(ಉಡುಪಿಯ ಪ್ರಾಣದೇವರು)
ಏನೆಂದು ಸ್ತುತಿಸಲಿ ಪ್ರಾಣನಾಯಕನಾ
ಕಾಣುವಂದದಿ ಮಹಾ ಮಹಿಮೆ ತೋರುವನಾ ಪ.
ಕಡು ಪಾಪಿ ಕಲಿಯನ್ನು ಕಾಲಿಂದ ಮೆಟ್ಟಿ
ಬಡಜನರಲ್ಲಿಟ್ಟು ಕರುಣಾದೃಷ್ಟಿ
ಉಡುಪಿ ಕೃಷ್ಣನ ಮುಂದೆ ವಿಪ್ಪ ಸಂತುಷ್ಟಿಯ
ಬಡಿಸುತ ನಿಂತಿರುವನು ಜಗಜಟ್ಟಿ 1
ಪ್ರಥಮ ರೂಪನಾಗಿ ಪರಿಜನರಲ್ಲಿ
ದ್ವಿತೀಯ ರೂಪದಿಂದ ಪಾಕಕರ್ತರಲಿ
ರತಿಪತಿಪಿತನ ಪೂಜಾವಿಧಿ ನಡೆಸಲು
ಯತಿ ಜನರೊಳು ಪೂರ್ಣಮತಿಯಾಗಿ ನಿಲುವನ 2
ಮೂರೊಂದು ಪುರುಷಾರ್ಥ ದಯೆಮಾಳ್ಪೆನೆಂದು
ದ್ವಾರಾವತಿಯಿಂದ ತಾನಿಲ್ಲಿ ಬಂದು
ಸೇರಿದ ಸಿರಿವರ ವೆಂಕಟನಾಥನ
ಕಾರುಣ್ಯಂಸ ಪಾತ್ರ ಕರುಣಾಳು ರಾಜನ 3