ಜಯ ಜಯ ಪೂರ್ಣಾನಂದ ಜಯ ಜಯ ಗೋಪಿಯ ಕಂದ
ಜಯ ಜಯ ವೆಂಕಟ ರಮಣ ರಕ್ಷಿಸು ಕೃಪೆಯಿಂದ ಪ.
ಕೃಷ್ಣ ಕೈವಲ್ಯದ ಕರುಣಾ
ದೃಷ್ಟಿಯಿಂದಲಿ ನೋಡು ಶರಣಾ
ಅಷ್ಟಮದೈಶ್ವರ್ಯ ಕಾರಣ
ಕೌಸ್ತುಭಾಭರಣ 1
ನಿತ್ಯ ಮಂಗಳರೂಪ ನಿರ್ಮಲ
ಚಿತ್ತ ಚಿದಾನಂದ ಮೂರ್ತಿ
ಭೃತ್ಯ ವರ್ಗದೊಳೆನ್ನ ಗ್ರಹಿಸೆ
ನಿನಗೆ ಬಹು ಕೀರ್ತಿ 2
ಇನ್ನೊಂದು ದೈವವನರಿಯೆ
ನಿನ್ನ ಚರಣ ಪದ್ಮ ಮರೆಯೆ
ಪನ್ನಗಾಚಲವಾಸ
ಪರಿಪಾಲಿಸು ಬೇಗ ದೊರೆಯೆ 3