ್ರೀರಾಮ 3
--------------
ರಾಮದಾಸರು
ಬಯಸಿ ಕರೆದರೆ ಬರುವರೇನಯ್ಯಾ ನರಹರಿಯ ದಾಸರು ಬಯಸಿ ಕರೆದರೆ ಬರುವರೇನಯ್ಯಾ ಪ ಬಯಸಿಕರೆದರೆ ಬರುವರೇನೋ ಜಯಶ್ರೀ ಮುರಹರಿಯ ನಾಮ ಓದಿ ಕಳೆದುಕೊಂಡ ಶೂರರು ಅ.ಪ ಮಹ ವಿಷಯಲಂಪಟ ಬಿನುಗು ತ್ರಿಗುಣೆಂಬ್ಹೇಸಿಕೆಯ ಬಳಿದು ಸುಸ್ಸಂಗಶ್ರವಣ ಮನನದಿಂ ನಿಜಮೂಲ ಮರ್ಮರಿದು ಆಸನವ ಬಲಿದು ಲೇಖ್ಯದಮೇಲೆ ಘನ ಅನಂದದಿರುವರು 1 ಆರು ದ್ವಯಗಜ ಇಕ್ಕಡಿಯ ಗೈದು ಬಿಡದ್ಹಾರಿಬರುವ ಆರು ಹುಲಿಗಳ ತಾರ ಸೀಳೊಗೆದು ಬಲುಘೋರಬಡಿಪ ಆರುನಾಲ್ಕು ಶುನಕಗಳು ತುಳಿದು ಸತ್ಪಥವ ಪಿಡಿದು ಸಾರಾಸಾರ ಸುವಿಚಾರಪರರಾಗಿ ಮಾರನಯ್ಯನ - ಪಾರಮಹಿಮೆಯ ಅಮೃತ ಪೀರುವವರು 2 ತಾಸಿನ ಜಗಮಾಯವೆಂದರಿದು ಇದು ಸತ್ಯವಲ್ಲೆಂದು ಬೇಸರಿಲ್ಲದೆನುಭವದಿ ದಿನಗಳೆದು ಸುಚಿಂತದನುದಿನ ದಾಸದಾಸರ ಸಾಕ್ಷಿಗಳ ತಿಳಿದು ನಿಜಧ್ಯಾಸದ್ಹುಡಿಕ್ಹಿಡಿದು ನಾಶನಭವದ್ವಾಸನೆಯ ನೀಗಿ ಸಾಸಿರನಾಮದೊಡೆಯ ನಮ್ಮ ಶ್ರೀಶ ಶ್ರೀರಾಮಚರಣಕಮಲದಾಸರಾಗಿ ಸಂತೋಷದಿರುವರು 3
--------------
ರಾಮದಾಸರು
ಹರಿಯ ನೆನೆವಲ್ಲಿ ಮನವೆ ನೀ ಪ ಅರಿವು ತಿಳಿವಲ್ಲಿ ಹರಿದುಹೋಗುವ ದುರುಳ ಸಂಸಾರಕೆ ಮರುಳನಾಗಿ ನೀ ನರಕಕ್ಹೋಗುವಿಯಲ್ಲೋ ಅ.ಪ ಖೊಟ್ಟಿಗುಣಳಿವಲ್ಲಿ ಮನಸಿನ ಭ್ರಷ್ಟತ್ವ ಕಳಿವಲ್ಲಿ ಶಿಷ್ಟರಲ್ಲಿ ಮನವಿಟ್ಟು ಉಳಿಯದೆ ನೀ ಕಷ್ಟದೊಳಗೆ ಬಿದ್ದು ಕೆಟ್ಟು ಹೋಗುವಿಯಲ್ಲೋ 1 ಮರವೆ ಮಾಯವನ್ನು ಮರುಳೆ ನೀ ತರಿಯವಲ್ಲಿ ಇನ್ನು ಪರಿ ವಿಚಾರಿಸದೆ ದುರಿತದೊಳಗೆ ಬಿದ್ದು ಮರುಗುವಿಯಲ್ಲೋ 2 ಅಸೆ ನೀಗುವಲ್ಲಿ ಸಂಸಾರ ದ್ವಾಸನೆ ಕಡಿವಲ್ಲಿ ದಾಸರ ನಡೆನುಡಿ ಸೋಸಿಲಿಂ ತಿಳಿಯದೆ ನಾಶನಾಗುವಿ ಯಮಪಾಶದೊಳಗೆ ಬಿದ್ದು 3 ಸತಿಸುತರ ಮಾಯಮೋಹದಿ ಗತಿಸಿ ಪೋಗ್ವುದು ವಯ ಕೃತ್ರಿಮನೆ ಅತಿ ಮಂದಮತಿಯೊಳು ಬಿದ್ದು ಘನ ವ್ಯಥೆಯ ಬಡುವಿ ಮಹಗತಿಮೋಕ್ಷ ಪಡೆಯದೆ 4 ಮಂದಿ ಮಕ್ಕಳ್ಯಾರು ನಿನಗೀ ಬಂಧು ಬಳಗ ಯಾರು ಕುಂದುವ ಜಗಮಾಯದಂದ ತಿಳಿದು ಮಮ ತಂದೆ ಶ್ರೀರಾಮನ ಹೊಂದಿಕೊಳ್ಳವಲ್ಲಿ 5
--------------
ರಾಮದಾಸರು
ಪೂಜೆಯ ಮಾಡುವೆನೊ ಸದ್ಗುರುವಿನ |ಪೂಜೆಯ ಮಾಡುವೆನು ||ಮಾಜದೆ ತನು ಮನ ಧನವೆಲ್ಲ ಅರ್ಪಿಸಿ |ಪೂಜೆಯ ಮಾಡುವೆನುಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಗಣಪತಿ ಹರಿಹರರಾ ನಿಜಶಕ್ತಿ ದಿನಪತಿ ನಿಜಭಾಸವು |ತನುವೆಂಬ ಅಷ್ಟಕಂಬದ ಮನೆಯೊಳು ನಾಲ್ಕುಗುಣದ ಚೌಕಿಯನಿಡುವೆ1ವೃತ್ತಿಉದಾಸೀನಕೆ ನಿರ್ಗುಣವಾದಸುತ್ತ ರೇಖೆಯ ಬರೆದು | ಚಿತ್ತವೆಂಬಷ್ಟದಳದಕಮಲದೊಳಿಷ್ಟಮೂರ್ತಿಯ ಧ್ಯಾನಿಸುವೆ2ವೇದಾದಿ ಕಾರಣದಿ ಉಪನಿಷದಾದಿಅರ್ಥದಿ ಶಿರಸಾಮೇದಿನಿ ಮೊದಲಾದತತ್ತ್ವಭೂಷಣದಿಂದ ಆದಿನಾಥನ ಪೂಜೆಯ3ಪ್ರವೃತ್ತಿ ಸ್ಥಾನದಲ್ಲಿ ಫಣಿಯಲ್ಲಿ ನಿವೃತ್ತಿ ವಿಭೂತಿಯುನಿರ್ವಂಚನೆಯಾದ ಆಚಮನ ಕೊಡುವೆನುಸರ್ವಾತ್ಮ ಗುರುಮೂರ್ತಿಗೆ4ಭಕ್ತಿಯ ಜಲದಿಂದಲಿ ಸದ್ಗುರುವಿನನಿತ್ಯಚರಣತೊಳೆದು |ಮುಕ್ತಿಯ ಪಾವನ ಮಾಡುವ ಗುರುಪಾದ ತೀರ್ಥವಂದಿಸಿಕೊಂಬುವೆ5ಸದ್ವಾಸನೆ ಗಂಧವ ಶ್ರೀಗುರುವಿಗೆ ಚಿದ್ ವೃತ್ತಿಯಕ್ಷತೆಯು |ಸದ್ಭಾವದಿಂದಲಿ ತೋರುವ ಪರಿಮಳಮದ್ಗುರುವಿನ ತನುವಿಗೆ6ಮೂರು ಮಾತ್ರೆಯ ಹೊಸೆದು | ನಿರ್ಗುಣವಾದ ಧಾರವಶಿವಸೂತ್ರಕ್ಕೆ | ತೋರುವ ವಿಶ್ವಚರಾಚರ ಪುಷ್ಪದ ಹಾರಕೊರಳಿಗೆ ಹಾಕುವೆ7ನಾನೆಂಬ ಧೂಪ ಸುಟ್ಟು ಸದ್ಗುರುವಿಗೆ ಜ್ಞಾನದೇಕಾರತಿಯು |ಬೋನ ನೈವೇದ್ಯ ಜೀವದ ಭಾವವರ್ಪಿಸಿ ಜ್ಞಾನಕರೋದ್ವರ್ತಿಯ8ವಾಚ್ಯಾರ್ಥ ತಂಬೂಲವಾ ಸದ್ಗುರುವಿಗೆ |ಲಕ್ಷ್ಯಾರ್ಥವೆ ದಕ್ಷಿಣಾ ಲಕ್ಷ್ಯಾತೀತಗೆ ಮಂಗಳಾರತಿಬೆಳಗುವೆಅಕ್ಷಯಮಂತ್ರಪುಷ್ಪ9ಸಂತ ಸನಕಾದಿಕರೂ ಸುರರೆಲ್ಲ ಅಂತರಿಕ್ಷದಿ ಬಂದರು |ತಂತಿ ಮದ್ದಳಿ ತಾಳ ಗೀತ ಶಂಖದ ವಾದ್ಯತಿಂತಿಣಿಯಲಿ ಕುಣಿಯುತ10ಅದ್ವೈತಸಾಷ್ಟಾಂಗವಾ ಸದ್ಗುರುವಿಗೆ | ಚಿದ್ಬೋಧದಿಎರಗಲು ಶುದ್ಧಿ ಸಿದ್ಧಿಗಳೆಂಬ ಚರ್ಯವ ತೋರುವಮುದ್ರೆ ಶ್ರೀ ಗುರುಗಿಟ್ಟೆನು11
--------------
ಜಕ್ಕಪ್ಪಯ್ಯನವರು