ಒಟ್ಟು 127 ಕಡೆಗಳಲ್ಲಿ , 50 ದಾಸರು , 123 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹ್ಯಾಗೆ ಸದ್ಗತಿ ಆಗುವುದೆನಗೆ ಯೋಗಿಗಳ ಒಡೆಯ ಹರಿಯೆ ಈಗಾಗಲೆ ತಿಳಿಸಿ ಸಾಗುವಂತೆ ಸಾಧನ ಬ್ಯಾಗ ಮಾಡಿಕೊ ನಾಗತಲ್ಪನೆ ಪ ಮೇಲಧಿಕಾರಿಯು ಕೊಂಡಾಡಲು ಕುಲ ಉದ್ಧಾರವೆಂದು ಹಿಗ್ಗುವೆ ಕಲುಷ ಕಂಡಾಗÀಲು ಅಳುತ ಧರೆಗೆ ಇಳಿವೆನೊ ನಾನು 1 ಶಿಕ್ಷ ರಕ್ಷ ಸಧ್ಯಕ್ಷ ಲಕ್ಷ್ಮೀಪತಿಯೆಂದರಿಯದೆ ಕುಕ್ಷಿ ಭರಣಕೆ ಯೋಚಿಸುವೆ ಪಕ್ಷಿವಾಹನನಲ್ಲಿ ಲಕ್ಷ್ಯವಿಲ್ಲದೆ ಬಕ ಪಕ್ಷಿಯಂತೆ ಧೇನಿಸುವೆ ನಾ 2 ನಷ್ಟ ದೇಹ ಪುಷ್ಟಿಗಾಗಿ ದುಷ್ಟರಿಗೆ ಎನ್ನ ಕಷ್ಟ ಪೇಳಲು ದೃಷ್ಟಿಸಿ ನೋಡಿದರೆ ಬೆಟ್ಟ ಮೇಲಿದ್ದಂತೆ ಕಂ ಗೆಟ್ಟು ಮೊರೆಯಿಸುವೆ 3 ಒಂದು ಲಾಭವಿಲ್ಲದೆ ಮಂದಿ ನೆರಹಿ ಸಂದಿಗೊಂದ್ಹರಿದ್ಯಾಡಿ ಸಂದು ಹೋಯಿತÀು ಹೊತ್ತಯೆಂದು ಆಸ್ಥಾನಕೆ ಮಿಂದು ಬ್ಯಾಗನ್ನ ತಿಂದೋಡುವೆನೊ 4 ಮಾನನೀರ ಚೆಲ್ವಿಕೆಗೆ ಮನಸೋತು ನೆನೆನೆನೆದು ಬೆಂಡಾಗುವೆ ಹೀನರಾ ಕೂಡಿಕೊಂಡು ದೀನರಾ ಬಾಯಿಬಡಿದು ಧನ ಸಾಧಿಸಿದ್ದು ಕೊನೆಗೆ ಸಾಯುವ ನರಗೆ 5 ಉದಯದಲೆದ್ದು ನದಿಗೆ ಪೋಗಿ ನಾ ಮುದದಿಂದ ಮಿಂದು ಉದಯಾರ್ಕಗಘ್ಯ ಒದಗೀಸಿ ಕೊಡದ ಮದಡನಾಗಿದ್ದವಗೆ 6 ವರ ಸುದರ್ಶನ ಗ್ರಂಥಗಳ ಗುರುಗಳಲ್ಲಿ ನಿರುತ ಪಠಿಸಲಿಲ್ಲ ಭಾಗವತ ಪುರಾಣಗಳು ಪರಮ ಭಕ್ತೀಲಿ ಕೇಳಲಿಲ್ಲ 7 ಭಾವ ಶುದ್ಧಿಯಿಂದ ದೇವತಾರ್ಚನೆ ಆವ ಕಾಲಕು ಮಾಡಲಿಲ್ಲ ಪವನಸಖ ಮಖದೊಳಾಹುತಿನಿತ್ತು ಕವಿಗಳಿಗನ್ನ ಕೊಟ್ಟವನಲ್ಲ 8 ಧ್ಯಾನ ಮಾಡುವುದನ್ನು ಮೌನಿಗಳ ಕೇಳಿ ಮನನ ಮಾಡಲಿಲ್ಲ ಪಾದ ಕನಸಿನಲಾದರೂ ಒಮ್ಮೆ ನೋಡಲಿಲ್ಲ 9
--------------
ವಿಜಯ ರಾಮಚಂದ್ರವಿಠಲ
(ಈ) ಲೋಕನೀತಿ-ತಾತ್ವಿಕ ಕೃತಿಗಳು ಕರ್ಮತ್ಯಾಜ್ಯವ ಮಾಡಿರೊ ಸನ್ಮಾರ್ಗದೋಳ್ ಕರ್ಮತ್ಯಾಜ್ಯವ ಮಾಡಿರೊ ಪ ನಿರ್ಮಲ ಮನಮೂಡಿ ಮರ್ಮಜ್ಯೋತಿಯ ಕೂಡಿ ಅ.ಪ ಕಾಮಕ್ರೋಧಗಳ ಸುಟ್ಟು ಸಂಸೃತಿಯಳಿದು ತಾಮಸಮತಿಯ ಬಿಟ್ಟು ಹೇಮದಾಸೆಗೆಮನ ಪ್ರೇಮಮಾಡದೆ ಭಿನ್ನ ನಾಮರೂಪವ ನೂಂಕಿ ರಾಮನೊಳ್ಮನ ನೆಟ್ಟು 1 ಪರಮಪಾವನಮಾದ ಶ್ರೀಹರಿಯಲ್ಲಿ ಬೆರೆಯುತಾನಂದದಿಂದ ಅರಿಗಳಾರರಸಂಗ ಕರಿಗಳೆಂಟರ ಭಂಗ ಕಿರಿದುಎಂಟರ ಅಂಗ ಭರದಿ ತರಿದು ಈಗ 2 ಧರೆಯೊಳ್ದುಷ್ಟರ ಮರದು ಮಹನೀಯರ ಚರಣಸೇವೆಯೊಳ್ಬೆರದು ವರಮಹದೇವನಪುರದ ಶ್ರೀರಂಗನ ನಿರುತ ನಂಬಿಯೆ ಸದ್ಗುರುವ ಸೇವಿಸಿ ದುಷ್ಟ 3
--------------
ರಂಗದಾಸರು
3ಜಯಮಂಗಳಂ ನಿತ್ಯ ಶುಭಮಂಗಳಂ ಪ ಅಂಜನೆಯ ಕುವರಂಗೆ ಭಿಂಜನನ ಪುತ್ರಂಗೆಪಂಜುಗದಿರನ ನುಂಗೆ ಅಂಜದಲೆ ಜಿಗಿದಂಗೆಕಂಜಾಕ್ಷ ಶ್ರೀರಾಮ ದೂತಂಗೆ ಹನುಮಂಗೆಸಂಜೀವಿನಿಗೆ ಮುಖ್ಯ ಪ್ರಾಣ ದೇವಂಗೆ 1 ಕಾನನದಿ ರಾಮನಿಗೆ ತಾನಾದ ಭೃತ್ಯಂಗೆದಾನವನ ಲಂಕೆಯನು ಸೂರೆಗೊಂಡವಗೆಜಾನಕಿಯ ಸುದ್ದಿಯನು ತಂದುರುಹಿದಾತಂಗೆವಾನರ ಪ್ರಮುಖನಿಗೆ ಧೀರ ಮಾರುತಿಗೆ 2 ದುಷ್ಟರನು ಶಿಕ್ಷಿಸುತ ಕಷ್ಟಗಳ ಪರಿಹರಿಸಿತುಷ್ಟಿಕೊಡುವಾತನಿಗೆಸೃಷ್ಟಿಯಲಿ ಸಕಲ ಜನ ಪೂಜ್ಯನಿಗೆ ಮಹಿಮನಿಗೆಶ್ರೇಷ್ಠ ಗದುಗಿನ ವೀರನಾರಾಯಣನ ಪ್ರೀಯಂಗೆ 3
--------------
ವೀರನಾರಾಯಣ
ಅಂಚಿತ ವಿಕ್ರಮನೆ ಪ ಪೊರೆಯೊಯೆನ್ನ ಅ.ಪ ದುಷ್ಟರೊಳಗೆ ಸೇರಿಕೊಂಡು ಭ್ರಷ್ಟ ಮಾಡುತಿಹರೈ ಶ್ರೇಷ್ಠನು ನಾನೆಂಬಜ್ಞಾನವ ಕೊಟ್ಟು ಕೆಡಿಸುವರೈ 1 ಹಾಸ್ಯಗಾರರಾಟ ನಿಲಿಸು ನೀ ಸಲಹಬೇಕು ಎನ್ನಗುರುವೆ 2 ತಂದೆರಾಮಚಂದ್ರಗಾಗಿ ಮಂದಮತಿ ರಾವಣನ ಮಂದಿ ಎಲ್ಲವನ್ನು ಕೊಂದು ದಂದುಗಾವ ಬಿಡಿಸಿದೆ 3 ಪಾತಕ ದಶಕಂಠನ ಭೂತಗಳ ಪಾಲು ಮಾಡಿಸಿ ಖ್ಯಾತಿಯನ್ನು ಪಡೆದೆ ನೀಂ 4 ಗುರುರಾಮ ವಿಠಲಗೆ ಪರಮಾಪ್ತ ಹನುಮಂತ 5
--------------
ಗುರುರಾಮವಿಠಲ
ಅಹಂಕಾರದಿ ಮದ ಅಹಂಕಾರದಿಅಹಂಕಾರದಿ ಹಿರಿಯರ ನಿಂದಿಸಿ ಆವ ನರಕಕೆ ತೆರಳುತಿಹರೋ ಪ ಕಂಡ ಕಂಡ ಮನೆಯ ತಿರುಗಿ ಕಾಲ್ಮುರಿ ನಾಯಿ ಬೆದಕಿದಂತೆಹೆಂಡೆಯು ಜೊಂಡನು ಹಂದಿಯು ಬೆದಕಿದಂತೆಭಂಡ ಮನುಜರು ತುಂಡು ಗುಲಾಮರುಭ್ರಷ್ಟ ಹೊಲೆಯರು ಬಾಳುಗೇಡಿಗಳುಪಂಡಿತ ಮಹಾತ್ಮರ ತಪ್ಪು ಹುಡುಕುವವರು1 ಯವಲಕಾಡೊಳು ಕತ್ತೆ ಗೊರಕನು ಯತ್ನವಮಾಡಿ ಬೆದಕಿದಂತೆನೆಲೆಯನರಸುತ ಪೊದೆಯೊಳಗನು ನರಿಯು ಬೆದಕಿದಂತೆಕಲುಷಕರ್ಮರು ಕಾಳ ಮೂಳರು ಕಷ್ಟದುಷ್ಟರುಬಲು ಮಹಾತ್ಮರ ನಡೆಯ ತಪ್ಪು ಹುಡುಕುವರು 2 ನಿತ್ಯ ನಿತ್ಯ ನಿತ್ಯ ನಿತ್ಯ ಆತ್ಮರಪ್ರತ್ಯಗಾತ್ಮರ ಪರಬ್ರಹ್ಮರ ಪರಮ ಚಿದಾನಂದನ ಬೆರೆದವರನಿತ್ಯ ಜೀವನ್ಮುಕ್ತರ ನಡತೆಯ ತಪ್ಪು ಹುಡುಕುವರು 3
--------------
ಚಿದಾನಂದ ಅವಧೂತರು
ಆತ್ಮನಿವೇದನೆ ಯಾವಾಗಲೂ ನಿನ್ನ ಸೇವೆಯೊಳಿರುವಂತೆ ಕಾವುದೆನ್ನಯ ನಿಜದೀ ಕೃಪಾನಿಧೇ ಈ ಪರಿಯಿಂದನಾ ಭಾರಿ ಭವದಿ ನೊಂದೆ ತೋರೋ ನಿನ್ನಯ ಚರಣಾ ನಾರಾಯಣ ಪ ಆಶಾಪಾಶದಲಿ ನಾ ಘಾಸಿಯಾದೆನು ದೇವಾ ವಾಸನೆಯೊಳು ತೊಳಲಿ ಬಹು ಬಳಲಿ ವಾಸುದೇವನೆ ನಿನ್ನ ಪಾದದೊಳಗೆನ್ನಯ ಬೇಸರದಲೆ ರಕ್ಷಿಸೋ ನಿಜಪಾಲಿಸೋ 1 ನೀರಮೇಲಿನ ಗುಳ್ಳೆಯಂತೆ ತೋರುವ ಕಾಯ ಸೇರಿ ನಂಬಿದೆ ಭರದಿ ಬಹು ವಿಧದಿ ದೂರನಾದೆನು ನಿಜದರಿವುನಾನರಿಯದೇ ಸೇರಿಸೊ ನಿಜ ಸುಖದಿ ಪ್ರಬೋಧದಿ 2 ನಂಬಿದವರ ಕಾಯ್ವ ಸಂಭ್ರಮ ಪೊತ್ತವ ಶಂಭು ಶಂಕರ ಪ್ರಿಯನೇ ಸರ್ವೇಶನೇ ಇಂಬು ದೋರೆನ್ನಾ ಚಿದಂಬರ ನಿಜಪದ ನಂಬಿ ನಿಲ್ಲುವ ತೆರದಿ ಸದೃಢದೀ 3 ತತ್ವಮಸಿ ಮಹಾ ವಾಕ್ಯವ ಶೋಧಿಸಿ ನಿಸ್ತರಿಸುವ ಭವವಾ ಉಪಾಯವಾ ಚಿತ್ತಚೈತನ್ಯವಾಗಿ ನಿತ್ಯಶಾಂತಿಸ್ವಸುಖ ಸತ್ಯ ಸದ್ಗುರು ಸ್ವಾನಂದಾ ಸಹಜಾನಂದಾ4 ಕಡಹದಾ ಮರನೇರಿ ಮಡುವಾ ಧುಮ್ಮಿಕೃಇದ್ಯೋ ಪಿಡಿದು ಕಾಳಿಂಗನಾ ಹೆಡೆ ಕುಳಿದು ಕುಣಿದ್ಯೋ ಸಡಗರದಿಂದಲಿ ಮಾತೆಯ ತೊಡೆಯ ಮೇಲೆ ಬಂದು ಕುಳಿತೆ5 ದುರುಳ ದುಷ್ಟರ ಶಿರವ ಶರದಿಂದಾ ಕಡಿದೆಯೊ ಶರಣ ಬಂದ ದೀನರನು ಸಲಹಿದೆಯೊ ಪರಮ ಪುರುಷನೇ ನಿನ್ನ ಸ್ಮರಣೆಯೊಳಿರಿಸೆನ್ನಾ 6 ಅನ್ಯಾಯದಲಿ ಕುರುಪತಿಯ ಮಡುಹಿದೆಯೊ ಕರ್ಣನ ಕಂಠವ ಕತ್ತರಿಸಿದೆಯೊ ಧನ್ಯಧರ್ಮಾರ್ಜುನರ ಶಿರವಾ ಸನ್ಮತದಿಂದಲಿ ಕಾಯ್ದೆ 7 ಪುಂಡಲೀಕನ ಭಕ್ತಿಗೆ ಮೆಚ್ಚಿ ಪಂಡರಪುರದಲ್ಲಿ ನಿಂತೆನಿ ಹೆಚ್ಚಿ ತಂಡತಂಡದಲ್ಲಿ ಬರುವ ಹಿಂಡುಭಕ್ತರುಗಳ ಕೂಡುವ 8 ಕಂತು ನಾರಾಯಣ ಶಾಂತಿ ಪದದಲಿ ವಿಶ್ರಾಂತಿಯ ಕೊಟ್ಟಿನ್ನಾ ಭ್ರಾಂತಿಗಳನೆಲ್ಲ ತೋರಿಸಿ ಸಂತ ಸಂಗದೊಳಿರಿಸೆನ್ನಾ 9
--------------
ಶಾಂತಿಬಾಯಿ
ಆನಂದಮಯಗೆ ಚಿನ್ಮಯಗೆ ಆ- ದಿನಾರಾಯಣಗಾರತಿ ಎತ್ತಿರೆ ಪ. ವೇದವ ತಂದು ಬೆಟ್ಟವ ಪೊತ್ತು ಧರಣಿಯ ಸಾಧಿಸಿ ಕಂಬದಿ ಬಂದವಗೆ ನೃಪರ ಸಂಹರಿಸಿದ ಆದಿಮೂರುತಿಗಾರತಿ ಎತ್ತಿರೆ 1 ಇಂದುವದನೆ ಸಹಿತ ಅರಣ್ಯದೊಳಗಾಡಿ ನಂದಗೋಕುಲದಲ್ಲಿ ನಲಿದವಗೆ ಮಂದಗಮನೆಯರ ಮುಂದೆ ನಿರ್ವಾಣದಿ ನಿಂದ ಮೂರುತಿಗಾರತಿ ಎತ್ತಿರೆ 2 ತುರಗವನೇರಿ ದುಷ್ಟರ ಸೀಳಿ ಭಕ್ತರ ಪೊರೆವ ಮಂಗಳ ಹಯವದನನಿಗೆ ವರದ ಯಾದವಗಿರಿ ಚೆಲುವನಾರಾಯಣನ ಚರಣಕಮಲಕಾರತಿ ಎತ್ತಿರೆ 3
--------------
ವಾದಿರಾಜ
ಆರು ಪೇಳಿದರೊ ಜೀವಾ ನಿನಗಾರು ಪೇಳಿದರೋ ಪ ಆರು ಪೇಳಿದರೋ ಈ ಸೋರುವ ಮನೆಯೊಳು ಇರುವುದು ಒಳಿತಲ್ಲಾ ತೆರಳುವುದುಚಿತನೇ ಅ.ಪ. ದುಷ್ಟರಿರುವರೋ ಈ ಗ್ರಹದೊಳು ಕಟ್ಟಿ ಸುಲಿಯುವರೋ ಇಟ್ಟಿದ್ದ ಅನ್ನದಿ ಕೆಟ್ಟ ಕ್ರಿಮಿಗಳುಂಟು ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬಿದೋ ಅಲ್ಲಿ 1 ಛಾಯಾವೂ ಇಲ್ಲಾ ಈ ಮನೆಯೊಳು ದಾಯಾವೂ ಇಲ್ಲಾ ಬಾಯ ಬಿಡಿಸುವರೋ ಅನ್ಯಾಯ ಮಾಡುವರೋ ಉಪಾಯದಿಂದಲಿ ಬಿಟ್ಟು ಹಯವದನನ ಶೇರೋ 2 ತರುಣರಿರುವರೋ ಈ ಮನೆಯೊಳು ಮರುಳು ಮಾಡುವರೋ ಪರುಮ ಹರುಷ ನಮ್ಮ ಹನುಮೇಶ ವಿಠಲನ ನೆರೆ ನಂಬಿ ಸ್ಮರಿಸುವ ಸ್ಥಿರ ಪದವನು ಸೇರೊ 3
--------------
ಹನುಮೇಶವಿಠಲ
ಇಟ್ಹಾಂಗೆ ಇರುವೆನೋ ಹರಿಯೇ ಎನ್ನ ದೊರೆಯೇ ಪ ಸೃಷ್ಟಿವಂದಿತ ಪಾದಪದುಮ ಶ್ರೀ ಹರಿಯೇ ಅ.ಪ. ಸಣ್ಣ ಶಾಲ್ಯೋದನ ಬೆಣ್ಣೆ ಕಾಸಿದ ತುಪ್ಪಚಿನ್ನದ ಹರಿವಾಣದಲಿ ಭೋಜನಘನ್ನ ಮಹಿಮ ನಿನ್ನ ಕರುಣ ತಪ್ಪಿದ ಮ್ಯಾಲೆ ಕ-ದನ್ನ ಕಾಣದೆ ಬಾಯ್ಬಿಡಿಸುವೆಯೋ ಹರಿಯೇ 1 ಕೆÀಂಪಿಲಿ ಪೊಳೆವ ಪೀತಾಂಬರ ಉಡಿಸುವಿಸೊಂಪಿನಂಚಿನ ಶಾಲು ಹೊದಿಸುವಿಯೋಕಪಿಲಹರೇ ನಿನ್ನ ಕೃಪೆಯು ತಪ್ಪಿದ ಮ್ಯಾಲೆಕಪರ್ದಕ ಕೌಪೀನವು ದೊರೆಯದೋ ಹರಿಯೇ 2 ಚಂದ್ರಶಾಲೆಯಲ್ಲಿ ಚಂದ್ರಕಿರಣದಂತೊಪ್ಪುವಚಂದದ ಮಂಚದೊಳ್ಮಲಗಿಸುವಿಮಂದರೋದ್ಧರ ನಿನ್ನ ಮಮತೆ ತಪ್ಪಲು ಧರ್ಮಮಂದಿರದೊಳು ತೋಳ್ತಲಗಿಂಬು ಹರಿಯೇ 3 ನರಯಾನದೊಳು ಕ್ಷಣ ನರವರನೆನಿಸುವಿವರಛತ್ರ ಚಾಮರ ಹಾಕಿಸುವಿಕರುಣಾನಿಧೇ ನಿನ್ನ ಕರುಣ ತಪ್ಪಿದ ಮ್ಯಾಲೆಚರಣರಕ್ಷೆಯು ದೊರೆಯದು ಶ್ರೀಹರಿಯೇ 4 ಗಂಗಾಜನಕ ಪಾಂಡುರಂಗ ನಿನ್ನಯ ಭಕ್ತರಸಂಗವಿರಲಿ ದುಷ್ಟರ ಸಂಗ ಬ್ಯಾಡಅಂಗನೆಯರ ಕೂಡಿ ಅನಂಗಬಾಣಕೆ ಸಿಲುಕಿಭಂಗವ ಪಡಲಾರೆ ಶ್ರೀರಂಗವಿಠಲ ಹರಿಯೇ 5
--------------
ಶ್ರೀಪಾದರಾಜರು
ಇದಕೊ ಕಾಶಿಯನು ಮನವೇ ಬೆದಕುಗೊಳ್ಳಲು ಬೇಡ ತೋರುವೆನು ಪ ಬಲ್ಲವನಾದರೆ ಇಲ್ಲಿಯೆ ಕಾಶಿ ಕಲ್ಲೆದೆಯಾದವನಲ್ಲವೆ ದೋಷಿ ಎಲ್ಲವ ತಿಳುಹುವೆ ಚಲ್ವ ಸಂತೋಷಿ ಸೊಲ್ಲ ಲಾಲಿಸಿ ಕೇಳು ಪೇಳ್ವೆ ನಿರ್ದೋಷಿ 1 ಕಾಶಿಯ ದರುಶನವಿಲ್ಲದ ಜನರು ವಿ- ಶೇಷವಾಗಿಯೆ ಇಲ್ಲಿ ನಡೆಕೊಂಬುತಿಹರು ದೂಷಣ ಮಾಡದೆ ಪೋಷಿಸುವವರು ಕಾಶಿಗಿಮ್ಮಡಿಯಾಗಿ ಲೇಸ ಪಡೆಯುವರು 2 ವೇದವನೋದಿದ ವಿಪ್ರನೆ ಕಾಶಿ ವಾದಗಳಿಲ್ಲದ ಸೋದರನೆ ಕಾಶಿ ಆ ಧನ ಕೈಯೊಳು ಇದ್ದರೆ ಕಾಶಿ ಮಾಧವ ಧ್ಯಾನವು ಮನದೊಳು ಕಾಶಿ 3 ಅವ್ವೆ ತಂದೆಯ ಸೇವೆ ಮಾಳ್ಪುದೆ ಕಾಶಿ ದೇವರ ಪೂಜೆಯ ನೋಳ್ಪುದೆ ಕಾಶಿ ಜೀವರಕ್ಷಣ್ಯವ ಮಾಳ್ಪುದೆ ಕಾಶಿ ಭಾವಶುದ್ಧತ್ವದಿ ಇಪ್ಪುದೆ ಕಾಶಿ 4 ಗುರುಗಳಿಗೆರಗುವ ಪರಿಯೊಂದು ಕಾಶಿ ಹಿರಿಯರ ಆಜ್ಞೆಯೊಳಿರುವುದು ಕಾಶಿ ಪರವುಪಕಾರವು ಸ್ಥಿರವಾದ ಕಾಶಿ ಕರೆದು ಮೃಷ್ಟಾನ್ನವನೆರೆವುದು ಕಾಶಿ 5 ಅರಳಿಯ ವೃಕ್ಷವ ನೆಟ್ಟರೆ ಕಾಶಿ ಕೆರೆ ಬಾವಿ ಕಟ್ಟಲು ಇಷ್ಟದ ಕಾಶಿ ಅರವಟ್ಟಿ ನೀರಿರಿಸಲು ದೃಷ್ಟ ಕಾಶಿ ಸಿರಿಲಕ್ಷ್ಮಿಯರಸನ ಕರೆವುದು ಕಾಶಿ 6 ದುಷ್ಟರ ಸಂಗವ ಬಿಡುವುದೆ ಕಾಶಿ ಕಷ್ಟದ ಮಾರ್ಗವ ತೊರೆವುದು ಕಾಶಿ ಶಿಷ್ಟರ ಸೇರುವುದು ಇಷ್ಟದ ಕಾಶಿ ಬೆಟ್ಟದ ಒಡೆಯನ ನೆನೆವುದೆ ಕಾಶಿ 7 ಏಕಾದಶಿ ಉಪವಾಸವೆ ಕಾಶಿ ಆಕಳ ದಾನವ ಮಾಳ್ಪುದೆ ಕಾಶಿ ಬೇಕಾದುದಿದ್ದರೆ ಮನೆಯೆಲ್ಲ ಕಾಶಿ ಕಾಕು ಸೇವೆಯಿಲ್ಲದ ಮನುಜನೆ ಕಾಶಿ 8 ಉದಯದಿ ಸ್ನಾನವ ಮಾಳ್ಪುದೆ ಕಾಶಿ ಪದುಮನಾಭನ ಧ್ಯಾನ ಮೃದುವಾದ ಕಾಶಿ ಕದನವಿಲ್ಲದ ಊರ ನೋಡಲು ಕಾಶಿ ಉದರವು ತುಂಬಲು ಬಡವಗೆ ಕಾಶಿ 9 ರುದ್ರ ದೇವನ ಪೂಜೆ ಇದ್ದಲ್ಲಿ ಕಾಶಿ ವಿಧ್ಯುಕ್ತ ಮಾರ್ಗದಿ ನಡೆವುದು ಕಾಶಿ ಬದ್ಧವಾಗೈವರ ಕಟ್ಟಲು ಕಾಶಿ ಶುದ್ಧವಾದ ಹೆಂಡತಿ ಮುದ್ದಿನ ಕಾಶಿ 10 ಸನ್ಯಾಸ ಮಾರ್ಗವು ಚೆನ್ನಾದ ಕಾಶಿ ಅನ್ಯಾಯವಿಲ್ಲದ ಅರಸನೆ ಕಾಶಿ ಕನ್ಯಾದಾನವು ಮುನ್ನಿನ ಕಾಶಿ ಮನ್ನಿಸಿಕೊಂಡರೆ ತನ್ನಲ್ಲೆ ಕಾಶಿ 11 ಅಧ್ಯಾತ್ಮ ವಿದ್ಯೆಯ ಹೊದ್ದಲು ಕಾಶಿ ಬದ್ಧ ನಡೆನುಡಿ ಇದ್ದರೆ ಕಾಶಿ ಮಧ್ವರಾಯನು ಕುಳಿತಿದ್ದಲ್ಲಿ ಕಾಶಿ ಪದುಮನಾಭನ ನೆನವಿದ್ದರೆ ಕಾಶಿ 12 ದಾನದೊಳಗೆ ಸಮಾಧಾನವೆ ಕಾಶಿ ಮಾನದೊಳಗೆ ಅಭಿಮಾನವೆ ಕಾಶಿ ಸ್ನಾನದೊಳಗೆ ಭಕ್ತಿ ಸ್ನಾನವೆ ಕಾಶಿ ಜ್ಞಾನದೊಳಗೆ ಶುದ್ಧಜ್ಞಾನವೆ ಕಾಶಿ 13 ದೇವರೊಳಗೆ ಸಾಲಿಗ್ರಾಮವೆ ಕಾಶಿ ಜೀವರೊಳಗೆ ಗೋವುಚಯವೆಲ್ಲ ಕಾಶಿ ಹೂವಿನೊಳಗೆ ಬಿಲ್ವಪತ್ರಿಯೆ ಕಾಶಿ 14 ಹಲವು ಮಾತುಗಳೇನೀಪರಿ ಕಾಶಿ ಛಲ ಭಕ್ತಿಯಿದ್ದರೆ ಜಲವೆಲ್ಲ ಕಾಶಿ ಒಲವುಳ್ಳ ವರಾಹತಿಮ್ಮಪ್ಪನೆ ಕಾಶಿ ಕುಲವೃಕ್ಷವೆಂಬುದು ಫಲವಾದ ಕಾಶಿ 15
--------------
ವರಹತಿಮ್ಮಪ್ಪ
ಈಡುಗಾಣೆನಯ್ಯ ಜಗದೊಳಗೆ ಪ. ಬೇಡಿದಭೀಷ್ಟಗಳ ಕೊಡುವ ಹನುಮ ಭೀಮ ಮಧ್ವರಾಯ ಅ.ಪ. ಅಷ್ಟದಿಕ್ಕಲಿ ಭೂಪರಾಳಿದ ದುಷ್ಟರಾವಣನ್ನ ಪುರವ ದೃಷ್ಟಿಸಿ ನೋಡಿ ಸಮರದಲಿ ಪ್ರಹಾರವನೆ ಕೊಡಲು ಕಷ್ಟದಿ ಮೂಛ್ರ್ಯಕೃತನಾಗಿಯೆದೆ ಹಿಟ್ಟಾಗಿಸನಂತಕಂದಿಸಿಯೆ ಕಂಗೆಟ್ಟು ಹತ್ತು ದಿಸೆಗೆ ಓಡಿಸಿದ್ಯೊ ದಿಟ್ಟನಾಗಿ ನಿರಂತರದಿ ಹನುಮಾ 1 ನಾರದ ಅಯೋಧ್ಯದಿ ಪೇಳಲು ಶ್ರೀ ರಾವಣ ಸೈನ್ಯಗಳ ಓಡಿಸಿ ವಾರಿಧಿಗಳ ದಾಟಿ ಬೇಗ ನೂರುತಲೆ ಅಸುರನ ಪಟ್ಟಣದ ದ್ವಾರ ಬಂಧಿಸಿ ಸಕಲದ್ವೀಪದಲ್ಲಿದ್ದ ಕ್ರೂರ ಅಸುರನ್ನ ಕಾಲಲೊದ್ದು ವರ ವಿಭೀಷಣ ಸುಗ್ರೀವರ ಪುಚ್ಛದಲಿ ತರುಬಿದಿಯೊ ಸಮರ್ಥ ಹನುಮಾ 2 ರುದ್ರ ಬ್ರಹ್ಮರ ವರದಲವಧ್ಯನಾದ ಜರಾಸಂಧನಾ ಖಳರ ಸೀಳಿದ್ಯೊ ನೃಪರ ನಿಂದೆ ಯುದ್ಧದಲಿ ದುರ್ಯೋಧನನ ಕೊಂದ ಪ್ರಸಿದ್ಧ ಭೀಮರಾಯ ನಿಮಗೆ3 ವಾದಿಗಜಕೆ ಮೃಗೇಂದ್ರ ವಾದಿವಾರುಧಿ ಬಡಿವ ಮಾಯಾ ವಜ್ರ ಭೇದ ಮತಾಂಬುಧಿಗೆ ಚಂದ್ರ ಮೋದತೀರ್ಥಾನಂದಗೆ ಕೃಷ್ಣಾ ಅಷ್ಟವಾಳುಕ ಮುಷ್ಟಿ ತಂದೆ ಸಾಧುಜನರಿಗೆ ತತ್ವಬೋಧಿಸಿದೆ ಮೇದಿನಿಯೊಳು ಮಧ್ವರಾಯ ನಿಮಗೆ 4 ಇಂದುಮುಖಿ ಸೀತೆಗೆ ಮುದ್ರಿಕೆಯನಿತ್ತು ವಂದಿಸಿ ರಾಮಕಥೆಯ ಪೇಳಿದೆ ಅಂದು ರೋಮಕೋಟಿ ಶಿವರಮಾಡಿ ಪುರುಷಮೃಗವನೆ ತಂದೆ ಚಂದದಿಂ ಮಣಿಮಂತನ ಕೊಂದು ಸೌಗಂಧಿಕವ ತಂದೆ ನಂದತೀರ್ಥರಾದ ಅಚಲಾನಂದ ವಿಠಲನ ದಾಸ ನಿಮಗೆ5
--------------
ಅಚಲಾನಂದದಾಸ
ಎಲ್ಲ ಲೀಲೆ ಇದೆಲ್ಲ ಲೀಲೆಎಲ್ಲ ಲೀಲೆ ರಂಗಗೆಲ್ಲ ಲೀಲೆ ಪ. ಪುಟ್ಟಿಸುವುದು ಮನವಿಟ್ಟು ಕಾವುದುದುಷ್ಟರ ಶಿಕ್ಷೆ ಅಲ್ಲಿ ವಿಶಿಷ್ಟರ ರಕ್ಷೆ1 ನೀರೊಳುಲ್ಲಾಸ ಮತ್ತಾರಣ್ಯವಾಸಹಾರುವರಾಟ ತನ್ನ ನಾರಿಯ ಬೇಟ 2 ಗೊಲ್ಲರಾಕೃತಿ ಬತ್ತಲೆಯ ಸ್ಥಿತಿಬಲ್ಲಿದ ದೈವ ಕಲಿಯ ಗೆಲ್ಲುವ ಭಾಗ 3 ವರನಿಪ್ಪುದು ಕರೆದರೆ ಬಪ್ಪುದುಧರೆಯಜಮ ಪರಿಪರಿಯ ಕರ್ಮ4 ಹೆಂಗಳಕೂಟ ಅಪಾಂಗದ ನೋಟ ಹಾಸ್ಯದಂಗದಿಂದೂಟ ರಣರಂಗದಿಂದೋಟ 5 ಅಂಬಿನ ವೇಧ ನಿನ ತುಂಬಿದ ಕ್ರೋಧ ತ್ರಿ-ಯಂಬಕ ಪೂಜೆ ತ್ರಿವಿಡಂಬನವೋಜೆ6 ಕರ್ತುಮಾಕರ್ತು ಮತ್ತನ್ಯಥಾಕರ್ತು ಎಂಬಶಕ್ತಿದೇವಗೆ ಬಲುಯುಕ್ತಿ ಇವಗೆ7 ನಾವೆಕರ್ತವ್ಯಂ ಸುಪ್ರವೆ ವಕ್ತವ್ಯಂಏಸು ಮಹಿಮೆಗೆ ಕೃತಕೃತ್ಯ ನಮಗೆ 8 ಪ್ರಿಯಮೋದನ ದೈತ್ಯೇಯಭೇದನಹಯವದನ ನಿನ್ನರ್ಥಿ ಕಾಯಿದನ9
--------------
ವಾದಿರಾಜ
ಎಲ್ಲಿಗೆ ಗಮನವಿದು ದುರ್ಗಾಂಬಿಕೆ ಎಲ್ಲಿಗೆ ಗಮನವಿದು ಪ. ಗಮನ ಹರವಲ್ಲಭೆ ನೀ ದಯ- ದಲ್ಲಿ ಬಾಲಕನೊಳು ಮೆಲ್ಲನಿಂದರುಹವ್ವಅ.ಪ. ಚಂಡಿಕೆ ಮಹಮ್ಮಾಯೆ ದೇವಿ ಪ್ರ- ಚಂಡ ಲೋಕತಾಯೆ ಖಂಡಪರಶುಪ್ರಿಯೆ ಅಖಿಲ ಭೂ- ಮಂಡಲಕಧಿಪತಿಯೆ ದಂಡಿಗೆ ಮೇಲೇರಿಕೊಂಡು ದುಷ್ಟರ ಶಿರ- ಚೆಂಡಾಡಿ ಶರಣರ ಕೊಂಡಾಡಿ ಪೊರೆವುತ1 ನಿಲ್ಲು ನಿಲ್ಲು ಜನನಿ ಬಾಲಕ- ನಲ್ಲವೆ ಹೇ ಕರುಣಿ ಪುಲ್ಲನಯನೆ ತ್ರಿಗುಣಿ ದಯವಿನಿ- ತಿಲ್ಲವೆ ನಾರಾಯಣಿ ಮಲ್ಲಿಗೆಗಂಧಿ ಪಥವೆಲ್ಲಿಯು ಕಾಣದೆ ಸಲ್ಲಲಿತಾಂಘ್ರಿಯ ನಿಲ್ಲದೆ ಬೇಡುವೆ 2 ದಾರಿ ಯಾವುದಮ್ಮ ಮುಕ್ತಿಯ ದಾರಿ ತೋರಿಸಮ್ಮ ಸೇರಿದೆ ನಾ ನಿಮ್ಮ ಭವಾಬ್ಧಿಯ ಪಾರುಗಾಣಿಸಮ್ಮ ಚಾರುನಿಗಮ ಶಿರಭೋರೆನಿಪ ವಿಚಾರ- ಸಾರವಿತ್ತು ದಯಪಾಲಿಸು ಶುಭವರ3 ಕಷ್ಟದುರಿತ ಭಯವ ತಾ ಬಡಿ- ದಟ್ಟಿ ಭಕ್ತಕುಲದ ಶ್ರೇಷ್ಠತನದಿ ಪೊರೆವ ತನ್ನ ಇಚ್ಛೆಯ ಕೈಗೊಳುವ ಲಕ್ಷ್ಮೀನಾರಾಯಣದಿಟ್ಟಭಗಿನಿ ಶಿವೆ ಕಟ್ಟಿಲಪುರದೊಳು ಗುಟ್ಟಿನಿಂ ನೆಲಸಿಹೆ4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎಲ್ಲಿಗೆ ಗಮನವಿದು ದುರ್ಗಾಂಬಿಕೆ ಎಲ್ಲಿಗೆ ಗಮನವಿದುಪ. ಗಮನ ಹರವಲ್ಲಭೆ ನೀ ದಯ- ದಲ್ಲಿ ಬಾಲಕನೊಳು ಮೆಲ್ಲನಿಂದರುಹವ್ವಅ.ಪ. ಚಂಡಿಕೆ ಮಹಮ್ಮಾಯೆ ದೇವಿ ಪ್ರ- ಚಂಡ ಲೋಕತಾಯೆ ಖಂಡಪರಶುಪ್ರಿಯೆ ಅಖಿಲ ಭೂ- ಮಂಡಲಕಧಿಪತಿಯೆ ದಂಡಿಗೆ ಮೇಲೇರಿಕೊಂಡು ದುಷ್ಟರ ಶಿರ- ಚೆಂಡಾಡಿ ಶರಣರ ಕೊಂಡಾಡಿ ಪೊರೆವುತ 1 ನಿಲ್ಲು ನಿಲ್ಲು ಜನನಿ ಬಾಲಕ- ನಲ್ಲವೆ ಹೇ ಕರುಣಿ ಪುಲ್ಲನಯನೆ ತ್ರಿಗುಣಿ ದಯವಿನಿ- ತಿಲ್ಲವೆ ನಾರಾಯಣಿ ಮಲ್ಲಿಗೆಗಂಧಿ ಪಥವೆಲ್ಲಿಯು ಕಾಣದೆ ಸಲ್ಲಲಿತಾಂಘ್ರಿಯ ನಿಲ್ಲದೆ ಬೇಡುವೆ 2 ದಾರಿ ಯಾವುದಮ್ಮ ಮುಕ್ತಿಯ ದಾರಿ ತೋರಿಸಮ್ಮ ಸೇರಿದೆ ನಾ ನಿಮ್ಮ ಭವಾಬ್ಧಿಯ ಪಾರುಗಾಣಿಸಮ್ಮ ಚಾರುನಿಗಮ ಶಿರಭೋರೆನಿಪ ವಿಚಾರ- ಸಾರವಿತ್ತು ದಯಪಾಲಿಸು ಶುಭವರ 3 ಕಷ್ಟದುರಿತ ಭಯವ ತಾ ಬಡಿ- ದಟ್ಟಿ ಭಕ್ತಕುಲದ ಶ್ರೇಷ್ಠತನದಿ ಪೊರೆವ ತನ್ನ ಇಚ್ಛೆಯ ಕೈಗೊಳುವ ಲಕ್ಷ್ಮೀನಾರಾಯಣದಿಟ್ಟಭಗಿನಿ ಶಿವೆ ಕಟ್ಟಿಲಪುರದೊಳು ಗುಟ್ಟಿನಿಂ ನೆಲಸಿಹೆ4
--------------
ತುಪಾಕಿ ವೆಂಕಟರಮಣಾಚಾರ್ಯ
ಎಷ್ಟು ಪೊಗಳಲಿ ನಾನು ಎನ್ನೊಡೆಯ ನಿನ್ನ ವಿ- ಶಿಷ್ಟ ಮಹಿಮೆಗಳನು ಭಕ್ತರಿಗೆ ಬಂದಾ ಕಷ್ಟ ಕಳೆಯುವೆಯೋ ನೀನು ಸುರಕಾಮಧೇನು ವಿಷ್ಣುವೇ ಪರದೈವವೆಂದು ದುಷ್ಟರಾಕ್ಷಸರನ್ನೆ ಕೊಂದು ಸೃಷ್ಟಿಪಾಲಿಪ ಶ್ರೀ ರಮೇಶನೇ ಇಷ್ಟ ಭಕುತರೊಳು ಶ್ರೇಷ್ಠನೆನಿಶಿದಿ ಪ ತಾಯಿಯೂ ಬಂದು ಸೇವೆಗೆ ರಘುಪತಿ ರಾಯನಲೆ ನಿಂದು ಬಯಸಲಿಲ್ಲಾ ಒಂದು ಶ್ರೀಹರಿಗೆ ಬಂದು ಕಾಯಬೇಕು ಸುಗ್ರೀವನೆನುತಲಿ ತೋಯಜಾಕ್ಷಗೆ ಪೇಳಿ ವಾಲಿಯ ಉ- ಪಾಯದಿಂದಲಿ ಕೊಲಿಸಿ ರವಿಜಗೆ ಸ- ಹಾಯ ಮಾಡಿದಿ ವಾಯುತನಯನೆ 1 ಕಡಲ ಬೇಗನೆ ಹಾರೀ ಶ್ರೀರಾಮನ ಮಡದಿಗುಂಗುರ ತೋರಿ ಅಲ್ಲಿದ್ದ ಅಸುರರ ಜಡಿದೆ ಬಲು ಹೊಂತಕಾರಿ ಮಾಡಿಯೊ ಸೂರಿ ಒಡೆಯಗ್ವಾರ್ತೆಯ ಪೇಳಿ ಶೀಘ್ರದಿ ನಡೆಸಿ ಸೈನ್ಯವ ದಶಮುಖನ ಶಿರ ಹೊಡೆಸಿದಾಕ್ಷಣ ಲೋಕಮಾತೆಯ ಒಡಗೂಡಿಸಿದೆಯೋ ಶ್ರೀರಾಮಚಂದ್ರಗೆ 2 ಮೂರು ರೂಪವ ತಾಳ್ದಿ ಮಹಯೋಗ್ಯ ಜನರಿಗೆ ಸಾರ ತತ್ವವ ಪೇಳ್ದಿ ಶರಣ್ಹೊಕ್ಕ ಜನರಪಾರ ದುಃಖವ ಶೀಳ್ದಿ ಮೊರೆಯ ಕೇಳ್ದಿ ಧೀರ ಕದರುಂಡಲಗಿ ಹನುಮಯ್ಯ ಸೇರಿದೆನೊ ನಿನ್ನಂಘ್ರಿ ಕಮಲವ ಗಾರು ಮಾಡದೆ ಸಲಹೊ ಕರುಣವಾರಿಧಿ ನೀಯೆನ್ನನೀಗಲೆ 3
--------------
ಕದರುಂಡಲಗಿ ಹನುಮಯ್ಯ