ಬರಿದೆ ಚಿಂತಿಸಿ ನೀನು ಬಳಲುವದೇಕೆ ಮನವೆ
ಹರಿನಾಮ ಸ್ಮರಣೆಯು ಹರುಷದಲಿ
ಸ್ಮರಿಸಿ ಧರ್ಮಾರ್ಥ ಕಾಮ ವರಮೋಕ್ಷ ಫಲಗಳು
ಕರುಣಾ ಕಟಾಕ್ಷದಿಂದ ಶ್ರೀಧರ ನಿರುತ ಕೊಡುವ ಪ
ಅರಿಷಡ್ವರ್ಗಕೆ ಸಿಲ್ಕಿ ಅರಿಯದೆ ಭವಸಾಗರದೊಳು
ಮುಣುಗಿ ಮೈಮರೆದು ಶ್ರೀನರಹರಿ
ಶರಣರ ಪೊರೆವ ಬಿರುದುಳ್ಳಂಥ
ಗರುಡವಾಹನ ಸಿರಿಯರಸ ಪರಮಾತ್ಮನ
ಕಮಲ ಅನುದಿನ 1
ನೆಚ್ಚಿ ನೀ ಮಂದಾಂಧನಾಗಿ
ಅಂದು ಪ್ರಹ್ಲಾದ ಪರಮಾನಂದದಿ ಕರೆಯಲು
ದ್ವಂದ್ವರೂಪತಾಳಿ ಬಂದು ಕಾಯಿದಾ
ವೃಂದಾರ ಕೇಂದ್ರನುತ ಮಂದರಧರ ಮುಚುಕುಂದ ವರದನ್ನ
ಸಲಹೆಂದು ಮೊರೆಯ ಹೋಗದೆ 2
ನರಜನ್ಮ ತಾಳಿ ಸುಖಸ್ಥಿರ ಮಾರ್ಗ ಕಾಣದೆ
ಸತ್ಪುರುಷರ ಜರಿದು ಗರ್ವ ಭರಿತನಾಗಿ
ಮುರನರಕಾಂತಕ ಮುಕ್ತಿದಾಯಕ ಶುಭಕರ
ಸ್ಮರಜನಕ ಶ್ರೀಧರ ಮಾಧವ
ತ್ವರದಿ ರಕ್ಷಿಸೋಯನ್ನ ಹರಿಸರ್ವೋತ್ತಮ ನೆನದೆ 3