ಶ್ರೀ ಕೃಷ್ಣನಾ ಚರಣಾ ನಂಬಿ ಭಜಿಸುವುದು ಬಲು ಲೇಸು ಪ
ಭಾವನೆ ದೇವಕಿ ಉದರದಿ ಬಂದಾ|
ದೇವ ಹೃದಯ ಗೋಕುಲದಲಿ ಬೆಳೆದಾ|
ಅವಿದ್ಯ ಪೂತನಿಯನು ಕೊಂದಾ 1
ಭವರೂಪದ ಸಗಟಾಸೂರನೊದೆದಾ|
ಅವಗುಣಿಬಕ ಕೇಶಾದ್ಯರ ತರಿದಾ|
ಅವಿವೇಕಿ ಕಾಳಿಂಗನ ತುಳಿದಾ 2
ಭಕ್ತಿಯ ಗೋರಸ ಕಳವಿಲಿ ಸುರಿದಾ|
ಮುಕ್ತಾಂಗದ ಗೋಪೀಜನ ನೆರೆದಾ|
ಸಕ್ತಿಯ ಗೋವರೋಳು ನಲಿದಾ3
ಭ್ರಾಂತಿಯ ಹಮ್ಮಿನ ಕಂಸನ ಬಡಿದಾ|
ಸ್ವಾಂತ ಸುಖ ದ್ವಾರಕೆಯಲಿ ನಿಂದಾ|
ಶಾಂತಿಯ ರುಕ್ಮಿಣಿ ಕೈವಿಡಿದಾ 4
ತಂದೆ ಮಹಿಪತಿ ಗುರುವಾದಾ
ಕಂದುದ್ಧವನನು ತೋರಿಸಿ ಹೊರೆದಾ|
ಛಂದದಿ ಪಾದುಕವಿತ್ತನು ಪದದಾ 5