ಒಟ್ಟು 26 ಕಡೆಗಳಲ್ಲಿ , 17 ದಾಸರು , 26 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(4) ಕೆಂಗಲ್ಲು ಆಂಜನೇಯ ಕೆಂಗಲ್ಲ ಹನುಮಂತರಾಯ ನಮ್ಮ ರಂಗನಾಥಗೆ ಬಹು ಪ್ರಿಯ ಪ ಮಂಗಳಕರ ವಜ್ರಕಾಯ ಉ ತ್ತುಂಗ ವಿಕ್ರಮ ಪೊರೆ ಜೀಯ ಅ.ಪ ಶ್ರಾವಣ ಕಡೆ ಶನಿವಾರ ಬರೆ ಭಾವಿಸಿ ಭಕ್ತರು ಸೇರೆ ಆವಾವೆಡೆ ಜನ ಮೀರೆ ನಿನ್ನ ತೀವಿದ ಮನದಿ ಪಾಡುವರೊ ದೊರೆ 1 ಬಹುಭಜಕರು ಕುಣಿದಾಡಿ ಗುಣ ಸಾಹಸ್ರಗಳ ಕೊಂಡಾಡೀ ಶ್ರೀಹರಿ ವೈಭವ ನೋಡೀ ಮಹದಾನಂದದೊಳಗೋಲಾಡಿ2 ಪರಿ ವ್ಯಾದಗಳಿಂದ ಸಿರಿ ವರನುತ್ಸವ ಬಹುಚಂದ ತಿರುಪತಿ ಯಾತ್ರಿಕರಿಂದ ನೆರೆದೆಸೆವ ಕಲ್ಯಾಣ ಬೃಂದ 3 ತಾಳ ತಂಬೂರಿ ಮದ್ದಳೆಯ ಮೇಳ ತಮ್ಮಟೆಗಳ ಬಹು ಘೋಷ ಭೂಲೋಕದಿಂ ಸ್ವರ್ಗಕೈದಿ ಶ್ರೀ ಲೀಲೆಯ ತೋರ್ಪುದು ನಿಜದಿ 4 ವರಜಾಜಿ ಕೇಶವನ ನಾಮವನು ನಿರುತ ನೆನೆವ ಶರಣ ಪ್ರೇಮ ಕರುಣದಿ ಪೊರೆ ಪುಣ್ಯಧಾಮ ಸಿರಿ ಜಯಚಾಮನೃಪಸ್ತುತ್ಯ ಭೀಮ 5
--------------
ಶಾಮಶರ್ಮರು
(ಊ) ಕ್ಷೇತ್ರ ವರ್ಣನೆ 1. ಬೇಲೂರು ಚನ್ನಕೇಶವರಾಯ ಚೆಲುವ ಚೆನ್ನಿಗರಾಯಾ ನಿನ್ನ ಕಾಣದೇ ನಿಲ್ಲಲಾರೆ ಬೇಲೂರ ಪ ವಜ್ರ ಪದುಮ ಪತಾಕಾಂಕುಶಗಳು ನಿಜಸತಿ ಲಕುಮಿದೇವಿಯರಾ ಭುಜ ಕುಚ ಕುಂಕುಮಾಂಕಿತ ಧರಾಂಕಿತ ಭಜಕರ ಭಾಗ್ಯೋದಯ ಪಾದಯುಗಳದಾ 1 ಸುರ ವೈರಿಗಳೆದೆ ಥಲ್ಲಣವೆನಿಸುವಾ ಬಿರುದಿನ ಖಡ್ಡೆಯಪ್ಪ ಚರಣಂಗಳಾ ಗರುಡನ ಹೆಗಲೇರಿ ಉದರದಿ ವಿರಿಂಚಿಯು ಉದುಭವಿಸಿದ ವರನಾಭಿಯ ಚೆಲುವಿನಾ 2 ಪೊಂಬಟ್ಟೆಯಿಂದೆಸೆವ ಪೀತಾಂಬರ ಚೆಂಬೊನ್ನದ ಕಾಂಚಿಯದಾಮದಾ ಅಂಬುಜ ಕೌಮೋದಕಿ ಸುದರುಶನ ಕಂಬುವ ಧರಿಸಿಹ ಚತುರುಭುಜಂಗಳಾ 3 ಶ್ರೀಯಾಲಿಂಗಿಸಿ ಸುಖವ ಕಾಮಿನಿಯರ ಶ್ರೀಯೋಗವ ತೋರಿಸೆನಗೊಮ್ಮೆ ಹಾಯೆಂದು ಬಿಗಿದಪ್ಪಿ ನಂಬಿಸಿ ಚುಂಬಿಸಿ ಬಾಯ ತಂಬುಲವಿತ್ತು ಬಂದೆನ್ನ ನೆರೆಯಾ 4 ಕರೆವೆನ್ನ ಮನದಲ್ಲಿ ಕರೆವ ನಾಲಿಗೆಯಲ್ಲಿ ಕರೆವೆನ್ನ ಕಣ್ಣುಸನ್ನೆಯಲೀ ಕರೆವೆ ನೆರೆವೆ ನಿನ್ನ ಚರಣಕೆರಗುವೆ ನಾ ವರವೈಕುಂಠಕೇಶವ ಬೇಲೂರ 5
--------------
ಬೇಲೂರು ವೈಕುಂಠದಾಸರು
ಅಧ್ಯಾಯ ಒಂಬತ್ತು ಶ್ರೀ ವಾಣೀಭಾರತೀ ಗೌರೀ ಶಚೀಭಿಃಸ್ನಾಪಿತೋವತಾತ್| ಕುಚೀರಾಲ್ಲಬ್ಧ ವಿತ್ತೋರ್ಚನ್ ವಿಪ್ರಾನ್ ಲಕ್ಷ್ಮೀಪ್ರಿಯಂಶರಃ|| ವಚನ ಪರಮೇಷ್ಠಿ ಮಾಡಿದನು ಸರಸ್ವತಿಯು ಮೊದಲಾದ ಶೃಂಗರಿಸಿಕೊಂಡರು ತಾವು ವರನಾಗಿ ಶೋಭಿಸಿದ ವರ ಹರುಷದಲಿ ನಾಲ್ಕು ವರಕಲಶಗಳನಿಟ್ಟು ವರ ರತ್ನ ಸುರಗಿಯನು ಸುತ್ತಿ ಶ್ರೀಹರಿಗೆ ಸುರರೊಡೆಯ ಬೇಗಿನ್ನು ಮಜ್ಜನ ಮಾಡು ಹರಿಯೆ ನೀನು 1 ರಾಗ:ನೀಲಾಂಬರಿ ಆದಿತಾಳ ಕೇಳೀ ಕಂದಗಂದನು ಶೋಕ ದಲಿ ನೊಂದು ಮನದಲಿ1 ಹಿರಿಯರೆಂಬವರಾರೆನಗೆ ಹರುಸವರಾರಿಲ್ಲ ಅಕ್ಕರವಿಲ್ಲಾ 2 ಅಕ್ಕರದಿಂದ ಪೂಸೆ ಹಿಕ್ಕಿ ಎರೆಯುವದಕ್ಕೆ ಅಕ್ಕ ತಂಗಿಯರಾರಿಲ್ಲ ಅಕ್ಕರವಿಲ್ಲಾ 3 ಬಿಡದ ಕರ್ಮಕ್ಕೆ ಮಾಡುವದು ಬಿಡುವದೆ ಇದು 4 ತಂದೆ ತಾಯಿಗಳಿಲ್ಲದೆ ನೊಂದು ಬಳಲಿದೆ 5 ವಚನ ಎಂದಿಗಾದರು ನಿನಗೆ ತಂದೆ ಬರುವರು ಮಂದಿ ಚಂದೇನೊ ನಿನಗೆ ಇದು ಎಂದಿಗಗಲದೆ ನಿನ್ನ ಸಂದೇಹವ್ಯಾಕೆ ನಗುತ ಮುಂದಿರುವ ತನ್ನ ನೋಟದಿಂದ ನೋಡಿದನು 1 ತಿಳಿದು ತರಸಿದಳು ತೈಲವನು ಹರುಷದಲೆದ್ದು ತಿಳಿದು ತ್ವರದಿ ವರರತ್ನ ಪೀಠದಲ್ಲಿ ಹರಿಣಾಕ್ಷಿ ತಾ ಬಂದು ಸರಸಾದಸಂಪಿಗೆಯ ಹರಸಿದಳು ಹೀಗೆ2 ಮಂಡಿತನೆ ಭಕ್ತರಿಗುದ್ದಂಡ ವರ ಸಂತತಿ ಉದ್ದಂಡ ನಾಯಕನೆ ಭೂಮಂಡ ಕೂಡಿಕೊಂಡು ನಿನ್ನ ಈ ಲೇಪಿಸಿದಳಾ ಜಗದ್ವಾಪಕನ ಎರೆವಳು ತಾಪಿತೋ ದಕÀದಿ ಸಂತಾಪ ಹಾರಕಳು 3 ಗಂಧಪರಿಮಳದಿಂದ ಚಂದಾಗಿ ತಿರೆ ತಂದಳಾರತಿದೇವಿ ಚಂದದಾರತಿ ಒಡಗೂಡಿ ಮುಕುಂದನ ಫಣಿಗೆ ಆರತಿ ಬೆಳಗಿ ಮುಂದೆ ಮತ್ತೆರ ಸುಂದರಾಂಗಿಯು ತನ್ನ ಹರಿವಾಣದ್ಹಿಂದಿಟ್ಟು ಎತ್ತಿ ಕಲಶವೃಂದದಿಂದೋ ಕುಳಿಯ ಚಂದಾಗಿ ಎರೆವಳಾನಂದದಲ್ಲಿ ಸುಂದರಿಯರಿಂದ ಕೂಡಿ 4 ಮೈವರಿಸಿ ಸುತ್ತ ವಸ್ತ್ರ ಪೀತಾಂಬರವ ಬಹುಭಕ್ತಿಯಲಿ ಗಿರಿಜೆ ಸುತ್ತ ಕೇಶಗಳೆಲ್ಲ ತನ್ನ ಪುತ್ರಿ ಭಾಗೀ ಮೆಟ್ಟಿ ಪತ್ನಿಯಳ ಉತ್ತಮಾಸನದಲ್ಲಿ ಹತ್ತಿಕುಳಿತ5 ರಾಗ:ನೀಲಾಂಬರಿ ಆದಿತಾಳ ಎಲ್ಲರು ಬಂದರು ಬಹು ಉಲ್ಹಾಸದಿಂದಲ್ಲೆ ಅವನ ಚಲ್ವಿಕೆಯ ನೋಡುತಲೆ ಅಲ್ಲೆ ಕುಳಿತರು 1 ಚಂದದ ಚಾಮರಗಳ ಪಿಡಿದರು 2 ಕೊಟ್ಟಳು ವಿಚಿತ್ರದ ಕನ್ನಡಿ3 ಚೆನ್ನಾಗಿ ಹಚ್ಚಿಕೊಂಡ ಚನ್ನಿಗ ತಾನು 4 ಮುದದಿಂದ್ಹೀಗೆಂದಳು ಸೊಸೆಗೆ ಮುದು ಮಗನಿಗೆ ಕುಂಕುಮ ಹಚ್ಚು ಮದಗಜಗಮನೆ 5 ಫಣಿಗೆ ತಿದ್ದಿ ಕುಂಕುಮ ವನ್ನಿಟ್ಟಳು ಮುದ್ದು ಸುರಿಯುತ 6 ಮುಂದಲ್ಲೆ ಕುಬೇರಕೊಟ್ಟ ಚಂದದಾಭರಣಗಳಿಟ್ಟು ಸಂಧ್ಯಾನು- ಷ್ಠಾನವ ವಿಧಿಯಿಂದ ಮಾಡಿದ 7 ಪುಣ್ಯಾಹ ವಾಚನಕೆ ಕುಳಿತಾ ಪುಣ್ಯಾತ್ಮನು ತಾನು 8 ಒಡಗೂಡಿ ಕುಳಿತಳಲ್ಲೆ ಸಡಗರದಿಂದ 9 ಮತ್ತಲ್ಲೆ ವಶಿಷ್ಠ ಮುನಿಯು ಮುತ್ತಿನ ರಾಸಿಗಳಿಂದ ಉತ್ತಮ- ಗದ್ದಿಗೆಯ ಬರೆದ ಕ್ಲಪ್ತದಿಂದಲಿ 10 ವಿಧಿಯಿಂದ ಮಾಡಿಸಿದನÀು ವಿಧಿಸುತ ತಾನು11 ಸಂಭ್ರಮದಿಂದಲ್ಲೆ ಕೊಟ್ಟ ತಾ ಬ್ರಹ್ಮದೇವ 12 ದೇವಾಧಿದೇವಗೆ ಕೊಟ್ಟರಾ ವೇಳೆಯಲ್ಲಿ 13 ಮುತ್ತಿನ ಅಕ್ಷತೆ ಇಟ್ಟು ಮುತ್ತೈದೆರಲ್ಲೆ 14 ನುಡಿದ ಕುಲದೇವಿ ಯಾವಕೆ ನಿನಗೆ ಶ್ರೀನಾಥಪೇಳೋ 15 ಹಲವು ಕಾಲದಲ್ಲಿ ಎನ್ನ ಕುಲಪುರೋಹಿತನಾದ ಮೇಲೆ ಕುಲದೇವಿ ಯಾವಕೆ ಅರಿಯೆ ಮುನಿನಾಥ ನೀನು 16 ಕುಲಪುರೋಹಿತ ನೆನಿಸುವೆನೊ ಶ್ರೀನಾಥನಿನಗೆ17 ಕುಲದೇವಿ ಎನಗೆ ಉಂಟು ಮುನಿನಾಥ ಕೇಳೊ 18 ಯಾವರೂಪ ದಿಂದೆಸೆವಳು ಶ್ರೀನಾಥ ಪೇಳೊ19 ವೃಕ್ಷರೂಪದಿಂದ ಅಮಿತಾದ ಫಲಕೊಡುವಳಯ್ಯ ಮುನಿನಾಥ ಕೇಳೊ20 ವೃಕ್ಷ ಎಲ್ಲಿ ಇರು ತಿಹುದು ಪೇಳೋ ಶ್ರೀನಾಥ ನೀನು 21 ಇರುತಿಹುದು ವೃಕ್ಷ ಮುನಿನಾಥ ಕೇಳೊ 22 ಸಹಿತ ತ್ವರದಿ ನಡೆದ ಕುಲದೇವಿಯ ಕರೆವುದಕೆ 23 ವಚನ ಕ್ರಮದಿಂದ ಪೂಜಿಸುತ ದಯಮಾಡು ನಮಗೆ ಕುಲ ಅಮಿತ ಕಾರ್ಯವನು ಕ್ರಮ 'ಶಮಿಶಮಮೇ' ಎಂತೆಂಬ ಮಾಡಿ ಕುಲದೇವತೆಯಾ ಮಾಡಿ ನುಡಿದವು ಆಗ ಸೂರಾಡುತಲೆ ಬಂದ ಗಾಢನೆ ಸ್ನೇಹ ಸಂರೂಢನಾಗಿ 1 ವರಹದೇವನೆ ಎನ್ನವರ ಧರಣಿದೇವಿಯ ಕೂಡಿ ಸರಸಾಗಿ ಎಲ್ಲರಿಗೆ ಹರಿಯೆ ನೀನು ಹರಿ ಅಂದಮಾತಿಗೆ ಆ ಹಿರಿಯಳೆಂತೆಂದು ತಿಳಿ ಎನ್ನ ಇರುವೆ ಕೃಷಿ ಕಾರ್ಯದಲಿ ನಿರತನಾಗಿ 2 ಎಲ್ಲ ಈ ಪರಿಕೇಳಿ ಫುಲ್ಲನಾಭನು ಅವನ ಒಲಿದಾಜ್ಞೆಯ ಕೊಂಡು ಉಲ್ಲಾಸಬಟ್ಟು ಮನದಲ್ಲಿ ಕುಲದೇವತೆಯ ಅಲ್ಲಿ ಸ್ಥಾಪನೆ ಮಾಡಿ ನಿಲ್ಲದಲೆ ಸ್ವಸ್ಥಾನದಲಿ ಬರುತಾ ರಮಾ ವಲ್ಲಭನು ನುಡಿದನಾಗಲೆ ಈ ಪರಿಯು ಎಲ್ಲರ್ಹೊರಡಿರಿ ಇನ್ನು ಸುಳ್ಳ್ಯಾಕೆ ತಡ ದೂರದಲ್ಲೆ ಇರುತಿಹದು ಬಲ್ಲಿ ದಾಕಾಶಪುರ ಇಲ್ಲಿದ್ದ ಬಾಲಕರು ಎಲ್ಲ ವೃದ್ಧರು ಮತ್ತೆ ಮೆಲ್ಲಗ್ಹೋಗಲಿ ಮುಂದೆ ನಿಲ್ಲದಲೆ ಸಾಗಿ3 ತನ್ನ ತಂದೆಯ ವಚನವನ್ನು ಕೇಳೀಪರೀ ಮುನ್ನ ನುಡಿ ದನು ಬ್ರಹ್ಮ ಪುಣ್ಯಪುರುಷನೆ ಕೇಳು ಪುಣ್ಯಾಹ ವಾಚನವ ಚೆನ್ನಾಗಿ ನೀ ಮಾಡಿ, ಮುನ್ನ ಆಕುಲದೇವಿಯನ್ನು ಸ್ಥಾಪನೆಮಾಡಿ, ಉಣ್ಣದಲೆ ಪೋಗುವುದುಚಿತವಲ್ಲಾ ಸಣ್ಣ ಬಾಲರು ಮತ್ತೆ ಹೆಣ್ಣು ಮಕ್ಕಳು ದೇಹಹಣ್ಣಾಗಿ ಇರುವ ಬಹು ಪುಣ್ಯ ಶೀಲರು ಮತ್ತೆ ನೀನ್ನ ಕುಲ ಬಾಂಧವರು ಮಾನ್ಯ ಮುನಿಗಳು ಎಲ್ಲ ಉಣ್ಣದಲೆ ಹಸಿವೆಯಲ್ಲಿ ಬಣ್ಣಗೆಟ್ಟಿಹರು 4 ತನ್ನ ತನಯನ ವಚನವನ್ನು ಕೇಳೀ ಪರಿಯಮುನ್ನ ಶ್ರೀಹರಿನುಡಿದ ಎನ್ನ ಪುತ್ರನೆ ಕೇಳು ಎನ್ನ ಕಾರ್ಯಕೆ <ಈಔಓಖಿ ಜಿಚಿ
--------------
ಅನಂತಾದ್ರೀಶ - ಕಥನಕಾವ್ಯಗಳು
ಅರಿತು ನೀ ಸಾಧಿಸು ಘನಪರಮಾರ್ಥಾ ಪ ಭೇದವರ್ಜಿತನಾಗಿ ಸ್ವಾದ ಸೇವಿಸಬೇಕು ಪಾದ ತೀರ್ಥಾ 1 ಭಕ್ತಿಭಾವಾರ್ಥ ವಿರಕ್ತಿಯಿಂದಾಗಬೇಕು ಮುಕ್ತಿಮಾನಿನಿಗೆ ತಾಂ ಕರ್ತಾ 2 ವರಸಚ್ಚಿದಾನಂದ ಬ್ರಹ್ಮದಿಂದೆಸೆವ ಗುರುವಿಮಲಾನಂದ ಸಮರ್ಥಾ 3
--------------
ಭಟಕಳ ಅಪ್ಪಯ್ಯ
ಇಂದು ಪನ್ನಗಶಯನ ಪ ಚೆನ್ನ ಪಾದಂಗಳಲಿ ಚಿನ್ನದಾ ಕಡಗರುಳಿಹನ್ನೆರಡು ನಿರುಗೆಗಳ ಹೊನ್ನ ಪೀತಾಂಬರಕೆರನ್ನಮಯದೊಡ್ಯಾಣವನ್ನು ಸುತ್ತಿದ ನಡುವುಚನ್ನ ಪದಗಳ ಮುಟ್ಟುವನ್ನಕ್ಕ ವನಮಾಲೆ 1 ನನ್ನೀಯಿಂದೆಸೆವ ಕಂಪನ್ನ ಕೌಸ್ತುಭದೆದೆಯುಕನ್ನಿಕೆಯು ಲಕ್ಷುಮಿಯ ಚಿಹ್ನ ಧರಿಸಿದ ವಕ್ಷಘನ್ನ ಚಕ್ಕರ ಶಂಖ ಸನ್ನೆ ಕೌಮೋದಕಿಯುಕನ್ನೈದಿಲೆಯ ವಿಡಿದ ಇನ್ನಂತು ನಾಲ್ಕೈಯು 2 ಪನ್ನೀರು ಬೆರೆತು ಬಾವನ್ನ ಕಂಪಿನ ಮೈಯುಬೆನ್ನಗಲ ಹೆಗಲು ದುಂಡನ್ನ ತೊಳಗುವ ಕೊರಳುಕನ್ನವುರ ಕುಂಡಲಂಗಳನ್ನು ಧರಿಸಿದ ಕಿವಿಯುಜೊನ್ನ ಪಸರಿಪ ನಗೆಯ ಮನ್ನಿಸುವ ಕೆಂದುಟಿಯು 3 ಮುನ್ನೂರು ಕೋಟಿ ರವಿ ಸನ್ನಿಭದ ಚೆಲ್ವ ಮೊಗಕನ್ನೀಲ ಕಣ್ಣು ಚಂದನ್ನ ಎಳಸಿನ ಮೂಗುಉನ್ನತದ ಹಣೆಮೇಲೆ ಸೊನ್ನಿ ಕತ್ತುರಿ ತಿಲಕಸೊನ್ನ ಮುಕುಟವ ಧರಿಸಲಿನ್ನುಳಿದ ಕರಿಗುರುಳು 4 ಮಾನವ ನಾನು ಇನ್ನೆಂತು ಬಣ್ಣಿಸುವೆನಿನ್ನ ಕೃಪೆಯಿಲ್ಲದಿದನೆನ್ನಲಪ್ಪುದೆ ದೇವಚನ್ನ ಗದುಗಿನ ವೀರನಾರಾಯಣನೆ ಮಣಿವೆ 5
--------------
ವೀರನಾರಾಯಣ
ಈ ಕ್ಷಿತಿಯ ಸಾರತರ ವೃಕ್ಷವನು ಕಂಡೆ ಪ ರಾಕ್ಷಸಾಂತಕ ದೇವ ನೀ ವಿರಚಿಸಿರುವ ಅ.ಪ ಅಡವಿಯೊಳಗೀವೃಕ್ಷಕಡಿಯ ಪಾತಿಯಿದು ದೃಢದ ಬೇರುಗಳು ಮೂರು ರಸವು ನಾಲ್ಕು ಪೊಡವಿಗಿಳಿದಿರ್ಪೈದು ಬಿಳಿಲುಂಟು ಕೊನೆ ಮೂರು ಎಡೆವ ಪರೆಯೇಳಾ ಕೊಂಬೆಗಳೆಂಟು ಫಲವೆರಡು 1 ಮೂರು ಮುಮ್ಮಡಿ ರಂಧ್ರ ಐದರಿಮ್ಮಡಿ ಪರ್ಣ ತೇರೈಸೆ ತೋರುವಾಕಾರ ಎರಡು ಮೂರೆರಡರಿಂದೆಸೆವ ಸಾರಫಲಗಳನೆಲ್ಲ ಓರಂತೆ ಭಕ್ಷಿಸುವ ಪಕ್ಷಿಯೊಂದುಂಟಯ್ಯ 2 ವೃಕ್ಷದಾ ಫಲಗಳನು ಭಕ್ಷಿಪುದನೀಕ್ಷಿಸುವ ಪಕ್ಷಿ ನೀನಾಗಿರಲು ಪರಮಕೃಪೆಯಾ ಪಕ್ಷಿಗಿತ್ತಾಗಲೊಂದೇ ಪಕ್ಷಿಯೆಂದೆನ್ನಿಸಿ ಕುಕ್ಷಿಯನ್ನುಳಿದೈದಲರಿದೇ ಮಾಂಗಿರಿಯ ರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎಂತೋ ಪೂಜಿಪುದಂತರ್ಯಾಮಿಯನನಂತಾದಿರಹಿತನ ಚಿಂತಾದೂರನ ಚಿನುಮಯರೂಪನನೆಂತೋ ಧ್ಯಾನಿಪುದು ಪ ಈಶ ವೀಸ ವಾಹನಗೀಸನ ಚರಾಚರ ಮೀಸಲಿಗಳವಲ್ಲಾ ವಾಸುಕಿ ಭೋಗ ನಿವಾಸಿಗೆ ತರವಲ್ಲಾ 1 ಚರಣದಿ ಗಂಗೆಯ ಧರಿಸಿತುವಾತನ ಚರಣವ ತೊಳೆಯುವರೇ ತರಣಿಗೆ ತೇಜದ ಭರಣಿಗೆ ದೀಪದ ಸರಣಿಯ ತೋರುವರೆ 2 ವಿಗ್ರಹರಹಿತನಿಗಘ್ರ್ಯದ ಪೂಜೆಯು ದುರ್ಘಟ ಕಾರ್ಯವಲೆ ಭರ್ಗಾದ್ಯಮರರ ವರ್ಗವು ತಮ್ಮ ನಿಸರ್ಗದಿ ಕಾಣದಲೆ 3 ಕಲಶಾಂಬುಧಿಯೊಳು ನೆಲೆಸಿಹ ಮೂರ್ತಿಗೆ ಸಲಿಲ ಸ್ವರ್ಶನವೆ ಜಲರುಹ ನೇತ್ರಗೆ ಜಲರುಹಗಾತ್ರಗೆ ಜಲದಲಿ ಮಜ್ಜನವೆ 4 ಸ್ವರ್ಣಾಂಬರಗಳ ಬಣ್ಣಿಸುತುಡುವಗೆ ಬಣ್ಣದ ವಸ್ತ್ರಗಳೆ ಕೌಸ್ತುಭ ರನ್ನದ ತೊಡವಿಗೆ ಬಿನ್ನಣದೊಡವೆಗಳೆ 5 ಬಿಸಜನಾಭನಿಗೆ ಕುಸುಮಾಸ್ತ್ರನ ಮಾನಸದಿಂ ಪಡೆದವಗೆ ಮಿಸುಪ ತುಲಸಿಯಿಂದೆಸೆವಗೆ ಪೂಗಳ ವಿಸರ ಮನೋಹರವೇ 6 ಗಂಧವಾಹನ ಸುವಿಂದ ಅಸೃಜಿಸಿದ ಗಂಧವತೀತನಿಗೆ ಗಂಧಧೂಪಗಳು ಬಂಧುರಂಗಳೆ ಗಂಧರ್ವಾತನಿಗೆ 7 ವೇದಗೋಚರಿಸುವೇದಾತ್ಮಕನು ವೇದೋದ್ಧಾರಕನು ವೇದವೇಶದಿಂ ಮೋದಿಸುವನೋ ಸಮ್ಮೋದ ಪರಾತ್ಮಕನೇ 8 ಕುತ್ತಿಗೆನೆನೆಯದ ವಸ್ತು ಪರಾತ್ಪರ ಪೊಕ್ಕರೆ ಜಲವನ್ನ ನಿತ್ಯ ತೃಪ್ತನಂ ಚಿತ್ರಾನ್ನಗಳಿಂ ತೃಪ್ತಿಪುದೆಂತು ಜನಾ 9 ಮಂತ್ರ ಮೂರುತಿಗೆ ಮಂತ್ರಜ್ಞನಿಗೆ ಸ್ವತಂತ್ರವಿಹಾರನಿಗೆ ಮಂತ್ರಯಂತ್ರಗಳ ತಂತ್ರವದೆಂತೊ ಮಂತ್ರಾಧಾರನಿಗೆ 10 ಅಂತರ್ಬಹಿಯೊಳಗಂತರ ವಿಲ್ಲದನಂತರ ಗುಣಾತ್ಮಕನ ಎಂತು ಪ್ರದಕ್ಷಿಣಿಯಾಂತು ನಮಿಪೆ ಜಗದಂತರೀಕನ 11 ಸರ್ವಾಧಾರನ ಸರ್ವಶರೀರನ ಸರ್ವವ್ಯಾಪಕ ನಾ ಸರ್ವನ ನಮಿಸುವ ಗರ್ವವೆಂತುಟೊ ಶಕ್ರ ಸಮಸ್ಕøತನಾ12 ಧರೆಯೊಳು ಪುಲಿಗಿರಿವರದ ವಿಠಲನ ಚರಣವ ಭಜಿಸುವರ ನಿರುತದಿ ಪೂಜಿಪ ಹರುಷವು ಸಾಲದೆ ಹರಿ ಸರ್ವೋತ್ತಮ13
--------------
ವೆಂಕಟವರದಾರ್ಯರು
ಕಾಯೊ ಕರುಣಾಳು ಅಂಬುದಛಾಯ ಬಿನ್ನಹ ಕೇಳು ತಾಯೊಳು ಶಿಶು ಗುಡಪಾಯಸಗೋಸುಗ ಬಾಯತೋರ್ಪುದು ನ್ಯಾಯವೇ ಪೇಳು ಪ. ಭೂತಿದೇವಿಯ ರಮಣಾ ನೃಪ ಸಂಪ್ರೀತಿ ಪೂರ್ತಿ ಕರಣಾ ಚಾತೂರ್ಯ ಕರಣಾ ದಿವಿಜಾರಾತಿ ಶಿರೋಹರಣಾ ಮಾತು ಮಾತಿಗೆ ವಿಖ್ಯಾತಿಗೊಳಿಪ ತೆರ ನೀ ತಿಳಿಯೇಯ ಖಗಕೇತನ ಶುಭದಾ 1 ಮಧುಮಯ ಮೃದುಭಾಷಾ ಮಧುಹರ ಮಧುಕರ ಮುಖಭೂಷಾ ಅಧರೀಕೃತ ತೋಷಾ ದಾನವ ಮದಜಲನಿಧಿಶೋಷಾ ಮಧುರಾ ಪಟ್ಟಣ- ಕಧಿಪನೆಂದೆಸೆವ ಬುಧರಿಪು ಕಂಸನ ಸದೆದ ಪರೇಶಾ 2 ಶ್ರೀಪತಿ ಸರ್ವೇಶಾ ದುರಿತಮಹಾಪದ್ಗಣನಾಶಾ ತಾಪೋನ್ಮಥನೇಶಾ ಪಾಲಿಸು ಭೂಪ ಶೇಷಗಿರೀಶಾ ನೂಪುರ ಕಿಂಕಿಣಿಕ್ವಣಿತ ಚರಣ ಲ- ಕ್ಷ್ಮೀ ಪರಿರಂಭಿತ ಪರಮಾನಂದದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗಣೇಶ ಸ್ತುತಿ ಮಂಗಲಂ ಜಯ ಮಂಗಲಂ ಪ ಗಜಮುಖದೆಸೆವೆ ಲಂಬೋದರಗೆ ತ್ರಿಜಗವಂದಿತ ಮೋದಕ ಕರಗೆ ರಜತಾದ್ರಿವಾಸನ ರಮಣಿಯಸುತನಿಗೆ ಭಜಕರ ಪಾಲಿಪ ವಿಜಯನಿಗೆ 1 ಮೂಷಿಕ ತೇಜಿಯನೇರಿದಗೆ ದೇಶದಿ ಕೀರ್ತಿಯ ಬೀರಿದಗೆ ಶೇಷಾಭರಣವೆತ್ತ ಶೂರ್ಪಕರ್ಣನಿಗೆ ವಾಸೆಯಿಂದ ಭಕ್ತರ ಪೋಷಿಪಗೆ ಮಂಗಲಂ 2 ಕಡುಕರುಣದಿ ಜಗವನು ಕಾಯ್ವಾ ಯೆ ನ್ಹೊಡೆಯ ಶ್ರೀ ವಿಘ್ನೇಶ್ವರ ದೇವಾ ಇಡಗುಂಜಿಯೊಳಗಿದು ದೃಢದಿ ಲಕ್ಷ್ಮಣನಿಗೆ ಗಡಣವಿದ್ಯವನಿತ್ತು ನುಡಿಸುವಗೆ ಮಂಗಲಂ 3
--------------
ಭಟಕಳ ಅಪ್ಪಯ್ಯ
ಗುರುರಾಘವೇಂದ್ರರ ಚರಣವ ಸ್ಮರಿಸಿರೊ ಪ ಗುರುರಾಘವೇಂದ್ರರ ಚರಣವ ಸ್ಮರಿಸಲು ದುರಿತ ರಾಶಿಗಳೆಲ್ಲ ಕರಗಿ ಪೋಗುವುವುಅ.ಪ. ಮಧ್ವ ಮತಾಬ್ಧಿಯೊಳುದ್ಭವಿಸಿದಂಥ ಶುದ್ಧ ಪೂರ್ಣಿಮ ಚಂದ್ರ ಸದ್ಗುಣ ಸಾಂದ್ರ 1 ಸುಧೀಂದ್ರ ಯತಿಕರ ಪದುಮ ಸಮುದ್ಭವ ಸದೆಯ ಸದಾರ್ಚಿತ ಪದ ನುತ ಖ್ಯಾತ2 ಬಂದಂಥ ಭಕುತರ ವೃಂದವ ಪೊರೆಯಲು ಕುಂದದೆ ವರಮಂತ್ರ ಮಂದಿರದೆಸೆವ 3 ನಿರುತದಿ ಭಜಿಸುವ ವರಗಳ ಕೊಡುವ 4 ಸಕಲಾತರ್ಯಾಮಿಯು ಲಕುಮಿಕಾಂತನೆಂದು ಪ್ರಕಟಿಸಿ ಮೆರೆದರ್ಭಕನಂಶಜರೆಂದು 5
--------------
ಲಕ್ಷ್ಮೀನಾರಯಣರಾಯರು
ತಂದು ತೋರೆ ಶ್ರೀ ಮುಕುಂದನ ಗೋವಿಂದನಎಂದೆಂದುಡುಪಿಲಿ ನಿಂದನ ಗೋವಿಂದನ ಪ. ದಂಡಪಾಶಧರನು ಭೂಮಂಡಲದಿ ಮುನಿಗಳಹೆಂಡರಿತ್ತ ಭಿಕ್ಷೆಯುಂಡನ ಚೆಲ್ವಕುಂಡಲ ಮಂಡಿತ ಗಂಡನ ಉ -ದ್ದಂಡ ಕಠೋರ ಪ್ರಚಂಡನ ಗೋವಿಂದನ 1 ಹಾರ ಪದಕ ಕಂಕಣ ಕಿರುಗೆಜ್ಜೆ ಉಡು -ದಾರ ವೀರ ಪೆಂಡ್ಯಗಳಿಟ್ಟನ ತನ್ನಸೇರ್ದರಿಗಿಷ್ಟವ ಕೊಟ್ಟನನೀರಸ ಜನರ ಬಿಟ್ಟನ ಗೋವಿಂದನ2 ಮಂದಹಾಸವೆಂಬ ನವಚಂದ್ರಿಕೆಯಿಂದೆಸೆವ ಮುಖಇಂದುವಿನ ನೀರಜಾಕ್ಷನ ನವಚಂದನ ಕರ್ಚಿತವಕ್ಷನಎಂದೆಂದು ಭಕ್ತರ ಪಕ್ಷನ ಗೋವಿಂದನ 3 ಮಂದಜಜಾಂಡಾದಿಂದ್ರ ಮುಖ್ಯ ವೃಂದಾರಕರೊಡೆಯನಇಂದಿರೆಯಪ್ಪುವ ತೋಳ್ಗಳ ಶುಭಕುಂದ ಕುಟ್ಮಲ ಪಲ್ಗಳಅಂದುಗೆ ಒಪ್ಪುವ ಕಾಲ್ಗಳ ಗೋವಿಂದನ 4 ಇಂದು ಹಯವದನನ್ನ ಸಂದೇಹವ ಕಳೆಯುತ್ತ ಆ-ನಂದದಿಲ್ಲಿಗೆ ಬಂದನಚಂದದಿ ವೇದವ ತಂದನ ಆನಂದನ ರಾಣಿಯ ಕಂದನ ಗೋವಿಂದನ 5
--------------
ವಾದಿರಾಜ
ನಳಿನಿಯ ಬಳಿಯಲಿ ಕುಳಿತ ಮರಾಳಾ ಕೊಳಲಿನ ಬಾಲನು ಬಂದರೆ ಹೇಳಾ ಪ ಪುಳಿನದ ಕೊಳದಲಿ ಕುಳಿತು ಕಾಯುವಳಾ ಗೆಳತಿಯೆ ರಾಧೆಯು ಅವಳನು ಕೇಳಾ ಅ.ಪ ತರುಗಳ ಮರೆಯಲಿ ತುರುಗಳ ನೆರೆಯಲಿ ಕರುಗಳ ಜೊತೆಯಲಿ ನಲಿಯುತಲಿ ಅರಳಿದ ಹೂಗಳ ಪರಿಮಳ ಭಾರದಲಿ ಮೆರೆವಲತೆಯ ಬಳಿ ಇರುವನು ಒಲವಿನಲಿ 1 ಮುರಳಿಯ ನಾದವನೆಲ್ಲೆಡೆಗೆರೆವ ತರುಣಿಯರೀವಾ ಬೆಣ್ಣೆಯ ಮೆಲುವಾ ಮೆರೆವಪೀತಾಂಬರ ಉಡಿಗೆಯೊಳೆಸೆವ ಶರಣೆಂದೊಡೆ ನವಚೇತನವೀವ 2 ಪಾಡಿಪೊಗಳುವರ ಕೂಡ ನರ್ತಿಸುವಾ ನಾಡೆ ನರ್ತಿಸುವರ ನೋಡುತ ನಗುವ ಬೇಡಿದ ವರಗಳ ನೀಡುತ ನಗುವ ಮಾಡೆ ವಂದನೆಗಳ ಓಡಿಬಂದಪ್ಪುವ 3 ಜೊನ್ನದ ಬಣ್ಣವ ಹಳಿಯುತೆ ಬೆಳಗುವ ಚೆನ್ನ ಮರಾಳವೆ ನಿನ್ನೆಡೆ ಬರುವ ಅನ್ನೆಗಮೆನ್ನನೀ ಕರೆಯಲು ಮಾಡುವ ಸನ್ನೆಯ ಕಂಡೋಡಿ ಪಿಡಿಯುವೆ ಚರಣವ 4 ಬಾಲೆಯರೊಡನೆ ಕೋಲಾಟವನಾಡುವ ನೀಲಾಂಬರ ಘನ ಶ್ಯಾಮನವ ಮೇಲೆನಿಸುವ ವನಮಾಲೆಯಿಂದೆಸೆವ ಬಾಲನವನು ಮಾಂಗಿರಿಗೆ ಬಾರೆನುವ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾರದ ಕೊರವಂಜಿ ಜಯ ಜಯ ದಯಾಕರನೆ ಹಯವದನ ಭಯಹರನೆ ಜಯ ಶೀಲಸಾಧ್ವರನೆ ಜಯ ದೀನೋದ್ಧರನೆ ಪ್ರಿಯಜನ ಮನೋಹರನೆÀ ಸುಯತಿ ಸಾಕಾರನೆ 1 ಹರಿಯೇ ಪತಿಯಾಗಬೇಕೆಂದು ರುಕುಮಿಣಿ ಪರದೇವತೆಯ ನೆನವುತಿರಲು ಕೊರವಂಜಿ ವೇಷದಿ ರುಕುಮಿಣಿದೇವಿಗೆ ಪರಮ ಹರುಷವೀವೆನೆಂದು ನಾರದ ಬಂದ 2 ಧರಣಿ ಮಂಡಲದಲ್ಲಿ ನಾರದ ಧರಿಸಿ ಕೊರವಂಜಿ ವೇಷವ ಸುರನರಾದಿಗಳೆಲ್ಲರಿಗೆ ತಾ ಪರಮ ಆಶ್ಚರ್ಯ ತೋರುತ್ತ 3 ಬಂದಳು ಕೊರವಂಜಿ ಚಂದದಿಂದಲಿ ಮಂದಹಾಸವು ತೋರುತ್ತ ಪಾದ ಧಿಂಧಿಮಿ ಧಿಮಿ- ಕೆಂದು ನಿಂದಭೀಷ್ಟವ ಪೇಳುತ 4 ಗಗನದಂತಿಹ ಮಧ್ಯವು ಸ್ತ- ನಘನ್ನ ಭಾರಕೆ ಬಗ್ಗುತ ಜಗವನೆಲ್ಲವ ಮೋಹಿಸಿ ಮೃಗ ಚಂಚಲಾಕ್ಷದಿ ನೋಡುತ 5 ಕನಕಕುಂಡಲ ಕಾಂತಿಯಿಂದಲಿ ಗಂಡಭಾಗವು ಹೊಳೆವುತ್ತ ಕನಕಕಂಕಣ ನಾದದಿಂದಲಿ ಕಯ್ಯ ತೋರಿ ಕರೆಯುತ್ತ 6 ಕುಂಕುಮಗಂಧದಿ ಮಿಂಚುವೈಯಾರಿ ಚುಂಗು ಜಾರಲು ಒಲವುತ್ತ ಕಿಂಕಿಣಿ ಸರಘಂಟೆ ಉಡಿಯೊಳು ಘಲ್ಲು ಘಲ್ಲೆಂದು ಬಂದಳು ಘಲ ಘಲ ಘಲ್ಲು ಘಲ್ಲೆಂದು ಬಂದಳು 7 ಕರೆದಾಳೆ ಸುಪಲ್ಲವ ಸುಪಾಣಿ ಕೀರವಾಣಿ ಪರಿಮಳಿಸುವ ಫಣಿವೇಣಿ 8 ಪರಿಪರಿ ಬೀದಿಯಲ್ಲಿ ನಿಂದು ಹಿಂದೂ ಮುಂದೂ ಸರಸವಾಡುತ್ತ ತಾನೆ ಬಂದು 9 ಕೊರವಂಜಿ ಯಾರೊಳಗೆ ನೋಡಿ ಕೂಡಿಯಾಡಿ ಸರಿಯಿಲ್ಲವೆಂದು ತನ್ನ ಪಾಡಿ 10 ಮನೆಮನೆಯಿಂದ ಬಂದಳು ಕೊರವಂಜಿ ತಾನು ಮನೆಮನೆಯಿಂದ ಬಂದಳು ರನ್ನವ ತೆತ್ತಿಸಿದ ಚಿನ್ನದ ದಿವ್ಯ ಬುಟ್ಟಿ ತನ್ನ ನೆತ್ತಿಯಲ್ಲಿಟ್ಟು ಬೆನ್ನಿಲಿ ಸಿಂಗಾನ ಕಟ್ಟಿ 11 ಗದ್ಯ : ಸುಗುಣಾಂಗಿಯರು ಪೇಳಲು ಮುದದಿಂದ ರುಕುಮಿಣಿದೇವಿ ತಾನೂ ಮುಗುಳು ನಗೆಯಂ ನಗುತ ಕೊರವಂಜಿಯನೆ ಅತಿಬೇಗ ಜಗವರಿಯೆ ಕರೆಯೆಂದಳು. ಶ್ರೀ ರುಗ್ಮಿಣಿ ತಾ ಬಂದಳು ಸ್ತ್ರೀಯರ ಕೂಡಿ ಚಾರುಹಾಸದಿಂದೊಪ್ಪುತ ಚೆಲ್ವ ದಿವ್ಯ ನೋಟಂಗಳಿಂದ ರಾಜಿಪ ಕಂಕಣದಿಂದ ರಮ್ಯ ನೂಪುರಗಳಿಂದ ರಾಜಚಿಹ್ನೆಗಳಿಂದ ರಾಜೀವನೇತ್ರೆ ಒಲವುತ್ತ12 ರಾಜಾಧಿರಾಜ[ರು]ಗಳಿಂದ ರಾಜಸಭೆಯಲ್ಲಿ ಪೂಜಿತಳಾದ ರಾಜಹಂಸಗ-ಮನೆಯು ಬರಲು ರಂಜಿತಳಾಗಿ ಒಲೆವುತ್ತ ಗದ್ಯ : ಆಗಲಾ ದೂತಿಕೆಯರು ಕೊರವಂಜಿಯನೆ ಅತಿ ಬೇಗ ಕರೆಯಲು ಬೇಕಾದ ವಜ್ರವೈಢೂರ್ಯ ರಾಗವಿಲಸಿತವಾದ ದ್ವಾರ ಭೂಭಾರದಿಂದೆಸೆವ ಭಾಗಧೇಯದಿಂ ರಾಜ ಸತ್ಕುಲವಾದ ದಿವ್ಯ ಮಂದಿರಕೆ ತ್ಯಾಗಿ ರುಕುಮಿದೇವಿ ನೋಡಲಾ ಶ್ರೀ- ರಾಗದಿಂ ಗಾನವಂ ಪಾಡುತ್ತ ಕೊರವಂಜಿಯು ಬಂದ ಚೆಂದ13 ಬಂದಾಳಂದದಲಿ ಬಾಗಿಲೊಳಗೆ ದಿಂಧಿಮಿಕೆನ್ನುತ 14 ಚೆಲುವ ತುರುಬಿನಿಂದಲಿ ಜಗುಳುವ ಚಲಿಸುವ ಪುಷ್ಪದಂದದಿ ನಲಿನಲಿ ನಲಿದಾಡುತ್ತ ಮಲ್ಲಿಗೆ ಝಲಝಲಝಲ ಝಲ್ಲೆಂದು ಉದುರುತ್ತ ಕಿಲಿಕಿಲಿ ಕಿಲಿ ಕಿಲಿ ಕಿಲಿಯೆಂದು ನಗುತ್ತ 15 ಗದ್ಯ :ಥಳಥಳನೆ ಹೊಳೆವುತ್ತ ನಿಗಿನಿಗೀ ಮಿಂಚುತ್ತ ರನ್ನದ ಬುಟ್ಟಿಯ ಕೊಂಕಳಲಿಟ್ಟು ಧಿಗಿಧಿಗಿಯೆಂದು ನೃತ್ಯವನ್ನಾಡುತ್ತ ಎತ್ತರದಲಿ ಪ್ರತಿಫಲಿಸುವ ಮುತ್ತಿನಹಾರ ಉರದೊಳಲ್ಲಾಡುತ ನಿಜಭಾಜ ಮಾರ್ತಾಂಡ ಮಂಡಲ ಮಂಡಿತಾ ಪ್ರಭು ಪ್ರತಿಮ ದಿಶದಿಶ ವಿಲಸಿತವಾದ ಭುಜಕೀರ್ತಿಯಿಂದೊಪ್ಪುವ ಆಕರ್ಣಾಂತ ಸುಂದರ ಇಂದೀವರದಳಾಯತ ನಯನ ನೋಟಗಳಿಂದ ಚಂಚಲಿಸುವÀ ಮಿಂಚಿನಂತೆ ಮಿಂಚುವ ಕಾಂತೀ ಸಂಚಯಾಂಚಿತ ಕಾಂಚನೋದ್ದಾಮ ಕಾಂಚೀ ಪೀತಾಂಬರಾವಲಂಬನಾಲಂಬಿತಾ ನಿತಂಬದಿಂದೊಪ್ಪುವ ಝೇಂಕರಿಸುವ ಭೃಂಗಾಂಗನಾಸ್ವಾದಿತ ಜಗುಳುವ ಜುಗುಳಿಸುವ ಪರಿಮಳಿಸುವ ಜಘನ ಪ್ರದೇಶಗಳಲ್ಲಿ ವಿವಿಧ ಪುಷ್ಪಗಳಿಂದ ಅಲಂಕೃತ ನಿತಾಂತಕಾಂತಿಕಾಂತಾ ಸುಧಾಕುಂತಳ ಸಂತತಭರದಿಂದೊಪ್ಪುವ ಪುಂಜೀಕೃತ ಮಂಜುಭಾಷಣ ಅಪರಂಜಿ ಬಳ್ಳಿಯಂತೆ ಮನೋರಂಜಿತಳಾದ ಕೊರವಂಜಿಯು ನಿಶ್ಶಂಕೆಯಿಂದ ಕಂಕಣಕ್ಷಣತೆಯಿಂದ ಕೊಂಕಳ ಬುಟ್ಟಿಯ ಪೊಂಕವಾಗಿ ತನ್ನಂಕದಲ್ಲಿಟ್ಟುಕೊಂಡು ಬೆನ್ನಸಿಂಗನ ಮುಂದಿಟ್ಟು ಚೆಂದವಾಗಿ ರುಕುಮಿಣಿ ದೇವಿಯ ಕೊಂಡಾಡಿದಳು. ಗದ್ಯ :ಅವ್ವವ್ವ ಏಯವ್ವ ಕೈಯ್ಯ ತಾರೆ ಕೈಯ್ಯ ತೋರೆ ನೀ ಉಂಡ ಊಟಗಳೆಲ್ಲ ಕಂಡ ಕನಸುಗಳೆಲ್ಲ ಭೂಮಂಡಲದೊಳಗೆ ಕಂಡ್ಹಾಗೆ ಪೇಳುವೆನವ್ವಾ. ಶಿಖಾಮಣಿ ಏನೇ ರುಕುಮಿಣಿ ನಿನ್ನ ಚೆಲುವಿಕೆಯನೇನೆಂತು ಬಣ್ಣಿಪೆ. ಮದನ ಶುಭ ಅಮಿತ ರಸಶೃಂಗಾರದಿಂದೊಪ್ಪುವ ನಿನ್ನ ಕೀರ್ತಿಯ ಕೇಳಿ ಬಂದೆನಮ್ಮಾ ಅಂಗ ವಂಗ ಕಳಿಂಗ ಕಾಶ್ಮೀರ ಕಾಂಭೋಜ ಸಿಂಧೂ ದೇಶವನೆಲ್ಲ ತಿರುಗಿ ಬಂದೆನಮ್ಮಾ 16 ಮಾಳವ ಸೌರಾಷ್ಟ್ರ ಮಗಧ ಬಾಹ್ಲೀಕಾದಿ ಚೋಳ ಮಂಡಲವನೆಲ್ಲ ಚರಿಸಿ ಬಂದೆನಮ್ಮಾ17 ಲಾಟ ಮರಾಟ ಕರ್ಣಾಟ ಸೌಮೀರಾದಿ ಅಶೇಷ ಭೂಮಿಯ ನಾನು ನೋಡಿ ಬಂದೆನಮ್ಮಾ 18 ಮಾಯಾ ಕಾಶೀ ಕಾಂಚಿ ಅವಂತಿಕಾಪುರೀ ದ್ವಾರಾವತೀ ಚೇದಿ|| ಮೆಚ್ಚಿ ಬಂದ ಕೊರವಿ ನಾನಮ್ಮ ಪುರಗಳಿಗೆ ಹೋಗಿ ನರಪತಿಗಳಿಗೆ ಸಾರಿ ಬರÀ ಹೇಳಿ ನಾ ಕಪ್ಪವ ತಂದೆ 19 ಸತ್ಯಮುಗಾ ಚೆಪ್ಪುತಾನಮ್ಮಾ ಸಂತೋಷಮುಗಾ ವಿನುವಮ್ಮ ಸತ್ಯ ಹರುಶ್ಚಂದ್ರನಿಕಿ ಚಾಲ ಚೆಪ್ಪಿತಿ 20 ಕನ್ನೆ ವಿನವೆ ನಾ ಮಾಟ ನಿನ್ನ ಕಾಲಂನೆ ನೇನಿಕ್ಕು(?) ಚಿನ್ನ ಸಿಂಗಾನೀ ತೋಡೂನೆ ಚೆಪ್ಪ್ಪೆಗಮ್ಮಾನೇ 21 ಗದ್ಯ :ಆಗ ರುಕುಮಿಣಿದೇವಿಯು ಚಿತ್ರವಿಚಿತ್ರ ಚಿತ್ತಾರ ಪ್ರತಿಮೋಲ್ಲಸಿತ ತಪ್ತ ರಜತರಂಜಿತಸ್ಫಟಿಕ ಮಣಿಗಣ ಪ್ರಚುರ ತಟಿಕ್ಕೋಟಿ ಜ್ವಾಲಾವಿಲಸಿತವಾದ ವಜ್ರಪೀಠದಲಿ ಕುಳಿತು ಚಿನ್ನದ ಮೊರಗಳಲ್ಲಿ ರನ್ನಗಳ ತಂದಿಟ್ಟುಕೊಂಡು ಕೊರವಂಜಿಯನೆ ಕುರಿತು ಒಂದು ಮಾತನಾಡಿದಳು. ವೊಲಿಸೀನ ಸೊಲ್ಮೂಲೆಲ್ಲ ವನಿತೆನೆ ನಿಂತೂ(?) 22 ಗದ್ಯ : ಆಗ ರುಕುಮಿಣಿದೇವಿಯಾಡಿದ ಮಾತ ಕೇಳಿ ಕೊರವಂಜಿಯುಯೇ-ನೆಂತೆಂದಳು. ನೆನೆಸಿಕೊ ನಿನ್ನಭೀಷ್ಟವ ಎಲೆ ದುಂಡೀ ನೆನೆಸಿಕೊ ವನಿತೆ ಶಿರೋಮಣಿಯೆ ಘನಮುದದಿಂದ ನೆನೆಸಿಕೊ 23 ರನ್ನೆ ಗುಣಸಂಪನ್ನೆ ಮೋಹನ್ನೆ ಚೆನ್ನಾಗಿ ಮುರುಹಿಯ ಮಾಡಿ ನೆನೆಸಿಕೊ 24 ಮಾಧವ ಸೇತುಮಾಧವ ವೀರರಾಘವ ಚಿದಂಬರೇಶ್ವರ ಅರುಣಾಚÀಲೇಶ್ವರ ಪಂಚನದೇಶ್ವರ ಶ್ರೀಮುಷ್ಣೇಶ್ವÀÀರ ಉಡುಪಿನ ಕೃಷ್ಣ ಮನ್ನಾರು ಕೃಷ್ಣ ಸೋದೆ ತ್ರಿವಿಕ್ರಮ ಬೇಲೂರು ಚೆನ್ನಪ್ರಸನ್ನ ವೆಂಕಟೇಶ್ವರ ಸೂರ್ಯನಾರಾಯಣ ಇವು ಮೊದಲಾದ ದೇವತೆಗಳೆಲ್ಲ ಎನ್ನ ವಾಕ್ಯದಲಿದ್ದು ಚೆನ್ನಾಗಿ ಸಹಕಾರಿಗಳಾಗಿ ಬಂದು ಪೇಳಿರಯ್ಯಾ ಮಂಗಳದ ಕೈಯ್ಯ ತೋರೇ ಎಲೆದುಂಡೀ ಕೈಯ ತೋರೆ ಕೈಯ ತೋರೆ 25 ಕೇಳೆ ರನ್ನಳೆ ಎನ್ನ ಮಾತ ಬೇಗ ಇಳೆಯರಸನಾದನು ಪ್ರಿಯ26 ಕಳಸಕುಚಯುಗಳೆ ಚಿಂತೆ ಬೇಡ ನಿನ್ನ ಕರೆದಿಂದು ಕೂಡ್ಯಾನು ರಂಗ 27 ನಾಡಿನೊಳಧಿಕನಾದ ನಾರಾಯಣನ ಪತಿ ನೀನು ಮಾಡಿ ಕೊಂಡೆನೆಂದು ಮನದಲ್ಲಿ ನೆನಸಿದೆ ಕಂಡ್ಯಾ ನಮ್ಮ ಕೃಷ್ಣ ಕುತೂಹಲದಿ 28 ಸುಂದರಶ್ಯಾಮ ಅಲ್ಲಿ ನÀಂದಾ ನಂದಾನಾಡುವಾನಂದಮುಗಾವಚ್ಚಿ ಕೂಡೇನಮ್ಮಾ 29 ಶಂಖಚಕ್ರಯುಗಲ ಪಂಕಜನಾಭುಂಡು ಪಂಕಜಮುಖೀ ನೀವು ಪ್ರಾಣಿಗ್ರಹಣಮು ಚೇಸಿ ಕೂಡೆನಮ್ಮಾ 30 ಚೆಲುವಾ ನಾ ಮಾಟಾ ನೀಕು ಪುಚ್ಚಾ ಚೆಲುವಾ ನಾ ಮಾಟ ಕಲ್ಲಗಾದು ನಾ ಕಣ್ಣೂಲಾನೂ ಪಿಲ್ಲ ವಿನುವಮ್ಮ ಪಲ್ಲವಪಾಣೀ ಚೆಲುವಾ ನಾ ಮಾಟ31 ದಮಯಂತೀಕೀನೇ ಚೆಪ್ಪಿತಿ ನಮ್ಮವೆ ಮಾಟ ಅಮರುಲಕೆಲ್ಲಾ ಅನುಮೈನವಾಡು ಚೆಪ್ಪೀ ಅಮಿತ ಬಹುಮಾನಾಮಂದೀತೀನಮ್ಮಾ ಚೆಲುವ ನಾ ಮಾಟ ಚೆಲುವ 32 ಬಂತೆ ಮನಸಿಗೆ ನಾ ಹೇಳಿದ್ದು ಚಿಂತೆ ಸಂತೋಷದಿ ನಾನಾಡಿದ ಶಾಂತ ಮಾತೆಲ್ಲ ಇದು ಪುಸಿಗಳಲ್ಲ ಬೇಗ ಬಂದಾನೋ ನಲ್ಲಾ ಆಹಾ ಆಹಾ ಬಂತೇ ಮನಸ್ಸಿಗೆ
--------------
ವಾದಿರಾಜ
ನಿಖಿಳ ಯಾದವರೊಳಗೆಮಾನಾಭಿಮಾನವೆಳ್ಳನಿತಿಲ್ಲ ಕೃಷ್ಣ ಪ ದೇವಕೀದೇವಿಯುದರದಿ ಜನಿಸಿ ಬಾಲ್ಯದಲಿಓವಿ ಮೊಲೆ ಕುಡಿಸಿದಳ ಅಸುವ ಸೆಳೆದುಮಾವ ಕಂಸನ ಕೊಂದು ಮನುಜ ವೇಷದಲಿ ಗಾಂ-ಡೀವಿಯ ಮನೆಯ ಬಂಡಿ ಬೋವನಾದೆ1 ಸುರನದಿಯ ಸುತನು ಪಾಂಡವರಿಗಾಪ್ತನು ನಿನಗೆಪರಮಭಕ್ತನು ಸ್ವಯಿಚ್ಛಾ ಮರಣಿಯುಧುರದೊಳಗೆ ಪೂರ್ವ ವೈರದ ಶಿಖಂಡಿಯ ತೋರಿಶರಮಂಚದೊಳುಪಾಯದಲಿ ಮಲಗಿಸಿದೆ 2 ಸೋದರತ್ತೆಯ ಸೊಸೆಯ ಮಗ ನಿನಗೆ ಭಾವಿಸಲುಸೋದರಳಿಯನು ಮೂರು ಲೋಕವರಿಯೆಸಾಧಿಸಿಯೆ ಅಸಮ ಚಕ್ರವ್ಯೂಹವನು ರಚಿಸಿಸೋದರನ ಷಡುರಥರ ಕೈಲಿ ಕೊಲ್ಲಿಸಿದೆ 3 ಕುರುಪತಿಯ ಮೈದುನನ ಕೊಲ್ಲ ಬಗೆದವನ ಸಂ-ಗರದೊಳೇರಿಸಿ ನುಡಿದ ನುಡಿಯ ಕೇಳಿ ಮೈ-ಗರೆಯೆ, ರವಿ ಮಂಡಲಕೆ ಚಕ್ರದಿ ಮರೆಯ ಮಾಡಿನರನ ಕೈಯಿಂದ ಸೈಂಧವನ ಕೊಲ್ಲಿಸಿದೆ 4 ಶಪಥದಲಿ ರಣದೊಳರಸನ ಹಿಡಿವೆನೆಂಬವಗೆತಪಸಿಗಳ ತಂದು ತತ್ತ್ವವ ಬೋಧಿಸಿಕಪಟವರಿಯದ ನೃಪನ ಕೈಯೊಳನೃತವ ನುಡಿಸಿಉಪಮೆಯಲಿ ಶಸ್ತ್ರ ಪಂಡಿತನ ಕೊಲ್ಲಿಸಿದೆ 5 ಯಮಳರನು ಪಡೆದ ತಾಯಿಗೆ ಸಹೋದರನ ಭೂರಮಣರೊಳಗಗ್ಗಳೆಯನತಿ ಧೈರ್ಯನುಸಮರದಲಿ ರವಿಸುತನ ರಥಕೆ ಸೂತನ ಮಾಡಿಯಮಸುತನ ಕೈಲಿ ಮಾವನ ಕೊಲ್ಲಿಸಿದೆ 6 ಜನವರಿಯದಂತೆ ಜೀವನದೊಳಡಗಿರ್ದವಗೆಮನಕೆ ಖತಿಗೊಳಿಸಿ ಬರ ಸೆಳೆದು ನಗುತಅನುವರದೊಳಾಯತದ ತೊಡೆಯ ಸನ್ನೆಯ ತೋರಿಅನಿಲಜನ ಕೈಲಿ ಕೌರವನ ಕೊಲ್ಲಿಸಿದೆ7 ಉರಿಯೊಳಗೆ ಜನಿಸಿದಂಗನೆಯ ನಿಜಸುತರು ಮಂ-ದಿರದೊಳೈವರು ನಿದ್ರೆಗೈಯುತಿರಲುನರವೃಕೋದರ ಧರ್ಮನಂದನರನಗಲಸಿಯೆಗುರು ಸುತನ ಕೈಲಿ ಬಾಲಕರ ಕೊಲ್ಲಿಸಿದೆ 8 ಈ ವಿಧದೊಳವರ ಸುರಲೋಕದಲಿ ನೆಲೆಗೊಳಿಸಿಭಾವ ಮೈದುನರೈವರನು ರಕ್ಷಿಸಿಭೂವಲಯದೊಳು ಕೀರ್ತಿಯನು ಪಡೆದೆಸೆವ ನಮ್ಮದೇವ ನೆಲೆಯಾದಿಕೇಶವ ವೆಂಕಟೇಶ 9
--------------
ಕನಕದಾಸ
ಪಾಲಿಸೆನ್ನನು ದೇವಾ ಪರಮ ಪುರುಷಾ ಶ್ವೇತ ವರಹಾ ಪ ಸ್ವಾಯಿಚ್ಛೆಯಲಿ ಬಂದು ಮೆರೆದು ಮಹಾಕೀರ್ತಿಯನು ಪಯೋನಿಧಿಸುತೆಯಿಂದ ತುತಿಸಿಕೊಳ್ಳುತಾ ಜಯಜಯದೇವನಾಶ್ರಯ ಕಾಮಧೇನು ನೀ ದಯಮಾಡಿ ನೋಡುವದು ದಾಸ ನೆನೆಸುವದು 1 ಪರಾಕು ಬೊಮ್ಮಾಂಡವನು ಹೊತ್ತು ನಸುನಗು ನಾಗಾರಿಗಮನಾ ಮಣಿ ಮಯದಾಭರಣದಿಂದೆಸೆವ ದೇ ವೋತ್ತಮನೆ ದಾನವರ ಬಲವಳಿದಾ ಧೈರ್ಯ 2 ನಿತ್ಯ ಪುಷ್ಕರಣಿಯಲಿ ನಿರುತ ಪೂಜೆಯಗೊಂಡು ಪ್ರತ್ಯಕ್ಷವಾಗಿ ವರಗಳನೀವುತ ಸಿರಿ ವಿಜಯವಿಠ್ಠಲ ವರಹ ಭೃತ್ಯನೆನೆಸಿ ನಿನ್ನ ಸ್ತೋತ್ಯದೊಳಗಿಡು ದೇವಾ3
--------------
ವಿಜಯದಾಸ