ಒಟ್ಟು 54 ಕಡೆಗಳಲ್ಲಿ , 30 ದಾಸರು , 52 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಕ್ಚ್ಮೀದೇವಿ ದೇವೀ ಕಮಲಾಕ್ಷೀ ಭಜೇಹಂ ಸದಾತ್ವಂ ಅಂಬಾ ಪ ಹೃದಯ ಸದನೇ ಮಲ್ಲಿಕಾದಿ ಪುಷ್ಪವದನೇ | ಫುಲ್ಲಲೋಚನೇ | ಸುನಯನೇ | ಬಲ್ಲಿದ ಭಕ್ತಿ ಸಮುದಾಯನೇ | ಕೊಲ್ಲಾಪುರ, ಅವಧಾರಣೇ ಆಹ್ಲಾದಕರಸುವದನೇ, ಕೊಲ್ಲಾಪುರವಾಸಿನೇ | ಶ್ರೀ ಲಕ್ಷ್ಮಿದೇವಿ 1 ಅಕ್ಷಯ ಅಕ್ಷಯ ಫಲ ಪ್ರದಾಯಿನೇ | ರಕ್ಷಮಾಂ ಲಕ್ಷ್ಮಿದೇವಿ 2 ನರಸಿಂಹ ವಿಠಲ ಪ್ರೀಯೇ ನಾರೀಮಣೀ ಹೃದಯ ಸೇವೆ ಹಾರ ದೇಹಾಲಂಕಾರಿಯೇ | ಮಾರಜನನಿ | ಜಯ ಪುರವಾಸಿನೇ ಲಕ್ಷ್ಮೀದೇವಿಯೇ 3
--------------
ಓರಬಾಯಿ ಲಕ್ಷ್ಮೀದೇವಮ್ಮ
ಅನುದಿನ ಘನ ತನ್ನೊಳಗೆ ತುಂಬಿಹದು ನಿನ್ನೊಳಗೆ ದ್ರುವ ಓದಿ ಕೇಳಿ ಮರುಳಾದ್ಯೊ ಮನವೆ ಸಾಧಿಸಲಿಲ್ಲ ಸ್ವರೂಪ ವೇದವೋದಿ ವಿವದಕೆ ನೀನು ಸಾಧಿಸಿದೊ ಬಲುಕೋಪ ಭೇದವಿಡಿದು ಬಾಧೆಗೆ ಗುರಿಯಾಗಿ ಆದಿ ನಿನಗೆ ನೀ ಪಾಪ ಘನಗುರು ಕುಲದೀಪ 1 ದೇಹದ ಒಳಗಿನ ದೇವರ ತಿಳಿಯದೆ ಬಾಹ್ಯ ರಂಜನಗೆದೆರದ್ಯೊ ಸೋಹ್ಯವರಿಯದೆ ಶ್ರೀಹರಿ ಭಕ್ತಿಯ ಅಹಂಭಾವದಿ ಮೆರೆದ್ಯೊ ದೇಹಾಭಿಮಾನದಲಿ ಸೋಹಂಭಾವದ ವಾರ್ತೆಯ ಜರಿದ್ಯೊ ಸವಿ ಸುಖವನು ಮರೆದ್ಯೊ 2 ಕನಸುದೋರುವ ಜನ ಪ್ರಪಂಚವ ನೆನೆಸಿ ಬಯಸುವದ್ಯಾಕೆ ಖೂನ ತಿಳಿಯದೆ ಸತ್ತು ಹುಟ್ಟಿ ಜನಿಸಿ ಬಾಹುದು ಯಾಕೆÉ ಹೀನಯೋನಿಯ ಮುಖದಲಿ ಬೀಳುವ ದಣುವಿಕಿ ನಿನಗಿದು ಬೇಕೆ ಅನುದಿನ ನಿನಗಿದು ತಾ ಸಾಕೆ 3 ಹಾದಿತಪ್ಪಿ ನಡೆವದು ವೇದಾಂತದ ಇದು ನಿನಗುಚಿತೆ ಸಾಧು ಸಜ್ಜನರನುಸರಿಸದೆ ತಾ ಇಹುದೊಂದು ಸ್ವಹಿತೆ ಗಾದಿಯ ಮಾತೆ ಬಂದುದು ಪುರುಷಾರ್ಥೆ 4 ಶರಣ್ಹೊಕ್ಕರ ಕರುಣಿಸಿ ನೋಡುವ ಎರಡಿಲ್ಲದೆ ಗುರುನಾಥ ಕರವಿಡಿದು ಪಾರನೆ ದಾಟಿಸುವಾ ಸುರಮುನಿಜನ ಸೇವಿತ ತರಣೋಪಾಯದ ಸಾಧನದೋರುವ ತರಳ ಮಹಿಪತಿ ದಾತ ಮನವೆ ನಿನಗಿದು ಸುಪಥ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅರಿ ಬೇಗನೇ ಪರಮಾತ್ಮ ನೀನೈ ಪರತತ್ವನಾ ತ್ವರಿತದಲಿ ತಿಳಿಯೊ ಪ ಮೂರು ತಾಣಗಳ ಮೀರಿ ಗೋಚರಿಪ ತೋರುತಿಹ ಈ ದೇಹಾದಿಗಳಿಗೆ ಬೇರೆಯಾಗಿಪುದೆ ಪರಮಪದವು ಧೀರ ನೀನರಿಯೊ ಅದೆ ನಾನು ಎಂದು 1 ಕೋಶಪಂಚಕವ ಲೇಸಾಗಿ ಕಳೆದು ವಾಸನೆಯ ಪಾಶವನೆ ಹರಿದೊಗೆದು ಕ್ಲೇಶ ಪಡುವದನು ತ್ಯಜಿಸಿ ಮುದದಿ ನಾಶರಹಿತಾದ ಪದವು ತಾನೆಂದು 2 ಜನನಮರಣಗಳಿಗಾಚೆಗಿರುವಂಥ ಮನವಾಣಿಗಳಿಗೆ ನಿಲುಕದಿರುವಂಥ ಘನಪದವು ಇದುವೆ ಪರಮಾತ್ಮನೈ ಅನುನಯದಿ ಪೇಳ್ವ ಗುರುಶಂಕರಾರ್ಯ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಆತ್ಮಶೋಧನೆ ಪ್ರಧಾನ ಮಾಡೂ ಇಭಗಿರಿವಾಸ ಪ. ಮಂಗಳ ಮಹಿಮನೇ ರಂಗನಾಥನೆ ಕೃಷ್ಣಾ ತುಂಗ ವಿಕ್ರಮ ನರಸಿಂಗ ಲಕ್ಷ್ಮೀಕಾಂತ 1 ಮೃತ್ಯು ಬೆನ್ಹತ್ತಿರೆ ಕತ್ತರಿಸುವ ಮಹ ಶಕ್ತ ನೀನಿರುತಿರೆ ಮತ್ತಾರ ಬೇಡಲಿ 2 ನಿನ್ನ ಕಿಂಕರಳಾಗಿ ನಿನ್ನ ಸೇವೆಯ ಮಾಳ್ಪ ಉನ್ನಂತ ಅಭಿಲಾಷೆಯನ್ನು ಸಲ್ಲಿಸು ದೇವ 3 ಹಿಂದಿನ ಎಡರುಗಳೊಂದೊಂದರಲಿ ಕಾಯ್ದೆ ಇಂದು ಮುಂದೂ ಕಾಯೋ ಮಂದಹಾಸನೆ ಸ್ವಾಮಿ 4 ಹರಿಗುರು ಕಾರ್ಯಕಲ್ಲವೆ ಎನ್ನ ಈ ದೇಹಾ ಸಿರಿವರ ಗೋಪಾಲಕೃಷ್ಣವಿಠ್ಠಲ ಸ್ವಾಮಿ 5
--------------
ಅಂಬಾಬಾಯಿ
ಆರು ಹಿತವರು ಎಂದು ನಂಬಬೇಡ ಪ ಆರಿಗಾರಿಲ್ಲ ಆಪತ್ತು ಬಂದೊದಗಿದಡೆ ಅ ಜನಕ ಹಿತದವನೆಂದು ನಂಬಬಹುದೇ ಹಿಂದೆತನಯ ಪ್ರಹ್ಲಾದನಿಗೆ ಪಿತ ಮುನಿದನುಜನನಿ ರಕ್ಷಿಪಳೆಂಬೆನೇ ತಿಳಿತಿಳಿದು ಕುಂತಿತನಯ ರಾಧೇಯನಿಗೆ ಎರಡೆಣಿಸಿದ ಮೇಲೆ 1 ಅನುಜ ಕೊಲಿಸಿದ ಮೇಲೆ2 ತನಗೆ ದೇಹಾನುಬಂಧಿಗಳೆ ಬಂಧುಗಳೆಂದುಮನದಿ ನಿಚ್ಚಳವಾಗಿ ನಂಬಬೇಡಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನಅನುದಿನದಿ ನಂಬಿದವಗಿಹಪರದಿ ಸುಖವು 3
--------------
ಕನಕದಾಸ
ಇದೇ ಜ್ಞಾನವೊ ಇದೇ ಮಾನವೊ ಧ್ರುವ ಕೇಳಿ ಕೇಳಿ ಕೇಳಿ ಕೇಳುವ ಮಾತಿದು ಕೇಳಿದಂತೆ ನೀವು ಬಾಳಿ ಬಾಳಿದ ಮ್ಯಾಲಿನ್ನು ಹೇಳ್ಯಾಡುವ ಮಾತಿನ ಮೊಳೆ ಅಂಕುರನೆ ಸೀಳಿ ಒಳಿತಾಗಿದೆ ಪೂರ್ಣ ಕೇಳಿ ಕಳೆದ ದುಸ್ಸಂಗವು ಕೇಳುವನಾದರೆ ತಿಳಿಸಿಕೊಡುವನು ಗುರು ಹೇಳಿ 1 ಸೂಟಿ ತಿಳಿದು ನಿಜಧಾಟಿಗೆ ಬಂದರೆ ಕೋಟಿಗವನೇ ಒಬ್ಬ ಙÁ್ಞನಿ ನೀಟಾಗಿಹ್ಯ ಘನಕೂಟವು ತಿಳಿದರೆ ನೋಟದಲ್ಲವ ಬಲು ತ್ರಾಣಿ ನೋಟದಲ್ಲಿಹುದು ತ್ರಾಟಿವ ಬಲ್ಲನೆ ಬೂಟಕ ದೇಹಾಭಿಮಾನಿ ನಾಟಿ ಮನದೊಳು ಮಾಟಿಸಿಕೊಂಬುದು ಘಟಿಸಿತಿದೆ ಸಾಧನ 2 ನೆನೆಯಲಿಕ್ಕೆ ಮನ ಘನಬೆರದಾಡುವ ಖೂನಾಗುವದಿದೆ ರಾಜಯೋಗ ಅನುಭವಿಗಳಿಗೆ ಅನುಕೂಲವಾಗಿನ್ನು ಅನುವಾಗಿದೋರುದು ಬ್ಯಾಗ ಭಾನುಕೋಟಿತೇಜ ತಾನೆತಾನಾದನು ಎನ್ನ ಮನದೊಳು ಈಗ ದೀನ ಮಹಿಪತಿಗೆ ಸನಾಥಮಾಡುವ ಸ್ವಾನುಭವದ ಬ್ರಹ್ಮಭೋಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ಭಕ್ತವರ್ಯನ ಲಕ್ಷಣ ಪಾವನವಿದು ಕಾಣಾ ಪರಮಾತ್ಮನ ರೂಪ ಚರಾಚರದ ಜಗದಲ್ಲಿ 1 ಇದೇ ಪರಿಯಲಿ ಸ್ವರೂಪದಲ್ಲಿ ಜಗವೆಲ್ಲಾ ಕಾಂಬಾ ಆತ್ಮರೂಪ ಭಗವಂತನೆ ಸತ್ಯ ಮಿಕ್ಕವೆಲ್ಲಾ ಮೀಥ್ಯ ಲಕ್ಷ್ಯವೆಲ್ಲಾ ತನ್ನೋಳ ತಿರುಗಿಸಿ ಆನಂದವ ಪಡೆವ ಕಾಣುವನಿವ ಪರಮಾತ್ಮ ಸರ್ವಾತ್ಮ 2 ಸಂಸಾರದಲಿ ವಿಷಯದ ಭೋಗ ಪ್ರಾರಬುಧದಲಿಪಡೆ ಮಾಯೆಮಾತ್ರವಿದು ಎನ್ನುತ ತಿಳಿವಾ 3 ನಿಜಾಸಕ್ತಿ ಪಡೆಯದಲೇ ನಿರುತ ತನ್ನಯ ಹೃದಯಾಂತ ಪರಮಾತ್ಮನ ನೆನೆವ ದೇಹಾದಿಗಳ ಈ ಪರಿಣಾಮಗಳಿಗೇ ಮೋಹಗೊಳಲಾರ ಕಾಮನೆಯಾ ಬೀಜಾಂಕುರವೆಂದೂ ನಾಟದು ಇವನಲ್ಲೀ ಕಾಣುವನಿವ ಪರಮಾತ್ಮ ಸರ್ವಾತ್ಮ ಪ್ರಭೂಶಂಕರನ ರೂಪಾ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಇನಿತೆಂದು ಶಾಸ್ತ್ರ ಪೇಳುವವು ಪ ಪುನಹ ಪುನಹ ಭಗವತ್ಪ್ರಾಪ್ತಿ ಬೇಕೆಂಬುವರಿಗೆ ಅ.ಪ. ಅನುಬಂಧಿಗಳಲಿ ಮಮತೆಯನೆ ಬಿಡು ವಿಷಯ ವಾ ಸನೆಯನೀಡಾಡು ಸುಜ್ಞಾನ ಭಕ್ತಿಯ ಬೇಡು ಮನದಲ್ಲಿ ಹರಿಯ ಮೂರ್ತಿಯನೆ ನೆರೆ ನೋಡು ಸುಜ್ಞ ರನು ಕೊಂಡಾಡು ಅಜ್ಞಾನಿಗಳ ಸಹವಾಸ ಸುಡು ವನಜನಾಭನ ಪೂಜೆ ಮಾಡು ಪ್ರತಿ ಕ್ಷಣ ಬಿಡದೆ ಭಗವದ್ಗುಣಗಳ ಕೊಂಡಾಡು 1 ಪರಮಾಣು ಮೊದಲ್ಗೊಂಡು ವ್ಯಕ್ತ ತತ್ತ್ವದೊಳ ಹೊರಗೆ ವ್ಯಾಪಕನಾಗಿ ತದ್ರೂಪ ನಾಮದಿಂ ಕರೆಸುತಲಿ ತದ್ವಿಕಾರಗಳಿಲ್ಲದಲೆ ಸೃಷ್ಟಿ ಪರಿಪಾಲನೆ ಲಯಗಳನೆ ಮಾಡಿ ಮೋದಿಸುತಾ ಪರಮಾತ್ಮನೊಬ್ಬನಿಹನೆಂದು ಹರಿಗೆ ಮರೆಯದಲೆ ಮಹಿಮೆಗಳ ಪೊಗುಳುತಿರು ಮನುಜಾ 2 ಹರಿಭಕ್ತರಿದ್ದೆಡೆಗೆ ಹರಿದು ಹೋಗಲಿ ಬೇಕು ತಿರಿಯ ಕ್ಪುಂಡ್ರಗಳ ನಿಂದಿಸಬೇಕು ಹರಿಯ ನಾಮತ್ರಯಾಂಕಿತರಿಗೆರಗಲು ಬೇಕು ಗುರು ಹಿರಿಯರ ವಗುಣಗಳೆಣಿಸದಿರ ಬೇಕು ಮ ತ್ಸರವ ಬಿಡಬೇಕು ಭಕ್ತರಲಿ ಹೀಗೆ ಒರೆದೊರೆದು ಪೇಳುವರು ಬುಧರು ನಿತ್ಯದಲಿ 3 ನಿತ್ಯ ನೈಮಿತ್ತಿಕ ಸುಕರ್ಮ ಮಾಡಲು ಬೇಕು ಕೃತ್ಯವಲ್ಲದೆ ಲೋಕವಾರ್ತೆಗಳ ಬಿಡಬೇಕು ಚಿತ್ತದಲಿ ಹರಿಪಾದ ಚಿಂತಿಸುತಲಿರಬೇಕು ವಿತ್ತದೇಹಾಗಾರ ಭಗವಂತನದೆಂದು ದೇ ಪರಿಯಂತ ಮಾಳ್ಪ ಕರ್ಮ ಸತ್ಯಸಂಕಲ್ಪಕಿವು ಪೂಜೆ ಎನಬೇಕು 4 ಸೀತೋಷ್ಣ ಸುಖ ದುಃಖ ಮಾನಾಪಮಾನ ಜಯ ಭೀತಿ ನಿರ್ಭೀತಿ ಅಪಜಯ ಜ್ವರಾಪಸ್ಮಾರ ಭೂತ ಬಾಲ ಗ್ರಹ ಮೃಗಸರ್ಪ ನೃಪ ಚೋರ ಯಾತನೆಗೆ ಭಯಪಡದೆ ಸರ್ವತ್ರದಲಿ ಜಗ ನ್ನಾಥವಿಠ್ಠಲನ ಸ್ಮರಿಸುತಿರು ಮಹಾ ಪಾತಕವ ಪರಿಹರಿಸಿ ಪೊರೆವ ದಯದಿಂದಾ 5
--------------
ಜಗನ್ನಾಥದಾಸರು
ಇನ್ನಾರೆ ತಿಳಿದು ನೋಡು ಮನರಾಯಾ | ನಿನ್ನ ಕಣ್ಣದೆರೆದು ಸ್ವ ಹಿತದ ಉಪಾಯಾ ಪ ನಾನಾ ಜನ್ಮದಲ್ಲಿ ಬಂದು ಧರೆಯಲ್ಲಿ ಸುಖ | ವೇನು ಪಡೆದಿ ಹರಿಯ ಸ್ಮರಣೆ ಮರೆದಿಲ್ಲಿ 1 ಶರಗೊಡ್ಡಿ ಬೇಡಿಕೊಂಬೆ ನಾನೀಗಾ | ಸ್ಥಿರವಾದರಿಲ್ಲ ದೂರ ಶಿವಯೋಗಾ 2 ಇಂದು ನಾಳೆವೆನ್ನಬೇಡಿ ನಿಶ್ಚಯಾ ನಿನಗ | ಮುಂದ ಮತ್ತ ದೊರೆಯದಿದ ನರದೇಹಾ 3 ತಂದೆ ಮಹಿಪತಿಸ್ವಾಮಿ ದಯದಿಂದ | ನಂದವ ಪಡೆದು ಗೆಲಿಯೋ ಭವದಿಂದಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಈ ದೇಹಾಭಿಮಾನವೇ ಸಂಸಾರಮೂಲವಯ್ಯ ಕೇಳೀಗಲೇ ಜ್ಞಾನದಿಂದಾ ನೀ ದೂಡನಿನ್ನಭಿಮಾನ ವಿಷಯಾಭಿಲÁಷಾ ಮನದಲ್ಲಿ ಮೂಡಿ ಜೀವಂಗೆ ಗುಣದಲ್ಲಿ ಅನುರಾಗ ಕೂಡಿ ಇದೇ ಭೋಗನೇ ಮುಂದೆ ಸುಖದುಃಖವಾಗಿ ಜನುಮಕ್ಕೆ ಮೂಲಾದಿದೇ ವಾಸನಾಳಿ ಇದೇ ವಾಸನಾಳಿ ಇದೇ ಬಾಳುವೆ ಇದೇ ಬಾಳುನೆ ಇದೇ ಬಾಳು ದೇಹಾಭಿಮಾನಾಸ್ಪದಾ ಮೂಲ ಕೇಳಿಗಲೇ ಜ್ಞಾನದಿಂದ 1 ಮನದೇಹಗಳು ನಿನ್ನ ನಿಜರೂಪವಲ್ಲ ಇವುತೋರಿ ಬಯಲಾಗುತಿಹವಾಗಿವೆಲ್ಲ ನಿಜರೂಪವಲ್ಲ ಇದರಾಚೆಗಿಹ ಶುದ್ಧ ಚೈತನ್ಯ ನಾನೇ ಅದೇನಾನಿಹೆ ಅದೇ ನಾನಿಹೆ ಅದೇ ಸತ್ಯನೆಂದಾಗ ಹರಿವುದು ದೇಹಾಭಿಮಾನ ನೋಡುನೀ ಜ್ಞಾನದಿಂದ 2 ಈ ರೀತಿ ಸುವಿಚಾರವನು ಮಾಡಿಕÉೂಂಡು ನಿಜನನ್ನು ಕಂಡು ಸ್ವರೂಪಾತ್ಮನೋಳು ನಾನು ನೆಲೆ ನಿಂತು ಕೊಂಡು ಇದೆಲ್ಲ ಈ ಸಂಸಾರ ಕನಸೆಂದು ಕಂಡು ಪರಮಾತ್ಮನನೆ ವೃತ್ತಿಯೊಳು ತುಂಬಿಕೊಡು ಆನಂದ ಉಂಡು ಬಿಡೋ ಚಿಂತೆಯ ಬಿಡೋ ಚಿಂತೆಯಾ ಬಿಡೋ ಬಾಳ ಚಿಂತೆಯಾ ಶ್ರೀ ಶಂಕರಾಚಾರ್ಯರಿ ಬÉೂೀಧದ ಜ್ಞಾನದಿಂದ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಎಷ್ಟು ಪೊಗಳಿದರೇನೀ ಭ್ರಷ್ಟಮಾನವರು ಪಾದ ಪ ಸ್ವಾಭಿಮಾನ ನೀಗಿ ದೇಹಾಭಿಮಾನ ತೊರೆಯದೆ ಪ್ರಭುನಿನ್ನ ನಿಜಲೀಲೆ ಸೊಬಗು ತಿಳಿಯುವುದೆ 1 ಭ್ರಷ್ಟ ಭ್ರಾಂತಿಗಳಳಿದು ದುಷ್ಟನಡೆ ನೀಗದೆ ಶಿಷ್ಟರೊಡೆಯ ನಿನ್ನ ನಿಜಗುಟ್ಟು ತಿಳಿಯುವುದೆ 2 ವಿಷಯವಾಸನೆ ನೀಗಿ ಹಸನುಮಾಡದೆ ಮನವ ಶ್ರೀಶ ಶ್ರೀರಾಮ ನಿನ್ನ ದಾಸತ್ವಬಹುದೆ3
--------------
ರಾಮದಾಸರು
ಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ ಚರಣಾಬ್ಜದಲಿ ಭಕುತಿ ವಿಷಯದಿ ವಿರಕುತಿ ಪ ಬಿಂಬನೇ ಸರ್ವ ಪ್ರಯೋಜನವ ಮಾಡಿ ಪ್ರತಿ ಬಿಂಬರಿಗೆ ತತ್ಫಲಗಳೀವ ಕಾವ ಬಿಂಬನೆ ಸ್ವತಂತ್ರ ಪ್ರತಿಬಿಂಬಾ ಸ್ವತಂತ್ರತಮ ನೆಂಬ ಸುಜ್ಞಾನ ಪೂರ್ವಕ ನಿನ್ನ ಭಜಿಪ ಸುಖ 1 ಕಾರ್ಯ ಕಾರಣ ಅಂಶಿ ಅಂಶಾವತಾರ ಅಂ ತರ್ಯಾಮಿ ವ್ಯಾಪ್ಯ ವ್ಯಾಪಕ ಪ್ರೇರಕ ಪ್ರೇರ್ಯ ಬಾಧಕ ಬಾಧ್ಯ ಪೋಷ್ಯ ಪೋಷಕ ರೂಪ ಆರ್ಯರಿಂದರಿತು ಅನುದಿನದಿ ಸುಖಿಸುವ ಭಾಗ್ಯ 2 ತಾರತಮ್ಯದ ಜ್ಞಾನ ದುರ್ವಿಷಯಗಳಲಿ ಸ ದ್ವೈರಾಗ್ಯ ಹರಿದ್ವೇಷಿಗಳಲಿ ದ್ವೇಷಾ ಸೂರಿಗಳ ಸಂಗ ಗುಣರೂಪಕ್ರಿಯೆಗಳನು ಸುವಿ ನಿತ್ಯ ಅನುಮೋದ ಬಡುವಂತೆ 3 ಮಿಂದೋದಕಗಳೆಲ್ಲ ಮಜ್ಜನವು ದೇಹಾನು ಬಂಧಿ ಜನರೆಲ್ಲ ನಿನ್ನ ಪರಿವಾರವು ನಿಂದ್ಯ ಕರ್ಮಗಳೆಲ್ಲ ಪಾದುಕಗಳೆಂಬ ಅನು ಸಂಧಾನ ಮನಕೆ ನಿತ್ಯದಲಿ ಬರುವಂತೆ4 ಚೇತನಾಚೇತನಗಳೆರಡು ಪ್ರತಿಮೆಗಳು ಸಂ ಪ್ರೀತಿಯಲಿ ಸುರಕ್ಷಿಸುವುದು ಪೂಜೆ ಈ ತನುವೆ ಸದನವೆಂದರಿತು ನಿತ್ಯದಿ ಜಗ ನ್ನಾಥ ವಿಠ್ಠಲನೆಂಬ ವಿಷಯವೇ ಮುಖವೆಂದು 5
--------------
ಜಗನ್ನಾಥದಾಸರು
ಕಲಿಮುಖ್ಯ ದೈತ್ಯರನು ಸ್ಮರಿಸಿ ಬಿಡದೆ ಕಲುಷವರ್ಜಿತ ಭಾಗವತರು ಮರೆಯದಲೆ ಪ ಮಲಮೂತ್ರಗಳ ವಿಸರ್ಜನೆ ಗೈವಾಗ ಎಂ ಜಲ ಕೈ ಬಾಯ್ದೊಳೆದು ಉಗುಳುವಾಗ ಹುಳಿ ಬೀಜ ಕವಡೆ ಪಗಡೆಗಳಾಡುವಾಗ ಮ ಕ್ಕಳನಾಡಿಸುತಲಿ ವಿಸ್ಮರಣೆಯಿಂದಿರುವಾಗ 1 ಸಂಧಿಕಾಲದಲಿ ಸತಿಯೊಡನೆ ಪವಡಿಸಿದಾಗ ನಿಂದ್ಯ ಕರ್ಮಗಳನಾಚರಿಸುವಾಗ ತಂದೆ ತಾಯಿಗಳ ದಿನ ಮರೆತು ಒಟ್ಟಾಗ ಕ ರ್ಮೇಧಿ ಭಿಕ್ಷಕೆ ಬರಲು ಇಲ್ಲೆಂಬುವಾಗ 2 ಮಾಸೋಕ್ತ ಧರ್ಮವನು ತೊರೆದಾಗ ವಿಪ್ರಗೋ ಗ್ರಾಸಗಳ ಕೊಡದೆ ಭುಂಜಿಸುವಗಲೇ ಮೀಸಲು ಮಡಿ ಮೈಲಿಗೆಗಳ ನೋಡದಲೆ ದು ಷ್ಯಾಸೆಯಲಿ ನೀಚರಾಲಯದಲುಂಬಾಗ 3 ಪ್ರಾಯ ಧನ ಮದದಿಂದ ಹೇಯ ವಿಷಯಗಳು ಪಾ ದೇಯವೆಂದರಿದು ಭುಂಜಿಸುವಾಗಲು ಜಾಯಾತ್ಮ ದೇಹಾದಿಗಳು ತನ್ನದೆಂಬಾಗ ಮಾಯವಾದಿಯ ಉಕುತಿ ಮನಕೆ ತಂದಾಗ 4 ಮತಿವಮತರೊಡನೆ ಮತ್ಸರ ಪುಟ್ಟಿದಾಗವ ರ್ಪಿತ ಪದಾರ್ಥಗಳ ಭುಂಜಿಸುವಾಗಲು ಮೃತ ವತ್ಸ ಗೋವಿನ ಚಲಮಂಬಾಗ ಶ್ರೀ ಪತಿ ಜಗನ್ನಾಥವಿಠಲನ ಸ್ಮøತಿ ಬಿಟ್ಟಾಗ 5
--------------
ಜಗನ್ನಾಥದಾಸರು
ಕೃಷ್ಣ ದ್ವೈ ಪಾಯನ ಕೃಪಣವತ್ಸಲ ಪರ ಮೇಷ್ಠಿ ಜನಕನ ತೋರೊ ಪ ಅನಿಮಿಷ ಕುಲಗುರು ಆನಂದತೀರ್ಥ ಸ ನ್ಮುನಿಮತ ವಿಮಲಾಂಬುಜಾ ಅ.ಪ. ದಿನಕರ ದಯದಿ ನೋಡೆನ್ನನು ಬಾದರಾ ಯಣ ನಾಮಧೇಯರ ತನಯ ಸಂಯಮಿ ವರ 1 ಭೀಮ ತರಂಗಿಣಿ ಬದಿಗನೆನಿಸಿ ಸೀತಾ ಕರ್ಮ ಗುಣಕೀರ್ತನಗೈವ ನಿರ್ಮಲಾತ್ಮಕನ ಸತ್ಪ್ರೇಮದಿ ಸಲಹುವ ಸುಜನ ಶಿರೋಮಣಿ 2 ವಿಗತದೇಹಾಭಿಮಾನಿಯೆ ನಿಮ್ಮೊಡನೆ ನಿತ್ಯ ಹಗೆಗೊಂಬ ಪಾಪಿಗಳ ವಿಗಡಕರ್ಮಗಳೆಲ್ಲ ಮರೆದು ವಿಶ್ವವ್ಯಾಪಿ ಜಗನ್ನಾಥ ವಿಠಲ ಸ್ವತಂತ್ರ ಕರ್ತಯೆಂಬಾ 3
--------------
ಜಗನ್ನಾಥದಾಸರು
ಕೇಳೈ ಈಗಾ ಈ ಕರ್ಮಯೋಗಾ ಕಳೆವುದು ಸಂಸಾರರೋಗಾ ಬಂಧಕ್ಕೆ ಈ ಕರ್ಮವೇ ಕಾರಣಾಗಿ ಬಂದಿತು ಜನುಮಾ ಅನಿವಾರ್ಯವಾಗಿ ಈ ಬಂಧವ ನೀಗಿ ಚಿರಶಾಂತಿಗಾಗಿ ಈ ಯೋಗ ಬೆರಸಿ ಇದೆ ಕರ್ಮವೆಸಗಿ ಅರ್ವಿನಿ ಫಲವಾ ಪರಮಾತ್ಮಭಾವಾ ತಳೆಯುವದೆ ಈ ಕರ್ಮಯೋಗಾ ಕಳೆವುದು 1 ವಿಷಯಾಭಿಲಾಷಾ ನೀಗಿಸಿ ಆಶಾ ಹರಿಸುವದಿದುವೇ ನಿಷ್ಕಾಮ ಕರ್ಮ ಮನಸಿನ ಮಲಿನಾ ಕಳೆದೆಲ್ಲ ಹಸನಾ ಮಾಳ್ಪುದು ಇಹುವೇ ಜಿಜ್ಞಾಸೆಯೆನ್ನಾ ಹುಟ್ಟಿಸಿ ಜ್ಞಾನಾ ಕೇಳ್ವ ಭಾನಾ ಉದಿಸುವುದು ವೈರಾಗ್ಯಭಾಗ್ಯ ಕಳೆವುದು 2 ವಿಷಧಾತುಗಳ ತಂದು ಪುಟಹಾಕಿಕೊಂಡು ಹೆಸರಾದ ಸಿದ್ಧೌಷಧಿ ಮಾಡಿಕೊಂಡು ಉಪಯೋಗ ಕಂಡು ಜಡದೇಹಗಳ ಬೇನೆ ನೀಗಿಪತೆರದಿ ಈ ಕರ್ಮವಿಷವಾ ಪುಟಹಾಕುತಿಹುದೀ ನಿಷ್ಕಾಮತನದೀ ಈ ಸೂಕ್ಷ್ಮದೇಹಾ ರೋಗ ಕಳೆವಾ ಘನವಾದ ಪರಮೋಪಾಯಾ ಇದೇ ಪೇಳ್ದೆ ಗುರುಶಂಕರಾರ್ಯ3
--------------
ಶಂಕರಭಟ್ಟ ಅಗ್ನಿಹೋತ್ರಿ